Latest Updates
-
ಪ್ರೈಡ್ ಮಂತ್ 2026: ಮನೆಯವರ ಮುಂದೆ ನಿಮ್ಮ ನಿಜವಾದ ವ್ಯಕ್ತಿತ್ವವನ್ನು ಹೇಳಿಕೊಳ್ಳಲು ಹೆದರುತ್ತಿದ್ದೀರಾ? ಈ ಸಲಹೆಗಳು ನಿಮಗಾಗಿ! -
ಮಳೆಗಾಲದ ಮೊದಲ ಮಳೆ ಬಂತು: ನಿಮ್ಮ ಮನೆಯನ್ನು ದುಬಾರಿ ರಿಪೇರಿಯಿಂದ ರಕ್ಷಿಸಲು ಈ ಸಣ್ಣ ಕೆಲಸಗಳನ್ನು ಇಂದೇ ಮಾಡಿ! -
ಮಳೆಗಾಲದಲ್ಲಿ ಪದೇ ಪದೇ ಕಾಯಿಲೆ ಬೀಳ್ತಿದ್ದೀರಾ? ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ, ವೈರಲ್ ಜ್ವರದಿಂದ ದೂರವಿರಿ! -
ಆರ್ಸಿಬಿ ಗೆಲುವಿನ ಅಬ್ಬರ: ಬೆಂಗಳೂರಿನಲ್ಲಿ ವಿರಾಟ್-ಅನುಷ್ಕಾ ಸಂಭ್ರಮದ ವಿಡಿಯೋ ವೈರಲ್, ನೀವು ನೋಡಲೇಬೇಕಾದ ದೃಶ್ಯಗಳಿವು! -
ಮಳೆಗಾಲದಲ್ಲಿ ವ್ಯಾಯಾಮ ಮಾಡ್ತೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ! -
ಪ್ರೈಡ್ ಮಂತ್ 2026: ಕ್ವೀರ್ ಜೋಡಿಗಳ ಭವಿಷ್ಯ ಭದ್ರಪಡಿಸಲು ಮತ್ತು ಕುಟುಂಬದ ಮನವೊಲಿಸಲು ಇಲ್ಲಿದೆ ವಿಶೇಷ ಮಾರ್ಗದರ್ಶಿ! -
ಮಳೆಗಾಲ ಶುರುವಾಗುವ ಮುನ್ನವೇ ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ: ದುಬಾರಿ ರಿಪೇರಿ ತಪ್ಪಿಸಲು ಇಲ್ಲಿವೆ ಸರಳ ಟಿಪ್ಸ್! -
ಬಿಸಿಲು-ಮಳೆಯ ಆಟದಲ್ಲಿ ಸುಸ್ತಾಗಿದ್ದೀರಾ? ಆರೋಗ್ಯ ಕಾಪಾಡಿಕೊಳ್ಳಲು ಈ ಸರಳ ಆಹಾರ ಕ್ರಮಗಳನ್ನು ಮಿಸ್ ಮಾಡಬೇಡಿ! -
ದಿಢೀರ್ ಮಳೆಗೆ ರೆಡಿಯಾಗಿದ್ದೀರಾ? ಸ್ಟೈಲಿಶ್ ಆಗಿ ಕಾಣಲು ಮತ್ತು ಮಳೆಯಿಂದ ಪಾರಾಗಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಹವಾಮಾನ ಬದಲಾಗಿದೆ, ನಿಮ್ಮ ವರ್ಕೌಟ್ ಪ್ಲಾನ್ ಬದಲಾಯಿಸಿದ್ದೀರಾ? ಇಲ್ಲದಿದ್ದರೆ ಈ ಎಚ್ಚರಿಕೆ ನಿಮಗಾಗಿ!
ಏಕದಂತ ಜಯಂತಿ 2019: ಗಣೇಶನ ಮೂರ್ತಿಯನ್ನು ಮನೆಯ ಈ ಭಾಗಗಳಲ್ಲಿ ಇಡಬೇಡಿ
ಗಣೇಶ ಚತುರ್ಥಿ ಎಂದರೆ ಅದು ಅಬಾಲವೃದ್ಧರ ತನಕ ಪ್ರತಿಯೊಬ್ಬರಿಗೂ ಖುಷಿಯನ್ನು ತರುವಂತಹ ಹಬ್ಬವಾಗಿದೆ. ಗಣೇಶ ಚತುದರ್ಶಿ ಮುನ್ನ ದಿನ ಗೌರಿ ಗಣೇಶ ಹಬ್ಬವನ್ನು ಆಚರಿಸಲಾಗುತ್ತದೆ. ಅದರಲ್ಲೂ ಗಣೇಶನನ್ನು ಭಾರತದ ಹೆಚ್ಚಿನ ಕಡೆಗಳಲ್ಲಿ ಶ್ರದ್ಧೆ ಹಾಗೂ ಭಕ್ತಿಯಿಂದ ಪೂಜಿಸಲಾಗುತ್ತದೆ.

ಗಣೇಶ ಚತುದರ್ಶಿ ದಿನದಂದು ಗಣಪತಿಯ ಮೂರ್ತಿಯನ್ನು ತಂದು ಮನೆಯಲ್ಲಿಟ್ಟು ಪೂಜೆ ಮಾಡಲಾಗುತ್ತದೆ. ಕೆಲವರು ಒಂದು ದಿನ, ಇನ್ನು ಕೆಲವರು 3, 5 7 ಮತ್ತು 10 ದಿನಗಳ ಕಾಲ ಗಣೇಶನ ಮೂರ್ತಿಯನ್ನು ಪೂಜಿಸತ್ತಾರೆ.
ಈ ವರ್ಷ ಅಂದರೆ 2019ರಲ್ಲಿ ಸ್ವರ್ಣ ಗೌರಿ ಪೂಜೆಯನ್ನು ಸೆಪ್ಟೆಂಬರ್ 1 ಭಾನುವಾರ ಹಾಗೂ ಗೌರಿ ಪುತ್ರ ಗಣೇಶ ಚತುರ್ಥಿಯನ್ನು ಸೆಪ್ಟೆಂಬರ್ 2ರಂದು ಸೋಮವಾರದಂದು ಅಚರಿಸಲಾಗುತ್ತಿದೆ.
ಗಣೇಶನ ಮೂರ್ತಿಯನ್ನು ಮನೆಯಲ್ಲಿಟ್ಟು ಪೂಜೆ ಮಾಡಲು ಇಡೀ ಮನೆಯನ್ನೇ ಶೃಂಗರಿಸಲಾಗುತ್ತದೆ. ಆದರೆ ಗಣಪತಿಯ ಮೂರ್ತಿಯನ್ನು ಮನೆಯ ಯಾವ ಭಾಗದಲ್ಲಿ ಇಟ್ಟರೆ ಶುಭ ಎಂದು ತಿಳಿದುಕೊಳ್ಳಲು ಈ ಲೇಖನ ಓದಿಕೊಳ್ಳಿ ಮತ್ತು ಇದರ ಬಳಿಕ ಮನೆಯ ಅಲಂಕಾರ ಮಾಡಲು ತಯಾರಿ ನಡೆಸಿ.
ಕೆಲವು ಮಂದಿ ವಾಸದ ಕೊಠಡಿ ಅಥವಾ ಪೂಜಾ ಕೊಠಡಿಯಲ್ಲಿ ಗಣೇಶನ ಮೂರ್ತಿಯನ್ನು ಇಟ್ಟು ಪೂಜಿಸುತ್ತಾರೆ. ವಾಸ್ತು ಪ್ರಕಾರವೇ ಗಣೇಶನ ಮೂರ್ತಿಯನ್ನು ಇಟ್ಟು ಪೂಜಿಸಿಕೊಂಡು ಹೋದರೆ ತುಂಬಾ ಒಳ್ಳೆಯದು. ಇದು ಹೇಗೆ ಎಂದು ಮುಂದೆ ತಿಳಿಯಿರಿ.
ಸೊಂಡಿಲು ಎಡಕ್ಕಿರಲಿ
ಗಣಪತಿಯ ತಾಯಿ ಗೌರಿಯು ಆತನ ಬದಿಯಲ್ಲೇ ಕುಳಿತಿರುವ ಕಾರಣದಿಂದಾಗಿ ಸೊಂಡಿಲು ಯಾವಾಗಲೂ ಎಡದ ಬದಿಯಲ್ಲಿರುತ್ತದೆ. ಕೆಲವರು ಗಣೇಶ ಚತುದರ್ಶಿಗೆ ಗೌರಿ ಗಣೇಶನನ್ನು ಪೂಜಿಸುತ್ತಾರೆ. ಸೊಂಡಿಲು ಎಡಕ್ಕಿರಬೇಕೆಂಬುವುದು ಗಣೇಶನ ಪೂಜಿಸುವ ಮೊದಲ ಸೂತ್ರವಾಗಿದೆ.
ಬೆನ್ನ ಹಿಂದೆ ಕೋಣೆಗಳಿರಬಾರದು
ಗಣೇಶನ ಮೂರ್ತಿಯನ್ನು ಇಡುವಾಗ ಎಚ್ಚರಿಕೆ ವಹಿಸಬೇಕಾದ ಮತ್ತೊಂದು ವಿಚಾರವೆಂದರೆ ಗಣೇಶನ ಬೆನ್ನ ಹಿಂದೆ ಮನೆಯ ಯಾವುದೇ ಕೋಣೆ ಇರಬಾರದು. ಗಣೇಶ ಸಮೃದ್ಧಿಯ ದೇವರು. ಆತನ ಬೆನ್ನು ಬಡತನಕ್ಕೆ ಆಹ್ವಾನ ನೀಡಿದಂತೆ. ಇದರಿಂದ ಗಣೇಶನ ಬೆನ್ನು ಯಾವಾಗಲೂ ಮನೆಯ ಹೊರಗಿನ ಭಾಗಕ್ಕಿರಬೇಕು. ಲಡ್ಡು ಪ್ರಿಯ ಲಂಬೋದರನಿಗೆ ಬೂಂದಿ ಲಾಡು ರೆಸಿಪಿ
ದಕ್ಷಿಣಕ್ಕಲ್ಲ
ಮನೆಯ ದಕ್ಷಿಣ ಭಾಗದಲ್ಲಿ ಗಣೇಶನ ಮೂರ್ತಿಯನ್ನು ಇಟ್ಟು ಪೂಜಿಸಬೇಡಿ. ಮನೆಯ ಪೂರ್ವ ಅಥವಾ ಪಶ್ಚಿಮ ಭಾಗದಲ್ಲಿ ಗಣೇಶನ ಮೂರ್ತಿಯನ್ನು ಇಡಿ. ಪೂಜಾ ಕೊಠಡಿ ಕೂಡ ಮನೆಯ ದಕ್ಷಿಣ ಭಾಗದಲ್ಲಿರಬಾರದು ಎಂದು ನೆನಪಿಡಿ.
ಶೌಚಾಲಯ
ಶೌಚಾಲಯಕ್ಕೆ ಅಂಟಿಕೊಂಡಿರುವ ಗೋಡೆಗೆ ತಾಗಿಸಿಕೊಂಡು ಗಣೇಶನ ಮೂರ್ತಿಯನ್ನು ಪ್ರತಿಷ್ಠಾಪಿಸಬೇಡಿ. ಶೌಚಾಲಯದ ಗೋಡೆ ಕೋಣೆಗೆ ತಾಗಿದ್ದರೆ ಆ ಜಾಗದಲ್ಲಿ ಗಣೇಶನ ಮೂರ್ತಿಯನ್ನು ಇಡಬೇಡಿ.
ವಾಯುವ್ಯ
ಮನೆಯ ವಾಯುವ್ಯ ಭಾಗದಲ್ಲಿ ಗಣೇಶನ ಮೂರ್ತಿಯನ್ನು ಇಟ್ಟು ಪೂಜಿಸಿದರೆ ತುಂಬಾ ಒಳ್ಳೆಯದು. ಮೇಲೆ ಹೇಳಿದ ಸೂತ್ರಗಳಿಂದ ವಾಯುವ್ಯ ಭಾಗಕ್ಕೆ ಅಡ್ಡಿಯಾಗುತ್ತಿದ್ದರೆ ಬೇರೆ ಭಾಗದಲ್ಲಿಡಬಹುದು.
ಮೆಟ್ಟಿಲುಗಳ ಅಡಿ
ಎರಡು ಮಹಡಿ ಮನೆಯಲ್ಲಿ ವಾಸಿಸುವವರು ಹೆಚ್ಚಾಗಿ ಗಣೇಶನ ಮೂರ್ತಿಯನ್ನು ಮೆಟ್ಟಿಲುಗಳ ಅಡಿಯಲ್ಲಿಡುತ್ತಾರೆ, ಆದರೆ ಇದು ಸಲ್ಲ. ಮೆಟ್ಟಿಲಿನಲ್ಲಿ ಜನರು ಓಡಾಡುವುದರಿಂದ ಅವರು ಗಣೇಶನ ತಲೆಯ ಮೇಲೆ ಓಡಾಡಿದಂತಾಗುತ್ತದೆ. ಇದರಿಂದ ಮನೆಗೆ ದುರಾದೃಷ್ಟ ಕಾಡಬಹುದು. ಮನೆಯಲ್ಲಿ ಗಣೇಶನ ಮೂರ್ತಿಯನ್ನು ಇಟ್ಟು ಪೂಜಿಸುವಾಗ ಈ ಸುಲಭ ಸೂತ್ರಗಳನ್ನು ಪಾಲಿಸಿಕೊಂಡು ಹೋದರೆ ಸುಖ, ಸಮೃದ್ಧಿ, ನೆಮ್ಮದಿ ನಿಮ್ಮದಾಗುತ್ತದೆ.



Click it and Unblock the Notifications



