Just In
- 5 hrs ago ವಾರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಈ 7 ದಿನಗಳು ನಿಮಗೆ ಹೇಗಿರಲಿದೆ?
- 5 hrs ago ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- 7 hrs ago ಪರಿಸರ ದಿನ: ಇಂದು ನೀವು ಹೀಗೆ ಮಾಡಿದರೆ ಮುಂದಿನ ಪೀಳಿಗೆಗೆ ನೀಡುವ ದೊಡ್ಡ ಆಸ್ತಿ
- 7 hrs ago ಲಿವರ್ ಸಮಸ್ಯೆಯಿದೆ ಎಂದು ಸೂಚಿಸುವ ಲಕ್ಷಣಗಳಿವು, ಕುಟುಂಬಸ್ಥರು ಲಿವರ್ ದಾನ ಮಾಡಿದರೆ ವ್ಯಕ್ತಿಯ ಪ್ರಾಣ ಉಳಿಸಬಹುದು
Don't Miss
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Movies ಡಿ. ಕೆ ಸುರೇಶ್ ಪರ ನಟ ದರ್ಶನ್ ಪ್ರಚಾರ; ಆ 2 ವಿಧಾನಸಭಾ ಕ್ಷೇತ್ರಗಳಲ್ಲಿ ಮತಬೇಟೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಅಧ್ಯಯನ ವರದಿ: ದ್ರಾಕ್ಷಿ ಮರೆವಿನ ಕಾಯಿಲೆಯನ್ನು ನಿಯಂತ್ರಿಸುತ್ತದೆ
ವಯಸ್ಸಾಗುತ್ತಿರುವಂತೆ ಮರೆವು ಬರುವುದು ಸಹಜ. ಆದರೆ ವಯಸ್ಸಾಗುವುದಕ್ಕಿಂತ ಮೊದಲೇ ಮರೆವು ಕಾಣಿಸಿಕೊಳ್ಳುವುದು ಅಲ್ಜಮೈರ್ ಲಕ್ಷಣಗಳಲ್ಲಿ ಒಂದಾಗಿದೆ. ಅಕಾಲಿಕವಾಗಿ ಮರೆವು ಕಾಣಿಸಿಕೊಂಡವರನ್ನು ಅಧ್ಯಯನಕ್ಕೆ ಒಳಪಡಿಸಿದಾಗ ಪ್ರತೀದಿನ ದ್ರಾಕ್ಷಿಯನ್ನು ತಿಂದರೆ ಅಲ್ಜಮೈರ್ ಬರುವಂತಹ ಸಾಧ್ಯತೆಯನ್ನು ಕಡಿಮೆ ಮಾಡಬಹುದು ಎಂದು ಕಂಡುಕೊಳ್ಳಲಾಗಿದೆ.
ಅಲ್ಜಮೈರ್ ಗೆ ಸಂಬಂಧಿಸಿದ ಆರಂಭಿಕ ಲಕ್ಷಣಗಳು ಕಾಣಿಸಿಕೊಳ್ಳದಂತೆ ಮಾಡುವಲ್ಲಿ ದ್ರಾಕ್ಷಿಯು ಪ್ರಮುಖ ಪಾತ್ರವನ್ನು ನಿರ್ವಹಿಸುತ್ತದೆ. ದ್ರಾಕ್ಷಿಯಲ್ಲಿರುವ ಕೆಲವೊಂದು ಅಂಶಗಳು ಮೆದುಳಿನ ರಕ್ಷಣೆ ಮಾಡುವ ಸಾಮರ್ಥ್ಯವಿದೆ ಎಂದು ಅಧ್ಯಯನದ ತನಿಖೆ ನಡೆಸಿರುವ ಅಮೆರಿಕಾದ ಲಾಸ್ ಏಂಜಲೀಸ್ ನ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾನಿಲಯದ ಡೇನಿಯಲ್ ಸಿಲ್ವರ್ಮೆನ್ ಹೇಳಿದರು.
ಈ ಅಧ್ಯಯನದಿಂದ ಕಂಡುಕೊಂಡ ವಿಚಾರವೆಂದರೆ ದ್ರಾಕ್ಷಿಯು ನರ ಹಾಗೂ ಹೃದಯದ ಆರೋಗ್ಯಕ್ಕೆ ತುಂಬಾ ಪರಿಣಾಮಕಾರಿಯಾಗಿದೆ. ಆದರೆ ಇದನ್ನು ಸಂಪೂರ್ಣವಾಗಿ ದೃಢಪಡಿಸಲು ಪ್ರಯೋಗಾಲಯಗಳಲ್ಲಿ ಇನ್ನಷ್ಟು ಸಂಶೋಧನೆ ನಡೆಸುವ ಅಗತ್ಯವಿದೆ ಎಂದು ಸಿಲ್ವರ್ಮೆನ್ ತಿಳಿಸಿದರು. ದ್ರಾಕ್ಷಿ ರಸದಲ್ಲಿ ಅಡಗಿರುವ 7 ಸೌಂದರ್ಯದ ರಹಸ್ಯ
ದ್ರಾಕ್ಷಿಯನ್ನು ಆಹಾರ ಕ್ರಮದಲ್ಲಿ ಸೇರಿಸುವುದರಿಂದ ಚಯಾಪಚಯ ಕ್ರಿಯೆಯು ಕುಗ್ಗುವುದನ್ನು ತಡೆಯುತ್ತದೆ. ಮೆದುಳಿನ ಈ ಭಾಗಗಳಲ್ಲಿ ಚಯಾಪಚಯ ಕ್ರಿಯೆಯು ಕುಗ್ಗುವುದು ಅಲ್ಜಮೈರ್ ನ ಆರಂಭಿಕ ಲಕ್ಷಣಗಳಲ್ಲಿ ಒಂದಾಗಿದೆ. ದ್ರಾಕ್ಷಿಯನ್ನು ಆಹಾರದಲ್ಲಿ ಸೇರಿಸಿಕೊಂಡವರ ಮೆದುಳಿನ ಚಯಾಪಚಯ ಕ್ರಿಯೆಯು ಸರಾಗವಾಗಿದ್ದು, ಅವರ ಏಕಾಗ್ರತೆ ಮತ್ತು ಕೆಲಸ ಮಾಡುವ ಜ್ಞಾಪಕಶಕ್ತಿಯು ದ್ರಾಕ್ಷಿ ಸೇವಿಸದೆ ಇರುವವರಿಗಿಂತ ಉತ್ತಮವಾಗಿತ್ತು.
ಈ ಅಧ್ಯಯನಕ್ಕೆ ಒಳಪಟ್ಟವರನ್ನು ಎರಡು ಕಪ್ ದ್ರಾಕ್ಷಿಗೆ ಸಮಾನವಾಗುವಷ್ಟು ದ್ರಾಕ್ಷಿಯ ಹುಡಿಯನ್ನು ಸೇವಿಸಲು ಸೂಚಿಸಲಾಗಿತ್ತು. ಈ ಹುಡಿಯನ್ನು ದ್ರಾಕ್ಷಿಯಂತಹ ಸುವಾಸನೆ ಮತ್ತು ರುಚಿ ಕಂಡುಬರುತ್ತಿತ್ತು. ಆರು ತಿಂಗಳು ಇದನ್ನು ಸೇವಿಸಿದ ಬಳಿಕ ಮೆದುಳಿನ ಚಯಾಪಚಯದಲ್ಲಿ ಗಣನೀಯ ಬದಲಾವಣೆ ಕಂಡುಬಂದಿದೆ. ಅಧ್ಯಯನಕ್ಕೆ ಒಳಪಟ್ಟವರನ್ನು ಆರಂಭಿಕ ಹಂತ ಹಾಗೂ ಆರು ತಿಂಗಳ ಬಳಿಕ ತಪಾಸನೆಗೆ ಒಳಪಡಿಸಲಾಯಿತು. ದ್ರಾಕ್ಷಿ ಹಣ್ಣು- ಮೂರ್ತಿ ಚಿಕ್ಕದಾದರೂ, ಕೀರ್ತಿ ದೊಡ್ಡದು
ದ್ರಾಕ್ಷಿಯು ಮೆದುಳಿನ ಕೆಲ ಭಾಗಗಳಲ್ಲಿ ಆರೋಗ್ಯಕರ ಚಯಾಪಚಯ ಕ್ರಿಯೆಯನ್ನು ಸಂರಕ್ಷಿಸುತ್ತದೆ. ಚಯಾಪಚಯ ಕ್ರಿಯೆಯು ಕುಗ್ಗಿದಾಗ ಅಲ್ಜಮೈರ್ ನ ಲಕ್ಷಣಗಳು ತಮ್ಮ ಹಿಡಿತ ಸಾಧಿಸುತ್ತವೆ. ದ್ರಾಕ್ಷಿ ಸೇವನೆ ಮಾಡದೆ ಇರುವವರ ಮೆದುಳಿನ ಈ ಭಾಗದಲ್ಲಿ ಚಯಾಪಚಯದ ಕುಗ್ಗುವಿಕೆ ಗಣನೀಯವಾಗಿತ್ತು ದ್ರಾಕ್ಷಿಯಲ್ಲಿರುವ ಪಾಲಿಪೆನಾಲ್ಸ್ ಆ್ಯಂಟಿಆಕ್ಸಿಡೆಂಟ್ ಮತ್ತು ಉರಿಯೂತದ ಕಾರ್ಯವನ್ನು ಹೆಚ್ಚಿಸುವುದು.