Latest Updates
-
ದೆಹಲಿ ಮದುವೆ ಸೀಸನ್: ಮಳೆ ಮತ್ತು ಬಿರುಗಾಳಿಯಿಂದ ನಿಮ್ಮ ಸಂಭ್ರಮವನ್ನು ಕಾಪಾಡಿಕೊಳ್ಳುವುದು ಹೇಗೆ? -
ಬಿಸಿಗಾಳಿ-ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಟಿಪ್ಸ್ ಫಾಲೋ ಮಾಡಿ! -
ಬಿಸಿಗಾಳಿಯ ಆರ್ಭಟಕ್ಕೆ ಸುಸ್ತಾಗಿದ್ದೀರಾ? ಈ ಆಹಾರ ಕ್ರಮ ಪಾಲಿಸಿದರೆ ಬಿಸಿಲು ನಿಮ್ಮನ್ನೇನೂ ಮಾಡಲ್ಲ! -
ಕಾನ್ 2026: ರೆಡ್ ಕಾರ್ಪೆಟ್ ಮೇಲೆ ಭಾರತೀಯರ ಅಬ್ಬರ, ಈ ಬಾರಿ ಫ್ಯಾಷನ್ ಲೋಕವೇ ದಂಗು! -
ಪ್ರಧಾನಿ ಮೋದಿ ಭೇಟಿಯ ನಂತರ ಟ್ರೆಂಡಿಂಗ್: ಕೇವಲ 15 ನಿಮಿಷದಲ್ಲಿ ನಿಮ್ಮ ದಿನವನ್ನು ಬದಲಾಯಿಸುವ ಮ್ಯಾಜಿಕ್ ಯೋಗ ಟಿಪ್ಸ್! -
ಮದರ್ಸ್ ಡೇ 2026: ಅಮ್ಮ ಮತ್ತು ಅತ್ತೆಯ ನಡುವೆ ಸಿಲುಕಿದ್ದೀರಾ? ಈ ಟ್ರಿಕ್ಸ್ ಫಾಲೋ ಮಾಡಿ! -
ಬಿರುಗಾಳಿ ಅಪ್ಪಳಿಸುವ ಮುನ್ನ ಎಚ್ಚರ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಈ ಕೆಲಸಗಳನ್ನು ಇಂದೇ ಮಾಡಿ! -
ಬಿಸಿಗಾಳಿಯ ಆರ್ಭಟಕ್ಕೆ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಮದರ್ಸ್ ಡೇ 2026: ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿರೋ ಈ ವಿಶೇಷ ಟ್ರೆಂಡ್ಸ್ ನೀವು ಮಿಸ್ ಮಾಡ್ಬೇಡಿ! -
ಬಿಸಿಲ ಝಳದಲ್ಲಿ ವರ್ಕೌಟ್ ಮಾಡ್ತಿದ್ದೀರಾ? ಹೀಟ್ವೇವ್ನಿಂದ ಪಾರಾಗಲು ಈ ಸಣ್ಣ ಬದಲಾವಣೆ ಸಾಕು!
ಮಾವಿನಕಾಯಿ ಸಾರಿಗೆ ಹಾಕಿದರೆ ಆರೋಗ್ಯಕ್ಕೆ 6 ಲಾಭ
ಮಾರ್ಚ್ ತಿಂಗಳಿನಿಂದ ಜೂನ್-ಜುಲೈಯವರಿಗೆ ಮಾವಿನಕಾಯಿ ಹಾಗೂ ಹಣ್ಣುಗಳದ್ದೇ ಕಾರುಬಾರು. ಈ ಸೀಸನಲ್ ಫುಡ್ ಈ ಸಮಯದಲ್ಲಿ ಅನೇಕ ಬಗೆಯ ಖಾದ್ಯಗಳನ್ನು, ಸ್ವೀಟ್, ಜಾಮ್ಗಳನ್ನು ಮಾಡಿ ಸವಿಯುತ್ತೇವೆ. ಏಕೆಂದರೆ ಅದು ಸಿಗುವಾಗ ಅವುಗಳಿಂದ ಬಗೆ-ಬಗೆಯ ತಿನಿಸು ಮಾಡಿ ಸವಿಯದಿದ್ದರೆ ನಂತರ ಆ ರುಚಿ ನೋಡಲು ಒಂದು ವರ್ಷ ಕಾಯಬೇಕಾಗುತ್ತದೆ.

ಈಗ ಮಾವಿನ ಹಣ್ಣು ಹೆಚ್ಚಾಗಿ ದೊರೆಯುತ್ತವೆ, ಜೊತೆಗೆ ಕಾಯಗಳು ಕೂಡ ಲಭ್ಯವಿದೆ. ಮಾವಿನಕಾಯಿ ಉಪ್ಪು ಹಾಕಿ ತಿನ್ನುವುದು ಒಂದು ಬಗೆಯ ರುಚಿಯಾದರೆ ಇವುಗಳನ್ನು ಹಾಕಿ ಮಾಡುವ ಸಾರು ಕೂಡ ಅಷ್ಟೇ ರುಚಿಕರವಾಗಿರುತ್ತದೆ. ಇನ್ನು ಕೆಲವರು ಮಿಡಿ ಮಾವಿನಕಾಯಿ ವರ್ಷದವರೆಗೆ ಸಂಗ್ರಹಿಸಿಟ್ಟು ಉಪ್ಪಿನಕಾಯಿ ಹಾಗೂ ಸಾರಿಗೆ ಬಳಸುತ್ತಾರೆ.
ಮಾವಿನಕಾಯಿಂದ ಮಾಡುವ ಸಾರು ಆರೋಗ್ಯಕ್ಕೂ ತುಂಬಾ ಒಳ್ಳೆಯದು. ಮಾವಿನಕಾಯಿ ಸಾರು ತಿಂದರೆ ಈ ಪ್ರಮುಖ ಪ್ರಯೋಜನಗಳನ್ನು ಪಡೆಯಬಹುದು ನೋಡಿ:

ಮೈ ಉಷ್ಣತೆ ಕಡಿಮೆ ಮಾಡುತ್ತದೆ, ದೇಹದಲ್ಲಿ ನೀರಿನಂಶ ಕಾಪಾಡುತ್ತದೆ
ಕೆಲವು ಕಡೆ ಜೂನ್ ಆದರೂ ಉರಿ ಬಿಸಿಲು ಹಾಗೇ ಇರುತ್ತದೆ. ಮಾವಿನಕಾಯಿ ಸಾರು ಮಾಡಿ ತಿನ್ನುವುದರಿಂದ ಮೈ ಉಷ್ಣತೆ ಕಡಿಮೆಯಾಗುವುದು ಅಲ್ಲದೆ ಇದು ದೇಹದಲ್ಲಿ ನೀರಿನಂಶ ಕಾಪಾಡುತ್ತದೆ.

ಹೊಟ್ಟೆ ಸಂಬಂಧಿ ಸಮಸ್ಯೆಗಳನ್ನು ಹೋಗಲಾಡಿಸುತ್ತದೆ
ಕೆಲವರಿಗೆ ಬೆಳಗ್ಗೆ ಎದ್ದಾಗ ತಲೆಸುತ್ತು, ಮಲಬದ್ಧತೆ, ಬೇಧಿ, ಅಜೀರ್ಣ ಈ ರೀತಿಯ ಸಮಸ್ಯೆ ಇರುತ್ತದೆ. ಈ ಸಮಸ್ಯೆ ಇರುವವರು ಮಾವಿನಕಾಯಿ ಸಾರು ಮಾಡಿ ತಿಂದರೆ ಒಳ್ಳೆಯದು. ಇನ್ನು ಹಸಿ ಮಾವಿನಕಾಯಿ ಹಾಗೆಯೂ ತಿನ್ನಬಹುದು.

ಹೃದಯದ ಆರೋಗ್ಯಕ್ಕೆ ಒಳ್ಳೆಯದು
ಈ ರುಚಿಕರವಾದ ಹಣ್ಣು ನಿಮ್ಮ ಹೃದಯದ ಆರೋಗ್ಯಕ್ಕೂ ಒಳ್ಳೆಯದು. ಇದರಲ್ಲಿ ನಿಯಾಸಿನ್ ಅಂಶವಿರುತ್ತದೆ ಇದು ಕೆಟ್ಟ ಕೊಲೆಸ್ಟ್ರಾಲ್ ನಿಯಂತ್ರಣದಲ್ಲಿಡುತ್ತದೆ ಹಾಗೂ ಹೃದಯ ಸಂಬಂಧಿ ಕಾಯಿಲೆ ಇರುವವರೂ ಇದನ್ನು ತಿನ್ನುವುದು ಒಳ್ಳೆಯದು.

ಮಾವಿನ ಕಾಯಿ ಪುಡಿ/ಆಮ್ಚೂರ್ ಪೌಡರ್
ಇನ್ನು ಮಾವಿನಕಾಯಿ ಒಣಗಿಸಿ ಪುಡಿ ಮಾಡಿ ಅಡುಗೆಗೆ ಬಳಸುತ್ತಾರೆ. ಇದು ಲಿವರ್ ಸಮಸ್ಯೆ ತಡೆಗಟ್ಟುವಲ್ಲಿ ತುಂಬಾ ಸಹಕಾರಿ. ಚಿಕ್ಕ ಕರುಳು ಹಾಗೂ ದೊಡ್ಡ ಕರುಳು ಸರಿಯಾದ ರೀತಿಯಲ್ಲಿ ಕಾರ್ಯ ನಿರ್ವಹಿಸುವಂತೆ ಮಾಡುತ್ತದೆ. ಇದು ಹೊಟ್ಟೆಯಲ್ಲಿರುವ ಹಾನಿಕಾರಕ ಬ್ಯಾಕ್ಟಿರಿಯಾಗಳನ್ನು ನಾಶ ಮಾಡುತ್ತದೆ.

ಈ ಸಮಸ್ಯೆಗಳನ್ನೂ ಹೋಗಲಾಡಿಸುತ್ತದೆ
ಕೆಲವರಿಗೆ ಹಲ್ಲಿನ ವಸಡಿನಲ್ಲಿ ರಕ್ತಸ್ರಾವ ಉಂಟಾಗುವುದು, ಇದನ್ನು ತಡೆಗಟ್ಟುವಲ್ಲಿಯೂ ಸಹಕಾರಿ. ಇನ್ನು ಮೈಯಲ್ಲಿ ದದ್ದು ಏಳುವುದು, ಸುಸ್ತು, ತಲೆಸುತ್ತು ಇವುಗಳಿಗೆಲ್ಲಾ ಆಮ್ಚೂರ್ ಪುಡಿ ಅತ್ಯುತ್ತಮವಾದ ಮನೆಮದ್ದಾಗಿದೆ. ಅಲ್ಲದೆ ಇದು ದೇಹದಲ್ಲಿ ಕೆಂಪು ರಕ್ತಕಣಗಳ ಉತ್ಪತ್ತಿಗೂ ಸಹಕಾರಿ.

ದೇಹಕ್ಕೆ ಶಕ್ತಿಯನ್ನು ತುಂಬುವುದು
ಮಧ್ಯಾಹ್ನ ಊಟವಾದ ಬಳಿಕ ನಿದ್ದೆ ಬರುವುದು, ಆಯಾಸ, ಆಲಸ್ಯ ಉಂಟಾದರೆ ಸ್ವಲ್ಪ ಮಾವಿನಕಾಯಿ ಪುಡಿಯನ್ನು ನೀರಿನಲ್ಲಿ ಬೆರೆಸಿ ಕುಡಿದು ನೋಡಿ, ಸುಸ್ತು ಮಾಯ ಲವಲವಿಕೆಯಿಂದ ಕೆಲಸ ಮಾಡುವಿರಿ.



Click it and Unblock the Notifications