Latest Updates
-
ಬಿಸಿಲ ಬೇಗೆಯಲ್ಲಿ ಮದುವೆ ಸಂಭ್ರಮ ಹಾಳಾಗದಿರಲಿ: ಅತಿಥಿಗಳ ಆರೋಗ್ಯ ಕಾಪಾಡಲು ಇಲ್ಲಿವೆ ಸೀಕ್ರೆಟ್ ಟಿಪ್ಸ್! -
ಬಿಸಿಗಾಳಿಯ ಆರ್ಭಟ: ಮನೆಯನ್ನು ತಂಪಾಗಿಡಲು ಮತ್ತು ಆರೋಗ್ಯ ಕಾಪಾಡಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸುಡುವ ಬಿಸಿಲಿಗೆ ರೆಡ್ ಅಲರ್ಟ್: ಆಯುಷ್ ಸಚಿವಾಲಯದ ಈ ಸಿಂಪಲ್ ಟಿಪ್ಸ್ ಪಾಲಿಸಿದರೆ ಸಾಕು, ದೇಹ ತಂಪಾಗಿರುತ್ತೆ! -
ಬಿಸಿಲಿನ ಬೇಗೆಯಿಂದ ತತ್ತರಿಸಿದ ಕರ್ನಾಟಕ: ಮನೆಯಲ್ಲೇ ತಂಪಾಗಿರಲು ನೀವು ಮಾಡಬೇಕಾದ ಆ 5 ಬದಲಾವಣೆಗಳೇನು? -
ಬಿಸಿಲ ಬೇಗೆಯಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ಆರೋಗ್ಯಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ! -
45 ಡಿಗ್ರಿ ಬಿಸಿಲಲ್ಲಿ ಮದುವೆ ಪ್ಲಾನ್ ಮಾಡ್ತಿದ್ದೀರಾ? ಅತಿಥಿಗಳ ಆರೋಗ್ಯಕ್ಕಾಗಿ ಈ ಎಚ್ಚರಿಕೆ ಮರೆಯದಿರಿ! -
ಶಾಖದ ಅಲೆ ಎಚ್ಚರಿಕೆ: ಎಸಿ ಇಲ್ಲದೆ ಮನೆಯನ್ನು ತಂಪಾಗಿಡಲು ಮತ್ತು ನಿಮ್ಮ ಗಿಡಗಳನ್ನು ಬಿಸಿಲಿನಿಂದ ರಕ್ಷಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ಬಿಸಿಲ ಬೇಗೆಗೆ ಸುಸ್ತಾಗಿದ್ದೀರಾ? ಹೀಟ್ಸ್ಟ್ರೋಕ್ನಿಂದ ಪಾರಾಗಲು ಈ ಪಾನೀಯ ಮತ್ತು ಆಹಾರವೇ ಸಂಜೀವಿನಿ! -
ಸೀರೆ ಉಡೋದ್ರಲ್ಲಿ ಹೊಸ ಕ್ರಾಂತಿ: ಇನ್ಸ್ಟಾಗ್ರಾಮ್ನಲ್ಲಿ ವೈರಲ್ ಆಗ್ತಿರೋ 'ದೇಸಿ-ಕೋರ್' ಸೀರೆ ಸ್ಟೈಲ್ಸ್ ಮಿಸ್ ಮಾಡ್ಬೇಡಿ! -
ಬಿಸಿಲ ಬೇಗೆಯಲ್ಲೂ ಫಿಟ್ ಆಗಿರಬೇಕೆ? ಮುಂಜಾನೆಯ ಈ ಸಣ್ಣ ಬದಲಾವಣೆ ನಿಮ್ಮ ಆರೋಗ್ಯಕ್ಕೆ ವರದಾನ!
ದೇವರಿಗೆ ಅರ್ಪಿಸಿದ ತೆಂಗಿನಕಾಯಿ ಹಾಳಾದರೆ ಏನರ್ಥ?
ಧಾರ್ಮಿಕ ಕಾರ್ಯಗಳಲ್ಲಿ ದೇವರಿಗೆ ತೆಂಗಿನಕಾಯಿ ಅರ್ಪಿಸಲಾಗುವುದು. ತೆಂಗಿನಕಾಯಿಯನ್ನು ಮಾತೆ ಲಕ್ಷ್ಮಿಯ ಸ್ವರೂಪ ಎಂದು ಹೇಳಲಾಗುವುದು. ದೇವರಿಗೆ ತೆಂಗಿನಕಾಯಿ ಅರ್ಪಿಸುವಾಗ ಜುಟ್ಟು ಇರುವ ತೆಂಗಿನಕಾಯಿಯನ್ನೇ ಅರ್ಪಿಸಬೇಕು. ತೆಂಗಿನಕಾಯಿಯನ್ನು ಆಯ್ಕೆ ಮಾಡುವಾಗ ಅದರೊಳಗೆ ಹೇಗಿದೆ ಎಂದು ತಿಳಿಯಲು ಸಾಧ್ಯವಿಲ್ಲ.
ಪೂಜೆಗೆ ಒಡೆದ ತೆಂಗಿನಕಾಯಿ ಹಾಳಾಗಿದ್ದರೆ ಅದು ಅಶುಭದ ಸೂಚನೆ ಎಂದೇ ಬಹುತೇಕರು ಭಾವಿಸುತ್ತಾರೆ. ದೇವರಿಗೆ ತೆಂಗಿನಕಾಯಿ ಒಡೆದಾಗ ಅದು ಹಾಳಾಗಿದ್ದರೆ ಅದು ಅಶುಭದ ಸೂಚನೆಯೇ? ಈ ಕುರಿತು ಶಾಸ್ತ್ರ ಏನು ಹೇಳುತ್ತದೆ ಎಂದು ನೋಡೋಣ ಬನ್ನಿ:

ಪೂಜೆಗೆ ತೆಂಗಿನಕಾಯಿ ಹಾಳಾಗಿದ್ದರೆ
ದೇವರಿಗೆ ತೆಂಗಿನಕಾಯಿ ಒಡೆದಾಗ ಅದು ಹಾಳಾಗಿದ್ದರೆ ಅದುಅಶುಭದ ಸೂಚನೆ, ದೇವರು ಈ ರೀತಿ ನಮಗೆ ಏನೋ ಸೂಚನೆ ನೀಡುತ್ತಿದ್ದಾನೆ ಎಂದು ಭಾವಿಸುತ್ತಾರೆ, ಆದರೆ ನಿಜವಾಗಲೂ ಆ ರೀತಿಯಲ್ಲ. ಪೂಜೆಗೆ ತೆಂಗಿನಕಾಯಿ ಒಡೆದಾಗ ಅದು ಹಾಳಾಗಿದ್ದರೆ ಅದು ಉತ್ತಮ ಸೂಚನೆಯಾಗಿದೆ! ದೇವರು ನಿಮ್ಮ ಪ್ರಸಾದವನ್ನು ಸ್ವೀಕರಿಸಿದ್ದಾನೆ ಎಂದು ಸೂಚಿಸುವ ಲಕ್ಷಣವಾಗಿದೆ.
ತೆಂಗಿನಕಾಯಿ ಹಾಳಾಗಿದ್ದರೆ ದೇವರು ನಮ್ಮ ಪ್ರಸಾದ ಸ್ವೀಕರಿಸಿದ್ದಾನೆ, ನಮ್ಮೆಲ್ಲಾ ಇಷ್ಟಾರ್ಥಗಳು ನೆರವೇರಲಿದೆ ಎಂಬ ಸೂಚನೆಯಾಗಿದೆ. ಆದ್ದರಿಂದ ಪೂಜೆಗೆ ಬಳಸಿದ ತೆಂಗಿನಕಾಯಿ ಹಾಳಾದರೆ ಟೆನ್ಷನ್ ಮಾಡಿಕೊಳ್ಳಬೇಡಿ, ಬದಲಿಗೆ ಖುಷಿ ಪಡಿ, ದೇವರ ಕೃಪೆ ನಮ್ಮ ಮೇಲಿದೆ, ನಮ್ಮ ಇಷ್ಟಾರ್ಥಗಳು ನೆರವೇರಲಿದೆ ಎಂದು ಸೂಚಿಸುವ ಲಕ್ಷಣವಾಗಿದೆ.
ತೆಂಗಿನಕಾಯಿ ಒಡೆದಾಗ ಸಮವಾಗಿ ವಿಬ್ಭಾಗವಾಗದೇ ಹೋದರೆ
ದೇವರಿಗೆ ತೆಂಗಿನಕಾಯಿ ಒಡೆದಾಗ ಅದು ಎರಡು ಭಾಗವಾಗಿ ಸಮವಾಗಿ ಭಾಗವಾಗದಿದ್ದರೆ ಆಗಲೂ ಕೂಡ ಕಲೆವರು ಟೆನ್ಷನ್ ಮಾಡಿಕೊಳ್ಳುತ್ತಾರೆ, ದೇವರಿಗೆ ಒಡೆದ ತೆಂಗಿನಕಾಯಿ ಹೇಗೇ ಭಾಗವಾದರೂ ತಲೆಕೆಡಿಸಿಕೊಳ್ಳಬೇಕಾಗಿಲ್ಲ, ತೆಂಗಿನಕಾಯಿ ಹೀಗೆಯೇ ಭಾಗವಾಗಬೇಕು ಎಂಬ ಯಾವ ನಿಯಮವೂ ಇಲ್ಲ.
ಮತ್ತೊಂದು ತೆಂಗಿನಕಾಯಿ ಅರ್ಪಿಸಬಹುದೇ?
ಒಂದು ತೆಂಗಿನಕಾಯಿ ಹಾಳಾದರೆ ಕೆಲವರು ಮತ್ತೊಂದು ಅರ್ಪಿಸುತ್ತಾರೆ. ಹೀಗೆ ಮಾಡಬಹುದು, ಆದರೆ ತೆಂಗಿನಕಾಯಿ ಹಾಳಾದರೆ ಅದು ಅಶುಭ ಎಂದು ಯೋಚಿಸುವ ಅಗ್ಯತವಿಲ್ಲ, ಅದು ಶುಭದ ಸೂಚನೆಯೇ ಆಗಿದೆ. ಕೆಲವೊಮ್ಮೆ ಪೂಜೆಗೆ ಬಳಸಿದ ತೆಂಗಿನಕಾಯಿಂದ ಪ್ರಸಾದ ತಯಾರಿಸುತ್ತೇವೆ, ಈ ಸಂದರ್ಭದಲ್ಲಿ ಹಾಳಾದ ತೆಂಗಿನಕಾಯಿಯನ್ನು ಬಳಸಲು ಸಾಧ್ಯವಿಲ್ಲ, ಆ ಸಂದರ್ಭದಲ್ಲಿ ಮತ್ತೊಂದುನ ಒಡೆದು ಬಳಸಬಹುದು.
ತೆಂಗಿನಕಾಯಿ ಒಳಗಡೆ ಹೂವಿದ್ದರೆ
ತೆಂಗಿನಕಾಯಿಯೊಳಗಡೆ ಹೂವು ಇದ್ದರೆ ಅದು ಕೂಡ ಒಳ್ಳೆಯದೇ. ಅಲ್ಲದೆ ಇದನ್ನು ತಿನ್ನಿ, ಏಕೆಂದರೆ ಇದರಲ್ಲಿ ಅನೇಕ ಪೋಷಕಾಂಶಗಳಿವೆ, ಆದ್ದರಿಂದ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು.



Click it and Unblock the Notifications