Just In
- 41 min ago ವಾರ ಭವಿಷ್ಯ (ಏಪ್ರಿಲ್20-27) : ಈ ವಾರ 12 ರಾಶಿಗಳ ರಾಶಿಫಲ ಹೇಗಿದೆ?
- 3 hrs ago ಗುರು ಸಂಚಾರ 2024: ಕನ್ಯಾ ರಾಶಿಯಲ್ಲಿ 12 ತಿಂಗಳು ಗುರುವಿನ ಪ್ರಭಾವ ಹೇಗಿರಲಿದೆ?
- 12 hrs ago ವಾರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಈ 7 ದಿನಗಳು ನಿಮಗೆ ಹೇಗಿರಲಿದೆ?
- 13 hrs ago ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
Don't Miss
- News ಬೆಂಗಳೂರಿನಲ್ಲಿ ಮೋದಿ ಮತಬೇಟೆ; ರಾಜ್ಯಕ್ಕೆ ಪ್ರಧಾನಿ ಮೋದಿಯ ಕೊಡುಗೆ ಏನಿದೆ?: ಡಾ.ಜಿ ಪರಮೇಶ್ವರ್
- Sports DC vs SRH: ಹೈದರಾಬಾದ್ ಬ್ಯಾಟರ್ಗಳನ್ನು ಕಟ್ಟಿಹಾಕಲಿದ್ದಾರಾ ಡೆಲ್ಲಿ ಬೌಲರ್ಸ್?; ಸಂಭಾವ್ಯ ಆಡುವ 11ರ ಬಳಗ
- Technology ನಿಮ್ಮ ಬಳಿ ರೆಡ್ಮಿಯ ಈ ಫೋನ್ ಇದ್ರೆ, ಇಲ್ಲಿದೆ ನಿಮಗೆ ಗುಡ್ನ್ಯೂಸ್!
- Automobiles Mahindra: ದೊಡ್ಡ ಅಪಘಾತ ತಪ್ಪಿಸಿತು XUV700 ಕಾರಿನ ಈ ಸೇಫ್ಟಿ ಫೀಚರ್: ಎಲ್ಲರೂ ಸೇಫ್!
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Movies ಹಳೇ ಟ್ವೀಟ್ ಹಾಕಿ ರಕ್ಷಿತ್ ಶೆಟ್ಟಿ ಹೇಳಿದ್ದೇನು? 'ರಿಚರ್ಡ್ ಆಂಟನಿ' ಕಥೆ ಏನಾಯ್ತು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಲಿಂಬೆ ರಸ ಬೆರೆಸಿದ ನೀರು, ಅದೇನು ಮಾಯೆ, ಅದೇನು ಜಾದೂ!
ಲಿಂಬೆ ಹಣ್ಣು ಸಿಹಿ ಅಂಶದಿಂದ ಕೂಡಿಲ್ಲದಿದ್ದರೂ ತನ್ನ ಚಮತ್ಕಾರಿ ಆರೋಗ್ಯ ಸುಧಾರಕ ಅಂಶಗಳಿಂದ ಶ್ರೀಮಂತವಾಗಿದೆ. ಲಿಂಬೆಯಿಂದ ಹಲವಾರು ಆರೋಗ್ಯಕಾರಿ ಪ್ರಯೋಜನಗಳಿವೆ....
ದಿನದಲ್ಲಿ ಎಷ್ಟು ಲೋಟ ನೀರು ಕುಡಿಯುತ್ತೇವೆ ಎಂದು ಕೇಳಿದರೆ ಉತ್ತರ ಐದಕ್ಕಿಂತ ಕಡಿಮೆಯೇ ಇರಬಹುದು. ಯಾಕೆಂದರೆ ನೀರು ಕುಡಿಯುವಷ್ಟು ಉದಾಸೀನತೆಯನ್ನು ನಾವು ಬೇರೆ ಯಾವುದೇ ವಿಷಯದಲ್ಲೂ ಮಾಡಲ್ಲ. ಚಾ, ಕಾಫಿಯಾದರೆ ಅದಕ್ಕಿಂತ ಹೆಚ್ಚು ಸಲ ಕುಡಿಯುತ್ತೇವೆ.
ಬೆಳಿಗ್ಗೆ ಎದ್ದು, ಮಧ್ಯಾಹ್ನ ಮತ್ತು ಸಂಜೆ ಹೀಗೆ ಎಷ್ಟು ಬೇಕೋ ಅಷ್ಟು ಸಲ ಚಾ, ಕಾಫಿ ಕುಡಿಯುತ್ತೇವೆ. ಆದರೆ ನೀರು ಮಾತ್ರ ಕುಡಿಯಲ್ಲ. ಆದರೆ ದೇಹಕ್ಕೆ ಅಗತ್ಯವಾಗಿ ಬೇಕಾಗಿರುವುದು ನೀರು. ನಾವು ಹೆಚ್ಚು ನೀರು ಕುಡಿಯಲೇಬೇಕು. ನೀರು ಕುಡಿಯದೆ ಇದ್ದರೆ ಹಲವಾರು ರೀತಿಯ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ನೀರಿಗೆ ಸ್ವಲ್ಪ ಲಿಂಬೆರಸ ಬೆರೆಸಿ ಕುಡಿದರೆ ಅದು ತುಂಬಾ ಆರೋಗ್ಯಕಾರಿ. ಲಿಂಬೆ ಹಣ್ಣು- ಹುಳಿಯಾದರೂ, ಆರೋಗ್ಯಕ್ಕೆ ಸಿಹಿ!
ಮಾರುಕಟ್ಟೆಯಲ್ಲಿ ಸಿಗುವಂತಹ ಕೆಲವೊಂದು ಉತ್ಪನ್ನಗಳು ಚರ್ಮದ ಕಾಂತಿಯನ್ನು ಹೆಚ್ಚಿಸುತ್ತದೆ ಎಂದು ಕೇಳುತ್ತವೆ. ಇದಕ್ಕೆ ಹಣ ಕೂಡ ಖರ್ಚು ಮಾಡಬೇಕಾಗುತ್ತದೆ. ಯಾವುದೇ ಖರ್ಚು ಇಲ್ಲದೆ ಹೆಚ್ಚಿಗೆ ನೀರು ಕುಡಿದರೆ ಚರ್ಮದ ಕಾಂತಿಯು ವೃದ್ಧಿಸುತ್ತದೆ.
ಅದರಲ್ಲೂ ನೀರಿಗೆ ಎರಡು ಮೂರು ಚಮಚ ಲಿಂಬೆರಸವನ್ನು ಹಾಕಿ ಕುಡಿದರೆ ಅದರಿಂದ ಕಪ್ಪುಕಲೆಗಳು, ವಯಸ್ಸಾಗುತ್ತಿರುವ ಲಕ್ಷಣ ಮತ್ತು ನೆರಿಗೆ ಮೂಡುವುದನ್ನು ತಡೆಯಬಹುದು. ಲಿಂಬೆರಸವು ತಂಪನ್ನು ಉಂಟು ಮಾಡುವ ಕಾರಣದಿಂದ ಅತಿಯಾದ ಉಷ್ಣತೆಯಲ್ಲಿ ಇದು ತುಂಬಾ ಪರಿಣಾಮಕಾರಿ. ಬೆಳಗಿನ ಜಾವ ಲಿಂಬೆ ರಸ ಬೆರೆಸಿದ ನೀರನ್ನು ಸೇವಿಸಲು ಮರೆಯದಿರಿ!
ಅಜೀರ್ಣವೆನ್ನುವುದು ಇಂದಿನ ದಿನಗಳಲ್ಲಿ ಪ್ರತಿಯೊಬ್ಬರಲ್ಲೂ ಕಂಡುಬರುತ್ತಿದೆ. ಆದರೆ ಬಿಸಿನೀರು ಮತ್ತು ಲಿಂಬೆರಸವು ಅಜೀರ್ಣಕ್ಕೆ ಒಳ್ಳೆಯ ಮದ್ದು. ಅಷ್ಟೇ ಅಲ್ಲದೆ ಲಿಂಬೆರಸವು ರಕ್ತವನ್ನು ಶುದ್ಧೀಕರಿಸುತ್ತದೆ, ಅಜೀರ್ಣ ಮತ್ತು ಮಲಬದ್ಧತೆಯನ್ನು ತಡೆಯುತ್ತದೆ. ದೇಹದಲ್ಲಿರುವ ವಿಷಕಾರಿ ಅಂಶಗಳನ್ನು ಹೊರಹಾಕಿ ಜೀರ್ಣಕ್ರಿಯೆಗೆ ಸಹಕಾರಿಯಾಗುತ್ತದೆ.
ಅಷ್ಟೇ ಅಲ್ಲದೆ ಇದು ಬಾಯಿಯ ಕೆಟ್ಟ ವಾಸನೆ ಹಾಗೂ ಒಸಡುಗಳಲ್ಲಿ ರಕ್ತ ಸೋರುವುದನ್ನು ನಿವಾರಿಸುತ್ತದೆ. ಹಲ್ಲುಗಳು ಕೆಡುವುದನ್ನು ಇದು ತಡೆಯುವುದು. ಲಿಂಬೆರಸದಲ್ಲಿ ಇರುವಂತಹ ಪೊಟಾಶಿಯಂ ಅಧಿಕ ರಕ್ತದೊತ್ತಡವನ್ನು ನಿವಾರಿಸುವುದು. ಇದು ವಾಕರಿಕೆ ಹಾಗೂ ತಲೆತಿರುಗುವಿಕೆಯನ್ನು ತಡೆಯುತ್ತದೆ. ಲಿಂಬೆಯುಕ್ತ ನೀರಿನ ಅದ್ಭುತ ಆರೋಗ್ಯಕಾರಿ ಪ್ರಯೋಜನಗಳು
ಲಿಂಬೆನೀರು ನಿಮ್ಮಲ್ಲಿನ ಒತ್ತಡ ಹಾಗೂ ಖಿನ್ನತೆಯನ್ನು ಕಡಿಮೆ ಮಾಡಿ ಒಳ್ಳೆಯ ಭಾವನೆ ಉಂಟು ಮಾಡುವುದು. ಅಷ್ಟೇ ಅಲ್ಲದೆ ಲಿಂಬೆರಸವು ಕಫವನ್ನು ಕಡಿಮೆ ಮಾಡುತ್ತದೆ. ಇದರಿಂದ ಅಸ್ತಮಾ ಇರುವವರು ಸರಿಯಾಗಿ ಉಸಿರಾಡಲು ನೆರವಾಗುವುದು. ಬೆಚ್ಚನೆ ನೀರಿನ ಜೊತೆ ಲಿಂಬೆ ಮತ್ತು ಜೇನು ಸೇವನೆ ಏಕೆ ಮಹತ್ವಪೂರ್ಣ
ಲಿಂಬೆನೀರಿನಲ್ಲಿರುವ ಬ್ಯಾಕ್ಟೀರಿಯಾ ವಿರೋಧಿ ಗುಣಗಳಿಂದ ಗಂಟಲಿನ ಸೋಂಕು ಕಡಿಮೆಯಾಗುತ್ತದೆ. ಗಂಟಲಿನಲ್ಲಿ ಉಂಟಾಗಿರುವ ಕೆರೆತವನ್ನು ನಿವಾರಿಸಲು ಉಪ್ಪು ನೀರಿನಿಂದ ಸಾಧ್ಯವಾಗದಿದ್ದರೆ ಲಿಂಬೆನೀರಿನಿಂದ ಬಾಯಿ ಮುಕ್ಕಳಿಸಿಕೊಳ್ಳಿ.