Just In
- 3 hrs ago ಹೋಟೆಲ್ ರುಚಿಯ ಪನೀರ್ ಪೆಪ್ಪರ್ ಫ್ರೈ ಮನೆಯಲ್ಲೇ ಮಾಡಿ..! 10 ನಿಮಿಷದಲ್ಲಿ ರೆಡಿ..!
- 12 hrs ago ಮೀನ ರಾಶಿಯಲ್ಲಿ ರಾಹು-ಮಂಗಳ ಯುತಿಯಿಂದ ಅಂಗಾರಕ ಯೋಗ: 12 ರಾಶಿಗಳ ಮೇಲಿರಲಿದೆ ಈ ನಕರಾತ್ಮಕ ಪರಿಣಾ
- 12 hrs ago ಈ ಕಾರಣಕ್ಕೆ ನೀವು ಮಾವಿನ ಹಣ್ಣನ್ನು ನೀರಿನಲ್ಲಿ ನೆನೆಹಾಕಿಯೇ ತಿನ್ನಬೇಕು, ಅದು ನಿಮ್ಮ ತೋಟದಲ್ಲಿ ಬೆಳೆದಿದ್ದೇ ಆಗಿರಲಿ
- 13 hrs ago ಪುರುಷರಲ್ಲಿ ಹೆಚ್ಚಾಗುತ್ತಿದೆ ಬಂಜೆತನ: ಪುರುಷರು ಈ ಆಹಾರ ಸೇವಿಸಿದರೆ ಸಂತಾನೋತ್ಪತ್ತಿ ಸಾಮರ್ಥ್ಯ ಹೆಚ್ಚುವುದು
Don't Miss
- Technology SmartGlass: ಮೆಟಾ ರೇ-ಬ್ಯಾನ್ ಸ್ಮಾರ್ಟ್ ಗ್ಲಾಸ್ ಬಳಕೆದಾರರು ಇನ್ಮುಂದೆ ವಿಡಿಯೋ ಕಾಲ್ ಮಾಡಬಹುದು!
- Automobiles ಕ್ರ್ಯಾಶ್ ಟೆಸ್ಟ್ನಲ್ಲಿ ಕಳಪೆ ಪ್ರದರ್ಶನ ನೀಡಿ ನಿರಾಸೆ ಮೂಡಿಸಿದ ಮಧ್ಯಮ ವರ್ಗದ ಮೆಚ್ಚಿನ ಸ್ವದೇಶಿ ಕಾರು
- Sports 2025ರ ಚಾಂಪಿಯನ್ಸ್ ಟ್ರೋಫಿಗಾಗಿ ಭಾರತ ತಂಡ ಪಾಕಿಸ್ತಾನಕ್ಕೆ ಪ್ರಯಾಣಿಸಲಿದೆಯೇ?; ಬಿಸಿಸಿಐ ಹೇಳಿದ್ದೇನು?
- Movies ಅದ್ಧೂರಿ 'ರಾಮಾಯಣ' ಚಿತ್ರದ ಬಗ್ಗೆ ರಾಕಿಂಗ್ ಸ್ಟಾರ್ ಯಶ್ ಮೊದಲ ಮಾತು
- News ಮೋದಿ ಯಾರ ಪರ; ಪ್ರಧಾನಿಯಾಗಿ 16 ಲಕ್ಷ ಕೋಟಿ ಸಾಲ ಮನ್ನಾ ಮಾಡಿದ್ದು ಯಾರದ್ದು? ಸಿದ್ದರಾಮಯ್ಯ
- Finance ಬೆಂಗಳೂರಿನಲ್ಲಿ ಈ ಮೂರು ದಿನಗಳ ಕಾಲ ಮದ್ಯ ಮಾರಾಟ ನಿಷೇಧ, ದಿನಾಂಕ, ಸಮಯ ತಿಳಿಯಿರಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಅಸ್ತಮಾ ರೋಗ ನಿಯಂತ್ರಣಕ್ಕೆ 'ಕೆಂಪು ಈರುಳ್ಳಿ' ಪರ್ಫೆಕ್ಟ್ ಮದ್ದು
ಕೆಂಪು ಈರುಳ್ಳಿ ಅಸ್ತಮಾ ರೋಗವನ್ನು ನೈಸರ್ಗಿಕವಾಗಿ ನಿವಾರಿಸಲು ಅತ್ಯುತ್ತಮವಾಗಿದ್ದು ಯಾವುದೇ ಅಡ್ಡಪರಿಣಾಮವಿಲ್ಲದೇ ರೋಗವನ್ನು ಶೀಘ್ರವಾಗಿ ಗುಣಪಡಿಸುವ ಅದ್ಭುತ ಔಷಧಿಯಾಗಿದೆ.
ಪ್ರತಿಯೊಂದು ಅಡುಗೆ ಮನೆಯಲ್ಲಿ ಕಡ್ಡಾಯವಾಗಿ ಇರಬೇಕಾದ ತರಕಾರಿ ಎಂದರೆ ಈರುಳ್ಳಿ ಮತ್ತು ಆಲೂಗಡ್ಡೆ. ಸಾಮಾನ್ಯವಾಗಿ ಇವುಗಳನ್ನು ಹೆಚ್ಚಿನ ಕಾಲ ಕೆಡದೇ ಸಾಮಾನ್ಯ ತಾಪಮಾನದಲ್ಲಿಡಬಹುದಾದುದರಿಂದ ಹೆಚ್ಚು ಬಳಕೆಯಲ್ಲಿದ್ದರೂ ಈರುಳ್ಳಿಯನ್ನು ಹೆಚ್ಚಿನ ಖಾದ್ಯಗಳಲ್ಲಿ ಮೂಲಸಾಮಾಗ್ರಿಯಾಗಿ ಬಳಸಲಾಗುತ್ತದೆ. ಅಸ್ತಮಾ ರೋಗವನ್ನು ಸೋಲಿಸುವ ಪವರ್ ಫುಲ್ ಮನೆಮದ್ದುಗಳು
ಈರುಳ್ಳಿಯ ಒಂದೇ ತೊಂದರೆ ಎಂದರೆ ಇದರ ಘಾಟಿಗೆ ಕಣ್ಣಿನಲ್ಲಿ ಉರಿ ಕಾಣಿಸಿಕೊಂಡು ನೀರು ಸುರಿಯುವುದು. ಅದನ್ನು ಬಿಟ್ಟರೆ ಇದನ್ನು ಬಳಸದಿರಲು ಯಾವುದೇ ಕಾರಣ ಉಳಿಯುವುದಿಲ್ಲ. ಈರುಳ್ಳಿ ಕೇವಲ ಅಡುಗೆ ಸಾಮಾಗ್ರಿಯಾಗಿ ಮಾತ್ರವಲ್ಲ, ಔಷಧೀಯ ರೂಪದಲ್ಲಿಯೂ ನೆರವಿಗೆ ಬರುತ್ತದೆ. ವಿಶೇಷವಾಗಿ ಅಸ್ತಮಾ ರೋಗಿಗಳಿಗೆ ಈರುಳ್ಳಿ ಶೀಘ್ರ ಉಪಶಮನ ನೀಡುತ್ತದೆ.
ಈರುಳ್ಳಿಯಲ್ಲಿ ಕೆಲವಾರು ಬಗೆಗಳಿದ್ದರೂ ಪ್ರಮುಖವಾಗಿ ಕೆಲವು ಬಗೆಗಳಿವೆ. ಅವೆಂದರೆ ಬಿಳಿ ಈರುಳ್ಳಿ ಹಾಗೂ ಕೆಂಪು ಈರುಳ್ಳಿ. ಕೆಂಪು ಈರುಳ್ಳಿಯೇ ಹೆಚ್ಚಾಗಿ ಲಭ್ಯವಿದ್ದು ಇದರಲ್ಲಿ ಉತ್ತಮ ಪ್ರಮಾಣದ ಆಂಟಿ ಆಕ್ಸಿಡೆಂಟುಗಳಿವೆ. ಅಲ್ಲದೇ ಇದರಲ್ಲಿ ಉರಿಯೂತ ನಿವಾರಕ ಗುಣವೂ ಇದೆ. ಹೆಚ್ಚಿನ ಪ್ರಮಾಣದ ವಿಟಮಿನ್ ಸಿ, ಗಂಧಕದ ಸಂಯುಕ್ತಗಳು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ ಹಾಗೂ ಈರುಳ್ಳಿಯಲ್ಲಿ ಬ್ಯಾಕ್ಟೀರಿಯಾ ನಿವಾರಕ ಹಾಗೂ ವೈರಸ್ ನಿವಾರಕ ಗುಣಗಳೂ ಇವೆ.
ಈ ಗುಣಗಳೆಲ್ಲವೂ ಕೂಡಿ ಅಸ್ತಮಾ ರೋಗವನ್ನು ನೈಸರ್ಗಿಕವಾಗಿ ನಿವಾರಿಸಲು ಅತ್ಯುತ್ತಮವಾಗಿದ್ದು ಯಾವುದೇ ಅಡ್ಡಪರಿಣಾಮವಿಲ್ಲದೇ ರೋಗವನ್ನು ಶೀಘ್ರವಾಗಿ ಗುಣಪಡಿಸುವ ಅದ್ಭುತ ಔಷಧಿಯಾಗಿದೆ. ಕೆಲವು ಸಂಶೋಧನೆಗಳ ಮೂಲಕ ಕಂಡುಕೊಂಡಿರುವಂತೆ ಈರುಳ್ಳಿಯಲ್ಲಿರುವ ಥಯೋಸಲ್ಫಿನೇಟ್ (thiosulphinate) ಎಂಬ ಸಂಯುಕ್ತ ಪೋಷಕಾಂಶ ಅತ್ಯುತ್ತಮವಾದ ಉರಿಯೂತ ನಿವಾರಕವಾಗಿದೆ. ಮಧುಮೇಹ, ಅಸ್ತಮಾ ನಿಯಂತ್ರಣಕ್ಕೆ ಬೆಂಡೆಕಾಯಿ ರಾಮಬಾಣ
ಇದರ ಜೊತೆಗೆ ಕ್ವೆರ್ಸೆಟಿನ್ (quercetin) ಮತ್ತು ಆಂಥೋಸಯಾನಿನ್ ಸಯನಿಡಿನ್ (anthocyanin cyanidin) ಎಂಬ ಫ್ಲೇವನಾಯ್ಡುಗಳು ದೇಹದ ಹಲವಾರು ಅಲರ್ಜಿಗಳನ್ನು ನಿವಾರಿಸಲು ಸಮರ್ಥವಾಗಿವೆ. ವಾಸ್ತವವಾಗಿ ಅಸ್ತಮಾ ಸಹಾ ಅಲರ್ಜಿಯ ಒಂದು ರೂಪವೇ ಆಗಿದ್ದು ಈ ಅಲರ್ಜಿಯನ್ನು ದೂರಗೊಳಿಸಲೂ ಈ ಫ್ಲೇವನಾಯ್ಡುಗಳು ಸಕ್ಷಮವಾಗಿವೆ. ಆದ್ದರಿಂದಲೇ ಅಸ್ತಮಾ ನಿವಾರಣೆಗೆ ಈರುಳ್ಳಿಯ ಸೇವನೆ ಅತ್ಯುತ್ತಮವಾದ ಪರಿಹಾರ ಒದಗಿಸುತ್ತದೆ. ಬನ್ನಿ, ಅಸ್ತಮಾ ರೋಗವನ್ನು ನಿವಾರಿಸಲು ಈರುಳ್ಳಿಯನ್ನು ಹೇಗೆ ಬಳಸಬೇಕು ಎಂಬುದನ್ನು ನೋಡೋಣ....
ಅಗತ್ಯವಿರುವ ಸಾಮಾಗ್ರಿಗಳು
*ಅರ್ಧ ಕೇಜಿಯಷ್ಟು ಕೆಂಪು ಈರುಳ್ಳಿ (ಚಿಕ್ಕದಾಗಿ ಹೆಚ್ಚಿದ್ದು)
ಅಗತ್ಯವಿರುವ ಸಾಮಾಗ್ರಿಗಳು
*ಸುಮಾರು ಆರರಿಂದ ಎಂಟು ದೊಡ್ಡಚಮಚ ಜೇನು
ಅಗತ್ಯವಿರುವ ಸಾಮಾಗ್ರಿಗಳು
*300 ಗ್ರಾಂ ನಷ್ಟು ಕಂದು ಸಕ್ಕರೆ (ಅಥವಾ ಸಾವಯವ ವಿಧಾನದ ಕಪ್ಪು ಬೆಲ್ಲ)
ಅಗತ್ಯವಿರುವ ಸಾಮಾಗ್ರಿಗಳು
*ಎರಡು ಲಿಂಬೆ ಹಣ್ಣು
ಅಗತ್ಯವಿರುವ ಸಾಮಾಗ್ರಿಗಳು
*ಐದರಿಂದ ಆರು ಲೋಟ ನೀರು.
ತಯಾರಿಕಾ ವಿಧಾನ
ಇವೆಲ್ಲವೂ ಹಿಡಿಸುವಷ್ಟು ದೊಡ್ಡ ಪಾತ್ರೆಯಲ್ಲಿ ಸಕ್ಕರೆ ಹಾಕಿ ಚಿಕ್ಕ ಉರಿಯಲ್ಲಿ ಬಿಸಿಮಾಡಿ. ಸಕ್ಕರೆ ಕರಗಲು ತೊಡಗಿದ ತಕ್ಷಣವೇ ಹೆಚ್ಚಿದ ಈರುಳ್ಳಿ ಹಾಕಿ ಅಲುಗಾಡಿಸುತ್ತಾ ಇರಬೇಕು.
ತಯಾರಿಕಾ ವಿಧಾನ
ಈರುಳ್ಳಿ ಕೊಂಚವೇ ಕಂದು ಬಣ್ಣ ಬರುವ ವೇಳೆಗೆ ನೀರು ಹಾಕಿ ಕುದಿಸಿ. ನೀರು ಕುದಿದು ಆವಿಯಾಗುತ್ತಾ ಸುಮಾರು ಮೂರರಲ್ಲಿ ಒಂದರಷ್ಟು ಮಟ್ಟಕ್ಕೆ ಇಳಿದ ಬಳಿಕ ಉರಿ ಆರಿಸಿ ತಣಿಯಲು ಬಿಡಿ.
ತಯಾರಿಕಾ ವಿಧಾನ
ತಣಿದ ಬಳಿಕ ಲಿಂಬೆಹಣ್ಣು ಮತ್ತು ಜೇನು ಬೆರೆಸಿ.ಈ ಮಿಶ್ರಣವನ್ನು ಗಾಜಿನ ಜಾಡಿ ಅಥವಾ ಬಾಟಲಿಯಲ್ಲಿಟ್ಟು ಇಡಿಯ ರಾತ್ರಿ ಹಾಗೇ ಇರಲು ಬಿಡಿ.
ಸೇವನೆಯ ವಿಧಾನ
ಅಸ್ತಮಾ ತೊಂದರೆ ಇರುವ ವಯಸ್ಕರಾದರೆ ಒಂದು ದೊಡ್ಡ ಚಮಚದಷ್ಟು ಪ್ರಮಾಣವನ್ನು ಪ್ರತಿ ಊಟಕ್ಕೂ ಮುನ್ನ ಸೇವಿಸಬೇಕು. ಮಕ್ಕಳಿಗೆ ಒಂದು ಚಿಕ್ಕ ಚಮಚದಷ್ಟು ಪ್ರಮಾಣ ಸಾಕಾಗುತ್ತದೆ.
ಸೇವನೆಯ ವಿಧಾನ
ನಿಧಾನವಾಗಿ ಅಸ್ತಮಾ ಪರಿಣಾಮ ಕಡಿಮೆಯಾಗುತ್ತಾ ಬಂದು ಸಂಪೂರ್ಣವಾಗಿ ಇಲ್ಲವಾಗುವವರೆಗೆ ಈ ಚಿಕಿತ್ಸೆಯನ್ನು ಮುಂದುವರೆಸಬೇಕು. ಇದರೊಂದಿಗೆ ಊಟದ ಜೊತೆ ಹಸಿ ಈರುಳ್ಳಿಯನ್ನು ಸಹಾ ತಿಂದರೆ ಇನ್ನೂ ಉತ್ತಮ.