Latest Updates
-
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ 2026: ಅಪ್ಪನ ಮುಖದಲ್ಲಿ ನಗು ಮೂಡಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಐಡಿಯಾಗಳು! -
10ನೇ ಅಂತರಾಷ್ಟ್ರೀಯ ಯೋಗ ದಿನ: ಮಳೆಯನ್ನೂ ಮೀರಿ ಕೋಲ್ಕತ್ತಾದಲ್ಲಿ ಯೋಗ ಸಂಭ್ರಮ, ಮನೆಯಲ್ಲೇ ಅಭ್ಯಾಸ ಮಾಡಲು ಇಲ್ಲಿದೆ ಸರಳ ಟಿಪ್ಸ್! -
ಭಾರತ vs ಅಫ್ಘಾನಿಸ್ತಾನ ಪಂದ್ಯ: ಮ್ಯಾಚ್ ನೋಡುವಾಗ ಮನೆಯಲ್ಲಿ ಶಾಂತಿ ಕಾಪಾಡಲು ಈ ಟಿಪ್ಸ್ ಫಾಲೋ ಮಾಡಿ! -
ನಾಳೆ ನೀಟ್ ಮರುಪರೀಕ್ಷೆ: ಮಳೆಗಾಲದ ನಡುವೆ ಪರೀಕ್ಷೆಗೆ ಸಜ್ಜಾಗುವುದು ಹೇಗೆ? ಇಲ್ಲಿದೆ ಫೈನಲ್ ಚೆಕ್ಲಿಸ್ಟ್ -
ಪಿಎಂ-ಕಿಸಾನ್ ಹಣ ಜಮೆ: ರೈತರೇ, ಈ 2,000 ರೂಪಾಯಿಯಲ್ಲಿ ಆರೋಗ್ಯಕರ ಆಹಾರ ಖರೀದಿಸಿ, ಮಧುಮೇಹ ನಿಯಂತ್ರಿಸಿ! -
ಭಾರಿ ಗಾಳಿ-ಮಳೆಯ ಎಚ್ಚರಿಕೆ: ಜೂನ್ 20ರಂದು ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳನ್ನು ಮರೆಯದಿರಿ! -
ಮಳೆಗಾಲದಲ್ಲಿ ಅಂತರಾಷ್ಟ್ರೀಯ ಯೋಗ ದಿನ: ಹಿರಿಯರು ಸುರಕ್ಷಿತವಾಗಿ ಯೋಗ ಮಾಡುವುದು ಹೇಗೆ?
ಆಹಾರ ಕೆಡದಂತೆ ಶೇಖರಿಸಿಡುವ ವಿಧಾನ

ದವಸ ಧಾನ್ಯಗಳನ್ನು, ಒಣ ಹಣ್ಣುಗಳನ್ನು ತುಂಬಾ ಕಾಲ ಇಡಬಹುದಾದರೂ ಅದನ್ನು ಸರಿಯಾದ ರೀತಿಯಲ್ಲಿ ಶೇಖರಿಸಿಡದಿದ್ದರೆ ಆ ವಸ್ತುಗಳಲ್ಲಿ ಬೂಸ್ಟು ಕಂಡು ಬರುವುದು. ಇನ್ನು ತರಕಾರಿ ಮತ್ತು ಹಣ್ಣುಗಳನ್ನು ತುಂಬಾ ಕಾಲ ಇಡಲು ಸಾಧ್ಯವಾಗದಿದ್ದರೂ ಸ್ವಲ್ಪ ಗಮನಕೊಟ್ಟರೆ ಎರಡು ದಿನ ಹೆಚ್ಚು ಬಾಳಿಕೆ ಬರುವಂತೆ ಮಾಡಬಹುದು.
ಆದ್ದರಿಂದ ಆಹಾರದಲ್ಲಿರುವ ಪೋಷಕಾಂಶಗಳು ಹಾಳಾಗದಂತೆ ನೋಡಿಕೊಳ್ಳಲು ಈ ಕೆಳಗಿನ ಸಲಹೆಗಳನ್ನು ಬಳಸಬಹುದು:
ಶಾಖದಿಂದ ದೂರವಿಡಿ: ತುಪ್ಪ ಅಥವಾ ಸಂಬಾರ ಪದಾರ್ಥಗಳನ್ನು ಉರಿಯಿಂದ ದೂರವಿಡಬೇಕು. ತುಪ್ಪವನ್ನು ಒಂದು ರಾತ್ರಿ ಬೆಂಕಿಯ ಹತ್ತಿರ ಇಟ್ಟು ಬೆಳಗ್ಗೆ ತುಪ್ಪದ ರುಚಿ ನೋಡಿದರೆ ಅದು ರುಚಿಯನ್ನು ಕಳೆದುಕೊಂಡಿರುವಂತೆ ಭಾಸವಾಗುತ್ತದೆ. ಆದ್ದರಿಂದ ಅಂತಹ ವಸ್ತುಗಳನ್ನು ಉರಿಯಿಂದ ದೂರ ಇಡಬೇಕು.
ಸೊಪ್ಪು: ಕೊತ್ತಂಬರಿ ಸೊಪ್ಪು, ಮೆಂತೆ ಸೊಪ್ಪು, ಕರಿಬೇವಿನ ಎಲೆ ಮತ್ತು ಇತರ ಸೊಪ್ಪುಗಳನ್ನು ಪ್ರಿಜ್ ನಲ್ಲಿ ಇಡುವ ಮುನ್ನ ಅದನ್ನು ಪೇಪರ್ ನಿಂದ ಸುತ್ತಿ ಪ್ರಿಜ್ ನಲ್ಲಿ ಇಟ್ಟರೆ ಅದು ತನ್ನ ತಾಜಾತನವನ್ನು ಕಳೆದುಕೊಳ್ಳುವುದಿಲ್ಲ.
ಎಲ್ಲಾ ವಸ್ತುಗಳನ್ನು ಪ್ರಿಜ್ ನಲ್ಲಿ ಇಡುವುದು ಸೂಕ್ತವಲ್ಲ: ಕಾಳುಗಳನ್ನು ಡಬ್ಬದಲ್ಲಿ ಸಂಗ್ರಹಿಸುವುದು ಸೂಕ್ತ. ಹಾಗೆಯೇ ಬಾಳೆ ಹಣ್ಣು, ಬೇಕರಿ ತಿಂಡಿಗಳನ್ನು ಪ್ರಿಜ್ ನಲ್ಲಿಟ್ಟರೆ ಅದರ ಮೂಲ ರುಚಿ ಕಳೆದುಕೊಳ್ಳುವುದು.
ಗಾಳಿಯಾಡದಂತಹ ಡಬ್ಬಿ: ಮೆಂತೆ, ಉದ್ದಿನ ಬೇಳೆ, ತೊಗರಿ ಬೇಳೆ, ಉಪ್ಪಿನಕಾಯಿ ಮುಂತಾದ ವಸ್ತುಗಳನ್ನು ಗಾಳಿಯಾಡದಂತಹ ಡಬ್ಬದಲ್ಲಿ ಶೇಖರಿಸಿಡಬೇಕು.



Click it and Unblock the Notifications