Latest Updates
-
ಅಕ್ಷಯ ತೃತೀಯ ಮದುವೆ: ಬಾಲ್ಯ ವಿವಾಹ ತಡೆಯಲು ನೀವೇನು ಮಾಡಬೇಕು? -
ಬಾಲ್ಕನಿ ಗಿಡಗಳು ಒಣಗುತ್ತಿವೆಯೇ? ಈ ಟಿಪ್ಸ್ ಪಾಲಿಸಿ! -
ಬಿಸಿಲಿನ ಬೇಗೆಯಿಂದ ಪಾರಾಗಲು ಈ ಆಹಾರಗಳೇ ನಿಮ್ಮ ರಕ್ಷಕ -
ಅಕ್ಷಯ ತೃತೀಯ 2026: ಈ ಹೊಸ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಲಿವರ್ ಆರೋಗ್ಯಕ್ಕೆ ಈ ಸರಳ ಅಭ್ಯಾಸಗಳು ನಿಮ್ಮನ್ನು ಕಾಪಾಡುತ್ತವೆ -
ಅಕ್ಷಯ ತೃತೀಯ: ಚಿನ್ನದ ಖರೀದಿ ಮತ್ತು ನಿಶ್ಚಿತಾರ್ಥಕ್ಕೆ ಹೀಗೆ ಪ್ಲಾನ್ ಮಾಡಿ -
ದೆಹಲಿ ಧೂಳು ತಡೆಯಲು ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ -
FSSAI ದಾಳಿ: ವಿಷಕಾರಿ ಹಣ್ಣುಗಳನ್ನು ಗುರುತಿಸುವುದು ಹೇಗೆ ಗೊತ್ತಾ? -
ಅಕ್ಷಯ ತೃತೀಯ ಸಂಭ್ರಮ: ಈ ಟ್ರೆಂಡಿ ಆಭರಣಗಳೇ ಈಗ ಹವಾ -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ತಾಪದಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ
ಗ್ಯಾಸ್ಟ್ರಿಕ್-ಭೇದಿ ಸಮಸ್ಯೆಗೆ ಒಂದು ಮುಷ್ಟಿ ಕರಿಬೇವಿನ ಎಲೆಗಳು ಸಾಕು!
ಕರಿಬೇವನ್ನು ನೇರವಾಗಿ ಸಾರು, ರಸಂಗಳಲ್ಲಿ ಬೆರೆಸಬಹುದು ಅಥವಾ ಒಗ್ಗರಣೆಯ ಅವಧಿಯಲ್ಲಿ ಎಣ್ಣೆಯಲ್ಲಿ ಹುರಿದೂ ಸೇರಿಸಬಹುದು. ಇವು ತಾಜಾ ಇದ್ದರೆ ಅತಿ ಹೆಚ್ಚು ಪ್ರಯೋಜನಕಾರಿಯಾಗಿದೆ. ತಾಜಾ ಎಲೆಗಳು ಲಭ್ಯವಿಲ್ಲದಿದ್ದ ಪಕ್ಷದಲ್ಲಿ ಇವುಗಳನ್ನು ಒಣಗಿಸಿ ಕುಟ್ಟಿ ಮಾಡಿದ ಪುಡಿಯನ್ನೂ ಉಪಯೋಗಿಸಬಹುದು. ಭಾರತ ಮತ್ತು ಶ್ರೀಲಂಕಾದ ಅಡುಗೆಗಳಲ್ಲಿ ಹೆಚ್ಚಾಗಿ ಬಳಸಲಾಗುತ್ತದೆ.
ಔಷಧೀಯ ರೂಪದಲ್ಲಿ ಬಳಸುವಾಗ ಇದು ಸದಾ ಲಭ್ಯವಿರುವ ಒಂದು ಸಿದ್ಧ ಔಷಧಿಯಾಗಿದ್ದು ಹಲವಾರು ಕಾಯಿಲೆಗಳನ್ನು ತಕ್ಷಣವೇ ಗುಣಪಡಿಸುವ ಶಕ್ತಿ ಹೊಂದಿದೆ. ವಿಶೇಷವಾಗಿ ಚಿಕ್ಕವಯಸ್ಸಿನಲ್ಲಿಯೇ ತಲೆಗೂದಲು ನೆರೆಯುವುದು, ಕೂದಲು ಉದುರುವುದು, ಕಣ್ಣುಗಳ ದೃಷ್ಟಿ ಕಡಿಮೆಯಾಗುವುದು ಮೊದಲಾದವು.
ಇನ್ನೊಂದು ಪ್ರಮುಖ ಉಪಯೋಗವೆಂದರೆ ಗ್ಯಾಸ್ಟ್ರಿಕ್ ಸಮಸ್ಯೆ ಹಾಗೂ ಅತಿಸಾರ ಸಮಸ್ಯೆಯನ್ನು ಶಮನಗೊಳಿಸುವುದಾಗಿದೆ. ವಾಯುಪ್ರಕೋಪ (ಗ್ಯಾಸ್ಟ್ರಿಕ್) ಮತ್ತು ಅತಿಸಾರ. ಅಥವಾ ಭೇದಿ ಕಡಿಮೆಯಾಗಲು ಈ ಎಲೆಗಳು ಹೇಗೆ ನೆರವಾಗುತ್ತವೆ? ಮುಂದೆ ಓದಿ...

ಕರಿಬೇವಿನ ಎಲೆಯ ಗುಣಗಳು...
ಈ ಎಲೆಗಳಲ್ಲಿ carbazole alkaloid ಎಂದ ಪೋಷಕಾಂಶವಿದೆ. ಇವುಗಳಲ್ಲಿ ಬ್ಯಾಕ್ಟೀರಿಯಾ ನಿವಾರಕ ಹಾಗೂ ಉರಿಯೂತ ನಿವಾರಕ ಗುಣಗಳಿವೆ. ಈ ಗುಣಗಳು ಹೊಟ್ಟೆಯಲ್ಲಿ ಅಜೀರ್ಣ ಅಥವಾ ಆಮ್ಲಜನಕದ ಅಗತ್ಯವಿಲ್ಲದೇ ಆಹಾರವನ್ನು ಕೊಳೆಸುವ ಅಮೀಬಾ ಮೂಲಕ ಎದುರಾಗುವ ಸೋಂಕನ್ನು ತಡೆಯುವಲ್ಲಿ ನೆರವಾಗುತ್ತವೆ. ಅಲ್ಲದೇ ಆಯುರ್ವೇದದ ಪ್ರಕಾರ ಹೊಟ್ಟೆಯಲ್ಲಿ ಪಿತ್ತವಿಕಾರವಾದಂತೆ ನೋಡಿಕೊಳ್ಳುತ್ತದೆ. ಇದರ ರೋಗಶಮನಕಾರಿ ಗುಣ ಹೊಟ್ಟೆಯಲ್ಲಿ ಎದುರಾಗುವ ಚಿಕ್ಕ ಪುಟ್ಟ ಸೆಡೆತಗಳನ್ನು ಕಡಿಮೆ ಮಾಡುವ ಗುಣವನ್ನೂ ಹೊಂದಿದೆ. ಬನ್ನಿ, ಈ ಎಲೆಗಳಿಂದ ಔಷಧಿಯನ್ನು ಹೇಗೆ ತಯಾರಿಸಬಹುದೆಂದು ನೋಡೋಣ...

#1
ಒಂದು ಲೋಟ ನೀರನ್ನು ಕುದಿಸಿ ಇದಕ್ಕೆ ಸುಮಾರು 35-40 ಕರಿಬೇವಿನ ಎಲೆಗಳನ್ನು ಸೇರಿಸಿ. ಬಳಿಕ ಚಿಕ್ಕ ಉರಿಯಲ್ಲಿ ಸುಮಾರು ಎರಡು ಘಂಟೆಗಳವರೆಗೆ ನೀರು ಕುದಿಸಿ. ನಂತರ ಉರಿ ಆರಿಸಿ ಎಲೆಗಳನ್ನು ಸೋಸಿ ನೀರು ಸಂಗ್ರಹಿಸಿ. ಈ ನೀರಿಗೆ ಕೊಂಚ ಲಿಂಬೆರಸ ಹಾಗೂ ಜೇನನ್ನು ಬೆರೆಸಿ. ಈ ದ್ರವವನ್ನು ಖಾಲಿಹೊಟ್ಟೆಯಲ್ಲಿ ಕುಡಿಯಿರಿ.

#2
ಕೆಲವು ಕರಿಬೇವಿನ ಎಲೆಗಳನ್ನು ಚೆನ್ನಾಗಿ ಜಜ್ಜಿ ಚಿಕ್ಕ ಗೋಲಿಯಂತಾಗಿಸಿ. ಈ ಗೋಲಿಯನ್ನು ಒಂದು ಲೋಟ ಮಜ್ಜಿಗೆಯೊಡನೆ ಬೆರೆಸಿ ಕಲಕಿ ದಿನಕ್ಕೆರಡು ಬಾರಿ ಸೇವಿಸಿ.

#3
ಒಂದು ಲೋಟ ನೀರನ್ನು ಕುದಿಸಿ ಇದಕ್ಕೆ ಕೆಲವು ಎಸಳುಗಳನ್ನು ಹಾಕಿ ಕುದಿಸಿ. ಈ ನೀರನ್ನು ಸೋಸಿ ದಿನವಿಡೀ ಕೊಂಚಕೊಂಚವಾಗಿ ಕುಡಿಯುತ್ತಿರಿ.

#4
ಸುಮಾರು ನಲವತ್ತು ಗ್ರಾಂ ಕರಿಬೇಬಿನ ಒಣಪುಡಿ ಹಾಗೂ ಹತ್ತು ಗ್ರಾಂ ಜೀರಿಗೆಯೊಡನೆ ಬೆರೆಸಿ ಒಣದಾಗಿ ಪುಡಿಮಾಡಿ. ಈ ಪುಡಿಯನ್ನು ಒಂದು ಲೋಟ ಉಗುರುಬೆಚ್ಚನೆಯ ನೀರಿಗೆ ಬೆರೆಸಿ ಕುಡಿಯಿರಿ. ಹತ್ತು ನಿಮಿಷದ ಬಳಿಕ ಒಂದು ಚಿಕ್ಕಚಮಚ ಜೇನು ಸೇವಿಸಿ. ಈ ವಿಧಾನವನ್ನು ದಿನಕ್ಕೆ ಮೂರರಿಂದ ನಾಲ್ಕು ಬಾರಿ ಪುನರಾವರ್ತಿಸಿ.

#5
ಕೊಂಚ ಎಲೆಗಳನ್ನು ಉಪ್ಪು ಮತ್ತು ನೀರಿನೊಂದಿಗೆ ಮಿಕ್ಸಿಯಲ್ಲಿ ಕಡೆಯಿರಿ. ಬಳಿಕ ಈ ನೀರನ್ನು ಸೋಸಿ ಕೊಂಚ ಜೇನು ಮತ್ತು ಲಿಂಬೆರಸ ಸೇರಿಸಿ ಒಂದು ಬಾಟಲಿಯಲ್ಲಿ ಸಂಗ್ರಹಿಸಿಡಿ. ಯಾವಾಗ ಅತಿಸಾರ ಅಥವಾ ವಾಯುಪ್ರಕೋಪದ ತೊಂದರೆ ಕಂಡುಬಂದಿತೋ ತಕ್ಷಣ ಒಂದು ಚಿಕ್ಕಚಮಚದಷ್ಟು ಪ್ರಮಾಣವನ್ನು ತಕ್ಷಣವೇ ಸೇವಿಸಿ.



Click it and Unblock the Notifications










