Latest Updates
-
ಬಿಸಿಲ ಬೇಗೆಯಲ್ಲಿ ವರ್ಕೌಟ್ ಮಾಡ್ತಿದ್ದೀರಾ? ನಿಮ್ಮ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ, ಎಚ್ಚರವಿರಲಿ! -
ಬಿಸಿಲ ಬೇಗೆಯಲ್ಲಿ ಮದುವೆ ಮಾಡ್ತಿದ್ದೀರಾ? ಅತಿಥಿಗಳ ಆರೋಗ್ಯಕ್ಕಾಗಿ ಈ ಸಣ್ಣ ಬದಲಾವಣೆಗಳನ್ನು ಮಿಸ್ ಮಾಡ್ಬೇಡಿ! -
ಬಾಡಿಗೆ ಮನೆಯಲ್ಲಿ ಬಿಸಿಲಿನ ಬೇಗೆಯಿಂದ ಪಾರಾಗುವುದು ಹೇಗೆ? ಕರೆಂಟ್ ಬಿಲ್ ಉಳಿಸುವ ಸೀಕ್ರೆಟ್ ಟಿಪ್ಸ್ ಇಲ್ಲಿದೆ! -
ಬಿಸಿಲ ಬೇಗೆಯಲ್ಲಿ ಮಧುಮೇಹಿಗಳ ಪರದಾಟ: ಸಕ್ಕರೆ ಮಟ್ಟ ಏರಿಕೆಯಾಗದಂತೆ ತಂಪಾಗಿರಲು ಈ ಪಾನೀಯಗಳೇ ಮದ್ದು! -
ಇಂದೇ ಮ್ಯೂಸಿಯಂಗೆ ಹೋಗಿ: ಉಚಿತ ಪ್ರವೇಶದ ಜೊತೆಗೆ ಫೋಟೋಶೂಟ್ಗೆ ಸಿಗಲಿದೆ ಸುವರ್ಣಾವಕಾಶ, ಮಿಸ್ ಮಾಡ್ಬೇಡಿ! -
ಶಾಖದ ಅಲೆ ಎಚ್ಚರಿಕೆ: ಬಿಸಿಲಿನಲ್ಲಿ ವ್ಯಾಯಾಮ ಮಾಡುವ ಮುನ್ನ ಈ ತಪ್ಪುಗಳನ್ನು ಮಾಡಬೇಡಿ, ಇಲ್ಲಿದೆ ಸುರಕ್ಷಿತ ಮಾರ್ಗ! -
ಬಿಸಿಲಿನ ಬೇಗೆಯಲ್ಲೂ ಮದುವೆ ಸಂಭ್ರಮ ಮರೆಯಾಗದಿರಲಿ: ಅತಿಥಿಗಳಿಗಾಗಿ ಈ ಸಣ್ಣ ಬದಲಾವಣೆಗಳನ್ನು ಮಾಡಿ ನೋಡಿ! -
ಉರಿಬಿಸಿಲಿಗೆ ಮನೆ ಕುದಿಯುತ್ತಿದೆಯೇ? ಎಸಿ ಇಲ್ಲದೆಯೇ ನಿಮ್ಮ ಮನೆಯನ್ನು ತಂಪಾಗಿಸುವ ಸರಳ ಮ್ಯಾಜಿಕ್ ಟಿಪ್ಸ್ ಇಲ್ಲಿದೆ! -
44°C ಬಿಸಿಲಿನಲ್ಲಿ ಸುಸ್ತಾಗುತ್ತಿದ್ದೀರಾ? ದೇಹವನ್ನು ತಂಪಾಗಿಡಲು ಈ 3 ಪದಾರ್ಥಗಳು ನಿಮ್ಮ ಅಡುಗೆಮನೆಯಲ್ಲೇ ಇವೆ! -
ಇನ್ಸ್ಟಾಗ್ರಾಮ್ನಲ್ಲಿ 90ರ ದಶಕದ ಹಾಡುಗಳದ್ದೇ ಹವಾ: ನಿಮ್ಮ ರೀಲ್ಸ್ ವೈರಲ್ ಮಾಡಲು ಈ ಸೀಕ್ರೆಟ್ ಟ್ರಿಕ್ಸ್ ಮಿಸ್ ಮಾಡ್ಬೇಡಿ!
ಬೇಸಿಗೆಯ ಬಿಸಿಲ ಝಳದಿಂದ ಬಚಾವ್ ಆಗಲು ಸರಳೋಪಾಯ
ಬಿಸಿಲಿನ ಝಳ ಹೆಚ್ಚಾದಂತೆ ದೇಹ ನೀರನ್ನು ಕಳೆದುಕೊಳ್ಳುತ್ತಾ ಹೋಗುತ್ತದೆ. ಸೂಕ್ತ ಪ್ರಮಾಣದ ಆರೈಕೆ ಹಾಗೂ ನೀರಿನ ಪೂರೈಕೆ ಆಗದೇ ಇದ್ದರೆ ಈ ಝಳ ದೇಹವನ್ನು ನಿರ್ಜಲೀಕರಿಸಿ ಆಘಾತವನ್ನು ನೀಡಬಹುದು.
ಕರ್ನಾಟಕದ ಬಳ್ಳಾರಿಯಲ್ಲಿ ಎರಡು ಋತುಗಳಿವೆಯಂತೆ. ಒಂದು ಬೇಸಿಗೆ, ಇನ್ನೊಂದು ಬಿರುಬೇಸಿಗೆ ಎಂದು ಬೀಚಿಯವರು ತಮ್ಮ ಬರಹದಲ್ಲಿ ತಿಳಿಸುತ್ತಾರೆ. ಸಾಮಾನ್ಯವಾಗಿ ಕರಾವಳಿ, ಬಯಲುಸೀಮೆ, ಕಲ್ಲುಬಂಡೆಗಳಿರುವ ಪ್ರದೇಶಗಳಲ್ಲಿ ಸೆಖೆ ಹೆಚ್ಚೇ ಇರುತ್ತದೆ. ಬಿಸಿಲಿನ ಝಳ ಹೆಚ್ಚಾದಂತೆ ದೇಹ ನೀರನ್ನು ಕಳೆದುಕೊಳ್ಳುತ್ತಾ ಹೋಗುತ್ತದೆ. ಬಾಡಿ ಹೀಟ್ ಕಮ್ಮಿ ಮಾಡುವ 9 ಪಾನೀಯಗಳು
ಸೂಕ್ತ ಪ್ರಮಾಣದ ಆರೈಕೆ ಹಾಗೂ ನೀರಿನ ಪೂರೈಕೆ ಆಗದೇ ಇದ್ದರೆ ಈ ಝಳ ದೇಹವನ್ನು ನಿರ್ಜಲೀಕರಿಸಿ ಆಘಾತವನ್ನು ನೀಡಬಹುದು. ಇದನ್ನು ಬಿಸಿಲಿನ ಆಘಾತ ಅಥವಾ Heat stroke ಎಂದು ಕರೆಯುತ್ತಾರೆ. ಬಾಡಿ ಹೀಟ್ ಕಡಿಮೆ ಮಾಡಲು ಮನೆ ಮದ್ದು
ಬಿಸಿಲಿನ ಆಘಾತ ಹೆಚ್ಚಾದಷ್ಟೂ ನಿತ್ರಾಣವೂ ಹೆಚ್ಚುತ್ತಾ ಹೋಗಿ ಕೆಲವು ಮುಖ್ಯ ಅಂಗಗಳು ಕುಸಿಯುತ್ತವೆ. ಈ ಹಂತದಲ್ಲಿ ಉಸಿರಾಟ ವೇಗವಾಗುವುದು, ತಲೆನೋವು, ಹೃದಯದ ಬಡಿತ ಹೆಚ್ಚುವುದು, ವಾಕರಿಕೆ, ಚರ್ಮ ಕೆಂಪಗಾಗುತ್ತದೆ ಮತ್ತು ಅತಿ ಹೆಚ್ಚು ಬೆವರುವುದು ಕಂಡುಬರುತ್ತದೆ. ಇದರೊಂದಿಗೆ ತಲೆ ಸುತ್ತುವುದು, ಕಣ್ಣು ಕತ್ತಲೆ ಕವಿಯುವುದು ಮೊದಲಾದವು ಬಿಸಿಲಿನ ಆಘಾತದ ಸೂಚನೆಗಳಾಗಿವೆ. ಇದರಿಂದ ರಕ್ಷಿಸಿಕೊಳ್ಳಲು ಕೆಲವು ಉಪಾಯಗಳು ಇಲ್ಲಿವೆ....

ಈರುಳ್ಳಿಯ ಜ್ಯೂಸ್
ಕೇಳಲು ವಿಚಿತ್ರವೆನಿಸುವ ಈ ಮಾಹಿತಿ ನಿಜಕ್ಕೂ ಪರಿಣಾಮಕಾರಿಯಾಗಿದೆ. ಈರುಳ್ಳಿಯ ರಸವನ್ನು ಎದೆ ಮತ್ತು ಕಿವಿಯ ಹಿಂಭಾಗದ ಭಾಗದಲ್ಲಿ ಹಚ್ಚಿಕೊಳ್ಳುವ ಮೂಲಕ ಆಘಾತವನ್ನು ತಡೆಯಬಹುದು. ಬಿಸಿಲಿನ ಝಳವಿರುವ ಸ್ಥಳಗಳಲ್ಲಿ ಈ ವಿಧಾನವನ್ನು ಅನುಸುರಿಸುವ ಮೂಲಕ ಹಾಗೂ ಆಹಾರದ ಜೊತೆ ಹಸಿ ನೀರುಳ್ಳಿಯನ್ನು ಸಾಲಾಡ್ ರೂಪದಲ್ಲಿ ಸೇವಿಸುವ ಮೂಲಕ ಬಿಸಿಲಿನ ಝಳವನ್ನು ಕಡಿಮೆ ಮಾಡಬಹುದು. ಕೂದಲು ಉದುರುವಿಕೆಗೆ ಈರುಳ್ಳಿ ರಸದ ಚಮತ್ಕಾರ

ಹುಣಸೆ ನೀರು
ಒಂದು ಪಾತ್ರೆಯಲ್ಲಿ ಕೊಂಚ ನೀರನ್ನು ಬಿಸಿಮಾಡಿ. ಕುದಿಯಲು ಪ್ರಾರಂಭವಾದ ಬಳಿಕ ಇದಕ್ಕೆ ಕೊಂಚ ಹುಣಸೆ ಹುಳಿ ಹಾಕಿ ಹತ್ತು ನಿಮಿಷ ಕುದಿಸುವುದನ್ನು ಮುಂದುವರೆಸಿ. ಬಳಿಕ ಈ ನೀರನ್ನು ಸೋಸಿ ತಣಿಸಿ ಕುಡಿಯಿರಿ. ಈ ನೀರಿನಲ್ಲಿ ಹಲವಾರು ಖನಿಜಗಳ ಜೊತೆಗೇ ವಿಟಮಿನ್ನುಗಳೂ ಎಲೆಕ್ಟ್ರೋಲೈಟುಗಳೂ ಇವೆ. ಅಲ್ಲದೇ ಇದು ಬಿಸಿಲಿಗೆ ಏರಿದ್ದ ದೇಹದ ತಾಪಮಾನವನ್ನೂ ಇಳಿಸುತ್ತದೆ.

ಎಳನೀರು
ಬಿಸಿಲಿನಿಂದ ದೇಹದಿಂದ ಹೆಚ್ಚಿನ ಪ್ರಮಾಣದ ನೀರು ಬೆವರಿನ ಮೂಲಕ ಆವಿಯಾಗುತ್ತದೆ. ಇದನ್ನು ಮರುತುಂಬಿಕೊಳ್ಳಲು ಎಳನೀರು ಮತ್ತು ಮಜ್ಜಿಗೆಯನ್ನು ಕುಡಿದಷ್ಟೂ ಉತ್ತಮ. ಇದು ದೇಹ ಕಳೆದುಕೊಂಡಿದ್ದ ನೀರನ್ನು ಮತ್ತೆ ತುಂಬಿಸಿ ದೇಹ ಕಳೆದುಕೊಂಡಿದ್ದ ಖನಿಜಗಳನ್ನು ಮತ್ತೆ ಒದಗಿಸುತ್ತವೆ.ಎಳನೀರಿನಲ್ಲಿಯೂ ಉತ್ತಮ ಪ್ರಮಾಣದ ಎಲೆಕ್ಟ್ರೋಲೈಟುಗಳಿವೆ. ಕಲ್ಪವೃಕ್ಷ ಎಳೆ ನೀರಿನ ಎಣಿಕೆಯಿಲ್ಲದ ಆರೋಗ್ಯ ಗುಣಗಳು

ಪುದೀನಾ ಜ್ಯೂಸ್
ದೇಹವನ್ನು ತಂಪಾಗಿಸಲು ಪುದಿನಾ ಎಲೆಗಳ ಜ್ಯೂಸ್ ಸಹಾ ಸಮರ್ಥವಾಗಿದೆ. ಇದರ ಜೊತೆಗೆ ಕೊತ್ತಂಬರಿ ಎಲೆಗಳನ್ನು ಸೇರಿಸಿದರೆ ಇನ್ನೂ ಉತ್ತಮ. ಬೇಸಿಗೆಯಲ್ಲಿ ದಿನಕ್ಕೊಂದು ಲೋಟವಾದರೂ ಈ ಜ್ಯೂಸ್ ಕುಡಿಯಿರಿ.ಒಂದು ಲೋಟ 'ಪುದೀನ ಜ್ಯೂಸ್'ನಲ್ಲಿದೆ ಔಷಧೀಯ ಶಕ್ತಿ!

ಸೇಬಿನ ಶಿರ್ಕಾ
ಲೋಳೆಸರದ ಜ್ಯೂಸ್ ಕುಡಿಯುವ ಮೂಲಕ ಪರಿಸರದ ತಾಪಮಾನದೊಂದಿಗೆ ದೇಹ ಹೊಂದಿಕೊಳ್ಳಲು ನೆರವಾಗುತ್ತದೆ. ಒಂದು ಲೋಟ ಲೋಳೆಸರದ ಜ್ಯೂಸ್ ಅನ್ನು ಮುಂಜಾನೆಯ ಹೊತ್ತು ಕುಡಿಯುವುದು ಉತ್ತಮ. ಏರುತ್ತಿರುವ ಉರಿಬಿಸಿಲಿನ ಧಗೆ-ಆಹಾರ ಕ್ರಮ ಹೀಗಿರಲಿ

ಶ್ರೀಗಂಧದ ಲೇಪನ
ದೇಹವನ್ನು ತಂಪಾಗಿಸಲು ಶ್ರೀಗಂಧದ ಲೇಪನವೂ ಉತ್ತಮವಾಗಿದೆ. ಎದೆ ಮತ್ತು ಹಣೆಯ ಮೇಲೆ ಈ ಲೇಪನವನ್ನು ಹಚ್ಚಿಕೊಳ್ಳುವ ಮೂಲಕ ದೇಹದ ತಾಪಮಾನವನ್ನು ಕಡಿಮೆಗೊಳಿಸಬಹುದು.ನಿಮ್ಮ ತ್ವಚೆಯ ಅಂದಕ್ಕೆ ಬೇಕು ಶ್ರೀಗಂಧದ ಲೇಪನ!



Click it and Unblock the Notifications