ಏಪ್ರಿಲ್ 19ಕ್ಕೆ ಅಂಗಾರಕ ಸಂಕಷ್ಟ ಚತುರ್ಥಿ: ಮಂಗಳವಾರದ ಸಂಕಷ್ಟಿಗೆ ಯಾಕಿಷ್ಟು ಮಹತ್ವ ಗೊತ್ತಾ?

ಭಾರತೀಯ ಸಂಪ್ರದಾಯದ ಪ್ರಕಾರ, ಚತುರ್ಥಿ ಚಂದ್ರನ ತಿಂಗಳಲ್ಲಿ ಎರಡು ಬಾರಿ ಬರುತ್ತದೆ. ಅಮಾವಾಸ್ಯೆಯ ನಂತರ ಬರುವ ಶುಕ್ಲ ಪಕ್ಷದ ಚತುರ್ಥಿ ತಿಥಿಯನ್ನು ವಿನಾಯಕ ಚತುರ್ಥಿ ಎಂದು ಕರೆದರೆ, ಹುಣ್ಣಿಮೆಯ ನಂತರ ಬರುವ ಕೃಷ್ಣ ಪಕ್ಷದ ಚತುರ್ಥಿ ತಿಥಿಯನ್ನು ಸಂಕಷ್ಟ ಚತುರ್ಥಿ ಎಂದು ಕರೆಯಲಾಗುತ್ತದೆ.

ಆದರೆ ಚತುರ್ಥಿ ತಿಥಿ ಮಂಗಳವಾರ ಬಂದರೆ ಅದನ್ನು ಅಂಗಾರಕ ಚತುರ್ಥಿ ಎಂದು ಕರೆಯಲಾಗುತ್ತದೆ. ಈ ಅಂಗಾರಕ ಚತುರ್ಥಿ 6 ತಿಂಗಳಿಗೊಮ್ಮೆ ಬರುತ್ತದೆ. ಈ ದಿನ ಸಂಕಷ್ಟ ಚತುರ್ಥಿ ವ್ರತವನ್ನು ಆಚರಿಸುವುದರಿಂದ ಇಡೀ ವರ್ಷ ಸಂಕಷ್ಟ ಚತುರ್ಥಿ ವ್ರತ ಮಾಡಿದಷ್ಟು ಪುಣ್ಯದ ಫಲವನ್ನು ಪಡೆದುಕೊಳ್ಳಬಹುದು. ಹಾಗಾದ್ರೆ ಈ ಬಾರಿ ಅಂಗಾರಕ ಚತುರ್ಥಿ ಯಾವಾಗ ಬಂದಿದೆ? ಅದರ ಮಹತ್ವವೇನು ನೋಡೋಣ.

ಅಂಗಾರಕ ಸಂಕಷ್ಟ ಚತುರ್ಥಿ 2022 ಶುಭ ಮುಹೂರ್ತ:

ಅಂಗಾರಕ ಸಂಕಷ್ಟ ಚತುರ್ಥಿ 2022 ಶುಭ ಮುಹೂರ್ತ:

ಅಂಗಾರಕ ಸಂಕಷ್ಟ ಚತುರ್ಥಿ ದಿನಾಂಕ: 2022 ರ ಏಪ್ರಿಲ್‌ 19 ರಂದು ಮಂಗಳವಾರ

ಚತುರ್ಥಿ ತಿಥಿ ಆರಂಭ: 2022 ರ ಏಪ್ರಿಲ್‌ 19 ರಂದು ಮಂಗಳವಾರ ಸಂಜೆ 4:38 ರಿಂದ

ಚತುರ್ಥಿ ತಿಥಿ ಅಂತ್ಯ: 2022 ರ ಏಪ್ರಿಲ್‌ 20 ರಂದು ಬುಧವಾರ ಮಧ್ಯಾಹ್ನ 1:52 ರವರೆಗೆ.

ಚಂದ್ರೋದಯದ ಮುಹೂರ್ತ:

ಈ ಬಾರಿ ಚಂದ್ರನು ರಾತ್ರಿ 09:50 ಕ್ಕೆ ಉದಯಿಸುತ್ತಾನೆ.

ಅಭಿಜೀತ್ ಮುಹೂರ್ತ:

ಬೆಳಿಗ್ಗೆ 11:55 ರಿಂದ ಮಧ್ಯಾಹ್ನ 12:46 ರವರೆಗೆ

ಅಮೃತ ಕಾಲ:

ಮಧ್ಯಾಹ್ನ 04:07 ರಿಂದ ಸಂಜೆ 05:35 ರವರೆಗೆ

ನಿಶಿತಾ ಮುಹೂರ್ತ:

ಮಧ್ಯಾಹ್ನ 11:35 ರಿಂದ 12:19 ರವರೆಗೆ

ಅಂಗಾರಕ ಚತುರ್ಥಿಯ ಮಹತ್ವ:

ಅಂಗಾರಕ ಚತುರ್ಥಿಯ ಮಹತ್ವ:

ಅಂಗಾರಕ ಚತುರ್ಥಿಯ ದಿನದಂದು ಗಣೇಶ ಪೂಜೆಯೊಂದಿಗೆ ಹನುಮನನ್ನು ಪೂಜಿಸುವುದರಿಂದ ವಿಶೇಷ ಲಾಭಗಳು ದೊರೆಯುತ್ತವೆ. ಅಲ್ಲದೆ, ಈ ದಿನದಂದು ಸಿಂಧೂರದೊಂದಿಗೆ ತಿಲಕವನ್ನು ಹಚ್ಚಿಕೊಳ್ಳುವುದರಿಂದ ಮಂಗಳ ದೋಷವು ದೂರವಾಗುತ್ತದೆ ಮತ್ತು ಮಂಗಳನ ಸ್ಥಾನವು ಜಾತಕದಲ್ಲಿ ಉತ್ತಮವಾಗುತ್ತದೆ. ಅಂಗಾರಕ ಚತುರ್ಥಿಯ ದಿನದಂದು ಗಣೇಶನು ಎಲ್ಲಾ ತೊಂದರೆಗಳು ಮತ್ತು ಅಡೆತಡೆಗಳನ್ನು ನಿವಾರಿಸಿ, ಆತನಿಗೆ ಸಂತೋಷ, ಶಾಂತಿ ಮತ್ತು ಸಮೃದ್ಧಿಯನ್ನು ನೀಡುತ್ತಾನೆ ಎಂದು ನಂಬಲಾಗಿದೆ. ಜೊತೆಗೆ ವಿಘ್ನವಿನಾಶಕ ಗಣೇಶನ ಅಂಗಾರಕ ಚತುರ್ಥಿ ಉಪವಾಸವು ಎಲ್ಲಾ ತೊಂದರೆಗಳು ಮತ್ತು ದುಃಖಗಳನ್ನು ತೊಡೆದುಹಾಕಲು ಬಹಳ ಜನಪ್ರಿಯವಾಗಿದೆ.

ಅಂಗಾರಕ ಚತುರ್ಥಿ ಪೂಜಾ ವಿಧಾನ ಮತ್ತು ಉಪವಾಸ ನಿಯಮಗಳು:

ಅಂಗಾರಕ ಚತುರ್ಥಿ ಪೂಜಾ ವಿಧಾನ ಮತ್ತು ಉಪವಾಸ ನಿಯಮಗಳು:

ಅಂಗಾರಕ ಚತುರ್ಥಿ ವ್ರತವನ್ನು ಆಚರಿಸುವವರು ಬ್ರಾಹ್ಮೀ ಮುಹೂರ್ತದಲ್ಲಿ ‘ಓಂ ಗಂ ಗಣಪತಯೇ ನಮಃ' ಎಂಬ ಮಂತ್ರವನ್ನು ಜಪಿಸುತ್ತಾ ಸ್ನಾನ, ಧ್ಯಾನ ಇತ್ಯಾದಿಗಳಿಂದ ನಿವೃತ್ತರಾದ ನಂತರ ಉಪವಾಸ ವ್ರತವನ್ನು ಮಾಡಬೇಕು.

ಹಾಗೆಯೇ ಕೆಂಪು ಬಣ್ಣದ ಬಟ್ಟೆಗಳನ್ನು ಧರಿಸಿ, ಇದು ಮಂಗಳನ ಸ್ಥಾನವನ್ನು ಬಲಪಡಿಸುತ್ತದೆ.

ಉಪವಾಸ ಮಾಡದಿದ್ದರೂ ಗಣೇಶನನ್ನು ಪೂಜಿಸಬೇಕು. ಉಪವಾಸವನ್ನು ಆಚರಿಸುವ ವ್ಯಕ್ತಿಯು ಪೂರ್ವ ಅಥವಾ ಉತ್ತರಕ್ಕೆ ಅಭಿಮುಖವಾಗಿ ಗಣಪತಿಯನ್ನು ಪೂಜಿಸಬೇಕು.

ಗಣೇಶನ ಆರಾಧನೆಯಲ್ಲಿ, ಗರಿಕೆ, ಧೂಪ-ದೀಪ ಮತ್ತು ಮೋದಕ ಅಥವಾ ಲಡ್ಡುಗಳಂತಹ ಅವನ ನೆಚ್ಚಿನ ವಸ್ತುಗಳನ್ನು ಅರ್ಪಿಸಿ.

ಇದರ ನಂತರ, ಗಣೇಶ ಚಾಲೀಸಾ, ಗಣೇಶ ಸ್ತೋತ್ರ ಅಥವಾ ಗಣೇಶ ಅಥರ್ವಶೀರ್ಷವನ್ನು ಪಠಿಸಬಹುದು. ಗಣೇಶನ ಪೂಜೆಯಲ್ಲಿ ತುಳಸಿಯನ್ನು ಬಳಸಬಾರದು ಎಂಬುದನ್ನು ನೆನಪಿನಲ್ಲಿಡಿ.

ಪೂಜೆಯ ದಿನವಿಡೀ ಓಂ ಗಂ ಗಣಪತಯೇ ನಮಃ ಎಂಬ ಮಂತ್ರವನ್ನು ಪಠಿಸುತ್ತಿರಿ.

ಇದರೊಂದಿಗೆ, ಉಪವಾಸದ ನಿಯಮಗಳನ್ನು ಅನುಸರಿಸುವಾಗ ನೀವು ಹಣ್ಣುಗಳನ್ನು ಸಹ ತಿನ್ನಬಹುದು.

ಚಂದ್ರೋದಯಕ್ಕೂ ಮುಂಚೆಯೇ ಗಣಪತಿಯನ್ನು ಪೂಜಿಸಿ; ಗಣಪತಿಯ ವಿಗ್ರಹ ಅಥವಾ ಚಿತ್ರದ ಮೇಲೆ ಧೂಪ-ದೀಪ, ಹಣ್ಣುಗಳು, ಹೂವುಗಳೊಂದಿಗೆ ನೈವೇದ್ಯವನ್ನು ಅರ್ಪಿಸಿ. ಶ್ರೀಗಂಧದ ತಿಲಕವನ್ನು ಗಣೇಶನಿಗೆ ಹಚ್ಚಿ ಮತ್ತು ಲಡ್ಡುಗಳನ್ನು ಅರ್ಪಿಸಿ.

English summary

Angarki Chaturthi 2022 Date, Shubh Muhurat, Puja Vidhi, Ganesh Mantra and Importance in Kannada

Here we talking about Angarki Chaturthi 2022 Date, Shubh Muhurat, Puja Vidhi, Ganesh Mantra and Importance in Kannada, read on
Story first published: Monday, April 18, 2022, 18:00 [IST]
X
Desktop Bottom Promotion