Latest Updates
-
ಆರ್ಬಿಐ ಹೊಸ ಆಟೋ-ಪೇ ನಿಯಮ: ನಿಮ್ಮ OTT ಮತ್ತು SIP ಪಾವತಿಗಳು ಸ್ಥಗಿತಗೊಳ್ಳುವ ಮುನ್ನ ಎಚ್ಚೆತ್ತುಕೊಳ್ಳಿ! -
ಸುಡುವ ಬಿಸಿಲಲ್ಲೂ ಮನೆ ತಂಪಾಗಿರಬೇಕೆ? ಕಡಿಮೆ ಖರ್ಚಿನಲ್ಲಿ ಕೂಲರ್ ಇಲ್ಲದೆ ತಂಪಾಗಿಸಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಬಿಸಿಲಿನ ಅಲೆ: ಸುಡುವ ಬಿಸಿಲಿನಲ್ಲಿ ನಿಮ್ಮ ಆರೋಗ್ಯ ಕಾಪಾಡಿಕೊಳ್ಳಲು ಈ ಪಾನೀಯಗಳೇ ಮದ್ದು! -
ಬಿಸಿಲ ಧಗೆಗೆ ಕಂಗಾಲಾಗಿದ್ದೀರಾ? ಸ್ಟೈಲಿಶ್ ಆಗಿ ಕೂಲ್ ಆಗಿರಲು ಇಲ್ಲಿದೆ ವೈರಲ್ ಸಮ್ಮರ್ ಹ್ಯಾಕ್ಸ್! -
ಬಿಸಿಗಾಳಿಯ ಅಬ್ಬರ: ಫಿಟ್ನೆಸ್ ಕಾಪಾಡಿಕೊಳ್ಳಲು ನಿಮ್ಮ ವರ್ಕೌಟ್ ಸಮಯ ಬದಲಾಯಿಸುವುದು ಅನಿವಾರ್ಯವೇ? -
ಡೇಟಿಂಗ್ ಆ್ಯಪ್ಗಳಲ್ಲಿ ಪ್ರೀತಿಯ ಬಲೆ: ಎಐ ಡೀಪ್ಫೇಕ್ ವಂಚನೆಯಿಂದ ಪಾರಾಗುವುದು ಹೇಗೆ? -
ಬಿಸಿಲ ಬೇಗೆಯಿಂದ ತತ್ತರಿಸಿದ್ದೀರಾ? ಎಸಿ ಇಲ್ಲದೆಯೇ ನಿಮ್ಮ ಮನೆಯನ್ನು ತಂಪಾಗಿಡಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಅಶ್ವಗಂಧದ ಎಲೆಗಳ ಬಳಕೆ ನಿಷೇಧ: ನಿಮ್ಮ ನೆಚ್ಚಿನ ಹೆಲ್ತ್ ಸಪ್ಲಿಮೆಂಟ್ಸ್ ಮಾರುಕಟ್ಟೆಯಿಂದ ಮಾಯವಾಗುತ್ತಾ? -
ಬಿಸಿಗಾಳಿಯ ಅಬ್ಬರ: ಸುಡುವ ಬಿಸಿಲಿನಲ್ಲಿ ಆರೋಗ್ಯ ಮತ್ತು ಫಿಟ್ನೆಸ್ ಕಾಪಾಡಿಕೊಳ್ಳುವುದು ಹೇಗೆ? -
ದೆಹಲಿ ಬಿಸಿಲಿನಲ್ಲಿ ಮದುವೆ ಸಂಭ್ರಮ: ಹೀಟ್ವೇವ್ ನಡುವೆ ನಿಮ್ಮ ಮದುವೆ ಪ್ಲಾನ್ ಬದಲಾಯಿಸುವುದು ಹೇಗೆ?
ಅಧ್ಯಯನ ವರದಿ: ದ್ರಾಕ್ಷಿ ಮರೆವಿನ ಕಾಯಿಲೆಯನ್ನು ನಿಯಂತ್ರಿಸುತ್ತದೆ
ವಯಸ್ಸಾಗುತ್ತಿರುವಂತೆ ಮರೆವು ಬರುವುದು ಸಹಜ. ಆದರೆ ವಯಸ್ಸಾಗುವುದಕ್ಕಿಂತ ಮೊದಲೇ ಮರೆವು ಕಾಣಿಸಿಕೊಳ್ಳುವುದು ಅಲ್ಜಮೈರ್ ಲಕ್ಷಣಗಳಲ್ಲಿ ಒಂದಾಗಿದೆ. ಅಕಾಲಿಕವಾಗಿ ಮರೆವು ಕಾಣಿಸಿಕೊಂಡವರನ್ನು ಅಧ್ಯಯನಕ್ಕೆ ಒಳಪಡಿಸಿದಾಗ ಪ್ರತೀದಿನ ದ್ರಾಕ್ಷಿಯನ್ನು ತಿಂದರೆ ಅಲ್ಜಮೈರ್ ಬರುವಂತಹ ಸಾಧ್ಯತೆಯನ್ನು ಕಡಿಮೆ ಮಾಡಬಹುದು ಎಂದು ಕಂಡುಕೊಳ್ಳಲಾಗಿದೆ.

ಅಲ್ಜಮೈರ್ ಗೆ ಸಂಬಂಧಿಸಿದ ಆರಂಭಿಕ ಲಕ್ಷಣಗಳು ಕಾಣಿಸಿಕೊಳ್ಳದಂತೆ ಮಾಡುವಲ್ಲಿ ದ್ರಾಕ್ಷಿಯು ಪ್ರಮುಖ ಪಾತ್ರವನ್ನು ನಿರ್ವಹಿಸುತ್ತದೆ. ದ್ರಾಕ್ಷಿಯಲ್ಲಿರುವ ಕೆಲವೊಂದು ಅಂಶಗಳು ಮೆದುಳಿನ ರಕ್ಷಣೆ ಮಾಡುವ ಸಾಮರ್ಥ್ಯವಿದೆ ಎಂದು ಅಧ್ಯಯನದ ತನಿಖೆ ನಡೆಸಿರುವ ಅಮೆರಿಕಾದ ಲಾಸ್ ಏಂಜಲೀಸ್ ನ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾನಿಲಯದ ಡೇನಿಯಲ್ ಸಿಲ್ವರ್ಮೆನ್ ಹೇಳಿದರು.
ಈ ಅಧ್ಯಯನದಿಂದ ಕಂಡುಕೊಂಡ ವಿಚಾರವೆಂದರೆ ದ್ರಾಕ್ಷಿಯು ನರ ಹಾಗೂ ಹೃದಯದ ಆರೋಗ್ಯಕ್ಕೆ ತುಂಬಾ ಪರಿಣಾಮಕಾರಿಯಾಗಿದೆ. ಆದರೆ ಇದನ್ನು ಸಂಪೂರ್ಣವಾಗಿ ದೃಢಪಡಿಸಲು ಪ್ರಯೋಗಾಲಯಗಳಲ್ಲಿ ಇನ್ನಷ್ಟು ಸಂಶೋಧನೆ ನಡೆಸುವ ಅಗತ್ಯವಿದೆ ಎಂದು ಸಿಲ್ವರ್ಮೆನ್ ತಿಳಿಸಿದರು. ದ್ರಾಕ್ಷಿ ರಸದಲ್ಲಿ ಅಡಗಿರುವ 7 ಸೌಂದರ್ಯದ ರಹಸ್ಯ
ದ್ರಾಕ್ಷಿಯನ್ನು ಆಹಾರ ಕ್ರಮದಲ್ಲಿ ಸೇರಿಸುವುದರಿಂದ ಚಯಾಪಚಯ ಕ್ರಿಯೆಯು ಕುಗ್ಗುವುದನ್ನು ತಡೆಯುತ್ತದೆ. ಮೆದುಳಿನ ಈ ಭಾಗಗಳಲ್ಲಿ ಚಯಾಪಚಯ ಕ್ರಿಯೆಯು ಕುಗ್ಗುವುದು ಅಲ್ಜಮೈರ್ ನ ಆರಂಭಿಕ ಲಕ್ಷಣಗಳಲ್ಲಿ ಒಂದಾಗಿದೆ. ದ್ರಾಕ್ಷಿಯನ್ನು ಆಹಾರದಲ್ಲಿ ಸೇರಿಸಿಕೊಂಡವರ ಮೆದುಳಿನ ಚಯಾಪಚಯ ಕ್ರಿಯೆಯು ಸರಾಗವಾಗಿದ್ದು, ಅವರ ಏಕಾಗ್ರತೆ ಮತ್ತು ಕೆಲಸ ಮಾಡುವ ಜ್ಞಾಪಕಶಕ್ತಿಯು ದ್ರಾಕ್ಷಿ ಸೇವಿಸದೆ ಇರುವವರಿಗಿಂತ ಉತ್ತಮವಾಗಿತ್ತು.
ಈ ಅಧ್ಯಯನಕ್ಕೆ ಒಳಪಟ್ಟವರನ್ನು ಎರಡು ಕಪ್ ದ್ರಾಕ್ಷಿಗೆ ಸಮಾನವಾಗುವಷ್ಟು ದ್ರಾಕ್ಷಿಯ ಹುಡಿಯನ್ನು ಸೇವಿಸಲು ಸೂಚಿಸಲಾಗಿತ್ತು. ಈ ಹುಡಿಯನ್ನು ದ್ರಾಕ್ಷಿಯಂತಹ ಸುವಾಸನೆ ಮತ್ತು ರುಚಿ ಕಂಡುಬರುತ್ತಿತ್ತು. ಆರು ತಿಂಗಳು ಇದನ್ನು ಸೇವಿಸಿದ ಬಳಿಕ ಮೆದುಳಿನ ಚಯಾಪಚಯದಲ್ಲಿ ಗಣನೀಯ ಬದಲಾವಣೆ ಕಂಡುಬಂದಿದೆ. ಅಧ್ಯಯನಕ್ಕೆ ಒಳಪಟ್ಟವರನ್ನು ಆರಂಭಿಕ ಹಂತ ಹಾಗೂ ಆರು ತಿಂಗಳ ಬಳಿಕ ತಪಾಸನೆಗೆ ಒಳಪಡಿಸಲಾಯಿತು. ದ್ರಾಕ್ಷಿ ಹಣ್ಣು- ಮೂರ್ತಿ ಚಿಕ್ಕದಾದರೂ, ಕೀರ್ತಿ ದೊಡ್ಡದು
ದ್ರಾಕ್ಷಿಯು ಮೆದುಳಿನ ಕೆಲ ಭಾಗಗಳಲ್ಲಿ ಆರೋಗ್ಯಕರ ಚಯಾಪಚಯ ಕ್ರಿಯೆಯನ್ನು ಸಂರಕ್ಷಿಸುತ್ತದೆ. ಚಯಾಪಚಯ ಕ್ರಿಯೆಯು ಕುಗ್ಗಿದಾಗ ಅಲ್ಜಮೈರ್ ನ ಲಕ್ಷಣಗಳು ತಮ್ಮ ಹಿಡಿತ ಸಾಧಿಸುತ್ತವೆ. ದ್ರಾಕ್ಷಿ ಸೇವನೆ ಮಾಡದೆ ಇರುವವರ ಮೆದುಳಿನ ಈ ಭಾಗದಲ್ಲಿ ಚಯಾಪಚಯದ ಕುಗ್ಗುವಿಕೆ ಗಣನೀಯವಾಗಿತ್ತು ದ್ರಾಕ್ಷಿಯಲ್ಲಿರುವ ಪಾಲಿಪೆನಾಲ್ಸ್ ಆ್ಯಂಟಿಆಕ್ಸಿಡೆಂಟ್ ಮತ್ತು ಉರಿಯೂತದ ಕಾರ್ಯವನ್ನು ಹೆಚ್ಚಿಸುವುದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications










