Latest Updates
-
ಮಳೆಯ ನಡುವೆ ಯುಜಿಸಿ ನೆಟ್ ಪರೀಕ್ಷೆ: ಸಂಗಾತಿಯ ಈ ಸಣ್ಣ ಬೆಂಬಲವೇ ಯಶಸ್ಸಿನ ಗುಟ್ಟು -
ಮಳೆಗಾಲದಲ್ಲಿ ಮನೆಯ ಪೀಠೋಪಕರಣ ಹಾಳಾಗುತ್ತಿದೆಯೇ? ಬೂಸು ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಮುಂಬೈ ಆರೆಂಜ್ ಅಲರ್ಟ್: ಮಳೆಯಲ್ಲಿ ಆಫೀಸ್ ಹೋಗುವವರೇ, ಈ 'ನೋ-ಕುಕ್' ಪ್ರೋಟೀನ್ ಮೀಲ್ಸ್ ಮಿಸ್ ಮಾಡ್ಬೇಡಿ! -
ಅಮೆಜಾನ್ ಪ್ರೈಮ್ ಡೇ ಸೇಲ್: ಕಡಿಮೆ ಬೆಲೆಗೆ ವಸ್ತುಗಳನ್ನು ಖರೀದಿಸಲು ಈ ಸ್ಮಾರ್ಟ್ ಟ್ರಿಕ್ಸ್ ಮಿಸ್ ಮಾಡ್ಬೇಡಿ! -
ಯೋಗದ ನಂತರ ಮೈಕೈ ನೋವು ಕಾಡುತ್ತಿದೆಯೇ? ಕಚೇರಿಯಲ್ಲಿ ಕೆಲಸ ಮಾಡುವಾಗ ಈ 12 ನಿಮಿಷದ ಟಿಪ್ಸ್ ಪಾಲಿಸಿ -
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ 2026: ಅಪ್ಪನ ಮುಖದಲ್ಲಿ ನಗು ಮೂಡಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಐಡಿಯಾಗಳು! -
10ನೇ ಅಂತರಾಷ್ಟ್ರೀಯ ಯೋಗ ದಿನ: ಮಳೆಯನ್ನೂ ಮೀರಿ ಕೋಲ್ಕತ್ತಾದಲ್ಲಿ ಯೋಗ ಸಂಭ್ರಮ, ಮನೆಯಲ್ಲೇ ಅಭ್ಯಾಸ ಮಾಡಲು ಇಲ್ಲಿದೆ ಸರಳ ಟಿಪ್ಸ್!
ಮಾವಿನಕಾಯಿ ಸಾರಿಗೆ ಹಾಕಿದರೆ ಆರೋಗ್ಯಕ್ಕೆ 6 ಲಾಭ
ಮಾರ್ಚ್ ತಿಂಗಳಿನಿಂದ ಜೂನ್-ಜುಲೈಯವರಿಗೆ ಮಾವಿನಕಾಯಿ ಹಾಗೂ ಹಣ್ಣುಗಳದ್ದೇ ಕಾರುಬಾರು. ಈ ಸೀಸನಲ್ ಫುಡ್ ಈ ಸಮಯದಲ್ಲಿ ಅನೇಕ ಬಗೆಯ ಖಾದ್ಯಗಳನ್ನು, ಸ್ವೀಟ್, ಜಾಮ್ಗಳನ್ನು ಮಾಡಿ ಸವಿಯುತ್ತೇವೆ. ಏಕೆಂದರೆ ಅದು ಸಿಗುವಾಗ ಅವುಗಳಿಂದ ಬಗೆ-ಬಗೆಯ ತಿನಿಸು ಮಾಡಿ ಸವಿಯದಿದ್ದರೆ ನಂತರ ಆ ರುಚಿ ನೋಡಲು ಒಂದು ವರ್ಷ ಕಾಯಬೇಕಾಗುತ್ತದೆ.

ಈಗ ಮಾವಿನ ಹಣ್ಣು ಹೆಚ್ಚಾಗಿ ದೊರೆಯುತ್ತವೆ, ಜೊತೆಗೆ ಕಾಯಗಳು ಕೂಡ ಲಭ್ಯವಿದೆ. ಮಾವಿನಕಾಯಿ ಉಪ್ಪು ಹಾಕಿ ತಿನ್ನುವುದು ಒಂದು ಬಗೆಯ ರುಚಿಯಾದರೆ ಇವುಗಳನ್ನು ಹಾಕಿ ಮಾಡುವ ಸಾರು ಕೂಡ ಅಷ್ಟೇ ರುಚಿಕರವಾಗಿರುತ್ತದೆ. ಇನ್ನು ಕೆಲವರು ಮಿಡಿ ಮಾವಿನಕಾಯಿ ವರ್ಷದವರೆಗೆ ಸಂಗ್ರಹಿಸಿಟ್ಟು ಉಪ್ಪಿನಕಾಯಿ ಹಾಗೂ ಸಾರಿಗೆ ಬಳಸುತ್ತಾರೆ.
ಮಾವಿನಕಾಯಿಂದ ಮಾಡುವ ಸಾರು ಆರೋಗ್ಯಕ್ಕೂ ತುಂಬಾ ಒಳ್ಳೆಯದು. ಮಾವಿನಕಾಯಿ ಸಾರು ತಿಂದರೆ ಈ ಪ್ರಮುಖ ಪ್ರಯೋಜನಗಳನ್ನು ಪಡೆಯಬಹುದು ನೋಡಿ:

ಮೈ ಉಷ್ಣತೆ ಕಡಿಮೆ ಮಾಡುತ್ತದೆ, ದೇಹದಲ್ಲಿ ನೀರಿನಂಶ ಕಾಪಾಡುತ್ತದೆ
ಕೆಲವು ಕಡೆ ಜೂನ್ ಆದರೂ ಉರಿ ಬಿಸಿಲು ಹಾಗೇ ಇರುತ್ತದೆ. ಮಾವಿನಕಾಯಿ ಸಾರು ಮಾಡಿ ತಿನ್ನುವುದರಿಂದ ಮೈ ಉಷ್ಣತೆ ಕಡಿಮೆಯಾಗುವುದು ಅಲ್ಲದೆ ಇದು ದೇಹದಲ್ಲಿ ನೀರಿನಂಶ ಕಾಪಾಡುತ್ತದೆ.

ಹೊಟ್ಟೆ ಸಂಬಂಧಿ ಸಮಸ್ಯೆಗಳನ್ನು ಹೋಗಲಾಡಿಸುತ್ತದೆ
ಕೆಲವರಿಗೆ ಬೆಳಗ್ಗೆ ಎದ್ದಾಗ ತಲೆಸುತ್ತು, ಮಲಬದ್ಧತೆ, ಬೇಧಿ, ಅಜೀರ್ಣ ಈ ರೀತಿಯ ಸಮಸ್ಯೆ ಇರುತ್ತದೆ. ಈ ಸಮಸ್ಯೆ ಇರುವವರು ಮಾವಿನಕಾಯಿ ಸಾರು ಮಾಡಿ ತಿಂದರೆ ಒಳ್ಳೆಯದು. ಇನ್ನು ಹಸಿ ಮಾವಿನಕಾಯಿ ಹಾಗೆಯೂ ತಿನ್ನಬಹುದು.

ಹೃದಯದ ಆರೋಗ್ಯಕ್ಕೆ ಒಳ್ಳೆಯದು
ಈ ರುಚಿಕರವಾದ ಹಣ್ಣು ನಿಮ್ಮ ಹೃದಯದ ಆರೋಗ್ಯಕ್ಕೂ ಒಳ್ಳೆಯದು. ಇದರಲ್ಲಿ ನಿಯಾಸಿನ್ ಅಂಶವಿರುತ್ತದೆ ಇದು ಕೆಟ್ಟ ಕೊಲೆಸ್ಟ್ರಾಲ್ ನಿಯಂತ್ರಣದಲ್ಲಿಡುತ್ತದೆ ಹಾಗೂ ಹೃದಯ ಸಂಬಂಧಿ ಕಾಯಿಲೆ ಇರುವವರೂ ಇದನ್ನು ತಿನ್ನುವುದು ಒಳ್ಳೆಯದು.

ಮಾವಿನ ಕಾಯಿ ಪುಡಿ/ಆಮ್ಚೂರ್ ಪೌಡರ್
ಇನ್ನು ಮಾವಿನಕಾಯಿ ಒಣಗಿಸಿ ಪುಡಿ ಮಾಡಿ ಅಡುಗೆಗೆ ಬಳಸುತ್ತಾರೆ. ಇದು ಲಿವರ್ ಸಮಸ್ಯೆ ತಡೆಗಟ್ಟುವಲ್ಲಿ ತುಂಬಾ ಸಹಕಾರಿ. ಚಿಕ್ಕ ಕರುಳು ಹಾಗೂ ದೊಡ್ಡ ಕರುಳು ಸರಿಯಾದ ರೀತಿಯಲ್ಲಿ ಕಾರ್ಯ ನಿರ್ವಹಿಸುವಂತೆ ಮಾಡುತ್ತದೆ. ಇದು ಹೊಟ್ಟೆಯಲ್ಲಿರುವ ಹಾನಿಕಾರಕ ಬ್ಯಾಕ್ಟಿರಿಯಾಗಳನ್ನು ನಾಶ ಮಾಡುತ್ತದೆ.

ಈ ಸಮಸ್ಯೆಗಳನ್ನೂ ಹೋಗಲಾಡಿಸುತ್ತದೆ
ಕೆಲವರಿಗೆ ಹಲ್ಲಿನ ವಸಡಿನಲ್ಲಿ ರಕ್ತಸ್ರಾವ ಉಂಟಾಗುವುದು, ಇದನ್ನು ತಡೆಗಟ್ಟುವಲ್ಲಿಯೂ ಸಹಕಾರಿ. ಇನ್ನು ಮೈಯಲ್ಲಿ ದದ್ದು ಏಳುವುದು, ಸುಸ್ತು, ತಲೆಸುತ್ತು ಇವುಗಳಿಗೆಲ್ಲಾ ಆಮ್ಚೂರ್ ಪುಡಿ ಅತ್ಯುತ್ತಮವಾದ ಮನೆಮದ್ದಾಗಿದೆ. ಅಲ್ಲದೆ ಇದು ದೇಹದಲ್ಲಿ ಕೆಂಪು ರಕ್ತಕಣಗಳ ಉತ್ಪತ್ತಿಗೂ ಸಹಕಾರಿ.

ದೇಹಕ್ಕೆ ಶಕ್ತಿಯನ್ನು ತುಂಬುವುದು
ಮಧ್ಯಾಹ್ನ ಊಟವಾದ ಬಳಿಕ ನಿದ್ದೆ ಬರುವುದು, ಆಯಾಸ, ಆಲಸ್ಯ ಉಂಟಾದರೆ ಸ್ವಲ್ಪ ಮಾವಿನಕಾಯಿ ಪುಡಿಯನ್ನು ನೀರಿನಲ್ಲಿ ಬೆರೆಸಿ ಕುಡಿದು ನೋಡಿ, ಸುಸ್ತು ಮಾಯ ಲವಲವಿಕೆಯಿಂದ ಕೆಲಸ ಮಾಡುವಿರಿ.



Click it and Unblock the Notifications