Latest Updates
-
ಕಂಟೆಂಟ್ ಕ್ರಿಯೇಟರ್ಗಳೇ ಗಮನಿಸಿ: ಫೋಟೊ ಶೂಟ್ ವೇಳೆ ನೋವು ಮರೆಯಾಗಲು ಈ 12 ನಿಮಿಷದ ವರ್ಕೌಟ್ ಸಾಕು! -
ಫೋಟೋಗ್ರಾಫರ್ಗಳೇ ಎಚ್ಚರ! ನೋವಿಲ್ಲದೆ ಅದ್ಭುತ ಫೋಟೋ ಕ್ಲಿಕ್ಕಿಸಲು ಈ 7 ನಿಮಿಷದ ಮೊಬಿಲಿಟಿ ರಿಸೆಟ್ ಟ್ರೈ ಮಾಡಿ -
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್! -
ವಿಶ್ವ ಛಾಯಾಗ್ರಹಣ ದಿನ: ಮನೆಯಲ್ಲೇ ಫೋಟೋ ಸ್ಟುಡಿಯೋ ಮಾಡಿ, ನಿಮ್ಮ ಗಿಡಗಳ ಫೋಟೋ ವೈರಲ್ ಆಗುವಂತೆ ಕ್ಲಿಕ್ ಮಾಡಿ! -
98% ಅಂಕ ಪಡೆದರೂ ಅಂಗಡಿ ಬಂದ್: FDAಗೆ ಹೈಕೋರ್ಟ್ ತರಾಟೆ, ಕಲಬೆರಕೆ ಸಿಹಿ ಪತ್ತೆಹಚ್ಚುವುದು ಹೇಗೆ? -
BWF ವಿಶ್ವ ಚಾಂಪಿಯನ್ಷಿಪ್ 2026: ಲಕ್ಷ್ಯ ಸೇನ್ ಅಬ್ಬರಕ್ಕೆ ದೆಹಲಿ ಸಜ್ಜು, ಲೈವ್ ಮಿಸ್ ಮಾಡ್ಬೇಡಿ! -
ವಿಶ್ವ ಹಿರಿಯ ನಾಗರಿಕರ ದಿನ: ಪೋಷಕರ ಆರೋಗ್ಯ ಮತ್ತು ಸಮತೋಲನ ಹೆಚ್ಚಿಸುವ ಸರಳ ಬೆಳಗಿನ ವ್ಯಾಯಾಮಗಳು
ದೇವರಿಗೆ ಅರ್ಪಿಸಿದ ತೆಂಗಿನಕಾಯಿ ಹಾಳಾದರೆ ಏನರ್ಥ?
ಧಾರ್ಮಿಕ ಕಾರ್ಯಗಳಲ್ಲಿ ದೇವರಿಗೆ ತೆಂಗಿನಕಾಯಿ ಅರ್ಪಿಸಲಾಗುವುದು. ತೆಂಗಿನಕಾಯಿಯನ್ನು ಮಾತೆ ಲಕ್ಷ್ಮಿಯ ಸ್ವರೂಪ ಎಂದು ಹೇಳಲಾಗುವುದು. ದೇವರಿಗೆ ತೆಂಗಿನಕಾಯಿ ಅರ್ಪಿಸುವಾಗ ಜುಟ್ಟು ಇರುವ ತೆಂಗಿನಕಾಯಿಯನ್ನೇ ಅರ್ಪಿಸಬೇಕು. ತೆಂಗಿನಕಾಯಿಯನ್ನು ಆಯ್ಕೆ ಮಾಡುವಾಗ ಅದರೊಳಗೆ ಹೇಗಿದೆ ಎಂದು ತಿಳಿಯಲು ಸಾಧ್ಯವಿಲ್ಲ.
ಪೂಜೆಗೆ ಒಡೆದ ತೆಂಗಿನಕಾಯಿ ಹಾಳಾಗಿದ್ದರೆ ಅದು ಅಶುಭದ ಸೂಚನೆ ಎಂದೇ ಬಹುತೇಕರು ಭಾವಿಸುತ್ತಾರೆ. ದೇವರಿಗೆ ತೆಂಗಿನಕಾಯಿ ಒಡೆದಾಗ ಅದು ಹಾಳಾಗಿದ್ದರೆ ಅದು ಅಶುಭದ ಸೂಚನೆಯೇ? ಈ ಕುರಿತು ಶಾಸ್ತ್ರ ಏನು ಹೇಳುತ್ತದೆ ಎಂದು ನೋಡೋಣ ಬನ್ನಿ:

ಪೂಜೆಗೆ ತೆಂಗಿನಕಾಯಿ ಹಾಳಾಗಿದ್ದರೆ
ದೇವರಿಗೆ ತೆಂಗಿನಕಾಯಿ ಒಡೆದಾಗ ಅದು ಹಾಳಾಗಿದ್ದರೆ ಅದುಅಶುಭದ ಸೂಚನೆ, ದೇವರು ಈ ರೀತಿ ನಮಗೆ ಏನೋ ಸೂಚನೆ ನೀಡುತ್ತಿದ್ದಾನೆ ಎಂದು ಭಾವಿಸುತ್ತಾರೆ, ಆದರೆ ನಿಜವಾಗಲೂ ಆ ರೀತಿಯಲ್ಲ. ಪೂಜೆಗೆ ತೆಂಗಿನಕಾಯಿ ಒಡೆದಾಗ ಅದು ಹಾಳಾಗಿದ್ದರೆ ಅದು ಉತ್ತಮ ಸೂಚನೆಯಾಗಿದೆ! ದೇವರು ನಿಮ್ಮ ಪ್ರಸಾದವನ್ನು ಸ್ವೀಕರಿಸಿದ್ದಾನೆ ಎಂದು ಸೂಚಿಸುವ ಲಕ್ಷಣವಾಗಿದೆ.
ತೆಂಗಿನಕಾಯಿ ಹಾಳಾಗಿದ್ದರೆ ದೇವರು ನಮ್ಮ ಪ್ರಸಾದ ಸ್ವೀಕರಿಸಿದ್ದಾನೆ, ನಮ್ಮೆಲ್ಲಾ ಇಷ್ಟಾರ್ಥಗಳು ನೆರವೇರಲಿದೆ ಎಂಬ ಸೂಚನೆಯಾಗಿದೆ. ಆದ್ದರಿಂದ ಪೂಜೆಗೆ ಬಳಸಿದ ತೆಂಗಿನಕಾಯಿ ಹಾಳಾದರೆ ಟೆನ್ಷನ್ ಮಾಡಿಕೊಳ್ಳಬೇಡಿ, ಬದಲಿಗೆ ಖುಷಿ ಪಡಿ, ದೇವರ ಕೃಪೆ ನಮ್ಮ ಮೇಲಿದೆ, ನಮ್ಮ ಇಷ್ಟಾರ್ಥಗಳು ನೆರವೇರಲಿದೆ ಎಂದು ಸೂಚಿಸುವ ಲಕ್ಷಣವಾಗಿದೆ.
ತೆಂಗಿನಕಾಯಿ ಒಡೆದಾಗ ಸಮವಾಗಿ ವಿಬ್ಭಾಗವಾಗದೇ ಹೋದರೆ
ದೇವರಿಗೆ ತೆಂಗಿನಕಾಯಿ ಒಡೆದಾಗ ಅದು ಎರಡು ಭಾಗವಾಗಿ ಸಮವಾಗಿ ಭಾಗವಾಗದಿದ್ದರೆ ಆಗಲೂ ಕೂಡ ಕಲೆವರು ಟೆನ್ಷನ್ ಮಾಡಿಕೊಳ್ಳುತ್ತಾರೆ, ದೇವರಿಗೆ ಒಡೆದ ತೆಂಗಿನಕಾಯಿ ಹೇಗೇ ಭಾಗವಾದರೂ ತಲೆಕೆಡಿಸಿಕೊಳ್ಳಬೇಕಾಗಿಲ್ಲ, ತೆಂಗಿನಕಾಯಿ ಹೀಗೆಯೇ ಭಾಗವಾಗಬೇಕು ಎಂಬ ಯಾವ ನಿಯಮವೂ ಇಲ್ಲ.
ಮತ್ತೊಂದು ತೆಂಗಿನಕಾಯಿ ಅರ್ಪಿಸಬಹುದೇ?
ಒಂದು ತೆಂಗಿನಕಾಯಿ ಹಾಳಾದರೆ ಕೆಲವರು ಮತ್ತೊಂದು ಅರ್ಪಿಸುತ್ತಾರೆ. ಹೀಗೆ ಮಾಡಬಹುದು, ಆದರೆ ತೆಂಗಿನಕಾಯಿ ಹಾಳಾದರೆ ಅದು ಅಶುಭ ಎಂದು ಯೋಚಿಸುವ ಅಗ್ಯತವಿಲ್ಲ, ಅದು ಶುಭದ ಸೂಚನೆಯೇ ಆಗಿದೆ. ಕೆಲವೊಮ್ಮೆ ಪೂಜೆಗೆ ಬಳಸಿದ ತೆಂಗಿನಕಾಯಿಂದ ಪ್ರಸಾದ ತಯಾರಿಸುತ್ತೇವೆ, ಈ ಸಂದರ್ಭದಲ್ಲಿ ಹಾಳಾದ ತೆಂಗಿನಕಾಯಿಯನ್ನು ಬಳಸಲು ಸಾಧ್ಯವಿಲ್ಲ, ಆ ಸಂದರ್ಭದಲ್ಲಿ ಮತ್ತೊಂದುನ ಒಡೆದು ಬಳಸಬಹುದು.
ತೆಂಗಿನಕಾಯಿ ಒಳಗಡೆ ಹೂವಿದ್ದರೆ
ತೆಂಗಿನಕಾಯಿಯೊಳಗಡೆ ಹೂವು ಇದ್ದರೆ ಅದು ಕೂಡ ಒಳ್ಳೆಯದೇ. ಅಲ್ಲದೆ ಇದನ್ನು ತಿನ್ನಿ, ಏಕೆಂದರೆ ಇದರಲ್ಲಿ ಅನೇಕ ಪೋಷಕಾಂಶಗಳಿವೆ, ಆದ್ದರಿಂದ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು.



Click it and Unblock the Notifications