Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಈಶಾನ್ಯ ದಿಕ್ಕಿನಲ್ಲಿ ಈ 4 ಗಿಡಗಳ ನೆಡಿ; ಹಣ, ಸಂತೋಷದಲ್ಲಿ ಉತ್ತುಂಗ ನೋಡಿ!
ವ್ಯಕ್ತಿಯೊಬ್ಬರ ಜೀವನದಲ್ಲಿ ಬಹಳಷ್ಟು ಅಂಶಗಳು ಅವರ ಅಭಿವೃದ್ಧಿ, ಪ್ರಗತಿ, ಸುಖ, ದುಖಃಗಳಿಗೆ ಕಾರಣವಾಗುತ್ತವೆ. ಅದ್ರಲ್ಲಿ ಒಂದು ವಾಸ್ತು. ಮನೆಯ ವಾಸ್ತು ನಿಮ್ಮ ಜೀವನವನ್ನು ಸಹ ನಿರ್ಧರಿಸುವ ಅಂಶಗಳಿಂದ ಕೂಡಿರಲಿದೆ. ಮನೆ ಕಟ್ಟುವಾಗ ಇದೇ ಕಾರಣಕ್ಕೆ ವಾಸ್ತು ನೋಡುತ್ತಾರೆ. ಹಾಗೆ ವಾಸ್ತು ದೋಷದಿಂದಾಗಿ ಇಡೀ ಕುಟುಂಬವೇ ಸಮಸ್ಯೆಗಳ ಎದುರಿಸುವುದು ಸಹ ನೋಡಬಹುದು.
ಇನ್ನು ವಾಸ್ತು ದೋಷದ ನಿವಾರಣೆಗಾಗಿ ಹಲವರು ಸಾವಿರಾರು ರೂಪಾಯಿ ಖರ್ಚು ಮಾಡುವುದು ನೋಡಬಹುದು. ಹಾಗೆ ಇದರಿಂದ ಹಲವು ಪರಿಹಾರ ಪಡೆಯಲು ಹತ್ತಾರು ಕಡೆಯಲ್ಲಿ ವಿಚಾರಿಸುತ್ತಾರೆ. ಹಾಗೆ ಮನೆಯೊಳಗಿನ ನಕಾರಾತ್ಮಕ ಶಕ್ತಿಯನ್ನು ತಟಸ್ಥಗೊಳಿಸುವ ಯತ್ನ ಮಾಡುವುದು ಸಹ ನೋಡಬಹುದು.

ಇನ್ನು ವಾಸ್ತು ಹೆಸರು ಕೇಳಿದಾಕ್ಷಣ ಹಲವರಿಗೆ ಅಲಂಕಾರಿಕ ಸಸ್ಯಗಳೆಂದು ಕರೆಯುವ ವಾಸ್ತು ಗಿಡಗಳು ನೆನಪಿಗೆ ಬರಬಹುದು. ಹಲವರ ಮನೆಯಲ್ಲಿ ಈ ವಾಸ್ತುಗಳ ಇಡುವುದು ಸಾಮಾನ್ಯ. ಇವು ಮನೆಯಲ್ಲಿನ ನಕಾರಾತ್ಮಕ ಶಕ್ತಿಯನ್ನು ದೂರ ಮಾಡಲಿವೆ ಹಾಗೆ ಮನೆಯ ವಾಸ್ತು ದೋಷ ನಿವಾರಣೆಗೆ ಸಹಕಾರಿಯಾಗಲಿದೆ ಎಂದು ನಂಬಲಾಗಿದೆ.
ಆದ್ರೆ ನಾವು ಯಾವ ಸಸ್ಯವನ್ನು ಯಾವ ಮೂಲೆಯಲ್ಲಿ ಇಡಬೇಕು ಎಂಬುದನ್ನು ತಿಳಿದಿರುವುದಿಲ್ಲ. ಹೀಗಾಗಿ ತಪ್ಪು ಗ್ರಹಿಕೆಯ ಕಾರಣದಿಂದ ಈ ಗಿಡಗಳಿಂದ ಪಡೆಯುವ ಪ್ರಭಾವ ಕಡಿಮೆಯಾಗಲಿದೆ. ಈ ವಾಸ್ತು ಗಿಡಗಳಲ್ಲಿ ಒಂದೊಂದು ದೋಷ ನಿವಾರಣೆಗೆ ಒಂದೊಂದು ಗಿಡಗಳ ಬಳಸಲಾಗುತ್ತದೆ. ಆರೋಗ್ಯ, ಹಣಕಾಸು, ಸಂಬಂಧ, ಜೀವನ ಕುರಿತಾದ ವಿಚಾರಗಳಿಗೆ ಸಂಬಂಧಿಸಿರಲಿದೆ. ಹಾಗಾದ್ರೆ ನಾವಿಂದು ಯಾವ ಗಿಡವನ್ನು ಯಾವ ಮೂಲೆಯಲ್ಲಿ ಇಟ್ಟರೆ ಅದರ ಪ್ರಯೋಜನ ಪಡೆಯಬಹುದು ಎಂಬುದನ್ನು ಸಂಪೂರ್ಣವಾಗಿ ತಿಳಿದುಕೊಳ್ಳೋಣ.
ತುಳಸಿ ಗಿಡ
ತುಳಸಿ ಗಿಡವು ಹೇಗೆ ಆಧ್ಯಾತ್ಮಿಕ ಅಂಶಗಳ ಹೊಂದಿದೆಯೋ ಹಾಗೆ ವಾಸ್ತು ಗಿಡವೂ ಹೌದು. ಆರೋಗ್ಯಕರ ಅಂಶ ಹೊಂದಿರುವ ಈ ಗಿಡವನ್ನು ಎಲ್ಲರ ಮನೆಯಲ್ಲೂ ನೋಡಬಹುದು. ತುಳಸಿಗೆ ಪೂಜೆ ಮಾಡುವುದು ಹಾಗೆ ಅದನ್ನು ವಿಶೇಷ ಸ್ಥಾನದಲ್ಲಿ ಇಟ್ಟು ಆರೈಕೆ ಮಾಡುವುದು ನೋಡುತ್ತೇವೆ. ತುಳಸಿ ಗಿಡವು ಮನೆಯ ಧನಾತ್ಮಕ ಶಕ್ತಿ ಹೆಚ್ಚಿಸಲು ಸಹಕಾರಿ. ಇದು ಲಕ್ಷ್ಮಿ ದೇವಿಯ ಆಶೀರ್ವಾದ ಪಡೆಯಲು ಬಹುಮುಖ್ಯ ಎಂದು ಕರೆಯಲಾಗಿದೆ. ಈ ತುಳಸಿ ಗಿಡವನ್ನು ಮನೆಯ ಈಶಾನ್ಯ ಮತ್ತು ಉತ್ತರ ದಿಕ್ಕಿನತ್ತ ಇಟ್ಟು ನೆಡುವುದು ಬಹಳ ಪ್ರಯೋಜನಕಾರಿ ಎಂದು ಹೇಳಲಾಗಿದೆ.
ಮುಳ್ಳಿನ ಗಿಡ ಅಥವಾ ಮುಟ್ಟಿದರೆ ಮುನಿ ಸಸ್ಯ
ಮನೆಯಲ್ಲಿ ಈ ಮುಟ್ಟಿದರೆ ಮುನಿ, ನಾಚಿಕೆ ಗಿಡ, ಮುಟ್ಟಲ ಮುರುಕ ಎಂದು ಕರೆಯುವ ಗಿಡವನ್ನು ನೆಡುವುದು ಸಹ ವಾಸ್ತು ದೃಷ್ಟಿಯಲ್ಲಿ ಉತ್ತಮವಂತೆ, ಅದ್ರಲ್ಲೂ ಇದನ್ನು ಇಡಲು ಈಶಾನ್ಯ ಅಥವಾ ಪೂರ್ವ ದಿಕ್ಕು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ. ಈ ಸಸ್ಯವು ಕರ್ಮದಾನಕನಾದ ಶನಿ ದೇವರೊಂದಿಗೆ ಸಂಬಂಧ ಹೊಂದಿದೆ ಎಂದು ನಂಬಲಾಗಿದೆ.
ಒಂದೆಲಗ
ಹಲವು ಆರೋಗ್ಯಕರ ಅಂಶಗಳ ತನ್ನಲ್ಲಿಟ್ಟುಕೊಂಡಿರುವ ಒಂದೆಲಗ ಗಿಡವು ವಾಸ್ತು ಶಾಸ್ತ್ರದಲ್ಲೂ ಪ್ರಮುಖ ಸ್ಥಾನ ಪಡೆದಿದೆ. ಕ್ರಾಸ್ಸುಲಾ ಗಿಡವನ್ನು ಈಶಾನ್ಯ ದಿಕ್ಕಿನಲ್ಲಿ ನೆಡುವುದು ಉತ್ತಮವೆಂದು ಪರಿಗಣಿಸಲಾಗುತ್ತದೆ. ಇಲ್ಲವೆ ಈ ಒಂದೆಲಗ ಗಿಡವನ್ನು ಉತ್ತರ ಅಥವಾ ಪೂರ್ವ ದಿಕ್ಕಿನಲ್ಲಿ ಇಡಬಹುದು.
ಶಂಖಪುಷ್ಪ ಸಸ್ಯ
ವಾಸ್ತು ಪ್ರಕಾರ ಶಂಖಪುಷ್ಪ ಸಸ್ಯವನ್ನು ಈಶಾನ್ಯ ದಿಕ್ಕಿನಲ್ಲಿ ನೆಡಬೇಕು. ಹಾಗೆ ಮಾಡುವುದರಿಂದ ಮನೆಯಲ್ಲಿ ಶಾಂತಿ ಮತ್ತು ಸಂತೋಷ ಉಳಿಯುತ್ತದೆ. ಇದು ಲಕ್ಷ್ಮಿ ದೇವತೆ, ವಿಷ್ಣು ಮತ್ತು ಶನಿಯ ಆಶೀರ್ವಾದ ತರುವಂತಹ ಹೂವು ಬಿಡುವ ಸಸ್ಯೆ. ಹೀಗಾಗಿ ಮನೆಯ ನಕಾರಾತ್ಮಕ ಶಕ್ತಿಯನ್ನು ಇದು ಹೊರಗಿಡಲಿದೆ ಎಂದು ನಂಬಲಾಗಿದೆ.



Click it and Unblock the Notifications













