Latest Updates
-
ಆರ್ಬಿಐ ಹೊಸ ಆಟೋ-ಪೇ ನಿಯಮ: ನಿಮ್ಮ OTT ಮತ್ತು SIP ಪಾವತಿಗಳು ಸ್ಥಗಿತಗೊಳ್ಳುವ ಮುನ್ನ ಎಚ್ಚೆತ್ತುಕೊಳ್ಳಿ! -
ಸುಡುವ ಬಿಸಿಲಲ್ಲೂ ಮನೆ ತಂಪಾಗಿರಬೇಕೆ? ಕಡಿಮೆ ಖರ್ಚಿನಲ್ಲಿ ಕೂಲರ್ ಇಲ್ಲದೆ ತಂಪಾಗಿಸಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಬಿಸಿಲಿನ ಅಲೆ: ಸುಡುವ ಬಿಸಿಲಿನಲ್ಲಿ ನಿಮ್ಮ ಆರೋಗ್ಯ ಕಾಪಾಡಿಕೊಳ್ಳಲು ಈ ಪಾನೀಯಗಳೇ ಮದ್ದು! -
ಬಿಸಿಲ ಧಗೆಗೆ ಕಂಗಾಲಾಗಿದ್ದೀರಾ? ಸ್ಟೈಲಿಶ್ ಆಗಿ ಕೂಲ್ ಆಗಿರಲು ಇಲ್ಲಿದೆ ವೈರಲ್ ಸಮ್ಮರ್ ಹ್ಯಾಕ್ಸ್! -
ಬಿಸಿಗಾಳಿಯ ಅಬ್ಬರ: ಫಿಟ್ನೆಸ್ ಕಾಪಾಡಿಕೊಳ್ಳಲು ನಿಮ್ಮ ವರ್ಕೌಟ್ ಸಮಯ ಬದಲಾಯಿಸುವುದು ಅನಿವಾರ್ಯವೇ? -
ಡೇಟಿಂಗ್ ಆ್ಯಪ್ಗಳಲ್ಲಿ ಪ್ರೀತಿಯ ಬಲೆ: ಎಐ ಡೀಪ್ಫೇಕ್ ವಂಚನೆಯಿಂದ ಪಾರಾಗುವುದು ಹೇಗೆ? -
ಬಿಸಿಲ ಬೇಗೆಯಿಂದ ತತ್ತರಿಸಿದ್ದೀರಾ? ಎಸಿ ಇಲ್ಲದೆಯೇ ನಿಮ್ಮ ಮನೆಯನ್ನು ತಂಪಾಗಿಡಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಅಶ್ವಗಂಧದ ಎಲೆಗಳ ಬಳಕೆ ನಿಷೇಧ: ನಿಮ್ಮ ನೆಚ್ಚಿನ ಹೆಲ್ತ್ ಸಪ್ಲಿಮೆಂಟ್ಸ್ ಮಾರುಕಟ್ಟೆಯಿಂದ ಮಾಯವಾಗುತ್ತಾ? -
ಬಿಸಿಗಾಳಿಯ ಅಬ್ಬರ: ಸುಡುವ ಬಿಸಿಲಿನಲ್ಲಿ ಆರೋಗ್ಯ ಮತ್ತು ಫಿಟ್ನೆಸ್ ಕಾಪಾಡಿಕೊಳ್ಳುವುದು ಹೇಗೆ? -
ದೆಹಲಿ ಬಿಸಿಲಿನಲ್ಲಿ ಮದುವೆ ಸಂಭ್ರಮ: ಹೀಟ್ವೇವ್ ನಡುವೆ ನಿಮ್ಮ ಮದುವೆ ಪ್ಲಾನ್ ಬದಲಾಯಿಸುವುದು ಹೇಗೆ?
ಬಾಗಿಲಿನ ಕಡೆಗೆ ಕಾಲು ಚಾಚಿ ಮಲಗುವುದು ಅನಾರೋಗ್ಯಕರವೇ?
ಮಕ್ಕಳಿಗೆ ಹಿರಿಯರು ಹಲವು ಕಟ್ಟುಪಾಡುಗಳನ್ನು ಹೇರುತ್ತಾರೆ. ಕೆಲವು ಆರೋಗ್ಯದ ಕಾರಣದಿಂದಿದ್ದರೆ ಕೆಲವು ಹಿರಿಯರು ನಡೆಸಿಕೊಂಡು ಬಂದ ಸಂಪ್ರದಾಯವಾಗಿದೆ. ಆದರೆ ಕೆಲವು ಇಂತಹ ಕಟ್ಟುಪಾಡುಗಳಿಗೆ ವೈಜ್ಞಾನಿಕ ಅರ್ಥವಿಲ್ಲ, ಆದರೆ ಕೆಲವು ವೈಜ್ಞಾನಿಕವಾದ ಅರ್ಥ ಹೊಂದಿವೆ. ಉದಾಹರಣೆಗೆ ಮಾಸಿಕ ದಿನಗಳಲ್ಲಿ ಮಹಿಳೆಯರಿಗೆ ಅಡುಗೆ ಮನೆಗೆ ಪ್ರವೇಶ ನೀಡದಿರುವುದು. ಒಂದರ್ಥದಲ್ಲಿ ಇದೊಂದು ಕಠಿಣ ಕ್ರಮ ಎಂದು ಕಂಡುಬಂದರೂ ಹಿಂದಿನ ದಿನಗಳಲ್ಲಿ ಅಡುಗೆ ಮನೆಯಲ್ಲಿದ್ದ ಅಪಾರ ದೈಹಿಕ ಶ್ರಮದಿಂದ ಆ ದಿನಗಳಲ್ಲಿ ತಪ್ಪಿಸಿ ವಿಶ್ರಾಂತಿ ನೀಡಲೆಂದೇ ಈ ಕ್ರಮ ಪ್ರಾರಂಭಿಸಲಾಯಿತು ಎಂದು ತಿಳಿದುಬರುತ್ತದೆ. ಉತ್ತರ ದಿಕ್ಕಿಗೆ ತಲೆ ಹಾಕಿ ಮಲಗುವುದು ಅಪಶಕುನವೇ?
ಆದರೆ "ಕುಳಿತಿದ್ದಾಗ ಕಾಲನ್ನು ಅದುರಿಸಬೇಡ", "ಖಾಲಿ ಪಾತ್ರೆಯನ್ನು ತಲೆಕೆಳಗಾಗಿ ಇಡಬೇಡ" ಮೊದಲಾದ ಕಟ್ಟುಪಾಡುಗಳಿಗೆ ಯಾವುದೇ ವೈಜ್ಞಾನಿಕ ಸಮರ್ಥನೆ ಇಲ್ಲ. ಆದರೆ ಮಲಗುವ ವಿಷಯ ಬಂದಾಗ ಪ್ರತಿ ಮನೆಯಲ್ಲಿಯೂ ಬೇರೆ ಬೇರೆ ವಿಧಾನಗಳನ್ನು ಅನುಸರಿಸುವುದನ್ನು ಕಾಣಬಹುದು. ಮುಸ್ಲಿಮರು ಎಂದಿಗೂ ಪಶ್ಚಿಮದ ಕಡೆ ಕಾಲು ಹಾಕಿ ಮಲಗುವುದಿಲ್ಲ. ಹಿಂದೂ ವಾಸ್ತು ಪ್ರಕಾರ ತಲೆ ಉತ್ತರಾಭಿಮುಖವಾಗಿರಬೇಕು.
ಆದರೆ ಕೆಲವು ಮನೆಗಳಲ್ಲಿ ಈ ದಿಕ್ಕುಗಳಿಗೆ ಹೊರತಾಗಿ ಕಾಲುಗಳು ಬಾಗಿಲಿಗೆ ಎದುರಾಗಿರಬಾರದು ಎಂಬ ಕಟ್ಟುಪಾಡನ್ನು ಅನುಸರಿಸುತ್ತಿರುವುದು ಕಂಡುಬರುತ್ತದೆ. ಇದಕ್ಕೆ ಕಾರಣ ಕೇಳಿದರೆ ಈ ರೀತಿ ಮಲಗಿದರೆ ಆರೋಗ್ಯ ಕೆಡುತ್ತದೆ ಎಂಬ ಉತ್ತರ ಸಿಗುತ್ತದೆ. ಈ ಕಟ್ಟುಪಾಡಿನ ಇನ್ನೊಂದು ತೊಂದರೆ ಎಂದರೆ ಕೋಣೆಯಲ್ಲಿದ್ದಾಗ ನೀವು ಬಾಗಿಲಿಗೆ ಅಂದರೆ ಕೋಣೆಯ ಬಾಗಿಲಿಗೆ ಮಾತ್ರವಲ್ಲ, ಕೋಣೆಯಲ್ಲಿರುವ ಇತರ ಯಾವುದೇ ಬಾಗಿಲಿಗೂ ಕಾಲು ತೋರಿಸುವಂತಿಲ್ಲ. ಕಿಟಕಿ ಬಾಗಿಲೂ ಸೇರಿ. ಏಕೆಂದರೆ ಬಾಗಿಲು ಅಥವಾ ಕಿಟಕಿಯಿಂದ ನೋಡುವ ಯಮಕಿಂಕರರು ಕಾಲುಗಳನ್ನು ಕಂಡರೆ ಮೊದಲು ಹೊತ್ತೊಯ್ಯುತ್ತಾರೆ. ಸಾವಿನ ಭಯ ಇಲ್ಲದಿದ್ದರೆ ನಿಶ್ಚಿಂತರಾಗಿ ಯಾವುದೇ ಬಾಗಿಲಿಗೆ ಕಾಲು ತೋರಿಸಿ ಮಲಗಿ. ಇದೆ ಎಂದಾದರೆ ಕೆಳಗಿನ ಸ್ಲೈಡ್ ಶೋನಲ್ಲಿರುವ ವಿವರಗಳನ್ನು ಗಮನಿಸಿ...

ಕೋಣೆಯಲ್ಲಿ ನಿಮ್ಮ ಮಂಚ ಎಲ್ಲಿರಬೇಕು?
ಆರೋಗ್ಯ ಉತ್ತಮವಾಗಿರಬೇಕು ಎಂದಾದರೆ ನಿಮ್ಮ ಮಂಚ ಸಾಧ್ಯವಾದಷ್ಟೂ ಬಾಗಿಲಿನಿಂದ ದೂರ ಅಥವಾ ಅಡ್ಡಲಾಗಿದ್ದು ಇದರಲ್ಲಿ ಮಲಗಿದಾಗ ಪಾದಗಳು ಯಾವುದೇ ಕಿಟಕಿಗಳಿಗೆ ಎದುರಾಗಿರಬಾರದು.

ಇದು ಏಕೆ ಅನಾರೋಗ್ಯಕರ?
ಒಂದು ನಂಬಿಕೆಯ ಪ್ರಕಾರ ನಿದ್ದೆಗೆ ಜಾರಿದ ಬಳಿಕ ದೇಹದಲ್ಲಿರುವ 'ಚಿ' ಎಂಬ ಶಕ್ತಿ ನಮ್ಮ ಶರೀರದ ಒಳಭಾಗ ಮತ್ತು ಹೊರಭಾಗಗಳಲ್ಲಿ ಸಂಚರಿಸುತ್ತಾ ದೇಹದ ಪೋಷಣೆ, ಬೆಳವಣಿಗೆ ಮತ್ತು ಇತರ ಅನೈಚ್ಛಿಕ ಕೆಲಸಗಳನ್ನು ನೆರವೇರಿಸುತ್ತದೆ. ಒಂದು ವೇಳೆ ಪಾದ ಬಾಗಿಲಿಗೆ ಎದುರಾಗಿದ್ದರೆ ಈ ಚಿ ಶಕ್ತಿ ಪಾದದಿಂದ ನೇರವಾಗಿ ಬಾಗಿಲ ಮೂಲಕ ಹೊರಟು ಹೋಗುತ್ತದೆ!

ಈ ’ಚಿ’ ಎಂದರೇನು?
ಒಂದು ನಂಬಿಕೆಯ ಪ್ರಕಾರ ನಮ್ಮ ದೇಹದಲ್ಲಿ ಎರಡು ಚಿ ಪ್ರವಾಹಗಳಿವೆ. ಒಂದು ಧನಾತ್ಮಕ ಮತ್ತೊಂದು ಋಣಾತ್ಮಕ. ಇದರಲ್ಲಿ ಧನಾತ್ಮಕ ಚಿ ದೇಹದಿಂದ ಹೊರಹೋಗಲು ಸುಲಭ ದಾರಿ ಸಿಕ್ಕೊಡನೆ ದೂರ ಹೋಗುತ್ತವೆ. ಆಗ ಋಣಾತ್ಮಕ ಚಿ ದೇಹವನ್ನು ಹೆಚ್ಚು ಆವರಿಸಿಕೊಳ್ಳುತ್ತದೆ. ಆದ್ದರಿಂದ ಬಾಗಿಲ ಕಡೆಗೆ ಕಾಲು ಹಾಕಿ ಮಲಗಬಾರದು ಎಂದು ಹೇಳುತ್ತಾರೆ.

ಋಣಾತ್ಮಕ ಚಿ ಆವರಿಸಿದರೆ ಏನಾಗುತ್ತದೆ?
ಋಣಾತ್ಮಕ ಚಿ ಶಕ್ತಿ ದೇಹವನ್ನು ಆವರಿಸಿದಾಕ್ಷಣ ನಮ್ಮ ಆತ್ಮ ದುರ್ಬಲವಾಗುತ್ತದೆ. ಪರಿಣಾಮವಾಗಿ ವಿವೇಕ ಮತ್ತು ಧನಾತ್ಮಕ ಚಿಂತನೆಯೂ ಕಡಿಮೆಯಾಗುತ್ತದೆ. ಪರಿಣಾಮವಾಗಿ ದುರ್ಮಾರ್ಗ, ದುರ್ವರ್ತನೆ, ಋಣಾತ್ಮಕ ಚಿಂತನೆ ಮೊದಲಾದವುಗಳು ವ್ಯಕ್ತಿಯ ಚಿಂತನೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಇದರ ಪರಿಣಾಮಗಳನ್ನು ಊಹಿಸಲೂ ಅಸಾಧ್ಯ.

ಇದರಿಂದ ಆರೋಗ್ಯದ ಮೇಲಾಗುವ ಪರಿಣಾಮಗಳೇನು?
ಫೆಂಗ್ ಶುಯಿ ಎಂಬ ಪ್ರಾಚೀನ ನಂಬಿಕೆಯ ಪ್ರಕಾರ ಬಾಗಿಲ ಕಡೆಗೆ ಕಾಲುಹಾಕದೇ ಮಲಗಿದರೆ ಎಂದೂ ನಿಮಗೆ ನೋವು ಕಾಡದು. ಈ ನೋವು ದೈಹಿಕವಾಗಿರಬಹುದು ಅಥವಾ ಮಾನಸಿಕವಾಗಿರಬಹುದು.

ಇದರಿಂದ ಆರೋಗ್ಯದ ಮೇಲಾಗುವ ಪರಿಣಾಮಗಳೇನು?
ಇನ್ನೊಂದು ಅರ್ಥದಲ್ಲಿ ಜೀವನದಲ್ಲಿ ಎದುರಾಗುವ ಯಾವುದೇ ನೋವುನೀಡುವ ತೊಂದರೆಯನ್ನು ಸಮರ್ಥವಾಗಿ ಎದುರಿಸುವ ದಿಟ್ಟತನ ಪಡೆಯಬಹುದು. ಅಲ್ಲದೇ ತಲೆನೋವು ಮತ್ತು ದೇಹದ ಇತರ ನರಸಂಬಂಧಿತ ನೋವುಗಳೂ ದೂರವಾಗುತ್ತವೆ.



Click it and Unblock the Notifications









