Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಏಕದಂತ ಜಯಂತಿ 2019: ಗಣೇಶನ ಮೂರ್ತಿಯನ್ನು ಮನೆಯ ಈ ಭಾಗಗಳಲ್ಲಿ ಇಡಬೇಡಿ
ಗಣೇಶ ಚತುರ್ಥಿ ಎಂದರೆ ಅದು ಅಬಾಲವೃದ್ಧರ ತನಕ ಪ್ರತಿಯೊಬ್ಬರಿಗೂ ಖುಷಿಯನ್ನು ತರುವಂತಹ ಹಬ್ಬವಾಗಿದೆ. ಗಣೇಶ ಚತುದರ್ಶಿ ಮುನ್ನ ದಿನ ಗೌರಿ ಗಣೇಶ ಹಬ್ಬವನ್ನು ಆಚರಿಸಲಾಗುತ್ತದೆ. ಅದರಲ್ಲೂ ಗಣೇಶನನ್ನು ಭಾರತದ ಹೆಚ್ಚಿನ ಕಡೆಗಳಲ್ಲಿ ಶ್ರದ್ಧೆ ಹಾಗೂ ಭಕ್ತಿಯಿಂದ ಪೂಜಿಸಲಾಗುತ್ತದೆ.

ಗಣೇಶ ಚತುದರ್ಶಿ ದಿನದಂದು ಗಣಪತಿಯ ಮೂರ್ತಿಯನ್ನು ತಂದು ಮನೆಯಲ್ಲಿಟ್ಟು ಪೂಜೆ ಮಾಡಲಾಗುತ್ತದೆ. ಕೆಲವರು ಒಂದು ದಿನ, ಇನ್ನು ಕೆಲವರು 3, 5 7 ಮತ್ತು 10 ದಿನಗಳ ಕಾಲ ಗಣೇಶನ ಮೂರ್ತಿಯನ್ನು ಪೂಜಿಸತ್ತಾರೆ.
ಈ ವರ್ಷ ಅಂದರೆ 2019ರಲ್ಲಿ ಸ್ವರ್ಣ ಗೌರಿ ಪೂಜೆಯನ್ನು ಸೆಪ್ಟೆಂಬರ್ 1 ಭಾನುವಾರ ಹಾಗೂ ಗೌರಿ ಪುತ್ರ ಗಣೇಶ ಚತುರ್ಥಿಯನ್ನು ಸೆಪ್ಟೆಂಬರ್ 2ರಂದು ಸೋಮವಾರದಂದು ಅಚರಿಸಲಾಗುತ್ತಿದೆ.
ಗಣೇಶನ ಮೂರ್ತಿಯನ್ನು ಮನೆಯಲ್ಲಿಟ್ಟು ಪೂಜೆ ಮಾಡಲು ಇಡೀ ಮನೆಯನ್ನೇ ಶೃಂಗರಿಸಲಾಗುತ್ತದೆ. ಆದರೆ ಗಣಪತಿಯ ಮೂರ್ತಿಯನ್ನು ಮನೆಯ ಯಾವ ಭಾಗದಲ್ಲಿ ಇಟ್ಟರೆ ಶುಭ ಎಂದು ತಿಳಿದುಕೊಳ್ಳಲು ಈ ಲೇಖನ ಓದಿಕೊಳ್ಳಿ ಮತ್ತು ಇದರ ಬಳಿಕ ಮನೆಯ ಅಲಂಕಾರ ಮಾಡಲು ತಯಾರಿ ನಡೆಸಿ.
ಕೆಲವು ಮಂದಿ ವಾಸದ ಕೊಠಡಿ ಅಥವಾ ಪೂಜಾ ಕೊಠಡಿಯಲ್ಲಿ ಗಣೇಶನ ಮೂರ್ತಿಯನ್ನು ಇಟ್ಟು ಪೂಜಿಸುತ್ತಾರೆ. ವಾಸ್ತು ಪ್ರಕಾರವೇ ಗಣೇಶನ ಮೂರ್ತಿಯನ್ನು ಇಟ್ಟು ಪೂಜಿಸಿಕೊಂಡು ಹೋದರೆ ತುಂಬಾ ಒಳ್ಳೆಯದು. ಇದು ಹೇಗೆ ಎಂದು ಮುಂದೆ ತಿಳಿಯಿರಿ.
ಸೊಂಡಿಲು ಎಡಕ್ಕಿರಲಿ
ಗಣಪತಿಯ ತಾಯಿ ಗೌರಿಯು ಆತನ ಬದಿಯಲ್ಲೇ ಕುಳಿತಿರುವ ಕಾರಣದಿಂದಾಗಿ ಸೊಂಡಿಲು ಯಾವಾಗಲೂ ಎಡದ ಬದಿಯಲ್ಲಿರುತ್ತದೆ. ಕೆಲವರು ಗಣೇಶ ಚತುದರ್ಶಿಗೆ ಗೌರಿ ಗಣೇಶನನ್ನು ಪೂಜಿಸುತ್ತಾರೆ. ಸೊಂಡಿಲು ಎಡಕ್ಕಿರಬೇಕೆಂಬುವುದು ಗಣೇಶನ ಪೂಜಿಸುವ ಮೊದಲ ಸೂತ್ರವಾಗಿದೆ.
ಬೆನ್ನ ಹಿಂದೆ ಕೋಣೆಗಳಿರಬಾರದು
ಗಣೇಶನ ಮೂರ್ತಿಯನ್ನು ಇಡುವಾಗ ಎಚ್ಚರಿಕೆ ವಹಿಸಬೇಕಾದ ಮತ್ತೊಂದು ವಿಚಾರವೆಂದರೆ ಗಣೇಶನ ಬೆನ್ನ ಹಿಂದೆ ಮನೆಯ ಯಾವುದೇ ಕೋಣೆ ಇರಬಾರದು. ಗಣೇಶ ಸಮೃದ್ಧಿಯ ದೇವರು. ಆತನ ಬೆನ್ನು ಬಡತನಕ್ಕೆ ಆಹ್ವಾನ ನೀಡಿದಂತೆ. ಇದರಿಂದ ಗಣೇಶನ ಬೆನ್ನು ಯಾವಾಗಲೂ ಮನೆಯ ಹೊರಗಿನ ಭಾಗಕ್ಕಿರಬೇಕು. ಲಡ್ಡು ಪ್ರಿಯ ಲಂಬೋದರನಿಗೆ ಬೂಂದಿ ಲಾಡು ರೆಸಿಪಿ
ದಕ್ಷಿಣಕ್ಕಲ್ಲ
ಮನೆಯ ದಕ್ಷಿಣ ಭಾಗದಲ್ಲಿ ಗಣೇಶನ ಮೂರ್ತಿಯನ್ನು ಇಟ್ಟು ಪೂಜಿಸಬೇಡಿ. ಮನೆಯ ಪೂರ್ವ ಅಥವಾ ಪಶ್ಚಿಮ ಭಾಗದಲ್ಲಿ ಗಣೇಶನ ಮೂರ್ತಿಯನ್ನು ಇಡಿ. ಪೂಜಾ ಕೊಠಡಿ ಕೂಡ ಮನೆಯ ದಕ್ಷಿಣ ಭಾಗದಲ್ಲಿರಬಾರದು ಎಂದು ನೆನಪಿಡಿ.
ಶೌಚಾಲಯ
ಶೌಚಾಲಯಕ್ಕೆ ಅಂಟಿಕೊಂಡಿರುವ ಗೋಡೆಗೆ ತಾಗಿಸಿಕೊಂಡು ಗಣೇಶನ ಮೂರ್ತಿಯನ್ನು ಪ್ರತಿಷ್ಠಾಪಿಸಬೇಡಿ. ಶೌಚಾಲಯದ ಗೋಡೆ ಕೋಣೆಗೆ ತಾಗಿದ್ದರೆ ಆ ಜಾಗದಲ್ಲಿ ಗಣೇಶನ ಮೂರ್ತಿಯನ್ನು ಇಡಬೇಡಿ.
ವಾಯುವ್ಯ
ಮನೆಯ ವಾಯುವ್ಯ ಭಾಗದಲ್ಲಿ ಗಣೇಶನ ಮೂರ್ತಿಯನ್ನು ಇಟ್ಟು ಪೂಜಿಸಿದರೆ ತುಂಬಾ ಒಳ್ಳೆಯದು. ಮೇಲೆ ಹೇಳಿದ ಸೂತ್ರಗಳಿಂದ ವಾಯುವ್ಯ ಭಾಗಕ್ಕೆ ಅಡ್ಡಿಯಾಗುತ್ತಿದ್ದರೆ ಬೇರೆ ಭಾಗದಲ್ಲಿಡಬಹುದು.
ಮೆಟ್ಟಿಲುಗಳ ಅಡಿ
ಎರಡು ಮಹಡಿ ಮನೆಯಲ್ಲಿ ವಾಸಿಸುವವರು ಹೆಚ್ಚಾಗಿ ಗಣೇಶನ ಮೂರ್ತಿಯನ್ನು ಮೆಟ್ಟಿಲುಗಳ ಅಡಿಯಲ್ಲಿಡುತ್ತಾರೆ, ಆದರೆ ಇದು ಸಲ್ಲ. ಮೆಟ್ಟಿಲಿನಲ್ಲಿ ಜನರು ಓಡಾಡುವುದರಿಂದ ಅವರು ಗಣೇಶನ ತಲೆಯ ಮೇಲೆ ಓಡಾಡಿದಂತಾಗುತ್ತದೆ. ಇದರಿಂದ ಮನೆಗೆ ದುರಾದೃಷ್ಟ ಕಾಡಬಹುದು. ಮನೆಯಲ್ಲಿ ಗಣೇಶನ ಮೂರ್ತಿಯನ್ನು ಇಟ್ಟು ಪೂಜಿಸುವಾಗ ಈ ಸುಲಭ ಸೂತ್ರಗಳನ್ನು ಪಾಲಿಸಿಕೊಂಡು ಹೋದರೆ ಸುಖ, ಸಮೃದ್ಧಿ, ನೆಮ್ಮದಿ ನಿಮ್ಮದಾಗುತ್ತದೆ.



Click it and Unblock the Notifications




