Latest Updates
-
ಭಾರತ-ಜಿಂಬಾಬ್ವೆ ಟಿ20 ಪಂದ್ಯದ ಮಜಾ ಸವಿಯುತ್ತಲೇ ಮನೆಯ ಜವಾಬ್ದಾರಿ ನಿಭಾಯಿಸುವುದು ಹೇಗೆ? ಸ್ಮಾರ್ಟ್ ಟಿಪ್ಸ್ ಇಲ್ಲಿದೆ! -
IMD ರೆಡ್ ಅಲರ್ಟ್: ಭಾರಿ ಮಳೆಯಿಂದ ಮನೆಯನ್ನು ರಕ್ಷಿಸಲು ಈ 5 ಮುನ್ನೆಚ್ಚರಿಕೆಗಳು ಕಡ್ಡಾಯ! -
ಗುರು ಪೂರ್ಣಿಮಾ ಉಪವಾಸ: ಮಧುಮೇಹಿಗಳು ಆರೋಗ್ಯವಾಗಿರಲು ಈ ಸಾತ್ವಿಕ ಆಹಾರ ಕ್ರಮ ಪಾಲಿಸಿ -
ಪೇಪರ್ ಸೋರಿಕೆ ಮಾಡಿದ್ರೆ 10 ವರ್ಷ ಜೈಲು: ವಿದ್ಯಾರ್ಥಿಗಳ ಭವಿಷ್ಯಕ್ಕೆ ಸಿಗಲಿದೆ ಹೊಸ ಭದ್ರತೆ! -
ಕಾರ್ಗಿಲ್ ವಿಜಯ್ ದಿವಸ್: ದೇಶಭಕ್ತಿಯ ನಡಿಗೆಯಲ್ಲಿ ಪಾಲ್ಗೊಳ್ಳುವ ಮುನ್ನ ಈ ಆರೋಗ್ಯ ಟಿಪ್ಸ್ ಮರೆಯದಿರಿ -
ದೇವಶಯನಿ ಏಕಾದಶಿ: ದಂಪತಿಗಳ ಬಾಂಧವ್ಯ ಹೆಚ್ಚಿಸಲು ಈ ಉಪವಾಸದ ಟಿಪ್ಸ್ ಮಿಸ್ ಮಾಡ್ಬೇಡಿ! -
ಮಳೆಗಾಲದ ತೇವಾಂಶ: ನಿಮ್ಮ ದುಬಾರಿ ಸೀರೆ ಮತ್ತು ಶೂಗಳನ್ನು ಬೂಸ್ಟ್ನಿಂದ ರಕ್ಷಿಸಲು ಈ 15 ನಿಮಿಷದ ಟಿಪ್ಸ್ ಸಾಕು! -
ಅಹಮದಾಬಾದ್ ಮಳೆ: ಪ್ರವಾಹದ ಸಮಯದಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ಈ ಸರಳ ಮಾರ್ಗಸೂಚಿಗಳನ್ನು ಅನುಸರಿಸಿ -
ಕಾಮನ್ವೆಲ್ತ್ ಗೇಮ್ಸ್ 2026: 3ನೇ ದಿನ ಭಾರತದ ಆಟಗಾರರ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ! -
ಮಳೆಗಾಲದ ಜಾರುವ ರಸ್ತೆಗಳಲ್ಲಿ ನಡೆಯುವಾಗ ಎಚ್ಚರ: ಸುರಕ್ಷಿತವಾಗಿರಲು 8 ನಿಮಿಷಗಳ ಈ ವ್ಯಾಯಾಮ ಮಾಡಿ!
ದೇವರಿಗೆ ಅರ್ಪಿಸಿದ ತೆಂಗಿನಕಾಯಿ ಹಾಳಾದರೆ ಏನರ್ಥ?
ಧಾರ್ಮಿಕ ಕಾರ್ಯಗಳಲ್ಲಿ ದೇವರಿಗೆ ತೆಂಗಿನಕಾಯಿ ಅರ್ಪಿಸಲಾಗುವುದು. ತೆಂಗಿನಕಾಯಿಯನ್ನು ಮಾತೆ ಲಕ್ಷ್ಮಿಯ ಸ್ವರೂಪ ಎಂದು ಹೇಳಲಾಗುವುದು. ದೇವರಿಗೆ ತೆಂಗಿನಕಾಯಿ ಅರ್ಪಿಸುವಾಗ ಜುಟ್ಟು ಇರುವ ತೆಂಗಿನಕಾಯಿಯನ್ನೇ ಅರ್ಪಿಸಬೇಕು. ತೆಂಗಿನಕಾಯಿಯನ್ನು ಆಯ್ಕೆ ಮಾಡುವಾಗ ಅದರೊಳಗೆ ಹೇಗಿದೆ ಎಂದು ತಿಳಿಯಲು ಸಾಧ್ಯವಿಲ್ಲ.
ಪೂಜೆಗೆ ಒಡೆದ ತೆಂಗಿನಕಾಯಿ ಹಾಳಾಗಿದ್ದರೆ ಅದು ಅಶುಭದ ಸೂಚನೆ ಎಂದೇ ಬಹುತೇಕರು ಭಾವಿಸುತ್ತಾರೆ. ದೇವರಿಗೆ ತೆಂಗಿನಕಾಯಿ ಒಡೆದಾಗ ಅದು ಹಾಳಾಗಿದ್ದರೆ ಅದು ಅಶುಭದ ಸೂಚನೆಯೇ? ಈ ಕುರಿತು ಶಾಸ್ತ್ರ ಏನು ಹೇಳುತ್ತದೆ ಎಂದು ನೋಡೋಣ ಬನ್ನಿ:

ಪೂಜೆಗೆ ತೆಂಗಿನಕಾಯಿ ಹಾಳಾಗಿದ್ದರೆ
ದೇವರಿಗೆ ತೆಂಗಿನಕಾಯಿ ಒಡೆದಾಗ ಅದು ಹಾಳಾಗಿದ್ದರೆ ಅದುಅಶುಭದ ಸೂಚನೆ, ದೇವರು ಈ ರೀತಿ ನಮಗೆ ಏನೋ ಸೂಚನೆ ನೀಡುತ್ತಿದ್ದಾನೆ ಎಂದು ಭಾವಿಸುತ್ತಾರೆ, ಆದರೆ ನಿಜವಾಗಲೂ ಆ ರೀತಿಯಲ್ಲ. ಪೂಜೆಗೆ ತೆಂಗಿನಕಾಯಿ ಒಡೆದಾಗ ಅದು ಹಾಳಾಗಿದ್ದರೆ ಅದು ಉತ್ತಮ ಸೂಚನೆಯಾಗಿದೆ! ದೇವರು ನಿಮ್ಮ ಪ್ರಸಾದವನ್ನು ಸ್ವೀಕರಿಸಿದ್ದಾನೆ ಎಂದು ಸೂಚಿಸುವ ಲಕ್ಷಣವಾಗಿದೆ.
ತೆಂಗಿನಕಾಯಿ ಹಾಳಾಗಿದ್ದರೆ ದೇವರು ನಮ್ಮ ಪ್ರಸಾದ ಸ್ವೀಕರಿಸಿದ್ದಾನೆ, ನಮ್ಮೆಲ್ಲಾ ಇಷ್ಟಾರ್ಥಗಳು ನೆರವೇರಲಿದೆ ಎಂಬ ಸೂಚನೆಯಾಗಿದೆ. ಆದ್ದರಿಂದ ಪೂಜೆಗೆ ಬಳಸಿದ ತೆಂಗಿನಕಾಯಿ ಹಾಳಾದರೆ ಟೆನ್ಷನ್ ಮಾಡಿಕೊಳ್ಳಬೇಡಿ, ಬದಲಿಗೆ ಖುಷಿ ಪಡಿ, ದೇವರ ಕೃಪೆ ನಮ್ಮ ಮೇಲಿದೆ, ನಮ್ಮ ಇಷ್ಟಾರ್ಥಗಳು ನೆರವೇರಲಿದೆ ಎಂದು ಸೂಚಿಸುವ ಲಕ್ಷಣವಾಗಿದೆ.
ತೆಂಗಿನಕಾಯಿ ಒಡೆದಾಗ ಸಮವಾಗಿ ವಿಬ್ಭಾಗವಾಗದೇ ಹೋದರೆ
ದೇವರಿಗೆ ತೆಂಗಿನಕಾಯಿ ಒಡೆದಾಗ ಅದು ಎರಡು ಭಾಗವಾಗಿ ಸಮವಾಗಿ ಭಾಗವಾಗದಿದ್ದರೆ ಆಗಲೂ ಕೂಡ ಕಲೆವರು ಟೆನ್ಷನ್ ಮಾಡಿಕೊಳ್ಳುತ್ತಾರೆ, ದೇವರಿಗೆ ಒಡೆದ ತೆಂಗಿನಕಾಯಿ ಹೇಗೇ ಭಾಗವಾದರೂ ತಲೆಕೆಡಿಸಿಕೊಳ್ಳಬೇಕಾಗಿಲ್ಲ, ತೆಂಗಿನಕಾಯಿ ಹೀಗೆಯೇ ಭಾಗವಾಗಬೇಕು ಎಂಬ ಯಾವ ನಿಯಮವೂ ಇಲ್ಲ.
ಮತ್ತೊಂದು ತೆಂಗಿನಕಾಯಿ ಅರ್ಪಿಸಬಹುದೇ?
ಒಂದು ತೆಂಗಿನಕಾಯಿ ಹಾಳಾದರೆ ಕೆಲವರು ಮತ್ತೊಂದು ಅರ್ಪಿಸುತ್ತಾರೆ. ಹೀಗೆ ಮಾಡಬಹುದು, ಆದರೆ ತೆಂಗಿನಕಾಯಿ ಹಾಳಾದರೆ ಅದು ಅಶುಭ ಎಂದು ಯೋಚಿಸುವ ಅಗ್ಯತವಿಲ್ಲ, ಅದು ಶುಭದ ಸೂಚನೆಯೇ ಆಗಿದೆ. ಕೆಲವೊಮ್ಮೆ ಪೂಜೆಗೆ ಬಳಸಿದ ತೆಂಗಿನಕಾಯಿಂದ ಪ್ರಸಾದ ತಯಾರಿಸುತ್ತೇವೆ, ಈ ಸಂದರ್ಭದಲ್ಲಿ ಹಾಳಾದ ತೆಂಗಿನಕಾಯಿಯನ್ನು ಬಳಸಲು ಸಾಧ್ಯವಿಲ್ಲ, ಆ ಸಂದರ್ಭದಲ್ಲಿ ಮತ್ತೊಂದುನ ಒಡೆದು ಬಳಸಬಹುದು.
ತೆಂಗಿನಕಾಯಿ ಒಳಗಡೆ ಹೂವಿದ್ದರೆ
ತೆಂಗಿನಕಾಯಿಯೊಳಗಡೆ ಹೂವು ಇದ್ದರೆ ಅದು ಕೂಡ ಒಳ್ಳೆಯದೇ. ಅಲ್ಲದೆ ಇದನ್ನು ತಿನ್ನಿ, ಏಕೆಂದರೆ ಇದರಲ್ಲಿ ಅನೇಕ ಪೋಷಕಾಂಶಗಳಿವೆ, ಆದ್ದರಿಂದ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು.



Click it and Unblock the Notifications