Latest Updates
-
ಟೆಲಿಗ್ರಾಮ್ ಬಳಕೆದಾರರೇ ಎಚ್ಚರ: ಜೂನ್ 16 ರಿಂದ 22 ರವರೆಗೆ ಸೇವೆ ಸ್ಥಗಿತ, ಪರ್ಯಾಯ ಮಾರ್ಗಗಳೇನು? -
ಪಂಜಾಬ್-ಹರಿಯಾಣದಲ್ಲಿ ಭಾರಿ ಬಿರುಗಾಳಿ ಎಚ್ಚರಿಕೆ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಈ 20 ನಿಮಿಷಗಳ ಟಿಪ್ಸ್ ಪಾಲಿಸಿ! -
ಸೋಯಾಬೀನ್ ಎಣ್ಣೆ ಬೆಲೆ ಏರಿಕೆ: ಅಡುಗೆ ಮನೆ ಬಜೆಟ್ ಮೇಲೆ ಹೊರೆ, ಕಲಬೆರಕೆ ಪತ್ತೆ ಹಚ್ಚುವುದು ಹೇಗೆ? -
ದೆಹಲಿ-ಎನ್ಸಿಆರ್ನಲ್ಲಿ ಮಳೆ ಅಬ್ಬರ: ಟ್ರಾಫಿಕ್ ಕಿರಿಕಿರಿ ತಪ್ಪಿಸಲು ನೀವು ಮಾಡಬೇಕಾದ್ದೇನು? -
ಮುಂಬೈ ಸೆಕೆ ಮತ್ತು ಆರ್ದ್ರತೆ: ಹೊರಗೆ ಹೋಗಿ ಸುಸ್ತಾಗುವ ಬದಲು ಮನೆಯಲ್ಲೇ ಫಿಟ್ ಆಗಿರಲು ಈ ಟಿಪ್ಸ್ ಫಾಲೋ ಮಾಡಿ! -
ಇಂದು ರಾತ್ರಿ ದೆಹಲಿ-ಎನ್ಸಿಆರ್ನಲ್ಲಿ ಭೀಕರ ಮಳೆ: ಹೊರಗೆ ಹೋಗುವ ಪ್ಲಾನ್ ಇದೆಯಾ? ಎಚ್ಚರ! -
ಮಳೆಗಾಲದಲ್ಲಿ ಮನೆ ಹಾಳಾಗದಂತೆ ತಡೆಯುವುದು ಹೇಗೆ? ತೇವಾಂಶ ಮತ್ತು ಬೂಸು ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
'ಹೆಲ್ದಿ' ಆಹಾರದ ಹೆಸರಿನಲ್ಲಿ ಮೋಸ ಹೋಗ್ತಿದ್ದೀರಾ? FSSAI ಹೊಸ ನಿಯಮದ ಅಸಲಿಯತ್ತು ಇಲ್ಲಿದೆ! -
UGC NET 2026 ಅಡ್ಮಿಟ್ ಕಾರ್ಡ್ ಬಿಡುಗಡೆ: ಪರೀಕ್ಷಾ ಕೇಂದ್ರಕ್ಕೆ ಹೋಗುವ ಮುನ್ನ ಈ ನಿಯಮಗಳನ್ನು ಮಿಸ್ ಮಾಡ್ಬೇಡಿ! -
ಬೆಂಗಳೂರು, ಕರಾವಳಿಯಲ್ಲಿ ಭಾರಿ ಮಳೆ: ಹೊರಗೆ ಹೋಗುವ ಮುನ್ನ ಈ ಎಚ್ಚರಿಕೆ ಮರೆಯದಿರಿ!
ಕಣ್ಣಿನ ಪೊರೆಗಳ ಸಮಸ್ಯೆಗೆ-ಪಾರ್ಸ್ಲಿ ಎಲೆಗಳಿಂದ ಆರೈಕೆ....
ವೃದ್ಧಾಪ್ಯ ನಮಗೆ ಯಾರಿಗೂ ಬೇಡ. ಆದರೆ ವಯೋಸಹಜವಾಗಿ ನಾವೆಲ್ಲರೂ ವೃದ್ಧಾಪ್ಯದತ್ತ ನಿಧಾನವಾಗಿ ಜಾರುತ್ತಾ ಹೋಗುತ್ತಿದ್ದೇವೆ. ಇದು ಅನಿವಾರ್ಯ. ಇದರೊಂದಿಗೇ ನಮ್ಮ ಆರೋಗ್ಯವೂ ನಿಧಾನವಾಗಿ ಶಿಥಿಲವಾಗುತ್ತಾ ಹೋಗುತ್ತದೆ. ಹತ್ತು ಹಲವು ಕಾಯಿಲೆಗಳು ಆವರಿಸಿಕೊಳ್ಳುತ್ತಾ ಹೋಗುತ್ತವೆ. ಸುಮಾರು ಐವತ್ತು ವರ್ಷ ದಾಟಿದ ಬಳಿಕ ನಮ್ಮ ಜೀವಕೋಶಗಳು ತಾರುಣ್ಯದಲ್ಲಿದ್ದ ಕ್ಷಮತೆಯನ್ನು ಕಳೆದುಕೊಳ್ಳುತ್ತವೆ.
ಮರುಹುಟ್ಟುವ ಸಾಮರ್ಥ್ಯವೂ ಕಡಿಮೆಯಾಗುತ್ತದೆ. ಪರಿಣಾಮವಾಗಿ ನಮ್ಮ ದೇಹದ ಒಂದೊಂದೇ ಅಂಗಗಳು ನಿಧಾನವಾಗಿ ಶಿಥಿಲಗೊಳ್ಳುತ್ತಾ ಸಾಗುತ್ತವೆ. ವಯಸ್ಸಿಗೆ ಅನುಗುಣವಾಗಿ ಎದುರಾಗುವ ಕಾಯಿಲೆಗಳಲ್ಲಿ ಪ್ರಮುಖವಾಗಿ ಮಧುಮೇಹ, ಆಲ್ಜೀಮರ್ಸ್ ಕಾಯಿಲೆ, ಸಂಧಿವಾತ, ಮೂಳೆಗಳಲ್ಲಿ ಗಾಳಿಗುಳ್ಳೆಗಳು ತುಂಬಿಕೊಳ್ಳುವ ಓಸ್ಟಿಯೋಪೋರೋಸಿಸಿ, ಕಣ್ಣುಗಳಲ್ಲಿ ಪೊರೆಗಳು ಬರುವುದು ಅಥವಾ ಕ್ಯಾಟರಾಕ್ಟ್ ಮೂಲಕ ಕಣ್ಣಿನ ದೃಷ್ಟಿ ಕುಂದುವುದು ಇತ್ಯಾದಿ.

ಇಂದು ವಯೋಸಹಜವಾಗಿ ಆಗಮಿಸುವ ಕ್ಯಾಟರಾಕ್ಟ್ನ ತೊಂದರೆಯನ್ನು ಅಥವಾ ಕಣ್ಣಿನ ಪೊರೆಗಳ ಸಮಸ್ಯೆಯನ್ನು ನಿವಾರಿಸಲು ನೈಸರ್ಗಿಕವಾದ ವಿಧಾನವೊಂದಿದೆ. ಅದೇ ಪಾರ್ಸ್ಲಿ ಎಲೆಗಳ ಸೇವನೆ. Petroselinum Crispum ಎಂಬ ವೈಜ್ಞಾನಿಕ ಹೆಸರಿರುವ, ನೋಡಲು ಕೊತ್ತಂಬರಿ ಸೊಪ್ಪಿನಂತೆಯೇ ಕಾಣುವ ಈ ಎಲೆಗಳಿಗೆ ಕನ್ನಡದಲ್ಲಿ ಕೆಲವೆಡೆ ಕಾಡು ಕೊತ್ತಂಬರಿ ಎಂದೂ ಕೆಲವೆಡೆ ಅಚ್ಚು ಮೂಡ ಸೊಪ್ಪು ಎಂದೂ ಕರೆಯುತ್ತಾರೆ. ಬನ್ನಿ, ಈ ಸೊಪ್ಪಿನ ಸೇವನೆಯಿಂದ ಕ್ಯಾಟರಾಕ್ಟ್ ಹೇಗೆ ಕಡಿಮೆ ಮಾಡಿಕೊಳ್ಳಬಹುದು ಎಂಬುದನ್ನು ನೋಡೋಣ: ಸಡನ್ ಆಗಿ ಕಣ್ಣಿಗೆ ಗಾಯವಾದರೆ- ಪ್ರಥಮ ಚಿಕಿತ್ಸೆ ಹೀಗಿರಲಿ
ಅಗತ್ಯವಿರುವ ಸಾಮಾಗ್ರಿಗಳು:
*ಪಾರ್ಸ್ಲಿ ಎಲೆಗಳು: ಆರರಿಂದ ಏಳು
*ಜೇನು : ಎರಡು ಚಿಕ್ಕ ಚಮಚ
ಈ ಎಲೆಗಳಲ್ಲಿ ಕಣ್ಣುಗಳಿಗೆ ಅತಿ ಅಗತ್ಯವಾದ ವಿಟಮಿನ್ ಎ ಇದೆ. ಅಲ್ಲದೇ ಕಣ್ಣಿತ ತೇವಾಂಶವನ್ನು ಸದಾ ಹಿಡಿದಿಡಲು ಕಣ್ಣೀರ ಗ್ರಂಥಿಗಳು ಸದಾ ತುಂಬಿಕೊಂಡಿರಲೂ ಈ ಎಲೆಗಳ ಪೋಷಕಾಂಶಗಳು ನೆರವಾಗುತ್ತವೆ.
ಈ ಎಲೆಗಳಲ್ಲಿ ಉತ್ತಮ ಪ್ರಮಾಣದ ಕ್ಯಾರೋಟಿನಾಯ್ಡುಗಳಾದ ಲ್ಯೂಟಿನ್ ಮತ್ತು ಜಿಯಾಕ್ಸಾಂಥಿನ್ಗಳಿವೆ. ಇವೇ ವಾಸ್ತವವಾಗಿ ಕ್ಯಾಟರಾಕ್ಟ್ ತೊಂದರೆಗೆ ಸೂಕ ಪರಿಹಾರವನ್ನು ನೀಡುತ್ತವೆ. ಸತತವಾದ ಸೇವನೆಯಿಂದ ಈ ತೊಂದರೆಯನ್ನು ನಿಧಾನವಾಗಿ ಹಿಮ್ಮೆಟ್ಟಿಸಬಹುದು.
ಈ ಎಲೆಗಳನ್ನು ಬಳಸುವ ವಿಧಾನ:
*ಎಲೆಗಳನ್ನು ಚೆನ್ನಾಗಿ ತೊಳೆದು ಕೊಂಚ ನೀರಿನೊಂದಿಗೆ ಮಿಕ್ಸಿಯಲ್ಲಿ ನುಣ್ಣಗೆ ಅರೆಯಿರಿ.
*ಈ ನೀರಿಗೆ ಜೇನನ್ನು ಸೇರಿಸಿ ಕಲಕಿ.
*ಪ್ರತಿದಿನ ರಾತ್ರಿಯೂಟಕ್ಕೂ ಮೊದಲು ಖಾಲಿ ಹೊಟ್ಟೆಯಲ್ಲಿ, ಅಂದರೆ ಮಧ್ಯಾಹ್ನದ ಊಟದ ಬಳಿಕ ರಾತ್ರಿಯೂಟದವರೆಗೂ ಉಪವಾಸವಿದ್ದು ಸೇವಿಸಬೇಕು.
*ನಿತ್ಯವೂ ಈ ರಸವನ್ನು ಸೇವಿಸುತ್ತಾ ಬರುವ ಮೂಲಕ ನಿಧಾನವಾಗಿ ಕ್ಯಾಟರಾಕ್ಟ್ನ ಪ್ರಭಾವ ಕಡಿಮೆಯಾಗುತ್ತಾ ಹೋಗುತ್ತದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications

