Latest Updates
-
ಆಗಸ್ಟ್ 27 ಅಥವಾ 28? ರಾಖಿ ಹಬ್ಬದ ಗೊಂದಲಕ್ಕೆ ಇಲ್ಲಿದೆ ಬೆಸ್ಟ್ ಪ್ಲಾನ್! -
ಗುಡುಗು-ಸಿಡಿಲು ಮಳೆ ಎಚ್ಚರಿಕೆ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು 15 ನಿಮಿಷಗಳ ತುರ್ತು ಕ್ರಮಗಳು -
ರಕ್ಷಾಬಂಧನಕ್ಕೆ ಸಿಹಿ ಖರೀದಿಸ್ತಿದ್ದೀರಾ? ಈ ತಪ್ಪು ಮಾಡಿದ್ರೆ ಆರೋಗ್ಯಕ್ಕೆ ಕುತ್ತು, ನಕಲಿ ಸ್ವೀಟ್ಸ್ ಪತ್ತೆ! -
ರಕ್ಷಾಬಂಧನಕ್ಕೆ ಚಿನ್ನ ಖರೀದಿಸುವ ಮುನ್ನ ಎಚ್ಚರ! ಇಂದಿನ ದರ ಮತ್ತು ಲಾಭದಾಯಕ ಟಿಪ್ಸ್ ಇಲ್ಲಿದೆ -
ರಾಷ್ಟ್ರೀಯ ಕ್ರೀಡಾ ದಿನ: 29 ನಿಮಿಷಗಳ ಸರಳ ವರ್ಕೌಟ್ ಮೂಲಕ ಫಿಟ್ ಆಗಿ! -
ಕುಟುಂಬದಲ್ಲಿ ಉಡುಪಿನ ಬಗ್ಗೆ ಟೀಕೆಗಳೇ? ಈ 7 ವಾಕ್ಯಗಳ ಮೂಲಕ ಗೌರವಯುತವಾಗಿ ಉತ್ತರಿಸಿ! -
ಈರುಳ್ಳಿ ಬೆಲೆ ಏರಿಕೆ: ಅಡುಗೆಮನೆಯ ಬಜೆಟ್ ಉಳಿಸಲು ಸರಳ ಟಿಪ್ಸ್ ಮತ್ತು ಪರ್ಯಾಯಗಳು! -
ಪ್ಯಾಕೆಟ್ ಆಹಾರದ ಮೇಲೆ ಕಡ್ಡಾಯ ಎಚ್ಚರಿಕೆ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಅಂತಿಮ ಗಡುವು! -
ಇಂದಿನ ಪೆಟ್ರೋಲ್ ದರ ಸ್ಥಿರ: ಪ್ರಯಾಣದ ವೆಚ್ಚ ಉಳಿಸಲು ಈ 5 ಸಿಂಪಲ್ ಟಿಪ್ಸ್ ಫಾಲೋ ಮಾಡಿ! -
ದೆಹಲಿ ವಾಯು ಮಾಲಿನ್ಯ: ಆರೋಗ್ಯ ಕಾಪಾಡಿಕೊಳ್ಳಲು 12 ನಿಮಿಷದ ವರ್ಕೌಟ್ ಮತ್ತು ಸುರಕ್ಷತಾ ಟಿಪ್ಸ್
ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಕಷಾಯ ಯಾವ ಹೊತ್ತಿಗೆ ಕುಡಿಯಬೇಕು?
ಈಗಂತೂ ಪ್ರತಿಯೊಂದು ಮನೆಯಲ್ಲಿ ಕಷಾಯ ಮಾಡಿ ಕುಡಿಯುವುದು ಇದ್ದೇ ಇದೆ. ಕೆಲವರಂತೂ ಕೊರೊನಾ ಭಯಕ್ಕೆ ಸಿಕ್ಕಾಪಟ್ಟೆ ಕಷಾಯ ಮಾಡಿ ಕುಡಿಯುವವರೂ ಇದ್ದಾರೆ. ಏನೇ ಆಗಲಿ ಅತಿಯಾದರೆ ಅಮೃತವೂ ವಿಷವಾದೀತು.

ಕೆಮ್ಮು, ಶೀತ ಇವೆಲ್ಲಾ ಮಳೆಗಾಲದಲ್ಲಿ ಕಾಡುವುದು ಸಹಜ. ಇವುಗಳನ್ನು ತಡೆಗಟ್ಟುವಲ್ಲಿ ಕಷಾಯ ತುಂಬಾ ಪರಿಣಾಮರಿ. ಅಲ್ಲದೆ ಕಷಾಯ ಕುಡಿಯುವುದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಕೂಡ ಹೆಚ್ಚಾಗುವುದು.
ಆದರೆ ಈ ಕಷಾಯ ಯಾವಾಗ ಕುಡಿದರೆ ಒಳ್ಳೆಯದು ಎಂಬುವುದು ಮಾತ್ರ ಬಹುತೇಕರಿಗೆ ಗೊತ್ತಿರುವುದಿಲ್ಲ. ಆಯುರ್ವೇದದ ಪ್ರಕಾರ ಮನುಷ್ಯರಲ್ಲಿ ಮೂರು ರೀತಿಯ ಶರೀರ ಪ್ರವೃತ್ತಿ ಕಾಣಬಹುದು. ವಾತ, ಪಿತ್ತ, ಕಫ... ಈ ಮೂರು ಬಗೆಯ ಶರೀರದವರ ಗುಣಗಳು ಭಿನ್ನವಾಗಿರುತ್ತದೆ. ಆಯುರ್ವೇದ ಔಷಧಿ ನೀಡುವಾಗ ಶರೀರದ ಬಗೆ ತಿಳಿದುಕೊಂಡು ಔಷಧಿ ನೀಡುತ್ತಾರೆ, ಹೀಗಾಗಿ ಆ ಔಷಧಿ ತುಂಬಾ ಪರಿಣಾಮಕಾರಿಯಾಗಿರುತ್ತದೆ.'
ಕಷಾಯ ಕೂಡ ಅಷ್ಟೇ ಬಗೆಯ ಶರೀರದವರು ಯಾವಾಗ ಕಷಾಯ ಕುಡಿದರೆ ಒಳ್ಳೆಯದೆಂದು ಆಯುರ್ವೇದ ಹೇಳಿದೆ, ಬನ್ನಿ ಈ ಕುರಿತು ಹೆಚ್ಚಿನ ಮಾಹಿತಿ ತಿಳಿಯೋಣ:

ಶರೀರದ ಬಗೆಗಳು
ವಾತ: ಯಾರು ವಾತ ಶರೀರ ಹೊಂದಿದ್ದಾರೋ ಅವರು ಸಂಜೆ ಹೊತ್ತಿನಲ್ಲಿ ಉಗುರು ಬೆಚ್ಚಗಿನ ಕಷಾಯ ಕುಡಿಯುವುದು ಒಳ್ಳೆಯದು
ಪಿತ್ತ: ಪಿತ್ತ ಶರೀರ ಹೊಂದಿರುವವರು ಕಷಾಯವನ್ನು ಬೆಳಗ್ಗೆ ಮತ್ತು ಸಂಜೆ ಕುಡಿಯಬಹುದು, ಆದರೆ ಮಧ್ಯಾಹ್ನದ ಹೊತ್ತಿನಲ್ಲಿ ಕುಡಿಯುವುದು ಒಳ್ಳೆಯದಲ್ಲ. ಪಿತ್ತ ಶರೀರ ಗುಣ ಹೊಂದಿರುವವರು ಕಷಾಯವನ್ನು ರೂಮಿನ ಉಷ್ಣತೆಯಲ್ಲಿ ಸೇವಿಸುವುದು ಒಳ್ಳೆಯದು.
ಕಫ: ಇನ್ನು ಕಫ ದೋಷ ಹೊಂದಿರುವವರು ಕಷಾಯವನ್ನು ಯಾವ ಹೊತ್ತಿನಲ್ಲಿ ಬೇಕಾದರೂ ಕುಡಿಯಬಹುದು. ಆದರೆ ಇವರು ಬಿಸಿ ಬಿಸಿಯಾದ ಕಷಾಯ ಕುಡಿಯಬೇಕು, ಕುಡಿಯುವಾಗ ಇದಕ್ಕೆ ಜೇನು ಸೇರಿಸಿ ಕುಡಿಯಬೇಕು.

ನಿಮ್ಮ ದೇಹ ಯಾವ ಬಗೆಯದು ಗೊತ್ತಿಲ್ಲವೆಂದರೆ ಏನು ಮಾಡಬೇಕು?
ನಿಮಗೆ ನಿಮ್ಮ ಶರೀರ ವಾತ, ಪಿತ್ತ, ಕಫ ಇವುಗಳಲ್ಲಿ ಯಾವ ಬಗೆಯದು ಎಂದು ತಿಳಿಯದಿದ್ದರೆ ಉಗುರು ಬೆಚ್ಚಗಿನ ಬಿಸಿಯಲ್ಲಿ ಅಥವಾ ರೂಮಿನ ಉಷ್ಣತೆಯಲ್ಲಿ ಕಷಾಯವನ್ನು ಸೇವಿಸಿ.

ಕೆಮ್ಮು, ನೆಗಡಿ, ಶೀತ ಕಡಿಮೆ ಮಾಡುವ ಕಷಾಯ
- ಸ್ವಲ್ಪ ಅಮೃತ ಬಳ್ಳಿಯ ಕಾಂಡವನ್ನು ಜಜ್ಜಿ ಅದನ್ನು ನೀರಿನ ಜೊತೆ ಹಾಕಿ ಕುದಿಸಿ ಆ ನೀರು ಕುಡಿಯಬಹುದು.
- ಸ್ವಲ್ಪ ತುಳಸಿ, ಕಾಳು ಮೆಣಸು, ಶುಂಠಿ ಜಜ್ಜಿ ಒಂದು ಲೀಟರ್ ನೀರು ಹಾಕಿ ಕುದಿಸಿ, ನಂತರ ಅದಕ್ಕೆ ಜೇನು, ಸ್ವಲ್ಪ ನಿಂಬೆರಸ ಬೆರೆಸಿ ಕುಡಿಯಬಹುದು.
- ಸ್ವಲ್ಪ ಟೀ ಪುಡಿ, ಅರಿಶಿಣ, ಕಾಳು ಮೆಣಸು, ಬೆಲ್ಲ ಹಾಕಿ ಕುದಿಸಿ, ಅದಕ್ಕೆ ನಿಂಬೆರಸ ಬೆರೆಸಿ ಕುಡಿಯಬಹುದು.ಹೀಗೆ ಕಷಾಯವನ್ನು ಹಲವಾರು ರೀತಿಯಲ್ಲಿ ಮಾಡಿ ಕುಡಿಯಬಹುದು.

ಕಷಾಯವನ್ನು ಎಷ್ಟು ತೆಗೆದುಕೊಳ್ಳಬೇಕು?
ಕಷಾಯವನ್ನು ತುಂಬಾ ಕುಡಿದರೆ ಹೊಟ್ಟೆ ಉರಿ, ಹೊಟ್ಟೆ ನೋವು, ಬಾಯಿ ಹುಣ್ಣು, ಬೇಧಿ ಮುಂತಾದ ಸಮಸ್ಯೆ ಬರುವುದು. ನೀವು ಕಷಾಯವನ್ನು ದಿನದಲ್ಲಿ ಒಂದು ಬಾರಿ ತೆಗೆದುಕೊಂಡರೆ ಸಾಕು. ತುಂಬಾ ಕೆಮ್ಮು, ನೆಗಡಿ ಇದ್ದರೆ ದಿನದಲ್ಲಿ ಎರಡು ಬಾರಿ ತೆಗೆದುಕೊಂಡು ಅದು ಸ್ವಲ್ಪ ಕಡಿಮೆಯಾದ ಮೇಲೆ ಒಂದು ಬಾರಿ ಕುಡಿಯಿರಿ.



Click it and Unblock the Notifications