Latest Updates
-
ಅಕ್ಷಯ ತೃತೀಯ: ಮದುವೆ ಮತ್ತು ಚಿನ್ನದ ಖರೀದಿಗೆ ಹೀಗೆ ಪ್ಲಾನ್ ಮಾಡಿ -
ಮನೆಯನ್ನು ತಂಪಾಗಿಡಲು ಹೀಟ್ವೇವ್ ಸಮಯದಲ್ಲಿ ಈ ಟ್ರಿಕ್ಸ್ ಫಾಲೋ ಮಾಡಿ -
ಮಾವಿನ ಹಣ್ಣು ಖರೀದಿಸುವ ಮುನ್ನ ಈ ತಪ್ಪು ಮಾಡಬೇಡಿ! -
ಅಕ್ಷಯ ತೃತೀಯ ಚಿನ್ನದ ಖರೀದಿ: ಈ ಆಫರ್ ಮಿಸ್ ಮಾಡ್ಬೇಡಿ! -
ಬಿಸಿಲ ಧಗೆಯಲ್ಲೂ ಫಿಟ್ ಆಗಿರಲು ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಷಯ ತೃತೀಯ: ಸಾಲದ ಸುಳಿಯಿಲ್ಲದೆ ಚಿನ್ನ ಖರೀದಿಸುವುದು ಹೇಗೆ? -
ಬಿಸಿಲಿನ ತಾಪ: ನಿಮ್ಮ ಮನೆಯನ್ನು ತಂಪಾಗಿಡಲು ಅದ್ಭುತ ಟಿಪ್ಸ್ -
ಬಿಸಿಲಿನ ಬೇಗೆಯಿಂದ ಪಾರಾಗಲು ಈ ತಂಪು ಆಹಾರಗಳೇ ಮದ್ದು -
ಹಬ್ಬದ ಸೀರೆ ಫ್ಯಾಷನ್: ಈ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಬಿಸಿಗಾಳಿ ಎಚ್ಚರಿಕೆ: ಸುಡುವ ಬಿಸಿಲಿನಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ
ಆಹಾರ ಕೆಡದಂತೆ ಶೇಖರಿಸಿಡುವ ವಿಧಾನ

ದವಸ ಧಾನ್ಯಗಳನ್ನು, ಒಣ ಹಣ್ಣುಗಳನ್ನು ತುಂಬಾ ಕಾಲ ಇಡಬಹುದಾದರೂ ಅದನ್ನು ಸರಿಯಾದ ರೀತಿಯಲ್ಲಿ ಶೇಖರಿಸಿಡದಿದ್ದರೆ ಆ ವಸ್ತುಗಳಲ್ಲಿ ಬೂಸ್ಟು ಕಂಡು ಬರುವುದು. ಇನ್ನು ತರಕಾರಿ ಮತ್ತು ಹಣ್ಣುಗಳನ್ನು ತುಂಬಾ ಕಾಲ ಇಡಲು ಸಾಧ್ಯವಾಗದಿದ್ದರೂ ಸ್ವಲ್ಪ ಗಮನಕೊಟ್ಟರೆ ಎರಡು ದಿನ ಹೆಚ್ಚು ಬಾಳಿಕೆ ಬರುವಂತೆ ಮಾಡಬಹುದು.
ಆದ್ದರಿಂದ ಆಹಾರದಲ್ಲಿರುವ ಪೋಷಕಾಂಶಗಳು ಹಾಳಾಗದಂತೆ ನೋಡಿಕೊಳ್ಳಲು ಈ ಕೆಳಗಿನ ಸಲಹೆಗಳನ್ನು ಬಳಸಬಹುದು:
ಶಾಖದಿಂದ ದೂರವಿಡಿ: ತುಪ್ಪ ಅಥವಾ ಸಂಬಾರ ಪದಾರ್ಥಗಳನ್ನು ಉರಿಯಿಂದ ದೂರವಿಡಬೇಕು. ತುಪ್ಪವನ್ನು ಒಂದು ರಾತ್ರಿ ಬೆಂಕಿಯ ಹತ್ತಿರ ಇಟ್ಟು ಬೆಳಗ್ಗೆ ತುಪ್ಪದ ರುಚಿ ನೋಡಿದರೆ ಅದು ರುಚಿಯನ್ನು ಕಳೆದುಕೊಂಡಿರುವಂತೆ ಭಾಸವಾಗುತ್ತದೆ. ಆದ್ದರಿಂದ ಅಂತಹ ವಸ್ತುಗಳನ್ನು ಉರಿಯಿಂದ ದೂರ ಇಡಬೇಕು.
ಸೊಪ್ಪು: ಕೊತ್ತಂಬರಿ ಸೊಪ್ಪು, ಮೆಂತೆ ಸೊಪ್ಪು, ಕರಿಬೇವಿನ ಎಲೆ ಮತ್ತು ಇತರ ಸೊಪ್ಪುಗಳನ್ನು ಪ್ರಿಜ್ ನಲ್ಲಿ ಇಡುವ ಮುನ್ನ ಅದನ್ನು ಪೇಪರ್ ನಿಂದ ಸುತ್ತಿ ಪ್ರಿಜ್ ನಲ್ಲಿ ಇಟ್ಟರೆ ಅದು ತನ್ನ ತಾಜಾತನವನ್ನು ಕಳೆದುಕೊಳ್ಳುವುದಿಲ್ಲ.
ಎಲ್ಲಾ ವಸ್ತುಗಳನ್ನು ಪ್ರಿಜ್ ನಲ್ಲಿ ಇಡುವುದು ಸೂಕ್ತವಲ್ಲ: ಕಾಳುಗಳನ್ನು ಡಬ್ಬದಲ್ಲಿ ಸಂಗ್ರಹಿಸುವುದು ಸೂಕ್ತ. ಹಾಗೆಯೇ ಬಾಳೆ ಹಣ್ಣು, ಬೇಕರಿ ತಿಂಡಿಗಳನ್ನು ಪ್ರಿಜ್ ನಲ್ಲಿಟ್ಟರೆ ಅದರ ಮೂಲ ರುಚಿ ಕಳೆದುಕೊಳ್ಳುವುದು.
ಗಾಳಿಯಾಡದಂತಹ ಡಬ್ಬಿ: ಮೆಂತೆ, ಉದ್ದಿನ ಬೇಳೆ, ತೊಗರಿ ಬೇಳೆ, ಉಪ್ಪಿನಕಾಯಿ ಮುಂತಾದ ವಸ್ತುಗಳನ್ನು ಗಾಳಿಯಾಡದಂತಹ ಡಬ್ಬದಲ್ಲಿ ಶೇಖರಿಸಿಡಬೇಕು.



Click it and Unblock the Notifications











