Latest Updates
-
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ 2026: ಅಪ್ಪನ ಮುಖದಲ್ಲಿ ನಗು ಮೂಡಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಐಡಿಯಾಗಳು! -
10ನೇ ಅಂತರಾಷ್ಟ್ರೀಯ ಯೋಗ ದಿನ: ಮಳೆಯನ್ನೂ ಮೀರಿ ಕೋಲ್ಕತ್ತಾದಲ್ಲಿ ಯೋಗ ಸಂಭ್ರಮ, ಮನೆಯಲ್ಲೇ ಅಭ್ಯಾಸ ಮಾಡಲು ಇಲ್ಲಿದೆ ಸರಳ ಟಿಪ್ಸ್! -
ಭಾರತ vs ಅಫ್ಘಾನಿಸ್ತಾನ ಪಂದ್ಯ: ಮ್ಯಾಚ್ ನೋಡುವಾಗ ಮನೆಯಲ್ಲಿ ಶಾಂತಿ ಕಾಪಾಡಲು ಈ ಟಿಪ್ಸ್ ಫಾಲೋ ಮಾಡಿ! -
ನಾಳೆ ನೀಟ್ ಮರುಪರೀಕ್ಷೆ: ಮಳೆಗಾಲದ ನಡುವೆ ಪರೀಕ್ಷೆಗೆ ಸಜ್ಜಾಗುವುದು ಹೇಗೆ? ಇಲ್ಲಿದೆ ಫೈನಲ್ ಚೆಕ್ಲಿಸ್ಟ್ -
ಪಿಎಂ-ಕಿಸಾನ್ ಹಣ ಜಮೆ: ರೈತರೇ, ಈ 2,000 ರೂಪಾಯಿಯಲ್ಲಿ ಆರೋಗ್ಯಕರ ಆಹಾರ ಖರೀದಿಸಿ, ಮಧುಮೇಹ ನಿಯಂತ್ರಿಸಿ! -
ಭಾರಿ ಗಾಳಿ-ಮಳೆಯ ಎಚ್ಚರಿಕೆ: ಜೂನ್ 20ರಂದು ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳನ್ನು ಮರೆಯದಿರಿ! -
ಮಳೆಗಾಲದಲ್ಲಿ ಅಂತರಾಷ್ಟ್ರೀಯ ಯೋಗ ದಿನ: ಹಿರಿಯರು ಸುರಕ್ಷಿತವಾಗಿ ಯೋಗ ಮಾಡುವುದು ಹೇಗೆ?
ಆರೋಗ್ಯಕಾರಿ ಜೀವನ ಶೈಲಿಗೆ ಇಲ್ಲಿದೆ ಸಿಂಪಲ್ ಟಿಪ್ಸ್...
ನಮ್ಮ ದೇಹದಲ್ಲಿ ಮುಕ್ಕಾಲು ಭಾಗದಷ್ಟು ನೀರಿನಾಂಶವಿದೆಯೆಂದು ಹೇಳಲಾಗುತ್ತದೆ. ಇದರಿಂದ ನಮ್ಮ ದೇಹಕ್ಕೆ ನೀರು ಅತ್ಯಗತ್ಯವಾಗಿ ಬೇಕು. ನೀರು ಕುಡಿಯದೆ ಬದುಕಲು ಸಾಧ್ಯವೇ ಇಲ್ಲ. ಹಾಗೆಂದು ಪ್ರತಿಯೊಬ್ಬರಿಗೂ ತಿಳಿದಿರುವ ವಿಚಾರವೇ. ಆದರೆ ನೀರನ್ನು ಯಾವಾಗ ಕುಡಿಯಬೇಕು ಎನ್ನುವುದು ಮಾತ್ರ ಹೆಚ್ಚಿನವರಿಗೆ ತಿಳಿದಿಲ್ಲ.
ಮಾತ್ರೆ ತೆಗೆದುಕೊಳ್ಳಲು ನೀರು ಬೇಕೆನ್ನುವುದು ತಿಳಿದಿರುವ ವಿಚಾರ. ಆದರೆ ಮಾತ್ರೆ ಸರಿಯಾಗಿ ದೇಹದೊಳಗೆ ಹೋಗದೆ ಇದ್ದರೆ ಆಗ ಏನಾಗುತ್ತದೆ ಎಂದು ಹೆಚ್ಚಿನವರಿಗೆ ತಿಳಿದಿಲ್ಲ. ವಾಕಿಂಗ್ ಮಾಡಬೇಕು ಮತ್ತು ನಡೆಯಬೇಕು ಎಂದು ನಾವು ಪ್ರತಿಯೊಬ್ಬರಿಗೂ ತಿಳಿಸುತ್ತೇವೆ. ಆದರೆ ಹೇಗೆ ನಡೆಯಬೇಕು ಮತ್ತು ಓಡಬೇಕು ಎಂದು ಹೆಚ್ಚಿನವರಿಗೆ ತಿಳಿದೇ ಇರುವುದಿಲ್ಲ. ಅದೇ ರೀತಿ ಬಾಳೆಹಣ್ಣನ್ನು ಅದರಲ್ಲಿರುವ ಪೋಷಕಾಂಶಗಳಿಂದ ನಾವು ತಿನ್ನಲು ಇಷ್ಟಪಡುತ್ತೇವೆ. ಆದರೆ ನಾವು ತುಂಬಾ ಆಯಾಸಗೊಂಡಿರುವಾಗ ಬಾಳೆಹಣ್ಣನ್ನು ತಿನ್ನುತ್ತೇವೆಯಾ? ಇಲ್ಲ. ಹಾಗಾದರೆ ಇಂತಹ ವಿಷಯಗಳ ಬಗ್ಗೆ ಮತ್ತಷ್ಟು ಚರ್ಚೆ ಮಾಡುವ.

ಟಿಪ್ಸ್#1
ಮಾತ್ರೆ ಸೇವಿಸಿದ ಬಳಿಕ ಉಗುರುಬೆಚ್ಚಗಿನ ನೀರು ಕುಡಿಯಿರಿ ಅಥವಾ ವೈದ್ಯರು ತಿಳಿಸಿದ್ದರೆ ತಣ್ಣೀರು ಕುಡಿಯಿರಿ ಮಾತ್ರೆಯನ್ನು ಅದರ ಸ್ಥಾನಕ್ಕೆ ತಲುಪಿಸಲು ನೀವು ಸರಿಯಾಗಿ ನೀರನ್ನು ಕುಡಿಯದೆ ಇದ್ದರೆ ಆಗ ಅದು ಬೇರೆ ಎಲ್ಲೋ ಸಿಲುಕಿಕೊಂಡು ಉರಿಯೂತ ಉಂಟಾಗಬಹುದು.

ಟಿಪ್ಸ್#2
ಸಂಜೆ 5 ಗಂಟೆ ಬಳಿಕ ಹೊಟ್ಟೆಗೆ ಭಾರವಾಗುವಂತಹ ಯಾವುದೇ ಆಹಾರವನ್ನು ಸೇವಿಸಬೇಡಿ. ದಿನಲ್ಲಿ 3- ಸಲ ಊಟ ಮಾಡುವ ಅಭ್ಯಾಸವಿದ್ದರೆ ಆಗ ನೀವು ರಾತ್ರಿ ವೇಳೆಗೆ ಲಘು ಆಹಾರ ಸೇವಿಸಿ. ಬೆಳಿಗ್ಗೆಯಿಂದ ಉಪವಾಸವಿದ್ದರೆ ಆಗ ಮಾತ್ರ ರಾತ್ರಿ ಸರಿಯಾಗಿ ತಿನ್ನಿ.

ಟಿಪ್ಸ್#3
ಹಗಲಿನಲ್ಲಿ ಹೆಚ್ಚಿನ ನೀರನ್ನು ಸೇವಿಸಿ ಮತ್ತು ರಾತ್ರಿ ಕಡಿಮೆ ನೀರು ಸೇವಿಸಿ. ರಾತ್ರಿ ಮಲಗುವ ಮೊದಲು ನೀವು ಹೆಚ್ಚಿನ ನೀರು ಸೇವನೆ ಮಾಡಿದರೆ ಆಗ ಪದೇ ಪದೇ ಮೂತ್ರ ವಿಸರ್ಜನೆಗೆ ಏಳಬೇಕಾಗುತ್ತದೆ. ಇದರಿಂದ ನಿದ್ರೆ ಹಾಳಾಗಬಹುದು.

ಟಿಪ್ಸ್#4
ರಾತ್ರಿ 10 ಗಂಟೆಗೆ ಮೊದಲು ನೀವು ನಿದ್ರೆ ಮಾಡಿದರೆ ಆಗ ನಿಮಗೆ ಒಳ್ಳೆಯ ನಿದ್ರೆ ಲಭಿಸುತ್ತದೆ. ಬೇಗನೆ ಮಲಗಿ ಬೇಗನೆ ಏಳುವ ಅಭ್ಯಾಸ ಮಾಡಿಕೊಳ್ಳಿ.

ಟಿಪ್ಸ್#5
ಹೊಟ್ಟೆತುಂಬ ಊಟ ಮಾಡಿದ ತಕ್ಷಣ ಮಲಗಬೇಡಿ. ಇದರಿಂದ ಅಜೀರ್ಣ ಮತ್ತು ಇತರ ಆ್ಯಸಿಡಿಟಿ ಸಮಸ್ಯೆಗಳು ಉಂಟಾಗಬಹುದು.

ಟಿಪ್ಸ್#6
ನಿಮ್ಮ ಮೊಬೈಲ್ ಗೆ ಕರೆ ಬಂದಾಗ ಎಡದ ಬದಿಗೆ ಮೊಬೈಲ್ ಇಟ್ಟು ಮಾತನಾಡಿ. ಆದರೆ ಇದಕ್ಕೆ ನಿಖರವಾದ ಕಾರಣಗಳು ತಿಳಿದಿಲ್ಲ.

ಟಿಪ್ಸ್#7
ಸೂರ್ಯನ ಕಿರಣಗಳಿಗೆ ಮೈಯೊಡ್ಡದೆ ಕೋಣೆಯೊಳಗೆ ಜೀವನ ಕಳೆಯಬೇಡಿ. ಆರೋಗ್ಯಕರ ಜೀವನಕ್ಕೆ ಸೂರ್ಯನ ಬೆಳಕಿಗೆ ಮೈಯೊಡ್ಡುವುದು ತುಂಬಾ ಮುಖ್ಯ.

ಟಿಪ್ಸ್#8
ನಿಮ್ಮ ಮನಸ್ಥಿತಿ ಸರಿಪಡಿಸಲು ಬಾಳೆಹಣ್ಣುಗಳನ್ನು ತಿನ್ನಿ. ಇದರಲ್ಲಿ ಸೆರೊಟೊನಿನ್ ಅಂಶವಿದೆ. ಮೆಣಸನ್ನು ತಿಂದರೆ ಖಿನ್ನತೆ ಹೋಗಲಾಡಿಸಬಹುದು. ಖಿನ್ನತೆ ಹೋಗಲಾಡಿಸಿ ನಿಮ್ಮ ಮನಸ್ಥಿತಿ ಉತ್ತಮಗೊಂಡರೆ ಒಳ್ಳೆಯ ಭಾವನೆ ಮೂಡುತ್ತದೆ.

ಟಿಪ್ಸ್#9
ಯಾವಾಗಲೂ ನಡೆಯುತ್ತಿರಿ. ಇದರಿಂದ ನಿಮ್ಮ ಮನಸ್ಸು ಉಲ್ಲಾಸಿತಗೊಂಡು ಸ್ವಲ್ಪ ಕ್ಯಾಲರಿ ನಶಿಸುತ್ತದೆ.

ಟಿಪ್ಸ್#10
ಕ್ಯಾಂಡಿ, ಕೇಕ್, ಚಿಪ್ಸ್, ಬಿಳಿ ಬ್ರೆಡ್, ಫಾಸ್ಟ್ ಫುಡ್, ಐಸ್ ಕ್ರೀಮ್, ಸಂಸ್ಕರಿತ ಆಹಾರ ಮತ್ತು ಕಾರ್ಬೋನೇಟೆಡ್ ಪಾನೀಯಗಳಿಂದ ದೂರವಿರಿ ಮತ್ತು ಒಳ್ಳೆಯ ಆರೋಗ್ಯ ಕಾಪಾಡಿ.



Click it and Unblock the Notifications