Latest Updates
-
ಹಬ್ಬದ ಫ್ಯಾಷನ್ ಟ್ರೆಂಡ್ಸ್: ಈ ಲುಕ್ ಟ್ರೈ ಮಾಡಿ ಮಿಂಚಿ -
ಬೆಳಗಿನ ವ್ಯಾಯಾಮ: ಬಿಸಿಲ ಧಗೆಯಿಂದ ಪಾರಾಗಲು ಹೀಗೆ ಮಾಡಿ -
ಬಿಸಿಲಿನ ತಾಪಕ್ಕೆ ದಾಂಪತ್ಯದಲ್ಲಿ ಜಗಳವೇ? ಈ ಟಿಪ್ಸ್ ಪಾಲಿಸಿ -
ದೆಹಲಿ ಬಿಸಿಲು: ಮನೆಯನ್ನು ತಂಪಾಗಿಡಲು ಈ ಟಿಪ್ಸ್ ಫಾಲೋ ಮಾಡಿ -
ತೂಕ ಇಳಿಸುವ ಔಷಧಿಗಳ ಬೆಲೆ ಇಳಿಕೆ: ಬೊಜ್ಜು ನಿವಾರಣೆಗೆ ಹೊಸ ಭರವಸೆ -
ಎಸ್ಪಿಎಫ್ ಸ್ಟಿಕ್: ಬಿಸಿಲ ಬೇಗೆಯಿಂದ ಪಾರಾಗಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಯೋಗಾಸನ ಚಾಂಪಿಯನ್ಶಿಪ್: ಅಯೋಧ್ಯೆಯಲ್ಲಿ ಯೋಗದ ಅದ್ಭುತ ಕೌಶಲ ಪ್ರದರ್ಶನ -
ಗುಜರಾತ್ ಲಿವ್-ಇನ್ ಜೋಡಿಗಳೇ, ಈ ಹೊಸ ನಿಯಮ ಮಿಸ್ ಮಾಡ್ಬೇಡಿ! -
ಹಬ್ಬದ ಅಲಂಕಾರ: ಕಡಿಮೆ ಖರ್ಚಿನಲ್ಲಿ ನಿಮ್ಮ ಮನೆ ಕಂಗೊಳಿಸಲಿ ಹೀಗೆ! -
ಬಿಸಿಲಿನ ತಾಪಕ್ಕೆ ಸುಸ್ತಾದ್ರಾ? ಈ ಪಾನೀಯಗಳು ನಿಮ್ಮನ್ನು ಕಾಪಾಡುತ್ತವೆ
ದೇಹದಲ್ಲಿ ಕಬ್ಬಿಣಾಂಶದ ಕೊರತೆ ಸೂಚಿಸುವ 6 ಮುಖ್ಯ ಲಕ್ಷಣಗಳು
ಮನುಷ್ಯನ ದೇಹದಲ್ಲಿ ಕಬ್ಬಿಣದ ಅಂಶವು ಅತಿ ಮುಖ್ಯವಾದದ್ದು. ಅದಿಲ್ಲದೆ ದೇಹದ ಎಲ್ಲ ಭಾಗಗಳಿಗೆ ಆಕ್ಸಿಜೆನ್ ತಲುಪಿಸುವ ರಕ್ತದಲ್ಲಿನ ಹೀಮೋಗ್ಲೋಬಿನ್ ಉತ್ಪಾದನೆಯಾಗುವದಿಲ್ಲ. ಅತಿಯಾದ ಕಬ್ಬಿಣಂಶದ ಕೊರತೆಯಾದಾಗ ಇಡೀ ದಿನ ಸುಸ್ತು, ತಲೆ ಸುತ್ತುವಿಕೆಯ ಅನುಭವವಾಗುತ್ತದೆ.
ಇದನ್ನೇ ಅನೀಮಿಯ ಅಥವ ರಕ್ತಹೀನತೆ ಎಂದು ಕರೆಯುತ್ತಾರೆ. ಋತುಚಕ್ರದಲ್ಲಿ ಆಗುವ ರಕ್ತಸ್ರಾವದಿಂದಾಗಿ ಹೆಣ್ಣುಮಕ್ಕಳಲ್ಲೇ ರಕ್ತಹೀನತೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಆದರೂ ಕೆಲವೊಮ್ಮೆ ದೇಹದಲ್ಲಾಗುವ ವಿಲಕ್ಷಣ ಬದಲಾವಣೆಗಳು ಕೂಡ ರಕ್ತಹೀನತೆಯನ್ನು ಸೂಚಿಸುತ್ತವೆ...

ಊದಿಕೊಂಡ ನಾಲಿಗೆ
'ಅಟ್ರಾಪಿಕ್ ಗ್ಲಾಸಿಟಸ್' ಎಂಬ ರೋಗಲಕ್ಷಣದಲ್ಲಿ ನಾಲಿಗೆ ಊದಿಕೊಂಡು ಮಾಂಸದ ತುಂಡಿನಂತೆ ಕಾಣುತ್ತದೆ. ಇದು ರಕ್ತಹೀನತೆಯ ಅತಿ ಮುಖ್ಯ ಲಕ್ಷಣ. ರುಚಿ ಗ್ರಂಥಿಗಳ ನಾಶವಾಗುವಿಕೆಯಿಂದ ಈ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಇದು ಸೌಂದರ್ಯಕ್ಕೆ ಧಕ್ಕೆ ತರುವದಲ್ಲದೆ, ಅತಿಯಾದ ನೋವಿನಿಂದ ಕೂಡಿದ ಸ್ಥಿತಿಯಾಗಿರುತ್ತದೆ. ತಿನ್ನಲು, ಕುಡಿಯಲು ಹಾಗು ಮಾತನಾಡಲು ಬಹಳ ಹಿಂಸೆ ಆಗುತ್ತದೆ. ನಿಮ್ಮಲ್ಲಿ ಈ ತೆರನಾದ ಯಾವದೇ ಲಕ್ಷಣಗಳು ಕಂದು ಬಂದರೆ ಕೂಡಲೆ ರಕ್ತಪರೀಕ್ಷೆ ಮಾಡಿಸಿಕೊಳ್ಳಬೇಕು.

ಮಂಜುಗಡ್ಡೆಯನ್ನು ಜಗಿದು ತಿನ್ನುವ ಅತಿಯಾದ ಬಯಕೆ
'ಪ್ಯಾಗೊಫೆಜಿಯ' ಎಂಬ ವಿಚಿತ್ರವಾದ ಮಂಜುಗಡ್ಡೆಯನ್ನು ಜಗಿಯುವ ಬಯಕೆಯ ಲಕ್ಷಣ ಕಾಣಿಸಿಕೊಳ್ಳುತ್ತದೆ.(ಇದರಿಂದ ಊದಿಕೊಂಡಿರುವ ನಾಲಿಗೆಗೆ ಆಗಿರುವೆ ಹಿಂಸೆ ಕಡಿಮೆಯಾಗಬಹುದು). ಕೆಲವು ರೋಗಿಗಳು ಲೋಟ ಮತ್ತು ಬಕೆಟ್ನಷ್ಟು ಮಂಜು ತಿಂದಿರುವ ನಿದರ್ಶನಗಳಿವೆ.

ಮಣ್ಣು ತಿನ್ನುವ ಬಯಕೆ!!
ಈ ಲಕ್ಷಣಕ್ಕೆ ಮುಖ್ಯವಾದ ಕಾರಣ ಏನೆಂದು ಇನ್ನೂ ನಿಖರವಾಗಿ ಪತ್ತೆ ಹಚ್ಚಲು ಸಾಧ್ಯವಾಗಿಲ್ಲ. ಆದರೆ ಕಬ್ಬಿಣಾಂಶದ ಕೊರತೆ ಇರುವವರಿಗೆ ಪ್ಲಾಸ್ಟರ್, ಪೈಂಟ್, ಕೂದಲು ಅಷ್ಟೆ ಅಲ್ಲ ಮಣ್ಣನ್ನು ತಿನ್ನುವ ಅತಿಯಾದ ಪ್ರಚೋದನೆಯಾಗುತ್ತದೆ. ಆದರೆ ಕಬ್ಬಿಣಾಂಶವನ್ನು ಪೂರೈಸುವ ಮಾತ್ರೆಗಳ ಸೇವನೆಯಿಂದ ಈ ಸ್ಥಿತಿಯನ್ನು ನಿಭಾಯಿಸಬಹುದು.
Image source - Lisa Williams

ಒಡೆದ ತುಟಿಗಳು
ಚಳಿಗಾಲದಲ್ಲಿ ತುಟಿ ಒಡೆಯುವದು ಸಾಮನ್ಯವೆ ಸರಿ, ಆದರೆ ಕಬ್ಬಿಣಾಂಶದ ಕೊರತೆ ಇರುವವರಿಗೆ ತುಟಿಯ ಸಂದುಗಳಲ್ಲಿ ಸೀಳುವಿಕೆ ಕಾಣಿಸಿಕೊಳ್ಳುತ್ತದೆ(ಆಂಗುಲರ್ ಚೆಲಿಟಿಸ್). ಈ ಸ್ಥಿತಿಯು ರೋಗಿಗಳಿಗೆ ಮತನಾಡಲು, ನಗಲು ಅಷ್ಟೆ ಅಲ್ಲ ತಿನ್ನಲು ಕೂಡ ತೊಂದರೆ ಮಾಡುತ್ತದೆ. ಆಂಗುಲರ್ ಚೆಲಿಟಿಸ್ ಬೇರೆ ಅನೇಕ ರೋಗಗಳ ಲಕ್ಷಣ ಕೂಡ ಆಗಿದೆ, ಆದ್ದರಿಂದ ಬೇಗನ ರಕ್ತ ಪರೀಕ್ಷೆ ಮಾಡಿಸಿಕೊಳ್ಳಬೇಕು.
Image source - Matthew Ferguson

ಕಾಲುಗಳಲ್ಲಿ ಜುಮ್ಮೆನಿಸುವಿಕೆ
ನಾವು ಬಹಳ ಹೊತ್ತು ಒಂದೇ ಕಡೆ ಕುಳಿತರೆ ಜೋಮು ಹಿಡಿಯುವದು ಸಾಮಾನ್ಯ. ಕಬ್ಬಿಣಂಶದ ಕೊರತೆ ಇರಬೇಕಾದರೆ ಈ ಅನುಭವ ಆಗುವದು. ಆದರೆ ಕಬ್ಬಿಣಾಂಶದ ಮಾತ್ರೆ ತೆಗೆದುಕೊಳ್ಳುವವರೆಗೆ ಕಡಿಮೆ ಆಗುವದೇ ಇಲ್ಲ.

ಚಮಚದಾಕಾರದ ಉಗುರುಗಳು(ಕೊಯಿಲೊನೈಕಿಯ)
ಕಬ್ಬಿಣಾಂಶದ ಕೊರತೆಯಿಂದ ಉಗುರುಗಳು ಬಾಗಿದಂತಾಗಿ ಬಿರುಸಾಗುತ್ತವೆ. ಉಗುರುಗಳನ್ನು ಸುಲಭವಾಗಿ ಕೈಯಿಂದಲೇ ಮುರಿಯಬಹುದು. ಈ ಸ್ಥಿತಿಯಲ್ಲಿ ಕೂಡಲೆ ರಕ್ತ ತಪಾಸಣೆ ಮಾಡಿಸಿಕೊಳ್ಳಬೇಕು.
Image source - NHS UK



Click it and Unblock the Notifications











