Latest Updates
-
ಆರ್ಬಿಐ ಹೊಸ ಆಟೋ-ಪೇ ನಿಯಮ: ನಿಮ್ಮ OTT ಮತ್ತು SIP ಪಾವತಿಗಳು ಸ್ಥಗಿತಗೊಳ್ಳುವ ಮುನ್ನ ಎಚ್ಚೆತ್ತುಕೊಳ್ಳಿ! -
ಸುಡುವ ಬಿಸಿಲಲ್ಲೂ ಮನೆ ತಂಪಾಗಿರಬೇಕೆ? ಕಡಿಮೆ ಖರ್ಚಿನಲ್ಲಿ ಕೂಲರ್ ಇಲ್ಲದೆ ತಂಪಾಗಿಸಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಬಿಸಿಲಿನ ಅಲೆ: ಸುಡುವ ಬಿಸಿಲಿನಲ್ಲಿ ನಿಮ್ಮ ಆರೋಗ್ಯ ಕಾಪಾಡಿಕೊಳ್ಳಲು ಈ ಪಾನೀಯಗಳೇ ಮದ್ದು! -
ಬಿಸಿಲ ಧಗೆಗೆ ಕಂಗಾಲಾಗಿದ್ದೀರಾ? ಸ್ಟೈಲಿಶ್ ಆಗಿ ಕೂಲ್ ಆಗಿರಲು ಇಲ್ಲಿದೆ ವೈರಲ್ ಸಮ್ಮರ್ ಹ್ಯಾಕ್ಸ್! -
ಬಿಸಿಗಾಳಿಯ ಅಬ್ಬರ: ಫಿಟ್ನೆಸ್ ಕಾಪಾಡಿಕೊಳ್ಳಲು ನಿಮ್ಮ ವರ್ಕೌಟ್ ಸಮಯ ಬದಲಾಯಿಸುವುದು ಅನಿವಾರ್ಯವೇ? -
ಡೇಟಿಂಗ್ ಆ್ಯಪ್ಗಳಲ್ಲಿ ಪ್ರೀತಿಯ ಬಲೆ: ಎಐ ಡೀಪ್ಫೇಕ್ ವಂಚನೆಯಿಂದ ಪಾರಾಗುವುದು ಹೇಗೆ? -
ಬಿಸಿಲ ಬೇಗೆಯಿಂದ ತತ್ತರಿಸಿದ್ದೀರಾ? ಎಸಿ ಇಲ್ಲದೆಯೇ ನಿಮ್ಮ ಮನೆಯನ್ನು ತಂಪಾಗಿಡಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಅಶ್ವಗಂಧದ ಎಲೆಗಳ ಬಳಕೆ ನಿಷೇಧ: ನಿಮ್ಮ ನೆಚ್ಚಿನ ಹೆಲ್ತ್ ಸಪ್ಲಿಮೆಂಟ್ಸ್ ಮಾರುಕಟ್ಟೆಯಿಂದ ಮಾಯವಾಗುತ್ತಾ? -
ಬಿಸಿಗಾಳಿಯ ಅಬ್ಬರ: ಸುಡುವ ಬಿಸಿಲಿನಲ್ಲಿ ಆರೋಗ್ಯ ಮತ್ತು ಫಿಟ್ನೆಸ್ ಕಾಪಾಡಿಕೊಳ್ಳುವುದು ಹೇಗೆ? -
ದೆಹಲಿ ಬಿಸಿಲಿನಲ್ಲಿ ಮದುವೆ ಸಂಭ್ರಮ: ಹೀಟ್ವೇವ್ ನಡುವೆ ನಿಮ್ಮ ಮದುವೆ ಪ್ಲಾನ್ ಬದಲಾಯಿಸುವುದು ಹೇಗೆ?
ಅಧ್ಯಯನ ವರದಿ: ಬೆಳಗ್ಗಿನ ಉಪಾಹಾರ ತ್ಯಜಿಸಿದವರಲ್ಲಿ ಹೃದಯಾಘಾತದ ಸಮಸ್ಯೆ ಹೆಚ್ಚಾಗುತ್ತದೆಯಂತೆ!
ಕಚೇರಿಗೆ ಬೇಗ ಹೋಗಲಿದೆ ಎಂದು ಬೆಳಗ್ಗಿನ ಉಪಾಹಾರವನ್ನೇ ಮಾಡದೆ ತೆರಳುವ ಅದೆಷ್ಟೋ ಮಂದಿ ಇದ್ದಾರೆ. ಉಪಾಹಾರವು ನಮ್ಮ ದಿನದ ಪ್ರಮುಖ ಆಹಾರವಾಗಿದೆ. ಉಪಾಹಾರವನ್ನು ತ್ಯಜಿಸಿದರೆ ಆಗ ಅದು ನಿಮ್ಮ ಆರೋಗ್ಯದ ಮೇಲೆ ನಾನಾ ರೀತಿಯ ಪರಿಣಾಮಗಳನ್ನು ಉಂಟು ಮಾಡಬಹುದು. ಉಪಾಹಾರವು ನಮಗೆ ದಿನಪೂರ್ತಿ ಶಕ್ತಿಯಿಂದ ಇರಲು, ದಿನಪೂರ್ತಿ ಕೆಲಸ ಮಾಡಲು ಬೇಕಾಗುವಂತಹ ಪೋಷಕಾಂಶಗಳನ್ನು ಇದು ಒದಗಿಸಿಕೊಡುವುದು. 6-8 ಗಂಟೆಗಳ ಕಾಲ ನಿದ್ರೆ ಮಾಡಿದ ಬಳಿಕ ದೇಹಕ್ಕೆ ಸಿಗುವ ಮೊದಲ ಆಹಾರವಾಗಿರುವ ಕಾರಣದಿಂದಲೂ ಉಪಾಹಾರವು ಪ್ರಮುಖವಾಗಿರುವುದು. ದೇಹವು ಬೆಳೆಯಲು ಪ್ರಮುಖ ಪೋಷಕಾಂಶಗಳು ಅದಕ್ಕೆ ಅಗತ್ಯವಾಗಿ ಬೇಕು. ನಿದ್ರೆಯಿಂದ ಎದ್ದ ಒಂದು ಗಂಟೆಯ ಮೊದಲು ನೀವು ಉಪಾಹಾರ ಸೇವಿಸಬೇಕು.
ಅದಾಗ್ಯೂ, ದಿನದ ಪ್ರಮುಖ ಆಹಾರವನ್ನು ನೀವು ಕಡೆಗಣಿಸಿದರೆ, ಆಗ ಹಲವಾರು ಆರೋಗ್ಯ ಸಮಸ್ಯೆಗಳನ್ನು ಆಹ್ವಾನಿಸಿದಂತೆ ಆಗುವುದು. ಉಪಾಹಾರ ತ್ಯಜಿಸಿದರೆ ಆಗ ನಾವು ಹೃದಯಾಘಾತದ ಸಮಸ್ಯೆಯನ್ನು ಹೆಚ್ಚಿಸಿಕೊಂಡಂತೆ ಆಗುವುದು. ಸಂಶೋಧನೆಗಳು ಹೇಳಿರುವ ಪ್ರಕಾರ ಉಪಾಹಾರ ಸೇವನೆ ಮಾಡದೆ ಇರುವಂತಹ ಜನರಲ್ಲಿ ಹೃದಯಾಘಾತದ ಸಮಸ್ಯೆಯು ಹೆಚ್ಚಿರುವುದು. ನಿಯಮಿತವಾಗಿ ಉಪಾಹಾರ ತ್ಯಜಿಸಿದರೆ ಆಗ ದೇಹದಲ್ಲಿ ಬೊಜ್ಜು ಬರುವುದು.

ಉಪಾಹಾರ ಸೇವನೆ ಮಾಡಿದರೆ ಅದರಿಂದ ದೇಹದ ತೂಕ ಹೆಚ್ಚಾಗುತ್ತದೆ ಎಂದು ಭಾವಿಸಿದ್ದರೆ, ಖಂಡಿತವಾಗಿಯೂ ನೀವು ತಪ್ಪಾರ್ಥ ಮಾಡಿಕೊಂಡಿದ್ದೀರಿ. ಯಾಕೆಂದರೆ ಉಪಾಹಾರವು ಚಯಾಪಚಯ ಹೆಚ್ಚಿಸುವ ಆಹಾರವಾಗಿದೆ ಮತ್ತು ಇದು ದೇಹಕ್ಕೆ ಬೇಕಿರುವ ಪ್ರಮುಖ ಪೋಷಕಾಂಶಗಳನ್ನು ನೀಡಿ ತೂಕ ಇಳಿಸಲು ಬಯಸುವವರಿಗೆ ನೆರವಾಗುವುದು. ಉಪಾಹಾರ ತ್ಯಜಿಸಿದರೆ ಆಗ ದೇಹಕ್ಕೆ ಬೇಕಾಗುವಂತಹ ಪೋಷಕಾಂಶಗಳಿಂದ ನೀವು ವಂಚಿತವಾಗಲಿದ್ದೀರಿ. ಪೋಷಕಾಂಶಗಳು ದೇಹವು ಸರಿಯಾಗಿ ಕಾರ್ಯನಿರ್ವಹಿಸಲು ಅತೀ ಅಗತ್ಯವಾಗಿ ಇರುವುದು. ಉಪಾಹಾರ ಸೇವನೆ ಮಾಡದೆ ಇದ್ದರೆ ಆಗ ಕೊಬ್ಬು ಕರಗಿಸುವ ಸಾಮರ್ಥ್ಯವನ್ನು ಕಡಿಮೆ ಮಾಡಿಕೊಂಡು, ಮತ್ತಷ್ಟು ತೂಕ ಹೆಚ್ಚಾಗುವಂತೆ ಮಾಡುವುದು.
6-8 ಗಂಟೆಗಳ ಕಾಲ ನಿದ್ರಿಸಿದ ಬಳಿಕ ದೇಹಕ್ಕೆ ಹೆಚ್ಚಿನ ಶಕ್ತಿ ಮತ್ತು ಪೋಷಕಾಂಶಗಳು ಬೇಕಾಗಿರುವುದು. ಯಾಕೆಂದರೆ 3-4 ಗಂಟೆಗಳ ಕಾಲ ಉಪವಾಸ ಮಾಡಿದರೆ ಆಗ ಹೊಟ್ಟೆಯಲ್ಲಿನ ಆಮ್ಲೀಯ ಮಟ್ಟವು ಹೆಚ್ಚಾಗುವುದು. ಈ ಆಮ್ಲವು ಸರಿಯಾಗಿ ಆಹಾರ ಜೀರ್ಣವಾಗಲು ನೆರವಾಗುವುದು. ಆಹಾರ ತ್ಯಜಿಸಿದರೆ ಆಗ ಗ್ಯಾಸ ಮತ್ತು ಮಲಬದ್ಧತೆ ಸಮಸ್ಯೆಯು ಬರುವುದು. ಜೀರ್ಣಕ್ರಿಯೆ ವ್ಯವಸ್ಥೆಯು ಆರೋಗ್ಯಕಾರಿ ಆಗಬೇಕಾದರೆ ಪ್ರತೀ 3-4 ಗಂಟೆಗೊಮ್ಮೆ ಆಹಾರ ಸೇವಿಸಬೇಕು.
ಉಪಾಹಾರ ತ್ಯಜಿಸಿದರೆ ಆಗ ರಕ್ತದಲ್ಲಿ ಸಕ್ಕರೆ ಮಟ್ಟ ಹೆಚ್ಚಾಗುವುದು
ನೀವು ತಿನ್ನುವಂತಹ ಆಹಾರ ಮತ್ತು ಊಟವು ರಕ್ತದಲ್ಲಿನ ಸಕ್ಕರೆ ಮಟ್ಟದ ಮೇಲೆ ಪರಿಣಾಮ ಬೀರುವುದು. ಉಪಾಹಾರವು ದಿನದ ಪ್ರಮುಖ ಆಹಾರವಾಗಿದೆ ಮತ್ತು ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಹೇಳಲಾಗಿದೆ. ಸರಿಯಾದ ಪ್ರಮಾಣದಲ್ಲಿ ಉಪಾಹಾರ ಸೇವಿಸಿದರೆ ಆಗ ರಕ್ತದಲ್ಲಿ ಸಕ್ಕರೆ ಮಟ್ಟ ನಿಯಂತ್ರಿಸಲು ನೆರವಾಗುವುದು ಮತ್ತು ಮಧುಮೇಹ ನಿಯಂತ್ರಿಸಲು ಇದು ನೆರವಾಗುವುದು. ಮಧುಮೇಹ ಹೊಂದಿರುವಂತಹವರು ಯಾವಾಗಲೂ ಆರೋಗ್ಯಕಾರಿ ಮತ್ತು ಅತ್ಯಧಿಕ ಪೋಷಕಾಂಶಗಳು ಇರುವ ಉಪಾಹಾರ ಸೇವನೆ ಮಾಡಬೇಕು. ಉಪಾಹಾರ ತ್ಯಜಿಸುವಮಹತ ಜನರಲ್ಲಿ ಖಿನ್ನತೆ ಮತ್ತು ಒತ್ತಡ ಕೂಡ ಉಂಟಾಗುವುದು ಎಂದು ಹೇಳಲಾಗಿದೆ.
ಉಪಾಹಾರವು ಜೀರ್ಣಕ್ರಿಯೆ ವ್ಯವಸ್ಥೆಯಲ್ಲಿ ಆಮ್ಲೀಯ ಮಟ್ಟವನ್ನು ಕಾಪಾಡುವುದು. ಉಪಾಹಾರ ತ್ಯಜಿಸಿದರೆ ಆಗ ಅದರಿಂದ ಹೊಟ್ಟೆಯ ಅಲ್ಸರ್ ಬರಬಹುದು. ದೀರ್ಘಕಾಲ ತನಕ ಉಪವಾಸ ಇರುವುದರಿಂದ ಹೊಟ್ಟೆಯ ಅಲ್ಸರ್ ಬರುವುದು. ಇದರಲ್ಲಿ ಮುಖ್ಯವಾಗಿ ಉಪಾಹಾರ ತ್ಯಜಿಸುವುದು ಮುಖ್ಯವಾಗಿದೆ. ಬೆಳಗ್ಗಿನ ಉಪಾಹಾರವು ದೇಹಕ್ಕೆ ಬೇಕಾಗುವಂತಹ ಪೋಷಕಾಂಶಗಳನ್ನು ನೀಡುವುದು. ಇದರಿಂದ ನೀವು ಹೊಟ್ಟೆಯ ಅಲ್ಸರ್ ಮತ್ತು ಗಡ್ಡೆ ತಡೆಯಲು ಸಮಯಕ್ಕೆ ಸರಿಯಾಗಿ ಪ್ರತಿನಿತ್ಯ ಉಪಾಹಾರ ಸೇವಿಸಿ.
ಆರೋಗ್ಯಕಾರಿ ಉಪಾಹಾರ ಕ್ರಮಕ್ಕೆ ನೆನಪಿನಲ್ಲಿ ಇಟ್ಟುಕೊಳ್ಳಬೇಕಾದ ಕೆಲವೊಂದು ಸಲಹೆಗಳು
ಆಳವಾಗಿ ಕರಿದ ಆಹಾರವನ್ನು ಬೆಳಗ್ಗಿನ ಉಪಾಹಾರಕ್ಕೆ ಸೇವನೆ ಮಾಡಬೇಡಿ. ಇದರಿಂದ ಜೀರ್ಣಕ್ರಿಯೆ ವ್ಯವಸ್ಥೆಗೆ ಅದನ್ನು ಕರಗಿಸಲು ಕಷ್ಟವಾಗುವುದು. ಬೆಳಗ್ಗೆ ಎದ್ದ ಕೂಡಲೇ ನೀವು ಸಾಕಷ್ಟು ಪ್ರಮಾಣದಲ್ಲಿ ನೀರು ಸೇವಿಸಿ. ಪ್ರತಿನಿತ್ಯವು ನಿಮ್ಮ ಉಪಾಹಾರದಲ್ಲಿ ಭಿನ್ನತೆ ಇರಲಿ. ಕಾರ್ಬ್ಸ್, ಕೊಬ್ಬು, ಪ್ರೋಟೀನ್ ಮತ್ತು ಕ್ಯಾಲ್ಸಿಯಂ ಉಪಾಹಾರದಲ್ಲಿರಲಿ. ಮೊಟ್ಟೆಯು ಉಪಾಹಾರಕ್ಕೆ ತುಂಬಾ ಆರೋಗ್ಯಕಾರಿ ಎಂದು ಹೇಳಲಾಗುತ್ತದೆ. ಇದರ ಅಧಿಕ ಲಾಭ ಪಡೆಯಲು ಯಾವುದೇ ರೂಪದಲ್ಲೂ ಇದನ್ನು ಸೇವಿಸಬಹುದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications









