Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ದಿನನಿತ್ಯ ಗಂಜಿ ನೀರು ಕುಡಿಯಿರಿ, ಆರೋಗ್ಯ ಪಡೆಯಿರಿ
ಗಂಜಿ ಎಂದೊಡನೆ ಇದನ್ನು ಬಡವರ ಊಟವೆಂದು ಹೆಚ್ಚಿನವರು ನಿರ್ಧರಿಸಿಬಿಡುತ್ತಾರೆ. ಹಿಂದಿನಿಂದಲೂ ಕೆಲವು ಆಹಾರಗಳನ್ನು ಕೆಲವು ವರ್ಗಗಳಿಗೆ ಮೀಸಲಾಗಿಸಿ ಅದನ್ನು ಇತರರು ಸೇವಿಸದೇ ಇರುವುದು ಪೂರ್ವಾಗ್ರಹವಾಗಿದೆ. ಉದಾಹರಣೆಗೆ ಬಿಳಿ ಈರುಳ್ಳಿಯನ್ನು ಕೆಳವರ್ಗದ ಜನತೆ ಅಡುಗೆಗೆ ಉಪಯೋಗಿಸುತ್ತಾರೆಂದೇ ಕೆಲವರ್ಗದ ಜನರು ತಿನ್ನುವುದೇ ಇಲ್ಲ. ಅದೇ ರೀತಿ ಗಂಜಿ ಎಂದಾಕ್ಷಣ ರೋಗಿಗಳು ಅಥವಾ ಬಡವರು ತಿನ್ನುವುದು ಎಂಬ ಪೂರ್ವಾಗ್ರಹದಿಂದ ಹೆಚ್ಚಿನವರು ಮುಖ ಸಿಂಡರಿಸುತ್ತಾರೆ.
ಆದರೆ ವಾಸ್ತವವಾಗಿ ಆರೋಗ್ಯಕ್ಕೆ ಅತ್ಯಂತ ಪೂರಕವಾದ ಈ ಗಂಜಿ ಸುಲಭವಾಗಿ ತಯಾರಿಸಬಹುದಾದ ಮತ್ತು ವಿವಿಧ ರೋಗಗಳನ್ನು ಸಮರ್ಥವಾಗಿ ನಿವಾರಿಸಬಲ್ಲ ಗುಣ ಹೊಂದಿದೆ. ಅದರಲ್ಲೂ ಕುಚ್ಚಲಕ್ಕಿಯ (ಕೆಂಪು ಅಕ್ಕಿಯ) ಗಂಜಿ ಅಂತೂ ಶಕ್ತಿಯ ಆಗರ. ಅದರಲ್ಲೂ ಅಕ್ಕಿ ಬೆಂದ ಬಳಿಕ ಅದರ ನೀರನ್ನು ಪ್ರತಿ ದಿನ ಸೋಸಿಕೊಂಡು ಕುಡಿಯಿವುದರಿಂದ ಇನ್ನಷ್ಟು ಆರೋಗ್ಯಕಾರಿ ಲಾಭಗಳನ್ನು ಪಡೆಯಬಹುದು. ಬನ್ನಿ ಬನ್ನಿ ಗಂಜಿಯ ಮಹತ್ವ ಮತ್ತು ಆರೋಗ್ಯಕರ ಗುಣಗಳನ್ನು ಕೆಳಗಿನ ಸ್ಲೈಡ್ ಶೋ ಮೂಲಕ ನೀಡಲಾಗಿದೆ, ಮುಂದೆ ಓದಿ..

ನಿರ್ಜಲೀಕರಣ ತಡೆಯುವುದು
ಪೋಷಕಾಂಶಗಳಿಂದ ಸಮೃದ್ಧವಾಗಿರುವ ಗಂಜಿನೀರು ನೈಸರ್ಗಿಕವಾಗಿ ದೇಹಕ್ಕೆ ನೀರನ್ನು ಒದಗಿಸುವುದು. ಅತೀ ಬೇಸಿಗೆಯಲ್ಲಿ ಇದು ತುಂಬಾ ಉಪಯುಕ್ತವೆಂದು ಸಾಬೀತಾಗಿದೆ. ಒಂದು ಲೋಟ ಗಂಜಿನೀರು ನಿರ್ಜಲೀಕರಣ ತಡೆಯುವುದು.

ಮಲಬದ್ಧತೆ ನಿವಾರಣೆ
ಗಂಜಿಯಲ್ಲಿರುವ ಪಿಷ್ಟದಲ್ಲಿ ನಮ್ಮ ಜೀರ್ಣಕ್ರಿಯೆಗೆ ನೆರವಾಗುವ ಬ್ಯಾಕ್ಟೀರಿಯಾಗಳು ಇರುವ ಕಾರಣ ಜೀರ್ಣಕ್ರಿಯೆ ಆರಾಮವಾಗಿ ನಡೆಯುತ್ತದೆ. ಅಲ್ಲದೇ ಉತ್ತಮ ಪ್ರಮಾಣದ ಕರಗಿದ ನಾರು ಇರುವುದರಿಂದ ಆಹಾರ ಸುಲಭವಾಗಿ ಚಲಿಸಲು ಮತ್ತು ವಿಸರ್ಜನೆ ಸುಲಭವಾಗಲು ನೆರವಾಗುತ್ತದೆ.

ಅತಿಸಾರ ನಿವಾರಣೆ
ಅತಿಸಾರದಿಂದ ಬಳಲುತ್ತಿರುವವರಿಗೆ ಇದು ತುಂಬಾ ಹಿಂದಿನಿಂದಲೂ ಕೊಡುತ್ತಿರುವಂತಹ ಮದ್ದಾಗಿದೆ. ಕೆಲವೊಂದು ಸಂಶೋಧನೆಗಳ ಪ್ರಕಾರ ಗಂಜಿನೀರು ಇತರ ಮದ್ದಿಗಿಂತ ತುಂಬಾ ಪರಿಣಾಮಕಾರಿಯೆಂದು ತಿಳಿದುಬಂದಿದೆ.

ಶಕ್ತಿಯ ಆಗರ
ಕಾರ್ಬೋಹೈಡ್ರೆಡ್ ಗಳಿಂದ ಸಮೃದ್ಧವಾಗಿರುವ ಗಂಜಿ ನೀರು ದೇಹಕ್ಕೆ ಶಕ್ತಿಯನ್ನು ನೀಡುವುದು. ಒಂದು ಲೋಟ ಕುಡಿದರೆ ನಿಮ್ಮ ದೇಹವು ಉಲ್ಲಾಸಿತವಾಗುವುದು.

ಕ್ಯಾನ್ಸರ್ ಬರದಂತೆ ತಡೆಯುವುದು
ವಿಟಮಿನ್ ಎ ಮತ್ತು ಪೆನೊಲ್ಸ್ ಗಳಂತಹ ಆ್ಯಂಟಿಆ್ಯಕ್ಸಿಡೆಂಟ್ ಗಳನ್ನು ಹೊಂದಿರುವ ಗಂಜಿ ನೀರು ವಿವಿಧ ರೀತಿಯ ಕ್ಯಾನ್ಸರ್ ಬರದಂತೆ ತಡೆಯುವುದು.

ಅಲ್ಜಿಮರ್ ಕಾಯಿಲೆ ತಡೆಯುವುದು
ಗಂಜಿ ನೀರಿನಲ್ಲಿರುವ ಕೆಲವೊಂದು ಪೋಷಕಾಂಶಗಳು ನರಸಂವಾಹಕಗಳ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ನಿರ್ವಹಿಸುವುದು. ಇದು ಅಲ್ಜಿಮರ್ ಕಾಯಿಲೆ ಬರದಂತೆ ತಡೆಯುವಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತದೆ.

ವೈರಲ್ ಸೋಂಕು ನಿವಾರಣೆ
ವೈರಲ್ ನಿಂದ ಉಂಟಾದ ಸೋಂಕನ್ನು ನಿವಾರಿಸಲು ಗಂಜಿನೀರನ್ನು ಬಳಸಿಕೊಳ್ಳಬಹುದು. ಜ್ವರದ ವೇಳೆ ಒಂದು ಲೋಟ ಗಂಜಿ ನೀರನ್ನು ಕುಡಿದರೆ ದೇಹಕ್ಕೆ ಹಲವಾರು ರೀತಿಯ ಪೋಷಕಾಂಶಗಳು ಸಿಗುವುದು ಮತ್ತು ಜ್ವರ ಕಡಿಮೆಯಾಗಲು ನೆರವಾಗುವುದು.

ಸೂರ್ಯನಿಂದ ರಕ್ಷಣೆ
ಒಂದು ಲೋಟ ಗಂಜಿನೀರನ್ನು ಕುಡಿದರೆ ನೀವು ಸೂರ್ಯನ ಯುವಿ ಕಿರಣಗಳಿಂದ ರಕ್ಷಣೆ ಪಡೆಯಬಹುದು. ಸೂರ್ಯನ ಯುವಿ ಕಿರಣಗಳು ಚರ್ಮಕ್ಕೆ ಹಾನಿಯುಂಟು ಮಾಡುವುದನ್ನು ತಡೆಯುವಂತಹ ಒರ್ಯಜೋನಲ್ ಗಂಜಿ ನೀರಿನಲ್ಲಿದೆ.



Click it and Unblock the Notifications
