Latest Updates
-
ಆರ್ಬಿಐ ಹೊಸ ಆಟೋ-ಪೇ ನಿಯಮ: ನಿಮ್ಮ OTT ಮತ್ತು SIP ಪಾವತಿಗಳು ಸ್ಥಗಿತಗೊಳ್ಳುವ ಮುನ್ನ ಎಚ್ಚೆತ್ತುಕೊಳ್ಳಿ! -
ಸುಡುವ ಬಿಸಿಲಲ್ಲೂ ಮನೆ ತಂಪಾಗಿರಬೇಕೆ? ಕಡಿಮೆ ಖರ್ಚಿನಲ್ಲಿ ಕೂಲರ್ ಇಲ್ಲದೆ ತಂಪಾಗಿಸಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಬಿಸಿಲಿನ ಅಲೆ: ಸುಡುವ ಬಿಸಿಲಿನಲ್ಲಿ ನಿಮ್ಮ ಆರೋಗ್ಯ ಕಾಪಾಡಿಕೊಳ್ಳಲು ಈ ಪಾನೀಯಗಳೇ ಮದ್ದು! -
ಬಿಸಿಲ ಧಗೆಗೆ ಕಂಗಾಲಾಗಿದ್ದೀರಾ? ಸ್ಟೈಲಿಶ್ ಆಗಿ ಕೂಲ್ ಆಗಿರಲು ಇಲ್ಲಿದೆ ವೈರಲ್ ಸಮ್ಮರ್ ಹ್ಯಾಕ್ಸ್! -
ಬಿಸಿಗಾಳಿಯ ಅಬ್ಬರ: ಫಿಟ್ನೆಸ್ ಕಾಪಾಡಿಕೊಳ್ಳಲು ನಿಮ್ಮ ವರ್ಕೌಟ್ ಸಮಯ ಬದಲಾಯಿಸುವುದು ಅನಿವಾರ್ಯವೇ? -
ಡೇಟಿಂಗ್ ಆ್ಯಪ್ಗಳಲ್ಲಿ ಪ್ರೀತಿಯ ಬಲೆ: ಎಐ ಡೀಪ್ಫೇಕ್ ವಂಚನೆಯಿಂದ ಪಾರಾಗುವುದು ಹೇಗೆ? -
ಬಿಸಿಲ ಬೇಗೆಯಿಂದ ತತ್ತರಿಸಿದ್ದೀರಾ? ಎಸಿ ಇಲ್ಲದೆಯೇ ನಿಮ್ಮ ಮನೆಯನ್ನು ತಂಪಾಗಿಡಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಅಶ್ವಗಂಧದ ಎಲೆಗಳ ಬಳಕೆ ನಿಷೇಧ: ನಿಮ್ಮ ನೆಚ್ಚಿನ ಹೆಲ್ತ್ ಸಪ್ಲಿಮೆಂಟ್ಸ್ ಮಾರುಕಟ್ಟೆಯಿಂದ ಮಾಯವಾಗುತ್ತಾ? -
ಬಿಸಿಗಾಳಿಯ ಅಬ್ಬರ: ಸುಡುವ ಬಿಸಿಲಿನಲ್ಲಿ ಆರೋಗ್ಯ ಮತ್ತು ಫಿಟ್ನೆಸ್ ಕಾಪಾಡಿಕೊಳ್ಳುವುದು ಹೇಗೆ? -
ದೆಹಲಿ ಬಿಸಿಲಿನಲ್ಲಿ ಮದುವೆ ಸಂಭ್ರಮ: ಹೀಟ್ವೇವ್ ನಡುವೆ ನಿಮ್ಮ ಮದುವೆ ಪ್ಲಾನ್ ಬದಲಾಯಿಸುವುದು ಹೇಗೆ?
ಮಾವಿನಕಾಯಿ ಸಾರಿಗೆ ಹಾಕಿದರೆ ಆರೋಗ್ಯಕ್ಕೆ 6 ಲಾಭ
ಮಾರ್ಚ್ ತಿಂಗಳಿನಿಂದ ಜೂನ್-ಜುಲೈಯವರಿಗೆ ಮಾವಿನಕಾಯಿ ಹಾಗೂ ಹಣ್ಣುಗಳದ್ದೇ ಕಾರುಬಾರು. ಈ ಸೀಸನಲ್ ಫುಡ್ ಈ ಸಮಯದಲ್ಲಿ ಅನೇಕ ಬಗೆಯ ಖಾದ್ಯಗಳನ್ನು, ಸ್ವೀಟ್, ಜಾಮ್ಗಳನ್ನು ಮಾಡಿ ಸವಿಯುತ್ತೇವೆ. ಏಕೆಂದರೆ ಅದು ಸಿಗುವಾಗ ಅವುಗಳಿಂದ ಬಗೆ-ಬಗೆಯ ತಿನಿಸು ಮಾಡಿ ಸವಿಯದಿದ್ದರೆ ನಂತರ ಆ ರುಚಿ ನೋಡಲು ಒಂದು ವರ್ಷ ಕಾಯಬೇಕಾಗುತ್ತದೆ.

ಈಗ ಮಾವಿನ ಹಣ್ಣು ಹೆಚ್ಚಾಗಿ ದೊರೆಯುತ್ತವೆ, ಜೊತೆಗೆ ಕಾಯಗಳು ಕೂಡ ಲಭ್ಯವಿದೆ. ಮಾವಿನಕಾಯಿ ಉಪ್ಪು ಹಾಕಿ ತಿನ್ನುವುದು ಒಂದು ಬಗೆಯ ರುಚಿಯಾದರೆ ಇವುಗಳನ್ನು ಹಾಕಿ ಮಾಡುವ ಸಾರು ಕೂಡ ಅಷ್ಟೇ ರುಚಿಕರವಾಗಿರುತ್ತದೆ. ಇನ್ನು ಕೆಲವರು ಮಿಡಿ ಮಾವಿನಕಾಯಿ ವರ್ಷದವರೆಗೆ ಸಂಗ್ರಹಿಸಿಟ್ಟು ಉಪ್ಪಿನಕಾಯಿ ಹಾಗೂ ಸಾರಿಗೆ ಬಳಸುತ್ತಾರೆ.
ಮಾವಿನಕಾಯಿಂದ ಮಾಡುವ ಸಾರು ಆರೋಗ್ಯಕ್ಕೂ ತುಂಬಾ ಒಳ್ಳೆಯದು. ಮಾವಿನಕಾಯಿ ಸಾರು ತಿಂದರೆ ಈ ಪ್ರಮುಖ ಪ್ರಯೋಜನಗಳನ್ನು ಪಡೆಯಬಹುದು ನೋಡಿ:

ಮೈ ಉಷ್ಣತೆ ಕಡಿಮೆ ಮಾಡುತ್ತದೆ, ದೇಹದಲ್ಲಿ ನೀರಿನಂಶ ಕಾಪಾಡುತ್ತದೆ
ಕೆಲವು ಕಡೆ ಜೂನ್ ಆದರೂ ಉರಿ ಬಿಸಿಲು ಹಾಗೇ ಇರುತ್ತದೆ. ಮಾವಿನಕಾಯಿ ಸಾರು ಮಾಡಿ ತಿನ್ನುವುದರಿಂದ ಮೈ ಉಷ್ಣತೆ ಕಡಿಮೆಯಾಗುವುದು ಅಲ್ಲದೆ ಇದು ದೇಹದಲ್ಲಿ ನೀರಿನಂಶ ಕಾಪಾಡುತ್ತದೆ.

ಹೊಟ್ಟೆ ಸಂಬಂಧಿ ಸಮಸ್ಯೆಗಳನ್ನು ಹೋಗಲಾಡಿಸುತ್ತದೆ
ಕೆಲವರಿಗೆ ಬೆಳಗ್ಗೆ ಎದ್ದಾಗ ತಲೆಸುತ್ತು, ಮಲಬದ್ಧತೆ, ಬೇಧಿ, ಅಜೀರ್ಣ ಈ ರೀತಿಯ ಸಮಸ್ಯೆ ಇರುತ್ತದೆ. ಈ ಸಮಸ್ಯೆ ಇರುವವರು ಮಾವಿನಕಾಯಿ ಸಾರು ಮಾಡಿ ತಿಂದರೆ ಒಳ್ಳೆಯದು. ಇನ್ನು ಹಸಿ ಮಾವಿನಕಾಯಿ ಹಾಗೆಯೂ ತಿನ್ನಬಹುದು.

ಹೃದಯದ ಆರೋಗ್ಯಕ್ಕೆ ಒಳ್ಳೆಯದು
ಈ ರುಚಿಕರವಾದ ಹಣ್ಣು ನಿಮ್ಮ ಹೃದಯದ ಆರೋಗ್ಯಕ್ಕೂ ಒಳ್ಳೆಯದು. ಇದರಲ್ಲಿ ನಿಯಾಸಿನ್ ಅಂಶವಿರುತ್ತದೆ ಇದು ಕೆಟ್ಟ ಕೊಲೆಸ್ಟ್ರಾಲ್ ನಿಯಂತ್ರಣದಲ್ಲಿಡುತ್ತದೆ ಹಾಗೂ ಹೃದಯ ಸಂಬಂಧಿ ಕಾಯಿಲೆ ಇರುವವರೂ ಇದನ್ನು ತಿನ್ನುವುದು ಒಳ್ಳೆಯದು.

ಮಾವಿನ ಕಾಯಿ ಪುಡಿ/ಆಮ್ಚೂರ್ ಪೌಡರ್
ಇನ್ನು ಮಾವಿನಕಾಯಿ ಒಣಗಿಸಿ ಪುಡಿ ಮಾಡಿ ಅಡುಗೆಗೆ ಬಳಸುತ್ತಾರೆ. ಇದು ಲಿವರ್ ಸಮಸ್ಯೆ ತಡೆಗಟ್ಟುವಲ್ಲಿ ತುಂಬಾ ಸಹಕಾರಿ. ಚಿಕ್ಕ ಕರುಳು ಹಾಗೂ ದೊಡ್ಡ ಕರುಳು ಸರಿಯಾದ ರೀತಿಯಲ್ಲಿ ಕಾರ್ಯ ನಿರ್ವಹಿಸುವಂತೆ ಮಾಡುತ್ತದೆ. ಇದು ಹೊಟ್ಟೆಯಲ್ಲಿರುವ ಹಾನಿಕಾರಕ ಬ್ಯಾಕ್ಟಿರಿಯಾಗಳನ್ನು ನಾಶ ಮಾಡುತ್ತದೆ.

ಈ ಸಮಸ್ಯೆಗಳನ್ನೂ ಹೋಗಲಾಡಿಸುತ್ತದೆ
ಕೆಲವರಿಗೆ ಹಲ್ಲಿನ ವಸಡಿನಲ್ಲಿ ರಕ್ತಸ್ರಾವ ಉಂಟಾಗುವುದು, ಇದನ್ನು ತಡೆಗಟ್ಟುವಲ್ಲಿಯೂ ಸಹಕಾರಿ. ಇನ್ನು ಮೈಯಲ್ಲಿ ದದ್ದು ಏಳುವುದು, ಸುಸ್ತು, ತಲೆಸುತ್ತು ಇವುಗಳಿಗೆಲ್ಲಾ ಆಮ್ಚೂರ್ ಪುಡಿ ಅತ್ಯುತ್ತಮವಾದ ಮನೆಮದ್ದಾಗಿದೆ. ಅಲ್ಲದೆ ಇದು ದೇಹದಲ್ಲಿ ಕೆಂಪು ರಕ್ತಕಣಗಳ ಉತ್ಪತ್ತಿಗೂ ಸಹಕಾರಿ.

ದೇಹಕ್ಕೆ ಶಕ್ತಿಯನ್ನು ತುಂಬುವುದು
ಮಧ್ಯಾಹ್ನ ಊಟವಾದ ಬಳಿಕ ನಿದ್ದೆ ಬರುವುದು, ಆಯಾಸ, ಆಲಸ್ಯ ಉಂಟಾದರೆ ಸ್ವಲ್ಪ ಮಾವಿನಕಾಯಿ ಪುಡಿಯನ್ನು ನೀರಿನಲ್ಲಿ ಬೆರೆಸಿ ಕುಡಿದು ನೋಡಿ, ಸುಸ್ತು ಮಾಯ ಲವಲವಿಕೆಯಿಂದ ಕೆಲಸ ಮಾಡುವಿರಿ.



Click it and Unblock the Notifications











