Just In
- 5 hrs ago ವಿಕಲಚೇತನರಿಗೆ ಸ್ಕೂಟಿ ಗಿಫ್ಟ್..! ಮನೆ ಕಟ್ಟಿಕೊಡುವ ಭರವಸೆ ನೀಡಿದ ನಟ ಲಾರೆನ್ಸ್..!
- 6 hrs ago ಗರಿ ಗರಿಯಾದ ಕೋಡುಬಳೆ ಮನೆಯಲ್ಲೇ ಮಾಡಿ.! 4 ವಸ್ತು ಇದ್ದರೆ ಸಾಕು
- 9 hrs ago Zero Shadow Day: ಬೆಂಗಳೂರಲ್ಲಿ ಇಂದು ಶೂನ್ಯ ನೆರಳು ದಿನ.! ಯಾವ ಸಮಯದಲ್ಲಿ ಗೊತ್ತಾ?
- 11 hrs ago ಹೋಟೆಲ್ ರುಚಿಯ ಪನೀರ್ ಪೆಪ್ಪರ್ ಫ್ರೈ ಮನೆಯಲ್ಲೇ ಮಾಡಿ..! 10 ನಿಮಿಷದಲ್ಲಿ ರೆಡಿ..!
Don't Miss
- News Kotak Mahindra Bank: ಕೋಟಕ್ ಮಹಿಂದ್ರಾ ಬ್ಯಾಂಕ್ ಮೇಲೆ ಆರ್ಬಿಐ ನಿರ್ಬಂಧ: ಗ್ರಾಹಕರ ಮೇಲೆ ಪರಿಣಾಮಗಳೇನು?
- Movies Swathi Royal; ಒಂಬತ್ತನೇ ಕ್ಲಾಸ್ ನಲ್ಲೇ ಲವ್ವಲ್ಲಿ ಬಿದ್ದ ಅಮೃತಧಾರೆ ಅಪರ್ಣಾ..!
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Sports DC vs GT IPL 2024: ಡೆಲ್ಲಿ ಕೋಟೆಯಲ್ಲಿ ವಿಜಯದ ಪತಾಕೆ ಹಾರಿಸುತ್ತಾ ಗುಜರಾತ್?; ಟಾಸ್ ವರದಿ, ಆಡುವ ಬಳಗ
- Technology Bengaluru: ಆ ಆಪ್ ಇನ್ಸ್ಟಾಲ್ ಮಾಡಿದ್ದೇ ತಡ 5.2 ಕೋಟಿ ರೂ. ಮಾಯ.. ನೀವು ಎಚ್ಚರ
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ದೈನಂದಿನ ಆಹಾರ ಪಥ್ಯ ಹೀಗಿದ್ದರೆ, 'ಕ್ಷಯ ರೋಗಕ್ಕೆ' ಮದ್ದೇ ಬೇಡ!
ಕ್ಷಯ' ಅಥವಾ ಟಿ.ಬಿ' (ಟ್ಯೂಬರ್ಕ್ಯುಲೋಸಿಸ್) ಎಂಬುದು ಒಂದು ಬಗೆಯ ಸೋಂಕು ಆಗಿದ್ದು, ಒಂದು ರೀತಿಯ ಬ್ಯಾಕ್ಟೀರಿಯಾ "ಮೈಕೊಬ್ಯಾಕ್ಟೀರಿಯಂ ಟ್ಯೂಬರ್ಕ್ಯುಲೋಸಿಸ್" ನಿಂದ ಜನ್ಮ ತಾಳುತ್ತದೆ.
ಇಂದು ಮಾನವನ್ನು ಕಾಡುತ್ತಿರುವ ರೋಗಗಳಿಗೆ ಅಂಕೆ ಸಂಖ್ಯೆಯೇ ಇಲ್ಲವಾಗಿಬಿಟ್ಟಿದೆ! ಕಟ್ಟುನಿಟ್ಟಲ್ಲದ ಜೀವನ ಶೈಲಿ ಮತ್ತು ಆಧುನೀಕತೆ ನಮ್ಮನ್ನು ರೋಗರುಜಿನಗಳಿಗೆ ಹೆಚ್ಚುಚ್ಚು ಒಳಗಾಗುವಂತೆ ಮಾಡುತ್ತದೆ. ಇಂದು ಸಣ್ಣ ಮಟ್ಟಿಗಿನ ರೋಗಗಳು ಕೂಡ ದೊಡ್ಡದಾಗಿ ವಿಸ್ತರಿಸಿ ಮಾನವ ಜೀವನಕ್ಕೆ ಮಾರಕವಾಗಿ ಮಾರ್ಪಟ್ಟಿದೆ. ನಾವು ನೈಸರ್ಗಿಕ ವಿಧಾನಗಳಿಂದ ಆಧುನಿಕ ಆಹಾರ ಪದ್ಧತಿಗೆ ನಮ್ಮನ್ನು ಮಾರ್ಪಡಿಸಿಕೊಂಡಿರುವುದೇ ಇದಕ್ಕೆ ಕಾರಣವೆಂಬುದು ವಿಜ್ಞಾನಿಗಳ ಅಭಿಪ್ರಾಯವಾಗಿದೆ.
ಮೊದಲೆಲ್ಲಾ ವಿರಳವಾಗಿದ್ದ ಕಾಯಿಲೆ ಟಿ.ಬಿ ಇಂದು ತನ್ನ ಕಬಂಧ ಬಾಹುವನ್ನು ಎಲ್ಲೆಡೆ ವಿಸ್ತರಿಸಿದೆ. ಕ್ಷಯ' ಅಥವಾ ಟಿ.ಬಿ' (ಟ್ಯೂಬರ್ಕ್ಯುಲೋಸಿಸ್) ಎಂಬುದು ಒಂದು ಬಗೆಯ ಸೋಂಕು ಆಗಿದ್ದು, ಒಂದು ರೀತಿಯ ಬ್ಯಾಕ್ಟೀರಿಯಾ "ಮೈಕೊಬ್ಯಾಕ್ಟೀರಿಯಂ ಟ್ಯೂಬರ್ಕ್ಯುಲೋಸಿಸ್" ನಿಂದ ಜನ್ಮ ತಾಳುತ್ತದೆ. ಇದು ಸೋಂಕು ಆಗಿರುವುದರಿಂದ ದೇಹದ ಯಾವುದೇ ಭಾಗವನ್ನು ಆಕ್ರಮಿಸಿಕೊಳ್ಳಬಹುದು. ತನ್ನ ಪ್ರಾಬಲ್ಯವನ್ನು ಬ್ಯಾಕ್ಟೀರಿಯಾದ ಮೂಲಕ ಈ ರೋಗವು ತೋರಿಸಲಿದ್ದು ಒಮ್ಮೆಲೇ ದೇಹದಲ್ಲಿ ಪರಿಣಾಮವನ್ನು ಉಂಟುಮಾಡದೇ ಇದ್ದರೂ ನಿಧಾನವಾಗಿ ಈ ರೋಗ ತನ್ನ ಹಾಜರಾತಿಯನ್ನು ತೋರ್ಪಡಿಸುತ್ತದೆ.
ದುರ್ಬಲ ರೋಗನಿರೋಧಕ ಶಕ್ತಿ, ಹಸಿವಾಗದಿರುವಿಕೆ, ಆಯಾಸ, ರಕ್ತ ವಾಂತಿ ಕೆಮ್ಮು, ಉಸಿರಾಟದ ತೊಂದರೆ, ತೂಕ ಇಳಿಕೆ, ರಾತ್ರಿವೇಳೆಯಲ್ಲಿ ಬೆವರುವುದು, ಆಗಾಗ್ಗೆ ಜ್ವರ, ಮತ್ತು ಸ್ನಾಯುಗಳಲ್ಲಿ ನೋವು ಈ ರೋಗದ ಸಾಮಾನ್ಯ ಲಕ್ಷಣವಾಗಿವೆ. ಹೆಚ್ಚು ದೀರ್ಘ ಸಮಯದಿಂದ ಈ ಸಮಸ್ಯೆಗಳು ನಿಮ್ಮನ್ನು ಕಾಡುತ್ತಿದೆ ಎಂದಲ್ಲಿ ಇದಕ್ಕೆ ಹೆಚ್ಚು ಗಮನವನ್ನು ನೀಡಬೇಕಾಗುತ್ತದೆ.
ಅದಾಗ್ಯೂ ನೀವು ಸೇವಿಸುವ ಆಹಾರದಲ್ಲಿ ಕೆಲವೊಂದು ಬದಲಾವಣೆಗಳನ್ನು ಮಾಡಿಕೊಂಡಾಗ ಟಿಬಿಯಿಂದ ನೈಸರ್ಗಿಕವಾಗಿ ಮುಕ್ತಿಯನ್ನು ಪಡೆದುಕೊಳ್ಳಬಹುದಾಗಿದೆ. ಕೆಲವೊಂದು ತರಕಾರಿ ಹಣ್ಣುಗಳನ್ನು ಈ ಕೆಳಗೆ ನಾವು ಶಿಫಾರಸು ಮಾಡಿದ್ದು ಇದು ಟಿ.ಬಿ ಅಥವಾ ಕ್ಷಯ ರೋಗವನ್ನು ನೈಸರ್ಗಿಕವಾಗಿ ಪರಿಹರಿಸಲಿದೆ...
ಕಿತ್ತಳೆ ಹಣ್ಣು
ಸಾಕಷ್ಟು ಪ್ರಮಾಣದಲ್ಲಿ ಮಿನರಲ್ಗಳನ್ನು ಒಳಗೊಂಡಿರುವ ಕಿತ್ತಳೆಯು ನಿಮ್ಮ ಶಕ್ತಿಯ ಮಟ್ಟವನ್ನು ಹೆಚ್ಚಿಸುತ್ತದೆ ಹಾಗೆಯೇ ಶ್ವಾಸಕೋಶವನ್ನು ಯಾವುದೇ ಸೋಂಕಿನಿಂದ ಸಂರಕ್ಷಿಸುತ್ತದೆ. ಸ್ವಲ್ಪ ಉಪ್ಪು ಮತ್ತು ಜೇನು ಸೇರಿಸಿ ನಿಮಗೆ ಇದರ ಜ್ಯೂಸ್ ಅನ್ನು ಸಿದ್ಧಪಡಿಸಬಹುದಾಗಿದೆ. ದಿನಕ್ಕೆರಡು ಬಾರಿ ಈ ಜ್ಯೂಸ್ ಅನ್ನು ಸೇವಿಸುತ್ತಿರಿ.ಹುಳಿ ಸಿಹಿ ರುಚಿಯ ಕಿತ್ತಳೆ ಹಣ್ಣಿನ ಚಿನ್ನದಂತಹ ಗುಣಗಳು
ಸೋರೆಕಾಯಿ
ನೀರಿನ ಅಂಶ ಮತ್ತು ನಾರಿನಂಶವನ್ನು ಈ ತರಕಾರಿ ಒಳಗೊಂಡಿದೆ. ಬೇರೆ ಬೇರೆ ರೀತಿಯ ನ್ಯೂಟ್ರಿನ್ ಮತ್ತು ಮಿನರಲ್ಗಳನ್ನು ಇದು ಹೊಂದಿದ್ದು ನಿಮ್ಮ ರೋಗನಿರೋಧಕ ಶಕ್ತಿಯನ್ನು ಇದು ಹೆಚ್ಚಿಸಲಿದೆ. ಸೋರೆಕಾಯಿಯನ್ನು ನಿತ್ಯವೂ ಸೇವಿಸುವುದು ಟಿಬಿಗೆ ಉತ್ತಮ ಔಷಧ ಎಂದೆನಿಸಿದೆ.ಯಾವುದೇ ಕಾರಣಕ್ಕೂ 'ಸೋರೆಕಾಯಿ-ಜ್ಯೂಸ್' ಮಿಸ್ ಮಾಡಬೇಡಿ!
ಪುದೀನಾ
ಪುದೀನಾದಲ್ಲಿ ಆಂಟಿ ಬ್ಯಾಕ್ಟೀರಿಯಲ್ ಅಂಶಗಳನ್ನು ನಿಮಗೆ ಕಂಡುಕೊಳ್ಳಬಹುದಾಗಿದೆ. ಲೋಳೆಯನ್ನು ಕರಗಿಸಿ ಶ್ವಾಸಕೋಶಕ್ಕೆ ಪೌಷ್ಟಿಕತೆಯನ್ನು ಇದು ನೀಡುತ್ತದೆ. ಔಷಧಗಳ ಪ್ರತಿಕೂಲ ಪರಿಣಾಮವನ್ನು ತಡೆಯಲು ಪುದೀನಾ ಸಹಕಾರಿಯಾಗಿದೆ. ಅಂತೆಯೇ ವಿಷಕಾರಿ ಅಂಶಗಳನ್ನು ದೇಹದಿಂದ ಇದು ಹೊರಹಾಕುತ್ತದೆ. ಟಿಬಿಯಿಂದ ನಿಮ್ಮನ್ನು ಕಾಪಾಡಿಕೊಳ್ಳುವಲ್ಲಿ ಇದು ಉತ್ತಮ ಮನೆಮದ್ದು ಎಂದೆನಿಸಿದೆ. ಪುದೀನಾ ಎಲೆಗಳ ಸೇವನೆ ಆರೋಗ್ಯಕ್ಕೆ ಅತ್ಯುತ್ತಮ ಹೇಗೆ?
ಬೆಳ್ಳುಳ್ಳಿ
ನಿಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಬೆಳ್ಳುಳ್ಳಿ ಸಹಾಯಕ. ನಿಮ್ಮ ನಿತ್ಯದ ಆಹಾರದಲ್ಲಿ ಬೆಳ್ಳುಳ್ಳಿ ಸೇವನೆಯನ್ನು ಮಾಡಿ ಅಂತೆಯೇ ಟಿಬಿಯನ್ನುಂಟು ಮಾಡುವ ಬ್ಯಾಕ್ಟೀರಿಯಾವನ್ನು ಮಟ್ಟ ಹಾಕುವಲ್ಲಿ ಇದು ಸಹಕಾರಿಯಾಗಿದೆ. ಅಲಿಸಿನ್ ಮತ್ತು ಅಜೊನಾ ಅಂಶವು ಬೆಳ್ಳುಳ್ಳಿಯಲ್ಲಿದ್ದು ಇದು ಬ್ಯಾಕ್ಟೀರಿಯಾ ಬೆಳವಣಿಗೆಯನ್ನು ತಡೆಯುತ್ತದೆ. ಟಿಬಿಯಿಂದ ರಕ್ಷಣೆ ಪಡೆಯುವಲ್ಲಿ ಇದೊಂದು ನೈಸರ್ಗಿಕ ಉತ್ಪನ್ನವಾಗಿದೆ.ಬೆಳ್ಳುಳ್ಳಿ ಜಜ್ಜಿ ಹಾಕಿದ ಹಾಲು ಕುಡಿದರೆ, ಆರೋಗ್ಯ ವೃದ್ಧಿ
ಬಾಳೆಹಣ್ಣು
ಉತ್ತಮ ಅಂಶಗಳನ್ನು ಬಾಳೆಹಣ್ಣು ಒಳಗೊಂಡಿದ್ದು ಇದು ನ್ಯೂಟ್ರಿನ್ ಅಂಶಗಳಿಂದ ಯಥೇಚ್ಛವಾಗಿದೆ. ನಿಮ್ಮ ರೋಗನಿರೋಧಕ ಶಕ್ತಿಯನ್ನು ಇದು ಹೆಚ್ಚಿಸಲಿದೆ ಅಂತೆಯೇ ಜ್ವರ ಮತ್ತು ಕೆಮ್ಮನ್ನು ದೂರಮಾಡಲಿದ್ದು ಟಿಬಿಯ ರೋಗ ಲಕ್ಷಣಗಳನ್ನು ಇಳಿಕೆ ಮಾಡಲಿದೆ. ಆರೋಗ್ಯವಾಗಿರಲು ನಿತ್ಯವೂ 1-2 ಬಾಳೆಹಣ್ಣುಗಳನ್ನು ಸೇವಿಸಿ.ದಿನಕ್ಕೆರಡು ಬಾಳೆಹಣ್ಣು ಸೇವಿಸಿ, ವೈದ್ಯರಿಂದ ದೂರವಿರಿ!
ಕರಿಮೆಣಸು
ಶ್ವಾಸಕೋಶಗಳಲ್ಲಿರುವ ಉರಿಯೂತ ಗುಣಗಳನ್ನು ತನ್ನ ಅಂಶಗಳಿಂದ ಇದು ಕಡಿಮೆ ಮಾಡುತ್ತದೆ. ಶ್ವಾಸಕೋಶವನ್ನು ಸ್ವಚ್ಛಮಾಡಲು ಇದು ಸಹಕಾರಿಯಾಗಿದೆ. ಟಿಬಿಯಿಂದ ನಿಮ್ಮನ್ನು ರಕ್ಷಿಸಿಕೊಳ್ಳಲು ಇದು ಅನನ್ಯ ಮನೆಮದ್ದಾಗಿದೆ.ನಮಗೆ ತಿಳಿದಿರುವ ಕೆಲವೊಂದು ಅಂಶಗಳನ್ನು ಈ ಲೇಖನದಲ್ಲಿ ನಾವು ನಿಮ್ಮೊಂದಿಗೆ ಹಂಚಿಕೊಂಡಿದ್ದು ನಿಮ್ಮ ಅಭಿಪ್ರಾಯವನ್ನು ನಮ್ಮೊಂದಿಗೆ ಹಂಚಿಕೊಳ್ಳಿ.
ಸೀತಾಫಲ ಹಣ್ಣು
ಟಿ.ಬಿ ಕಾಯಿಲೆಗೆ ಇದು ಉತ್ತಮ ಔಷಧವಾಗಿರುವ ಹಣ್ಣಾಗಿದೆ. ನಿಮ್ಮ ಅಂಗಾಂಶಗಳನ್ನು ಪುನರುಜ್ಜೀವನಗೊಳಿಸುವಲ್ಲಿ ಈ ಹಣ್ಣು ಸಹಕಾರಿಯಾಗಿದೆ ಮತ್ತು ಜ್ಯೂಸ್ ರೂಪಲ್ಲಿ ಇಲ್ಲವೇ ಹಾಗೆಯೇ ಈ ಹಣ್ಣಿನ ಸೇವನೆಯನ್ನು ನಿಮಗೆ ಮಾಡಬಹುದಾಗಿದೆ.ಸೀತಾಫಲ ಹಣ್ಣಿನ ನ೦ಬಲಸಾಧ್ಯವಾದ ಆರೋಗ್ಯವರ್ಧಕ ಗುಣಗಳು