Latest Updates
-
ಆರ್ಥಿಕ ದೃಷ್ಟಿಯಿಂದ ಈ ದಿನ ಅನುಕೂಲಕರ! ಪ್ರಣಯ ಜೀವನವು ಸುಖಮಯ -
March 11 Horoscope: ಪ್ರಯಾಣಗಳಲ್ಲಿ ನಿಮಗೆ ಶುಭವಿಲ್ಲ! ಅಪಾಯದ ಮುನ್ಸೂಚನೆ! -
ಎಲ್ಜಿಪಿ ಬಳಸದೆ ನೀರಿನಿಂದ ಅಡುಗೆ ಮಾಡಿ: ರವಿಶಂಕರ್ ಗುರೂಜಿ ವಿಡಿಯೋ ವೈರಲ್ -
ಬೇಸಿಗೆಯ ಉರಿಗೆ ಪೈನಾಪಲ್ ರಸಂ ಮಾಡಿ: ಎಷ್ಟು ಸುಲಭ ಮಾಡೋದು ಗೊತ್ತಾ? -
ಅಕ್ಕಿ ಬೇಡ, ನೆನೆಸೋ ಸಮಯವೂ ಬೇಡ.. ತಕ್ಷಣ ಮಾಡಿ ಈ ದೋಸೆ! ಈ ಟ್ರಿಕ್ ಗೊತ್ತಿದ್ರೆ ಯಾರೂ ಮಾಡಬಹುದು -
ಸುಡು ಬಿಸಿಲಲ್ಲೂ ನಿಮ್ಮ ಮುಖ ಹಾಲಿನಂತೆ ಬೆಳ್ಳಗಾಗುತ್ತೆ! ಕೇವಲ 2 ನಿಮಿಷ ಈ ಮಸಾಜ್ ಸಾಕು.. ಮುಖ ಹೊಳೆಯುತ್ತೆ! -
ಮಾರ್ಚ್ 15ಕ್ಕೆ ರೇವತಿ ನಕ್ಷತ್ರಕ್ಕೆ ಶುಕ್ರ ಸಂಚಾರ: ಈ 4 ರಾಶಿಯವರಿಗೆ ಹೆಚ್ಚಲಿದೆ ಸಂಕಷ್ಟ! -
ಜಿಡ್ಡು ಬೊಜ್ಜು ಬೆಣ್ಣೆಯಂತೆ ಕರಗುತ್ತೆ! ದಿನಾ ಈ ಮ್ಯಾಜಿಕಲ್ ಸೂಪ್ ಕುಡಿಯಿರಿ.. 15 ದಿನಗಳಲ್ಲಿ ಕೊಬ್ಬು ಮಾಯ -
ಮೆಂತ್ಯ ಸೊಪ್ಪಿನ ಮೊಟ್ಟೆ ಪಲ್ಯ: ಊಟ, ತಿಂಡಿಯೊಂದಿಗೆ ಇದು ಬೆಸ್ಟ್! -
ಕಾಲಾಷ್ಟಮಿ 2026: ನಾಳೆ ಕಾಲಾಷ್ಟಮಿ ಆಚರಣೆ, ಶಿವನ ಉಗ್ರವತಾರ ಕಾಲಭೈರವನ ಪೂಜಿಸುವುದು ಏಕೆ?
ಕಾಲಿಗೆ ಮುಳ್ಳು, ಸೂಜಿ ಚುಚ್ಚಿದ್ದರೆ, ಈ ಮನೆಮದ್ದು ಪ್ರಯತ್ನಿಸಿ
ಆಕಸ್ಮಿಕವಾಗಿ ಪಾದದಡಿ ಚುಚ್ಚಿದ ಮುಳ್ಳೋ ಅಥವಾ ಸೂಜಿ ಸಾಕಷ್ಟು ನೋವು ಉಂಟುಮಾಡುತ್ತದೆ. ಚುಚ್ಚಿದ ವಸ್ತು ಸಣ್ಣದಾಗಿದ್ದರೂ, ಅದರಿಂದ ಆಗುವ ನೋವು ನರಕ ಯಾತನೆಯಂತಿರುತ್ತದೆ. ಇದರ ಜೊತೆಗೆ ಇನ್ನೂ ಕೆಲವರಿಗೆ ಆಗಾಗ ಪಾದದಡಿಯಲ್ಲಿ ಸೂಜಿ ಚುಚ್ಚುತ್ತಿರುವಂತಹ ವಿಚಿತ್ರ ಅನುಭವ ಆಗುತ್ತಿರುತ್ತದೆ. ನಮ್ಮ ದೇಹದಲ್ಲಿನ ಹಲವು ವಿಟಮಿನ್ ಗಳ ಕೊರತೆಯೂ ಇಂತಹ ವಿಚಿತ್ರ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ತಜ್ಞರು ಅಭಿಪ್ರಾಯಪಡುತ್ತಾರೆ. ಇದು ಆಗಾಗ ಸಂಭವಿಸುತ್ತಿದ್ದರೆ, ವೈದ್ಯರನ್ನು ಸಂಪರ್ಕಿಸುವುದು ಉತ್ತಮ.

ನೀವೇನಾದರೂ ಪಾದದ ಅಡಿಯಲ್ಲಿ ತೀಕ್ಷ್ಣವಾದ ನೋವನ್ನು ಸಹ ಅನುಭವಿಸುತ್ತೀರಾ? ವೈದ್ಯರ ಸಲಹೆಯ ಮೇರೆಗೆ ನೀವು ಚಿಕಿತ್ಸೆ ತೆಗೆದುಕೊಳ್ಳಬಹುದು, ಆದರೆ ಅದಕ್ಕೂ ಮುನ್ನ ಕೆಲವೊಂದು ಮನೆಮದ್ದುಗಳನ್ನು ಪ್ರಯತ್ನಿಸಬಹುದು. ಅವು ಯಾವುವು ನೋಡೋಣ.

ಚೂಪಾದ ವಸ್ತು ಚುಚ್ಚಿರುವ ನೋವು ನಿವಾರಣೆಗೆ ಮನೆಮದ್ದನ್ನು ಈ ಕೆಳಗೆ ನೀಡಲಾಗಿದೆ
ಅರಿಶಿನ
ಅರಿಶಿನವನ್ನು ನೈಸರ್ಗಿಕ ಔಷಧಿ ಎಂದು ಕರೆಯಲಾಗುವುದಲ್ಲದೇ, ಇದನ್ನು ಅನಾದಿ ಕಾಲದಿಂದಲೂ ಆರೋಗ್ಯ ರಕ್ಷಣೆಗಾಗಿ ಬಳಸಲಾಗುತ್ತಿದೆ. ಇದರ ಬ್ಯಾಕ್ಟೀರಿಯಾ ವಿರೋಧಿ ಮತ್ತು ಉರಿಯೂತದ ಗುಣಲಕ್ಷಣಗಳು ದೇಹಕ್ಕೆ ಹಲವು ವಿಧಗಳಲ್ಲಿ ಪ್ರಯೋಜನವನ್ನು ನೀಡುತ್ತವೆ. ಅರಿಶಿನವನ್ನು ಸೂಜಿ, ಮುಳ್ಳುಗಳಿಂದ ಆಗುವ ಪಾದದ ಅಡಿಭಾಗದಲ್ಲಿರುವ ನೋವನ್ನು ತೆಗೆದುಹಾಕುವಲ್ಲಿ ಪರಿಣಾಮಕಾರಿ ಎಂದು ಪರಿಗಣಿಸಲಾಗಿದೆ. ಇದಕ್ಕಾಗಿ ನೀವು ಪ್ರತಿದಿನ ಅರಿಶಿನ ಹಾಲನ್ನು ಸರಿಯಾದ ಪ್ರಮಾಣದಲ್ಲಿ ಕುಡಿಯಬೇಕು. ಬೇಕಿದ್ದರೆ ಸಾಸಿವೆ ಅಥವಾ ತೆಂಗಿನೆಣ್ಣೆಯೊಂದಿಗೆ ಅರಿಶಿನವನ್ನು ಬೆರೆಸಿ ಪಾದದ ಅಡಿಗೆ ಹಚ್ಚಬಹುದು. ಈ ಪೇಸ್ಟ್ ಸೋಂಕನ್ನು ಕಡಿಮೆ ಮಾಡುತ್ತದೆ ಮತ್ತು ನೋವು ಸಹ ಶಮನವಾಗುತ್ತದೆ.

ಹಾಗಲಕಾಯಿ ಎಲೆ
ಮಧುಮೇಹಿಗಳು ಹಾಗಲಕಾಯಿಯನ್ನು ಸೇವಿಸುವ ಮೂಲಕ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಬಹುದು ಎಂಬುದನ್ನು ಗೊತ್ತೇ ಇದೆ. ಅಂದಹಾಗೆ, ಪಾಪದ ಅಡಿಯಿರುವ ಚುಚ್ಚುವಂತಹ ನೋವನ್ನು ತೆಗೆದುಹಾಕಲು ನೀವು ಹಾಗಲಕಾಯಿ ಎಲೆಗಳನ್ನು ಬಳಸಬಹುದು. ಹಾಗಲಕಾಯಿ ಎಲೆಗಳ ಪೇಸ್ಟ್ ಅನ್ನು ಒಂದು ಬಟ್ಟಲಿನಲ್ಲಿ ತೆಗೆದುಕೊಂಡು ಅದನ್ನು ಮುಳ್ಳು ಅಥವಾ ಸೂಜಿ ಚುಚ್ಚಿರುವ ಜಾಗಕ್ಕೆ ಹಚ್ಚಿ. ಸ್ವಲ್ಪ ಸಮಯ ಬಿಟ್ಟ ನಂತರ, ಉಗುರು ಬೆಚ್ಚಗಿನ ನೀರಿನಿಂದ ಈ ಪೇಸ್ಟ್ ಅನ್ನು ತೊಳೆಯಿರಿ. ಹೀಗೆ ಕೆಲವು ದಿನಗಳ ಕಾಲ ಮಾಡಿದ ನಂತರ ನಿಮ್ಮ ನೋವು ಗುಣವಾಗುವುದು.

ಆಪಲ್ ಸೈಡರ್ ವಿನೆಗರ್
ಆಪಲ್ ಸೈಡರ್ ವಿನೆಗರ್ ಪಾದದ ಅಡಿಯ ಮುಳ್ಳು ಅಥವಾ ಸೂಜಿ ಚುಚ್ಚಿದ ನೋವನ್ನು ತೆಗೆದುಹಾಕುತ್ತದೆ ಎಂದು ನಿಮಗೆ ತಿಳಿದಿದೆಯೇ?.. ಇದಕ್ಕಾಗಿ ನೀವು ಆಪಲ್ ಸೈಡರ್ ವಿನೆಗರ್ ಸೇವಿಸಬೇಕು. ಒಂದು ಲೋಟದಲ್ಲಿ ಉಗುರು ಬೆಚ್ಚಗಿನ ನೀರನ್ನು ತೆಗೆದುಕೊಂಡು ಅದಕ್ಕೆ ಒಂದು ಚಮಚ ಜೇನುತುಪ್ಪ ಮತ್ತು ಆಪಲ್ ಸೈಡರ್ ವಿನೆಗರ್ ಸೇರಿಸಿ. ಇದನ್ನು ಸಿಪ್ ಬೈ ಸಿಪ್ ಕುಡಿಯಿರಿ ಮತ್ತು ಕೆಲವೇ ದಿನಗಳಲ್ಲಿ ನೀವು ವ್ಯತ್ಯಾಸವನ್ನು ನೋಡಲು ಸಾಧ್ಯವಾಗುತ್ತದೆ.



Click it and Unblock the Notifications











