Latest Updates
-
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ 2026: ಅಪ್ಪನ ಮುಖದಲ್ಲಿ ನಗು ಮೂಡಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಐಡಿಯಾಗಳು! -
10ನೇ ಅಂತರಾಷ್ಟ್ರೀಯ ಯೋಗ ದಿನ: ಮಳೆಯನ್ನೂ ಮೀರಿ ಕೋಲ್ಕತ್ತಾದಲ್ಲಿ ಯೋಗ ಸಂಭ್ರಮ, ಮನೆಯಲ್ಲೇ ಅಭ್ಯಾಸ ಮಾಡಲು ಇಲ್ಲಿದೆ ಸರಳ ಟಿಪ್ಸ್! -
ಭಾರತ vs ಅಫ್ಘಾನಿಸ್ತಾನ ಪಂದ್ಯ: ಮ್ಯಾಚ್ ನೋಡುವಾಗ ಮನೆಯಲ್ಲಿ ಶಾಂತಿ ಕಾಪಾಡಲು ಈ ಟಿಪ್ಸ್ ಫಾಲೋ ಮಾಡಿ! -
ನಾಳೆ ನೀಟ್ ಮರುಪರೀಕ್ಷೆ: ಮಳೆಗಾಲದ ನಡುವೆ ಪರೀಕ್ಷೆಗೆ ಸಜ್ಜಾಗುವುದು ಹೇಗೆ? ಇಲ್ಲಿದೆ ಫೈನಲ್ ಚೆಕ್ಲಿಸ್ಟ್ -
ಪಿಎಂ-ಕಿಸಾನ್ ಹಣ ಜಮೆ: ರೈತರೇ, ಈ 2,000 ರೂಪಾಯಿಯಲ್ಲಿ ಆರೋಗ್ಯಕರ ಆಹಾರ ಖರೀದಿಸಿ, ಮಧುಮೇಹ ನಿಯಂತ್ರಿಸಿ! -
ಭಾರಿ ಗಾಳಿ-ಮಳೆಯ ಎಚ್ಚರಿಕೆ: ಜೂನ್ 20ರಂದು ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳನ್ನು ಮರೆಯದಿರಿ! -
ಮಳೆಗಾಲದಲ್ಲಿ ಅಂತರಾಷ್ಟ್ರೀಯ ಯೋಗ ದಿನ: ಹಿರಿಯರು ಸುರಕ್ಷಿತವಾಗಿ ಯೋಗ ಮಾಡುವುದು ಹೇಗೆ? -
ವಿಶ್ವ ಸಂಗೀತ ದಿನ: ಸಂಗಾತಿಯೊಂದಿಗೆ ಮರೆಯಲಾಗದ ಕ್ಷಣ ಕಳೆಯಲು ಇಲ್ಲಿದೆ ಸಿಂಪಲ್ ಪ್ಲಾನ್! -
ಮುಂಬೈನಲ್ಲಿ ತೀವ್ರ ನೀರಿನ ಅಭಾವ: ಬಿಎಂಸಿ ಕಠಿಣ ನಿಯಮಗಳ ನಡುವೆ ನೀರು ಉಳಿಸಲು ಈ ಟಿಪ್ಸ್ ಪಾಲಿಸಿ
ಅಡುಗೆ ಮನೆಯ ಪಕ್ಕ ದೇವರ ಕೋಣೆ ಇದೆಯೇ? ಹಾಗಾದರೆ ತಕ್ಷಣ ತೆಗೆಯಿರಿ
ವಾಸ್ತುಶಾಸ್ತ್ರದ ಪ್ರಕಾರ ಮನೆಯ ನಿರ್ದಿಷ್ಟ ಭಾಗದಲ್ಲಿ ದೇವರ ಮಂದಿರವಿರಬೇಕೆಂಬ ನಿಯಮವಿದೆ. ಆದರೆ ಕೆಲವರು ಜಾಗದ ಅಭಾವದಿಂದಾಗಿ ಅಡುಗೆ ಮನೆಯಲ್ಲಿ ಮಂದಿರವನ್ನು ಇಟ್ಟುಕೊಳ್ಳುತ್ತಾರೆ. ಮನೆಯ ಸ್ಥಿತಿ ಹಾಗೂ ಮನೆಯಲ್ಲಿರುವವರ ದೇಹದ ಸ್ಥಿತಿಯಲ್ಲಿ ಅಡುಗೆ ಕೋಣೆಯು ಪ್ರಮುಖ ಪಾತ್ರ ವಹಿಸುತ್ತದೆ. ಇದರಿಂದ ಅಡುಗೆ ಮನೆಯಲ್ಲಿ ಸ್ವಚ್ಛವಾಗಿಟ್ಟುಕೊಳ್ಳುವುದು ಅತೀ ಅಗತ್ಯ. ಕೆಲವರು ತಿಂದ ಪಾತ್ರೆಗಳನ್ನು ಹಾಗೆ ಮರುದಿನ ತೊಳೆಯಲು ಇಟ್ಟುಬಿಡುತ್ತಾರೆ.

ಇದು ಸರಿಯಲ್ಲ. ನಾವು ತಿನ್ನುವಂತಹ ಆಹಾರವು ನಮಗೆ ಕೇವಲ ಪೋಷಕಾಂಶಗಳನ್ನು ನೀಡುವುದು ಮಾತ್ರವಲ್ಲದೆ ಧನಾತ್ಮಕ ಶಕ್ತಿ ಹಾಗೂ ಮನಸ್ಸಿಗೆ ಶಾಂತಿ ನೀಡುವುದು. ಬೋಲ್ಡ್ ಸ್ಕೈ ಈ ಲೇಖನದಲ್ಲಿ ಹೇಳಿರುವಂತಹ ಕೆಲವೊಂದು ಕ್ರಮಗಳನ್ನು ಪಾಲಿಸಿಕೊಂಡು ಹೋದರೆ ವಾಸ್ತು ಪ್ರಕಾರ ನಿಮ್ಮ ಮನೆಯ ಎಲ್ಲಾ ದೋಷಗಳು ನಿವಾರಣೆಯಾಗಿ ಸುಖ, ಶಾಂತಿ, ಸಮೃದ್ಧಿ ನಿಮ್ಮದಾಗುವುದು. ಅಡುಗೆ ಮನೆಯ ಆಳ್ವಿಕೆ ನಡೆಸುವುದು ಶುಕ್ರ ಮತ್ತು ಅಧಿಕಾರದ ಅಂಶ ಅಗ್ನಿ. ಇವೆರಡನ್ನು ಸಂತುಷ್ಟಗೊಳಿಸಬೇಕು... ಮುಂದೆ ಓದಿ
*ಮನೆಯ ಆಗ್ನೇಯ ಭಾಗದಲ್ಲಿ ಅಡುಗೆ ಮನೆಯಿರಬೇಕು
*ಅಡುಗೆ ಮನೆಯು ದೇವರ ಮಂದಿರ, ಶೌಚಾಲಯ ಅಥವಾ ಮಲಗುವ ಕೋಣೆಯ ಕೆಳಗಡೆ ಅಥವಾ ಮೇಲೇ ಇರಲೇಬಾರದು.
*ಅಡುಗೆ ಮನೆಯ ಮುಖ್ಯ ಭಾಗವು ಮನೆಯ ಪೂರ್ವ ಅಥವಾ ಆಗ್ನೇಯ ಮೂಲೆಯಲ್ಲಿ ಇರಬೇಕು.
*ಗ್ಯಾಸ್ ಅಥವಾ ಸ್ಟೌವ್ ನ್ನು ಮನೆಯ ಭಾಗದಲ್ಲಿ ಇಡಬೇಕು ಮತ್ತು ಗೋಡೆಗಿಂತ ಕೆಲವು ಇಂಚು ದೂರವಿಡಬೇಕು.
*ಸಿಂಕ್ ಅಥವಾ ವಾಶ್ ಬೇಸಿನ್ ಈಶಾನ್ಯ ಭಾಗದಲ್ಲಿ ಇರಬೇಕು. ಲೋಟಗಳು ಕೂಡ ಇದೇ ಭಾಗದಲ್ಲಿ ಇರಬೇಕು.
*ಸಾಂಬಾರ ಪದಾರ್ಥಗಳು, ಧಾನ್ಯಗಳು ಅಥವಾ ಇತರ ಸಂಗ್ರಹಿತ ಸಾಮಗ್ರಿಗಳು ದಕ್ಷಿಣ ಅಥವಾ ಪಶ್ಚಿಮ ಭಾಗದಲ್ಲಿರಬೇಕು.
*ಅಡುಗೆ ಮನೆಯ ಬಣ್ಣವು ಹಳದಿ, ಕಿತ್ತಳೆ, ಗುಲಾಬಿ, ಚಾಕಲೇಟ್ ಅಥವಾ ಕೆಂಪು ಬಣ್ಣವಿರಬೇಕು. ಕಪ್ಪು ಬಣ್ಣವನ್ನು ಆದಷ್ಟು ಕಡೆಗಣಿಸಬೇಕು. ಅದರಲ್ಲೂ ನೆಲಕ್ಕೆ ಇದನ್ನು ಬಳಿಯಬಾರದು.
*ಮಲಗುವ ಮೊದಲು ಎಲ್ಲಾ ಪಾತ್ರೆಗಳನ್ನು ತೊಳೆದು ಅಡುಗೆ ಮನೆಯನ್ನು ಸ್ವಚ್ಛವಾಗಿಡಿ.
*ಹೆಚ್ಚಿನವರು ತಾವು ಮಾಡಿದ ಅಡುಗೆಯನ್ನು ಸ್ವಲ್ಪ ಅಗ್ನಿಗೆ ಹಾಕುತ್ತಾರೆ. ಇದರಿಂದ ಮನೆಯಲ್ಲಿ ಶಾಂತಿ ಹಾಗೂ ಸಮೃದ್ಧಿ ನೆಲೆಸುತ್ತದೆ ಎಂದು ನಂಬಲಾಗಿದೆ.



Click it and Unblock the Notifications

