Latest Updates
-
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ನಿಮ್ಮ ಮಕ್ಕಳೊಂದಿಗೆ ಚಂದ್ರನ ರಹಸ್ಯಗಳನ್ನು ಅನ್ವೇಷಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಓಣಂ ಹಬ್ಬದ ಸಂಭ್ರಮ: ಮಳೆಯಲ್ಲೂ ಸ್ಟೈಲಿಶ್ ಆಗಿ ಕಾಣಲು ₹1,200 ರೊಳಗೆ ಬೆಸ್ಟ್ ಫ್ಯಾಷನ್ ಟಿಪ್ಸ್! -
ಮಳೆಗಾಲದಲ್ಲಿ ಹಿರಿಯರು ಜಾರಿ ಬೀಳುವ ಆತಂಕವೇ? ಸುರಕ್ಷಿತವಾಗಿರಲು ಈ 12 ನಿಮಿಷಗಳ ಚೇರ್-ಯೋಗ ಟ್ರೈ ಮಾಡಿ! -
ಹಿರಿಯರ ಆರೋಗ್ಯಕ್ಕೆ ದಿನಕ್ಕೆ 12 ನಿಮಿಷದ 'ಚೇರ್ ಯೋಗ': ಚೈತನ್ಯ ಮತ್ತು ಸಮತೋಲನಕ್ಕೆ ಇದುವೇ ಮಂತ್ರ! -
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್! -
ಸಸ್ಯಜನ್ಯ ಹಾಲು: ತೂಕ ಇಳಿಕೆ ಮತ್ತು ಮಧುಮೇಹ ನಿಯಂತ್ರಣಕ್ಕೆ ಇದುವೇ ಬೆಸ್ಟ್ ಪರ್ಯಾಯ! -
ಸಕ್ಕರೆ ಬೆಲೆ ಏರಿಕೆ ಬಿಸಿ: ಹಬ್ಬದ ಸಿಹಿ ಬಜೆಟ್ ಉಳಿಸಲು ಇಲ್ಲಿದೆ 300 ರೂಪಾಯಿಯ ಸ್ಮಾರ್ಟ್ ಟಿಪ್ಸ್ -
ವರಮಹಾಲಕ್ಷ್ಮೀ ವ್ರತದ ಶಾಸ್ತ್ರೋಕ್ತ ವಿಧಾನ ಮತ್ತು ಪೂಜಾ ನಿಯಮಗಳು -
ವರಮಹಾಲಕ್ಷ್ಮೀ ಹಬ್ಬದ ಸಂಭ್ರಮಕ್ಕೆ ಬೆಲೆ ಏರಿಕೆಯ ಬಿಸಿ: ಕೆ.ಆರ್. ಮಾರುಕಟ್ಟೆಯಲ್ಲಿ ಗಗನಕ್ಕೇರಿದ ಹೂವು-ಹಣ್ಣುಗಳ ದರ
ಏಕದಂತ ಜಯಂತಿ 2019: ಗಣೇಶನ ಮೂರ್ತಿಯನ್ನು ಮನೆಯ ಈ ಭಾಗಗಳಲ್ಲಿ ಇಡಬೇಡಿ
ಗಣೇಶ ಚತುರ್ಥಿ ಎಂದರೆ ಅದು ಅಬಾಲವೃದ್ಧರ ತನಕ ಪ್ರತಿಯೊಬ್ಬರಿಗೂ ಖುಷಿಯನ್ನು ತರುವಂತಹ ಹಬ್ಬವಾಗಿದೆ. ಗಣೇಶ ಚತುದರ್ಶಿ ಮುನ್ನ ದಿನ ಗೌರಿ ಗಣೇಶ ಹಬ್ಬವನ್ನು ಆಚರಿಸಲಾಗುತ್ತದೆ. ಅದರಲ್ಲೂ ಗಣೇಶನನ್ನು ಭಾರತದ ಹೆಚ್ಚಿನ ಕಡೆಗಳಲ್ಲಿ ಶ್ರದ್ಧೆ ಹಾಗೂ ಭಕ್ತಿಯಿಂದ ಪೂಜಿಸಲಾಗುತ್ತದೆ.

ಗಣೇಶ ಚತುದರ್ಶಿ ದಿನದಂದು ಗಣಪತಿಯ ಮೂರ್ತಿಯನ್ನು ತಂದು ಮನೆಯಲ್ಲಿಟ್ಟು ಪೂಜೆ ಮಾಡಲಾಗುತ್ತದೆ. ಕೆಲವರು ಒಂದು ದಿನ, ಇನ್ನು ಕೆಲವರು 3, 5 7 ಮತ್ತು 10 ದಿನಗಳ ಕಾಲ ಗಣೇಶನ ಮೂರ್ತಿಯನ್ನು ಪೂಜಿಸತ್ತಾರೆ.
ಈ ವರ್ಷ ಅಂದರೆ 2019ರಲ್ಲಿ ಸ್ವರ್ಣ ಗೌರಿ ಪೂಜೆಯನ್ನು ಸೆಪ್ಟೆಂಬರ್ 1 ಭಾನುವಾರ ಹಾಗೂ ಗೌರಿ ಪುತ್ರ ಗಣೇಶ ಚತುರ್ಥಿಯನ್ನು ಸೆಪ್ಟೆಂಬರ್ 2ರಂದು ಸೋಮವಾರದಂದು ಅಚರಿಸಲಾಗುತ್ತಿದೆ.
ಗಣೇಶನ ಮೂರ್ತಿಯನ್ನು ಮನೆಯಲ್ಲಿಟ್ಟು ಪೂಜೆ ಮಾಡಲು ಇಡೀ ಮನೆಯನ್ನೇ ಶೃಂಗರಿಸಲಾಗುತ್ತದೆ. ಆದರೆ ಗಣಪತಿಯ ಮೂರ್ತಿಯನ್ನು ಮನೆಯ ಯಾವ ಭಾಗದಲ್ಲಿ ಇಟ್ಟರೆ ಶುಭ ಎಂದು ತಿಳಿದುಕೊಳ್ಳಲು ಈ ಲೇಖನ ಓದಿಕೊಳ್ಳಿ ಮತ್ತು ಇದರ ಬಳಿಕ ಮನೆಯ ಅಲಂಕಾರ ಮಾಡಲು ತಯಾರಿ ನಡೆಸಿ.
ಕೆಲವು ಮಂದಿ ವಾಸದ ಕೊಠಡಿ ಅಥವಾ ಪೂಜಾ ಕೊಠಡಿಯಲ್ಲಿ ಗಣೇಶನ ಮೂರ್ತಿಯನ್ನು ಇಟ್ಟು ಪೂಜಿಸುತ್ತಾರೆ. ವಾಸ್ತು ಪ್ರಕಾರವೇ ಗಣೇಶನ ಮೂರ್ತಿಯನ್ನು ಇಟ್ಟು ಪೂಜಿಸಿಕೊಂಡು ಹೋದರೆ ತುಂಬಾ ಒಳ್ಳೆಯದು. ಇದು ಹೇಗೆ ಎಂದು ಮುಂದೆ ತಿಳಿಯಿರಿ.
ಸೊಂಡಿಲು ಎಡಕ್ಕಿರಲಿ
ಗಣಪತಿಯ ತಾಯಿ ಗೌರಿಯು ಆತನ ಬದಿಯಲ್ಲೇ ಕುಳಿತಿರುವ ಕಾರಣದಿಂದಾಗಿ ಸೊಂಡಿಲು ಯಾವಾಗಲೂ ಎಡದ ಬದಿಯಲ್ಲಿರುತ್ತದೆ. ಕೆಲವರು ಗಣೇಶ ಚತುದರ್ಶಿಗೆ ಗೌರಿ ಗಣೇಶನನ್ನು ಪೂಜಿಸುತ್ತಾರೆ. ಸೊಂಡಿಲು ಎಡಕ್ಕಿರಬೇಕೆಂಬುವುದು ಗಣೇಶನ ಪೂಜಿಸುವ ಮೊದಲ ಸೂತ್ರವಾಗಿದೆ.
ಬೆನ್ನ ಹಿಂದೆ ಕೋಣೆಗಳಿರಬಾರದು
ಗಣೇಶನ ಮೂರ್ತಿಯನ್ನು ಇಡುವಾಗ ಎಚ್ಚರಿಕೆ ವಹಿಸಬೇಕಾದ ಮತ್ತೊಂದು ವಿಚಾರವೆಂದರೆ ಗಣೇಶನ ಬೆನ್ನ ಹಿಂದೆ ಮನೆಯ ಯಾವುದೇ ಕೋಣೆ ಇರಬಾರದು. ಗಣೇಶ ಸಮೃದ್ಧಿಯ ದೇವರು. ಆತನ ಬೆನ್ನು ಬಡತನಕ್ಕೆ ಆಹ್ವಾನ ನೀಡಿದಂತೆ. ಇದರಿಂದ ಗಣೇಶನ ಬೆನ್ನು ಯಾವಾಗಲೂ ಮನೆಯ ಹೊರಗಿನ ಭಾಗಕ್ಕಿರಬೇಕು. ಲಡ್ಡು ಪ್ರಿಯ ಲಂಬೋದರನಿಗೆ ಬೂಂದಿ ಲಾಡು ರೆಸಿಪಿ
ದಕ್ಷಿಣಕ್ಕಲ್ಲ
ಮನೆಯ ದಕ್ಷಿಣ ಭಾಗದಲ್ಲಿ ಗಣೇಶನ ಮೂರ್ತಿಯನ್ನು ಇಟ್ಟು ಪೂಜಿಸಬೇಡಿ. ಮನೆಯ ಪೂರ್ವ ಅಥವಾ ಪಶ್ಚಿಮ ಭಾಗದಲ್ಲಿ ಗಣೇಶನ ಮೂರ್ತಿಯನ್ನು ಇಡಿ. ಪೂಜಾ ಕೊಠಡಿ ಕೂಡ ಮನೆಯ ದಕ್ಷಿಣ ಭಾಗದಲ್ಲಿರಬಾರದು ಎಂದು ನೆನಪಿಡಿ.
ಶೌಚಾಲಯ
ಶೌಚಾಲಯಕ್ಕೆ ಅಂಟಿಕೊಂಡಿರುವ ಗೋಡೆಗೆ ತಾಗಿಸಿಕೊಂಡು ಗಣೇಶನ ಮೂರ್ತಿಯನ್ನು ಪ್ರತಿಷ್ಠಾಪಿಸಬೇಡಿ. ಶೌಚಾಲಯದ ಗೋಡೆ ಕೋಣೆಗೆ ತಾಗಿದ್ದರೆ ಆ ಜಾಗದಲ್ಲಿ ಗಣೇಶನ ಮೂರ್ತಿಯನ್ನು ಇಡಬೇಡಿ.
ವಾಯುವ್ಯ
ಮನೆಯ ವಾಯುವ್ಯ ಭಾಗದಲ್ಲಿ ಗಣೇಶನ ಮೂರ್ತಿಯನ್ನು ಇಟ್ಟು ಪೂಜಿಸಿದರೆ ತುಂಬಾ ಒಳ್ಳೆಯದು. ಮೇಲೆ ಹೇಳಿದ ಸೂತ್ರಗಳಿಂದ ವಾಯುವ್ಯ ಭಾಗಕ್ಕೆ ಅಡ್ಡಿಯಾಗುತ್ತಿದ್ದರೆ ಬೇರೆ ಭಾಗದಲ್ಲಿಡಬಹುದು.
ಮೆಟ್ಟಿಲುಗಳ ಅಡಿ
ಎರಡು ಮಹಡಿ ಮನೆಯಲ್ಲಿ ವಾಸಿಸುವವರು ಹೆಚ್ಚಾಗಿ ಗಣೇಶನ ಮೂರ್ತಿಯನ್ನು ಮೆಟ್ಟಿಲುಗಳ ಅಡಿಯಲ್ಲಿಡುತ್ತಾರೆ, ಆದರೆ ಇದು ಸಲ್ಲ. ಮೆಟ್ಟಿಲಿನಲ್ಲಿ ಜನರು ಓಡಾಡುವುದರಿಂದ ಅವರು ಗಣೇಶನ ತಲೆಯ ಮೇಲೆ ಓಡಾಡಿದಂತಾಗುತ್ತದೆ. ಇದರಿಂದ ಮನೆಗೆ ದುರಾದೃಷ್ಟ ಕಾಡಬಹುದು. ಮನೆಯಲ್ಲಿ ಗಣೇಶನ ಮೂರ್ತಿಯನ್ನು ಇಟ್ಟು ಪೂಜಿಸುವಾಗ ಈ ಸುಲಭ ಸೂತ್ರಗಳನ್ನು ಪಾಲಿಸಿಕೊಂಡು ಹೋದರೆ ಸುಖ, ಸಮೃದ್ಧಿ, ನೆಮ್ಮದಿ ನಿಮ್ಮದಾಗುತ್ತದೆ.



Click it and Unblock the Notifications



