Just In
Don't Miss
- News ರಾಜ್ಯದ ವಿವಿಧೆಡೆ ಮಳೆರಾಯನ ಆರ್ಭಟ; ಕರ್ನಾಟಕದ ಪ್ರಮುಖ ಡ್ಯಾಂಗಳ ನೀರಿನ ಮಟ್ಟ ಎಷ್ಟು ? ಇಲ್ಲಿದೆ ಸಂಪೂರ್ಣ ವಿವರ
- Sports 'ಟಿ20 ವಿಶ್ವಕಪ್ಗೆ ಈತನನ್ನು ಆಯ್ಕೆ ಮಾಡಿ'; ಅಜಿತ್ ಅಗರ್ಕರ್ಗೆ ಬಂತು ದೊಡ್ಡ ಮನವಿ!
- Finance ಡಾ. ರಾಜ್ಕುಮಾರ್ ಜನ್ಮದಿನದಂದು ಹೊಸ ಉದ್ಯಮ ಆರಂಭಿಸಿದ ಅಶ್ವಿನಿ ಪುನೀತ್ ರಾಜ್ಕುಮಾರ್
- Movies ನೀಲಿ ಪ್ರಪಂಚದ ಕರಾಳ ಸತ್ಯವನ್ನ ಹೇಳಿದ ಲಾನಾ ರೋಡ್ಸ್
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಆಯುರ್ವೇದದ ಪ್ರಕಾರ ಮುಂಜಾನೆಯ ದಿನಚರಿ ಹೀಗಿರಬೇಕು : ಇದನ್ನೇ ತಪ್ಪದೇ ಪಾಲಿಸಿ
ಮುಂಗೋಳಿ ಸಮಯ ಗೋಧೂಳಿ ಸಮಯ ಇವೆಲ್ಲವೂ ಇಂದಿನ ದಿನಗಳಲ್ಲಿ ನಿರರ್ಥಕವಾಗಿದ್ದು ಹೆಚ್ಚಿನ ಜನರ ಮುಂಜಾನೆಯ ದಿನಚರಿ ತಪ್ಪಾಗಿ, ಸೋಮಾರಿತನದಿಂದ ಕೂಡಿದೆ. ಹಿಂದಿನ ದಿನಗಳಲ್ಲಿ ಕೆಲವು ದಶಕಗಳ ಹಿಂದೆ ನಮ್ಮ ಮುಂಜಾನೆಯ ದಿನಚರಿ ನಿಧಾನಗತಿಯಲ್ಲಿ ಸಾಗುತ್ತಾ ಮುಂಜಾನೆಯ ನಡಿಗೆ, ಕಾಫಿ ಹೀರುತ್ತಾ ವೃತ್ತಪತ್ರಿಕೆ ಓದುವಿಕೆ ಮೊದಲಾದವುಗಳಿಂದ ಕೂಡಿತ್ತು. ಇಂದಿನ ದಿನಗಳಲ್ಲಿ ಮುಂಜಾನೆಯ ಸಮಯ ಒಂದು ಬಗೆಯ ಲಗುಬಗೆ ಮತ್ತು ಉದ್ವೇಗದಿಂದ ಕೂಡಿದ್ದು ಎಲ್ಲರಿಗೂ ತಮ್ಮ ತಮ್ಮ ಗಮ್ಯಸ್ಥಾನಗಳಿಗೆ ಸಮಯಕ್ಕೂ ಮೊದಲೇ ತಲುಪುವ ಆತಂಕವಿರುತ್ತದೆ.
ಬೆಳಿಗ್ಗೆ ನಿದ್ದೆಯಿಂದ ಎದ್ದ ಕ್ಷಣದಿಂದ ತೊಡಗಿ ರಾತ್ರಿ ಮಲಗುವವರೆಗೂ ನಾವೆಲ್ಲಾ ನಮ್ಮ ಕೆಲಸಗಳನ್ನು ಸಮಯಮಿತಿಯೊಳಗೆ ನಿರ್ವಹಿಸುವ ಧಾವಂತದಲ್ಲಿರುತ್ತೇವೆ. ಕೆಲಸದ ಸ್ಥಳಕ್ಕೆ ಸಮಯಕ್ಕೆ ಸರಿಯಾಗಿ ಆಗಮಿಸುವುದು, ವಹಿಸಿದ ಕೆಲಸವನ್ನು ಗಡುವು ಮೀರುವ ಮುನ್ನ ಮುಗಿಸುವುದು, ಮನೆಗೆ ಹಿಂದಿರುಗಲು ಮೆಟ್ರೋ ಅಥವಾ ಬಸ್, ಕ್ಯಾಬ್ ಮೊದಲಾದವುಗಳ ಹಿಂದೆ ಓಡುವುದು ಹಾಗೂ ಇವೆಲ್ಲದರ ನಡುವೆ ಸಾಮಾಜಿಕ ಜಾಲತಾಣದಲ್ಲಿ ಆಗುಹೋಗುವಿಕೆಗಳ ಬಗ್ಗೆ ಅಂತಿಮ ಕ್ಷಣದವರೆಗಿನ ಮಾಹಿತಿಯನ್ನು ಪರಿಶೀಲಿಸುವುದು ಇತ್ಯಾದಿ. ಈ ವ್ಯಸ್ತ ದಿನಚರಿಯಿಂದಾಗಿ ನಮಗಾಗಿ ಎನ್ನುವ ಸಮಯವೇ ಇಲ್ಲವಾಗಿ ಹೋಗಿದೆ...
ದಿಜಿಟಲ್ ಚಿತ್ತವಿಕ್ಷೇಪ
ಇಂದು ಡಿಜಿಟಲ್ ಮಾಧ್ಯಮದ ಮೂಲಕ ಆಗಿರುವ ಕ್ರಾಂತಿ ಯಿಂದಾಗಿ ಜಗತ್ತಿನ ಆಗುಹೋಗು ಹಾಗೂ ಹಲವಾರು ಕಾರ್ಯಗಳು ಬೆರಳತುದಿಯಲ್ಲಿ ಸ್ಪರ್ಶಮಾತ್ರದಿಂದ ನಡೆಸುವಷ್ಟು ಸುಲಭವಾಗಿ ಬಿಟ್ಟಿವೆ. ಈ ಮಾಧ್ಯಮಗಳು ನಮ್ಮ ದಿನದ ಅವಧಿಯ ಬಹುತೇಕ ಸಮಯವನ್ನು ಕಬಳಿಸುತ್ತವೆ ಹಾಗೂ ಎಲ್ಲಕ್ಕೂ ಮೊದಲು ತನಗೆ ತಿಳಿಯಬೇಕು, ಇತರರಿಗೆ ತಿಳಿಸಬೇಕು ಎಂಬ ಹಪಾಹಪಿ ಇಡಿಯ ದಿನ ಮನಸ್ಸಿನಲ್ಲಿ ಕೊರೆಯುತ್ತಿರುತ್ತದೆ ಹಾಗೂ ಇದಿರಿಂದಾಗಿ ಬೆಳಗ್ಗಿನ ಹೊತ್ತು ಮಾನಸಿಕ ಶಾಂತಿ ಹಾಗೂ ಆಂತರ್ಮುಖಿ ಯಾಗಲು ಬಳಸಬೇಕೆಂದೇ ಮರೆತುಬಿಡುತ್ತೇವೆ. ಬೆಳಗ್ಗಿನ ದಿನಚರಿ ಹೇಗಿರಬೇಕು ಎಂಬುದನ್ನು ಆಯುರ್ವೇದ ವಿವರಿಸಿದ್ದು ಈ ದಿನಚರಿ ಸರ್ವಕಾಲಕ್ಕೂ ಸಲ್ಲುತ್ತದೆ. ಈ ಕ್ರಮವನ್ನು ಸರಿಯಾಗಿ ಪಾಲಿಸುವ ಮೂಲಕ ನಿಮಗೆ ಮಾನಸಿಕ ಶಾಂತಿ ಲಭಿಸುವುದು ಮಾತ್ರವಲ್ಲ, ನಿತ್ಯವೂ ಬೇಗನೇ ಏಳುವುದನ್ನು ಅಭ್ಯಾಸ ಮಾಡಿಕೊಳ್ಳಲೂ ಸಾಧ್ಯವಾಗುತ್ತದೆ.
ಮುಂಜಾನೆ ಬೇಗನೇ ಏಳುವುದು
ಆಯುರ್ವೇದದ ಪ್ರಕಾರ ಮುಂಜಾನೆ ಏಳಲು ಸೂಕ್ತವಾದ ಸಮಯವೆಂದರೆ ಬ್ರಾಹ್ಮ ಮುಹೂರ್ತವಾಗಿದೆ. ಅಂದರೆ ಸೂರ್ಯೋದ ಯಕ್ಕೂ ಸರಿಯಾಗಿ ಎರಡು ಘಂಟೆ ಮುನ್ನ. ಅಂದರೆ ಸೂರ್ಯನ ಮೊದಲ ಕಿರಣಗಳನ್ನು ಪಡೆಯಲು ದೇಹವನ್ನು ಸಿದ್ಧ ಮಾಡಿಕೊಳ್ಳಲು ತಗಲುವು ಸೂಕ್ತವಾದ ಅವಧಿಯಾಗಿದೆ. ಈ ಅವಧಿಯಲ್ಲಿ ದೇಹವನ್ನು ಸರಿಯಾದ ಕ್ರಮದಲ್ಲಿ ಸ್ವಚ್ಛ ಗೊಳಿಸುವುದು ಹಾಗೂ ಅಗತ್ಯ ಪೋಷಕಾಂಶಗಳನ್ನು ಪಡೆಯಲು ಸಾಧ್ಯವಾಗುತ್ತದೆ. ಸಾಮಾನ್ಯವಾಗಿ ಈ ಸಮಯದಲ್ಲಿ ಏಳುವುದು ಹೆಚ್ಚಿನವರಿಗೆ ಸುಲಭಸಾಧ್ಯವಲ್ಲ. ಆದರೆ ಸತತವಾಗಿ ಕೆಲವು ದಿನಗಳವರೆಗೆ ರೂಢಿಸಿಕೊಂಡರೆ ಮುಂದೆ ಅಭ್ಯಾಸವಾಗುತ್ತದೆ.
ಮುಖಕ್ಕೆ ನೀರನ್ನು ಸಿಂಪಡಿಸಿಕೊಳ್ಳುವುದು
ಬೆಳಿಗ್ಗೆದ್ದ ತಕ್ಷ್ಣಣ ಮೊತ್ತ ಮೊದಲಾಗಿ ಮಾಡಬೇಕಾದ ಕೆಲಸವೆಂದರೆ ಕೊಂಚ ತಣ್ಣೀರನ್ನು ಮುಖಕ್ಕೆ ಸಿಂಪಡಿಸಿ ಕೊಳ್ಳುವುದು. ವಿಶೇಷವಾಗಿ ಕಣ್ಣುಗಳಿಗೆ ಸಿಂಪಡಿಸಿಕೊಳ್ಳುವುದು ಕಣ್ಣುಗಳಿಗೆ ಅತ್ಯುತ್ತಮವಾದ ವ್ಯಾಯಾಮವಾಗಿದೆ. ಆದರೆ ಈ ನೀರು ಸಾದಾ ತಾಪಮಾನದಲ್ಲಿರಬೇಕು. ತಣಿಸಿದ ನೀರೂ ಆಗಬಾರದು, ಬಿಸಿಮಾಡಿದ ನೀರೂ ಆಗಬಾರದು.
ಶೌಚಕ್ರಿಯೆ
ಬಳಿಕ ಶೌಚಕ್ರಿಯೆಯಲ್ಲಿ ಅಗತ್ಯವಿದ್ದಷ್ಟು ಸಮಯ ವ್ಯಯಿಸಿ ದೇಹದಿಂದ ಕಲ್ಮಶಗಳನ್ನು ಹೊರಹಾಕಬೇಕು. ರಾತ್ರಿಯ ನಿದ್ದೆಯ ಸಮಯದಲ್ಲಿ ದೇಹ ಅತಿ ಹೆಚ್ಚಿನ ಪ್ರಮಾಣದ ಕಲ್ಮಶಗಳನ್ನು ಸಂಗ್ರಹಿಸಿಟ್ಟುಕೊಂಡಿದ್ದು ಬೆಳಗ್ಗಿನ ಹೊತ್ತು ಈ ಕಲ್ಮಶಗಳನ್ನು ಪೂರ್ಣವಾಗಿ ವಿಸರ್ಜಿಸುವುದು ಅಗತ್ಯವಾಗಿದೆ. ಆಯುರ್ವೇದ ನಿತ್ಯವೂ ಮುಂಜಾನೆ ಒಂದು ಬಾರಿ ಶೌಚಕ್ರಿಯೆ ನಿರ್ವಹಿ ಸುವುದನ್ನು ಶಿಫಾರಸ್ಸು ಮಾಡುತ್ತದೆ. ಒಂದು ವೇಳೆ ಶೌಚಕ್ರಿಯೆಗೆ ಅವಸರವಾಗದೇ ಇದ್ದರೆ ಇದು ಮತ್ತೆ ನಿದ್ದೆಗೆ ಶರಣಾಗುವಂತೆ ಪ್ರೇರೇಪಿಸಬಹುದು.ಸೂಚನೆ: ಒಂದು ವೇಳೆ ಮುಂಜಾನೆ ಸುಲಭವಾಗಿ ಶೌಚಕ್ರಿಯೆ ಆಗದೇ ಇದ್ದರೆ ಇದನ್ನು ಸುಲಭ ಗೊಳಿಸಲು ತ್ರಿಫಲವನ್ನು ಸೇವಿಸಬಹುದು. ಮುಂಜಾನೆಯ ಶೌಚಕ್ರಿಯೆಯ ಮೂಲಕ ದೇಹದಿಂದ ಕಲ್ಮಶಗಳು ದೂರಾಗುವುದು ಮಾತ್ರವಲ್ಲ ದೇಹ ಚೈತನ್ಯಭರಿತ, ನಿರಾಳತೆ ಹಾಗೂ ಆರೋಗ್ಯದಿಂದ ತುಂಬಿರುತ್ತದೆ.
Most Read:ನಿಮಗೆ ಗೊತ್ತೇ? ಇಂತಹ 9 ಆಹಾರಗಳು ಸ್ಮರಣಶಕ್ತಿಯನ್ನೇ ಕಡಿಮೆ ಮಾಡುತ್ತದೆಯಂತೆ!!
ಸರಿಯಾದ ಕ್ರಮದಲ್ಲಿ ಹಲ್ಲುಜ್ಜಿ
ಹಲ್ಲುಗಳನ್ನು ಸರಿಯಾದ ಕ್ರಮದಲ್ಲಿ ಉಜ್ಜುವಂತೆ ಹಾಗೂ ನಾಲಿಗೆಯನ್ನು ಕೆರೆದು ಸ್ವಚ್ಛಗೊಳಿಸುವಂತೆ ಆಯುರ್ವೇದ ಸಲಹೆ ಮಾಡುತ್ತದೆ. ನಿಮ್ಮ ಬಾಯಿಯ ಆರೋಗ್ಯ ಉತ್ತಮವಾಗಿರ ಬೇಕೆಂದರೆ ನಿಮ್ಮ ಹಲ್ಲುಜ್ಜುವ ಬ್ರಶ್ ನಲ್ಲಿರುವ ಕೂದಲುಗಳು ಮೃದುವಾಗಿದ್ದು ಸಾಕಷ್ಟು ಪ್ರಮಾಣದಲ್ಲಿರುವುದು ಅಗತ್ಯವಾಗಿದೆ. ಸಾಮಾನ್ಯವಾಗಿ ಹಲ್ಲುಜ್ಜುವ ಪೇಸ್ಟ್ ಸಿಹಿಯಾಗಿರಬೇಕೆಂದು ನಾವು ಅಪೇಕ್ಷಿಸುತ್ತೇವೆ. ಆದರೆ ಆಯುರ್ವೇದದ ಪ್ರಕಾರ ಇದು ಕಹಿಯಾಗಿದ್ದು ಕೊಂಚವೇ ಸಿಹಿ ಇರಬೇಕೇ ಹೊರತು ಪೂರ್ಣವಾಗಿ ಸಿಹಿಯಾಗಿರಬಾರದು.
ಬಾಯಿ ಗಳಗಳಿಸುವಿಕೆ
ಸಾಮಾನ್ಯವಾಗಿ ನಮಗೆ ಕೆಮ್ಮು ಬಂದಾಗಲೇ ನಾವು ಉಪ್ಪುನೀರಿನಿಂದ ಗಳಗಳಿಸುತ್ತೇವೆ. ಆದರೆ ಆಯುರ್ವೇದ ಈ ಗಳಗಳಿಸುವಿಕೆಯನ್ನು ನಿತ್ಯದ ಅಭ್ಯಾಸವಾಗಿಸುವಂತೆ ಸೂಚಿಸುತ್ತದೆ. ಈ ನೀರಿನಲ್ಲಿ ಕೊಂಚ ಉಪ್ಪನ್ನು ಬೆರೆಸಿ ಗಳಗಳಿಸುವ ಮೂಲಕ ಬಾಯಿಯ ಒಳಗಿನ ಮೃದು ಭಾಗಗಳು ಹಾಗೂ ಒಸಡುಗಳು ಸಹಾ ಸ್ವಚ್ಛಗೊಳ್ಳುತ್ತವೆ.
ಎಣ್ಣೆ ಹಚ್ಚಿಕೊಳ್ಳುವುದು
ಮುಂದಿನ ಹಂತವೆಂದರೆ ಎಣ್ಣೆ ಹಚ್ಚಿಕೊಳ್ಳುವುದು ಅಥವಾ ಅಭ್ಯಂಗ ಮಾಡಿಕೊಳ್ಳುವುದು. ಕೊಂಚ ಬಿಸಿಯಾಗಿರುವ ಎಣ್ಣೆಯನ್ನು ಸ್ವತಃ ಮೈ ಕೈಗೆ ಹಚ್ಚಿಕೊಳ್ಳುವ ಮೂಲಕ ಯಾವುದೇ ತೇವಕಾರಕ ನೀಡದ ಆರೈಕೆಯನ್ನು ಪಡೆಯಬಹುದು. ಒಂದು ವೇಳೆ ನಿಮಗೆ ಸ್ವತಃ ಮಸಾಜ್ ಮಾಡಿಕೊಳ್ಳುವಷ್ಟು ಸಮಯವಿಲ್ಲದೇ ಇದ್ದರೆ ಚಳಿಗಾಲದಲ್ಲಿ ವಾರದಲ್ಲಿ ಮೂರು ಬಾರಿ ಹಾಗೂ ಬೇಸಿಗೆಯಲ್ಲಿ ವಾರಕ್ಕೆರಡು ಬಾರಿಯಾದರೂ ಅಭ್ಯಂಗ ಮಾಡಿಕೊಳ್ಳಬೇಕು. ನಿಮ್ಮ ದೇಹದ ಎಲ್ಲಾ ಭಾಗಗಳನ್ನೂ ಸರಿಯಾಗಿ ಮಸಾಜ್ ಮಾಡಿಕೊಳ್ಳುವುದು ಅಗತ್ಯ. ಒಂದು ವೇಳೆ ನಿಮಗೆ ಸಮಯವಿಲ್ಲದಿದ್ದರೆ ಈ ಐದು ಅಂಗಗಳಿಗೆ ಮಾತ್ರ ತಪ್ಪದೇ ಮಸಾಜ್ ಮಾಡಬೇಕು ಅವೆಂದರೆ ಹೊಕ್ಕಳು, ಪಾದಗಳ ಅಡಿಭಾಗ, ತಲೆ, ಕಿವಿ, ಹಸ್ತಗಳು ಮತ್ತು ಮೊಣಕೈಗಳು. ಅಭ್ಯಂಗವನ್ನು ಸ್ನಾನಕ್ಕೂ ಮುನ್ನ ನಿರ್ವಹಿಸಿಅಬೇಕು ಹಾಗೂ ಮಸಾಜ್ ಗಾಗಿ ನಿಮಗೆ ಸೂಕ್ತವೆನಿಸಿದ ಯಾವುದೇ ಎಣ್ಣೆಯನ್ನು ಆಯ್ದು ಕೊಳ್ಳಬಹುದು. ಆಲಿವ್ ಎಣ್ಣೆ, ಕೊಬ್ಬರಿ ಎಣ್ಣೆ, ಸಾಸಿವೆ ಎಣ್ಣೆ ಹಾಗೂ ಎಳ್ಳೆಣ್ಣೆಗಳು ಅಭ್ಯಂಗಕ್ಕೆ ಸೂಕ್ತವಾದ ಎಣ್ಣೆಗಳಾಗಿವೆ.
ಲಘು ವ್ಯಾಯಾಮ
ದಿನದ ಪ್ರಾರಂಭವನ್ನು ಲಘು ವ್ಯಾಯಾಮ ಹಾಗೂ ಆಸನಗಳ ಮೂಲಕ ಪ್ರಾರಂಭಿಸುವಂತೆ ಆಯುರ್ವೇದ ಸೂಚಿಸುತ್ತದೆ. ಇವು ದೇಹದಲ್ಲಿ ರಕ್ತಪರಿಚಲನೆ ಹೆಚ್ಚಿಸಲು ಹಾಗೂ ದೇಹದ ಬಳುಕುವಿಕೆ ಸುಲಭವಾಗಲು ನೆರವಾಗುತ್ತವೆ. ಈ ವ್ಯಾಯಾಮವನ್ನು ಸರಳ ನಡಿಗೆ, ಹೆಚ್ಚಿನ ಶ್ರಮವಿಲ್ಲದ ವ್ಯಾಯಾಮ ಅಥವಾ ಯೋಗಾಸನಗಳನ್ನು ನಿರ್ವಹಿಸುವ ಮೂಲಕವೂ ನಿರ್ವಹಿಸ ಬಹುದು. ಆದರೆ ಯಾವುದೇ ವ್ಯಾಯಾಮ ನಿಮ್ಮ ಸಾಮರ್ಥ್ಯದ ಕೇವಲ ಅರ್ಧದಷ್ಟು ಮಾತ್ರವೇ ತ್ರಾಣವನ್ನು ಪಡೆಯುವಂತಿರ ಬೇಕು. ನಿಮಗೆ ಆಯಾಸವೆನಿಸುವ ಅಥವಾ ನಂತರ ತೀರಾ ಬಳಲಿಕೆಯುಂಟುಮಾಡುವಂತಹ ಯಾವುದೇ ಕಷ್ಟಕರ ವ್ಯಾಯಾಮವನ್ನು ಮಾಡುವುದು ಬೇಡ. ಇದು ಮುಂಜಾನೆಯ ವ್ಯಾಯಾಮಯದ ಮೂಲ ಉದ್ದೇಶವನ್ನೇ ಹಾಳುಮಾಡಬಹುದು.
Most Read:ವ್ಯಾಯಾಮವು ಹೃದಯ ರೋಗಿಯ ಜ್ಞಾಪಕ ಶಕ್ತಿ ಹೆಚ್ಚಿಸುತ್ತದೆಯಂತೆ
ನಿತ್ಯದ ದಿನಚರಿ ಅಳವಡಿಸಿಕೊಳ್ಳಲು ಸಾವಧಾನ ಇರಲಿ
ಯಾವುದೇ ದಿನಚರಿಯನ್ನು ಒಮ್ಮೆಲೇ ಅಳವಡಿಸಿಕೊಳ್ಳಲು ಸಾಧ್ಯವಿಲ್ಲ. ಅದರಲ್ಲೂ ಮುಂಜಾನೆಯ ದಿನಚರಿ ಸವಿನಿದ್ದೆಯ ತ್ಯಾಗವನ್ನು ಬಯಸುವುದರಿಂದ ಹೆಚ್ಚಿನವರಿಗೆ ಇದು ಇಷ್ಟ ವಾಗುವುದೇ ಇಲ್ಲ. ಆದರೆ ಆರೋಗ್ಯದ ದೃಷ್ಟಿಯಿಂದ ಇದು ಅಗತ್ಯವಾಗಿದ್ದು ನಿಧಾನವಾಗಿ ಈ ದಿನಚರಿಯ ಹಂತಗಳನ್ನು ಒಂದೊಂದಾಗಿ ಅಳವಡಿಸಿಕೊಳ್ಳುತ್ತಾ ಸಾಗಬೇಕು. ಕೆಲವೇ ದಿನಗಳಲ್ಲಿ ನೀವು ಹೆಚ್ಚಿನ ಚೈತನ್ಯದಿಂದ ಕೂಡಿರುವುದನ್ನು ಗಮನಿಸುತ್ತೀರಿ ಹಾಗೂ ನಂತರದ ದಿನಗಳಲ್ಲಿ ಮುಂಜಾನೆಯ ದಿನಚರಿಯನ್ನು ಒಂದು ದಿನವೂ ತಪ್ಪಿಸಿ ಕೊಳ್ಳಲಾಗದಷ್ಟು ಇಷ್ಟಪಡುತ್ತೀರಿ.