Latest Updates
-
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು!
ನಿಮ್ಮ ಬಾಯಲ್ಲಿ ಈ ಲಕ್ಷಣ ಕಂಡು ಬಂದರೆ ಹೃದಯಾಘಾತದ ಅಪಾಯವಿದೆ
ಹಾರ್ಟ್ ಅಟ್ಯಾಕ್ ಯಾರಿಗೆ ಯಾವಾಗ ಬರುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಆ ವ್ಯಕ್ತಿ ಓಡಾಡುತ್ತಾ ಆರಾಮವಾಗಿಯೇ ಇರುತ್ತಾರೆ, ಆದರೆ ಇದ್ದಕ್ಕಿದ್ದಂತೆ ಹಾರ್ಟ್ ಅಟ್ಯಾಕ್ ಬಂದು ತೀರಿ ಹೋಗಿರುತ್ತಾರೆ. ಹಾರ್ಟ್ ಅಟ್ಯಾಕ್ ಅಥವಾ ಹೃದಯಾಘಾತ ಮಧ್ಯ ವಯಸ್ಸು ದಾಟಿದವರಲ್ಲಿ ಮಾತ್ರವಲ್ಲ ತುಂಬಾ ಚಿಕ್ಕ ಪ್ರಾಯದವರಲ್ಲೂ ಕಂಡು ಬರುತ್ತದೆ.
ಹೃದಯಾಘಾತ ಇದ್ದಕ್ಕಿದ್ದಂತೆ ಬಂತೆಂದೆ ಎಲ್ಲರೂ ಹೇಳುತ್ತಾರೆ, ಆದರೆ ಹೃದಯಾಘಾತ ಬರುವ ಮುನ್ನವೇ ಅದರ ಸೂಚನೆಗಳನ್ನು ತೋರಿಸಿರುತ್ತದೆ, ಆದರೆ ಅದನ್ನು ಹೆಚ್ಚಿನವರು ಗಮನಿಸಿರುವುದಿಲ್ಲ, ಹಾಗಾಗಿ ಅಪಾಯ ಸಾಧ್ಯತೆ ಹೆಚ್ಚುವುದು. ಹೃದಯಾಘಾತ ಮುಂಚೆ ಭುಜ ನೋವು, ಸುಸ್ತು ಇವೆಲ್ಲಾ ಕಾಣಿಸಿರುತ್ತದೆ, ಇತ್ತೀಚೆಗೆ ನಡೆಸಿದ ಸಂಶೋಧನೆಯೊಂದು ನಮ್ಮ ಬಾಯಲ್ಲಿ ಕಂಡು ಬರುವ ಕೆಲವೊಂದು ಲಕ್ಷಣಗಳು ಹೃದಯಾಘಾತದ ಮುನ್ಸೂಚನೆಯಾಗಿದೆ ಎಂದು ಹೇಳಿದೆ. ಇದರ ಕುರಿತ ಹೆಚ್ಚಿನ ಮಾಹಿತಿ ಈ ಲೇಖನದಲ್ಲಿದೆ.

ವಸಡಿನ ಸಮಸ್ಯೆ ಇರುವವರಿಗೆ ಹೃದಯಾಘಾತದ ಸಾಧ್ಯತೆ ಹೆಚ್ಚು
ಹಾರ್ವಾಡ್ ಸ್ಕೂಲ್ ಆಫ್ ಡೆಂಟಲ್ ಮೆಡಿಸಿನ್ ಮತ್ತು ಫೋರ್ಸಿಯತ್ ಇನ್ಸಿಟ್ಯೂಟ್ ನಡೆಸಿದ ಸಂಶೋಧನೆಯು ವಸಡಿನ ಸಮಸ್ಯೆ ಹೇಗೆ ಹೃದಯಾಘಾತಕ್ಕೆ ಕಾರಣವಾಗುತ್ತೆ ಎಂಬುವುದರ ಕುರಿತು ಅಧ್ಯಯನ ನಡೆಸಿತ್ತು. ಈ ಅಧ್ಯಯನದಲ್ಲಿ 304 ವಸಡಿನ ಸಮಸ್ಯೆ ಇರುವ ರೋಗಿಗಳನ್ನು ಒಳಪಡಿಸಿತ್ತು. ನಾಲ್ಕು ವರ್ಷದ ಬಳಿಕ ಇವರಲ್ಲಿ 13 ಜನರಿಗೆ ತೀವ್ರ ಹೃದಯಾಘಾತ ಉಂಟಾಗಿತ್ತು. ಆದ್ದರಿಂದ ಈ ಸಂಶೋಧನೆಯು ವಸಡಿನ ಸಮಸ್ಯೆ ಇರುವವರಲ್ಲಿ ಹೃದಯಾಘಾತದ ಸಾಧ್ಯತೆ ಇದೆ ಎಂದು ಹೇಳಿದೆ.

ಹೇಗೆ?
ಸಂಶೋಧಕರ ಪ್ರಕಾರ ವಸಡಿನ ನೋವು ಇದ್ದಾಗ ಇದು ನರಗಳಲ್ಲಿ ಉರಿಯೂತ ಉಂಟು ಮಾಡುತ್ತದೆ, ಇದರಿಂದ ಹೃದಯಾಘಾತ ಸಂಭವಿಸುವ ಸಾಧ್ಯತೆ ಹೆಚ್ಚು ಎಂದು ಹೇಳಿದ್ದಾರೆ.

ಮಿಲಿಯನ್ ಗಟ್ಟಲೆ ಜನರು ವಸಡಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ
ಸೆಂಟ್ರಲ್ ಡಿಸೀಜ್ ಕಂಟ್ರೋಲ್ ಪ್ರಕಾರ ಶೇ. 47 ಜನರಲ್ಲಿ ವಸಡಿನ ಸಮಸ್ಯೆ ಇರುತ್ತದೆ. ಅದರಲ್ಲೂ ಶೇ.70ರಷ್ಟು ಜನರು 65 ವರ್ಷ ಮೇಲ್ಪಟ್ಟವರಾಗಿರುತ್ತಾರೆ. ವಸಡಿನ ಸಮಸ್ಯೆಗೂ ಹೃದಯಾಘಾತಕ್ಕೂ ನೇರವಾದ ಸಂಬಂಧವಿದೆ.

ವಸಡಿನ ಸಮಸ್ಯೆಯ ಲಕ್ಷಣಗಳೇನು?
ನೀವು ಹಲ್ಲುಜ್ಜುವಾಗ ವಸಡಿನಲ್ಲಿ ರಕ್ತ ಕಂಡು ಬಂದರೆ ಅದು ವಸಡಿನ ಸಮಸ್ಯೆಯಾಗಿರುತ್ತದೆ. ಬಾಯಿನ ಸ್ವಚ್ಛತೆ ಕಡೆ ಗಮನ ನೀಡುವುದರಿಂದ ವಸಡಿನ ಸಮಸ್ಯೆ ತಡೆಗಟ್ಟಬಹುದು. ದಿನದಲ್ಲಿ ಎರಡು ಬಾರಿ ಹಲ್ಲುಜ್ಜಿ ಹಾಗೂ ಮೌತ್ವಾಶ್ ಬಳಸಿ. ಅಲ್ಲದೆ ತುಂಬಾ ಹೊತ್ತು ಹಲ್ಲುಜ್ಜುವುದು ಹಾಗೂ ಅಧಿಕ ಬಾರಿ ಮೌತ್ವಾಶ್ ಬಳಸುವುದು ಕೂಡ ವಸಡಿನ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ತಿಳಿದಿರಲಿ.



Click it and Unblock the Notifications
