Latest Updates
-
ಪ್ರೈಡ್ ಮಂತ್ 2026: ಕ್ವೀರ್ ಜೋಡಿಗಳ ಭವಿಷ್ಯ ಭದ್ರಪಡಿಸಲು ಮತ್ತು ಕುಟುಂಬದ ಮನವೊಲಿಸಲು ಇಲ್ಲಿದೆ ವಿಶೇಷ ಮಾರ್ಗದರ್ಶಿ! -
ಮಳೆಗಾಲ ಶುರುವಾಗುವ ಮುನ್ನವೇ ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ: ದುಬಾರಿ ರಿಪೇರಿ ತಪ್ಪಿಸಲು ಇಲ್ಲಿವೆ ಸರಳ ಟಿಪ್ಸ್! -
ಬಿಸಿಲು-ಮಳೆಯ ಆಟದಲ್ಲಿ ಸುಸ್ತಾಗಿದ್ದೀರಾ? ಆರೋಗ್ಯ ಕಾಪಾಡಿಕೊಳ್ಳಲು ಈ ಸರಳ ಆಹಾರ ಕ್ರಮಗಳನ್ನು ಮಿಸ್ ಮಾಡಬೇಡಿ! -
ದಿಢೀರ್ ಮಳೆಗೆ ರೆಡಿಯಾಗಿದ್ದೀರಾ? ಸ್ಟೈಲಿಶ್ ಆಗಿ ಕಾಣಲು ಮತ್ತು ಮಳೆಯಿಂದ ಪಾರಾಗಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಹವಾಮಾನ ಬದಲಾಗಿದೆ, ನಿಮ್ಮ ವರ್ಕೌಟ್ ಪ್ಲಾನ್ ಬದಲಾಯಿಸಿದ್ದೀರಾ? ಇಲ್ಲದಿದ್ದರೆ ಈ ಎಚ್ಚರಿಕೆ ನಿಮಗಾಗಿ! -
ಮಳೆಗಾಲದಲ್ಲಿ ಮದುವೆ ನಿಶ್ಚಯವಾಗಿದೆಯೇ? ನಿಮ್ಮ ಮದುವೆ ಸಂಭ್ರಮ ಹಾಳಾಗದಂತೆ ತಡೆಯಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಮಳೆಗಾಲ ಶುರುವಾಗುವ ಮುನ್ನವೇ ನಿಮ್ಮ ಮನೆಯನ್ನು ಹೀಗೆ ಸಜ್ಜುಗೊಳಿಸಿ: ಸೋರಿಕೆ ಮತ್ತು ತೇವಾಂಶದಿಂದ ಮುಕ್ತಿ ಪಡೆಯಿರಿ! -
ಬಿಸಿಲಿನ ಬೇಗೆಗೆ ಸುಸ್ತಾಗಿದ್ದೀರಾ? ದೇಹ ತಂಪಾಗಿಡಲು ಈ ಸಾಂಪ್ರದಾಯಿಕ ಪಾನೀಯಗಳೇ ಮದ್ದು! -
ಬೆಂಗಳೂರಿನಲ್ಲಿ ಇವತ್ತು ಭಾರಿ ಮಳೆ: ಟ್ರಾಫಿಕ್ ಕಿರಿಕಿರಿ ತಪ್ಪಿಸಲು ಈ ಕೆಲಸಗಳನ್ನು ಮಿಸ್ ಮಾಡ್ಬೇಡಿ! -
ಬಿಸಿಲಿನಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಅಪಾಯ ಕಾದಿದೆ!
ವ್ಯಾಯಾಮವು ಹೃದಯ ರೋಗಿಯ ಜ್ಞಾಪಕ ಶಕ್ತಿ ಹೆಚ್ಚಿಸುತ್ತದೆಯಂತೆ
ವ್ಯಾಯಾಮ ಅನ್ನುವುದು ನಮ್ಮ ದೇಹದ ಆರೋಗ್ಯ ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇದರಿಂದ ನಿಯಮಿತವಾಗಿ ವ್ಯಾಯಾಮ ಮಾಡಬೇಕು. ವ್ಯಾಯಾಮದಿಂದ ದೇಹದ ತೂಕವನ್ನು ಸಮತೋಲನದಲ್ಲಿ ಇಡುವುದು ಮಾತ್ರವಲ್ಲದೆ, ಹಲವಾರು ರೀತಿಯ ಕಾಯಿಲೆಗಳನ್ನು ಇದು ತಡೆಯುವುದು. ಇತ್ತೀಚಿನ ವರದಿಯೊಂದರ ಪ್ರಕಾರ ವ್ಯಾಯಾಮವು ಹೃದಯ ಕಾಯಿಲೆ ಇರುವವರಿಗೆ ತುಂಬಾ ಪರಿಣಾಮಕಾರಿ.ಹೃದಯದ ಕಾಯಿಲೆ ಇರುವಂತವರಲ್ಲಿ ಹೆಚ್ಚಾಗಿ ಅರಿವಿನ ಕೊರತೆಯು ಕಾಡುವುದು.
ಅಧ್ಯಯನದ ಪ್ರಕಾರ ನಿಯಮಿತವಾಗಿ ವ್ಯಾಯಾಮ ಮಾಡುವಂತಹ ರೋಗಿಗಳು ಒಳ್ಳೆಯ ಆರೋಗ್ಯ ಕಾಪಾಡಿಕೊಳ್ಳಬಹುದು ಮತ್ತು ಅರಿವಿನ ದುರ್ಬಲತೆ ಸಮಸ್ಯೆಯು ಕೂಡ ತಗ್ಗುವುದು. ವ್ಯಕ್ತಿಯು ಆರೋಗ್ಯ ಹಾಗೂ ಫಿಟ್ ಇದ್ದಷ್ಟು ಆತನ ಜ್ಞಾಪಕ ಶಕ್ತಿಯು ಉತ್ತಮವಾಗಿರುವುದು.ಇಟಲಿಯ ಮಿಲಾನ್ ನಲ್ಲಿ ನಡೆದ ಯುರೋಪಿಯನ್ ಸೊಸೈಟಿ ಆಫ್ ಕಾರ್ಟಿಯಾಲಜಿ ಸೈನ್ ಟಿಫಿಕ್ ಕಾಂಗ್ರೆಸ್ 2019ರ ಯುರೋ ಹಾರ್ಟ್ ಕೇರ್ ನಲ್ಲಿ ಈ ವರದಿಯನ್ನು ಪ್ರಸ್ತುತಪಡಿಸಲಾಗಿದೆ.

ಆರು ರಾಷ್ಟ್ರಗಳಿಂದ ಹೃದಯಾಘತಕ್ಕೆ ಒಳಗಾಗಿದ್ದ ಸುಮಾರು 600 ಮಂದಿ ಜನರನ್ನು ಈ ಅಧ್ಯಯನಕ್ಕೆ ಒಳಪಡಿಸಲಾಯಿತು. ಈ ಎಲ್ಲಾ ರೋಗಿಗಳು 67-71ರ ಹರೆಯದವರಾಗಿದ್ದರು. ಅರಿವಿನ ಕಾರ್ಯವನ್ನು ಪತ್ತೆ ಮಾಡಲು ಮಾಂಟ್ರಿಯಲ್ ಕಾಗ್ನಿಟಿವ್ ಅಸೆಸ್ಮೆಂಟ್ ನ್ನು ಬಳಸಲಾಗಿದೆ. ಆರು ನಿಮಿಷಗಳ ನಡಿಗೆಯಿಂದ ರೋಗಿಯ ವ್ಯಾಯಾಮದ ಸಾಮರ್ಥ್ಯವನ್ನು ತಿಳಿಯಲಾಗುತ್ತಿತ್ತು.
ಈ ಪರೀಕ್ಷೆಯನ್ನು ಪೂರ್ಣಗೊಳಿಸಿದ ಬಳಿಕ ಉತ್ತಮ ಫಿಟ್ನೆಸ್ ಹೊಂದಿರುವಂತಹ ಹೃದಯ ರೋಗಿಗಳಲ್ಲಿ ಅರಿವಿನ ದುರ್ಬಲತೆಯು ಗಣನೀಯ ಪ್ರಮಾಣದಲ್ಲಿ ಕಡಿಮೆ ಇದೆ ಎಂದು ತಿಳಿದುಬಂತು. 2/3ಭಾಗದಷ್ಟು ಹೃದಯ ರೋಗಿಗಳಲ್ಲಿ ಈಗಾಗಲೇ ಅರಿವಿನ ದುರ್ಬಲತೆ ಸಮಸ್ಯೆಯು ಕಂಡುಬಂದಿದೆ.
ಹೃದಯ ರೋಗಿಗಳಿಗೆ ಇಲ್ಲಿ ನೀಡುವಂತಹ ಸಲಹೆ ಎಂದರೆ ಸರಿಯಾಗಿ ವ್ಯಾಯಮ ಮಾಡಿ ಎಂದು ಲೇಖಕ ಹಾಗೂ ಇಟಲಿಯ ಯೂನಿವರ್ಸಿಟಿ ಆಫ್ ರೋಮ್ ಟೊರ್ ವೆರ್ಗಟಾದ ಇರ್ಕೊಲೆ ವೆಲೋನೆ ತಿಳಿಸಿದ್ದಾರೆ. ಹೃದಯ ರೋಗಿಗಳು ವ್ಯಾಯಾಮ ಮಾಡಬಾರದು ಎನ್ನುವಂತಹ ಒಂದು ತಪ್ಪು ತಿಳುವಳಿಕೆ ಇದೆ. ಆದರೆ ಅದು ಖಂಡಿತವಾಗಿಯೂ ತಪ್ಪು ಎಂದು ವೆಲೋನೆ ತಿಳಿಸಿದರು.
ನೀವು ಪ್ರತಿನಿತ್ಯವು ಮಾಡುವಂತಹ ಚಟುವಟಿಕೆಯನ್ನು ಆನಂದಿಸಿ ಮತ್ತು ಇದನ್ನು ನಿಯಮಿತವಾಗಿ ಮಾಡಿ. ಇದು ನಡೆಯುವುದು, ಈಜುವುದು ಅಥವಾ ಬೇರೆ ಯಾವುದೇ ರೀತಿಯ ಚಟುವಟಿಕೆ ಆಗಿರಬಹುದು. ಇದರಿಂದಾಗಿ ನಿಮ್ಮ ಆರೋಗ್ಯವು ತುಂಬಾ ಸುಧಾರಣೆ ಆಗುವುದು ಮತ್ತು ನೆನಪಿನ ಶಕ್ತಿ ಕೂಡ. ಇದರಿಂದಾಗಿ ನೀವು ಇನ್ನಷ್ಟು ಉತ್ತಮ ಭಾವನೆ ಪಡೆಯಬಹುದು ಎಂದು ವೆಲೋನೆ ಹೇಳಿದರು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
