Latest Updates
-
ಭಾರತ-ಜಿಂಬಾಬ್ವೆ ಟಿ20 ಪಂದ್ಯದ ಮಜಾ ಸವಿಯುತ್ತಲೇ ಮನೆಯ ಜವಾಬ್ದಾರಿ ನಿಭಾಯಿಸುವುದು ಹೇಗೆ? ಸ್ಮಾರ್ಟ್ ಟಿಪ್ಸ್ ಇಲ್ಲಿದೆ! -
IMD ರೆಡ್ ಅಲರ್ಟ್: ಭಾರಿ ಮಳೆಯಿಂದ ಮನೆಯನ್ನು ರಕ್ಷಿಸಲು ಈ 5 ಮುನ್ನೆಚ್ಚರಿಕೆಗಳು ಕಡ್ಡಾಯ! -
ಗುರು ಪೂರ್ಣಿಮಾ ಉಪವಾಸ: ಮಧುಮೇಹಿಗಳು ಆರೋಗ್ಯವಾಗಿರಲು ಈ ಸಾತ್ವಿಕ ಆಹಾರ ಕ್ರಮ ಪಾಲಿಸಿ -
ಪೇಪರ್ ಸೋರಿಕೆ ಮಾಡಿದ್ರೆ 10 ವರ್ಷ ಜೈಲು: ವಿದ್ಯಾರ್ಥಿಗಳ ಭವಿಷ್ಯಕ್ಕೆ ಸಿಗಲಿದೆ ಹೊಸ ಭದ್ರತೆ! -
ಕಾರ್ಗಿಲ್ ವಿಜಯ್ ದಿವಸ್: ದೇಶಭಕ್ತಿಯ ನಡಿಗೆಯಲ್ಲಿ ಪಾಲ್ಗೊಳ್ಳುವ ಮುನ್ನ ಈ ಆರೋಗ್ಯ ಟಿಪ್ಸ್ ಮರೆಯದಿರಿ -
ದೇವಶಯನಿ ಏಕಾದಶಿ: ದಂಪತಿಗಳ ಬಾಂಧವ್ಯ ಹೆಚ್ಚಿಸಲು ಈ ಉಪವಾಸದ ಟಿಪ್ಸ್ ಮಿಸ್ ಮಾಡ್ಬೇಡಿ! -
ಮಳೆಗಾಲದ ತೇವಾಂಶ: ನಿಮ್ಮ ದುಬಾರಿ ಸೀರೆ ಮತ್ತು ಶೂಗಳನ್ನು ಬೂಸ್ಟ್ನಿಂದ ರಕ್ಷಿಸಲು ಈ 15 ನಿಮಿಷದ ಟಿಪ್ಸ್ ಸಾಕು! -
ಅಹಮದಾಬಾದ್ ಮಳೆ: ಪ್ರವಾಹದ ಸಮಯದಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ಈ ಸರಳ ಮಾರ್ಗಸೂಚಿಗಳನ್ನು ಅನುಸರಿಸಿ -
ಕಾಮನ್ವೆಲ್ತ್ ಗೇಮ್ಸ್ 2026: 3ನೇ ದಿನ ಭಾರತದ ಆಟಗಾರರ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ! -
ಮಳೆಗಾಲದ ಜಾರುವ ರಸ್ತೆಗಳಲ್ಲಿ ನಡೆಯುವಾಗ ಎಚ್ಚರ: ಸುರಕ್ಷಿತವಾಗಿರಲು 8 ನಿಮಿಷಗಳ ಈ ವ್ಯಾಯಾಮ ಮಾಡಿ!
ಸ್ವಚ್ಛತೆ ಕಾಪಾಡಿದರೆ ರೋಗಬಾಧೆ ದೂರ ಬಲುದೂರ...
ನಮ್ಮ ದೈನಂದಿನ ಜೀವನದಲ್ಲಿ ಸ್ಛಚತೆ ತುಂಬಾ ಮುಖ್ಯ. ಕೇಂದ್ರ ಸರಕಾರ ಕೂಡ ಸ್ವಚ್ಛ ಭಾರತ ಅಭಿಯಾನವನ್ನು ಶುರು ಮಾಡಿದೆ. ಈ ಅಭಿಯಾನದ ಮೂಲಕ ಬಯಲಿನಲ್ಲಿ ಶೌಚ ಮಾಡಬಾರದು ಮತ್ತು ಪ್ರತಿಯೊಂದು ಮನೆಯಲ್ಲೂ ಶೌಚಾಲಯವಿರಬೇಕು ಮತ್ತು ಪ್ರತಿಯೊಂದು ಗ್ರಾಮವೂ ಸ್ವಚ್ಛವಾಗಿರಬೇಕು ಎನ್ನುವುದು ಉದ್ದೇಶವಾಗಿದೆ. ಆದರೆ ಎಷ್ಟು ಮಂದಿ ತಮ್ಮ ದೈನಂದಿನ ಜೀವನದಲ್ಲಿ ಸ್ವಚ್ಛತೆಯನ್ನು ಪಾಲಿಸುತ್ತಾರೆ.

ಸ್ವಚ್ಛತೆಯನ್ನು ಪಾಲಿಸಿದರೆ ಮುಂದಿನ ರೋಗರುಜಿನಗಳಿಂದ ದೂರವಿರಬಹುದು. ಬಾಲ್ಯದಿಂದಲೇ ಮಕ್ಕಳಿಗೆ ಸ್ವಚ್ಛತೆ ಬಗ್ಗೆ ಹೇಳಿಕೊಟ್ಟರೆ ಮುಂದಿನ ದಿನಗಳಲ್ಲಿ ಅವರು ಸ್ವಚ್ಛತೆಯನ್ನು ಅಳವಡಿಸಿಕೊಂಡು ಸೋಂಕು ಹಾಗೂ ರೋಗಗಳಿಂದ ದೂರವಿರಬಹುದು. ಹೆಚ್ಚಿನವರು ಹೊಸ ವರ್ಷಕ್ಕೆ ಧೂಮಪಾನ ತ್ಯಜಿಸುವುದು, ಆರೋಗ್ಯಕರವಾದ ಆಹಾರ ತಿನ್ನುವುದು, ಹಣ ಉಳಿಸುವುದು ಮೊದಲಾದವುಗಳ ಬಗ್ಗೆ ಪಣ ತೊಡುತ್ತಾರೆ. 'ಆರೋಗ್ಯವೇ ಭಾಗ್ಯ' ಎಂಬ ಅರಿವು ಎಂದೆಂದಿಗೂ ಇರಲಿ!
ಆದರೆ ನಾವು ಸ್ವಚ್ಛವಾಗಿದ್ದುಕೊಂಡು ನಮ್ಮ ಸುತ್ತಲೂ ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕು ಎನ್ನುವ ಬಗ್ಗೆ ಯಾರೂ ಪಣ ತೊಡುವುದಿಲ್ಲ. ಹೊಸ ವರ್ಷಕ್ಕೆ ಸ್ವಚ್ಛತೆಯ ಬಗ್ಗೆ ಪಣ ತೊಟ್ಟರೆ ತುಂಬಾ ಒಳ್ಳೆಯದು.
*ಪ್ರತೀ ದಿನ ಎದ್ದಾಗ ಇಂದು ಏನು ಮಾಡಬೇಕೆಂದು ಯಾವತ್ತಾದರೂ ಕ್ರಿಯಾತ್ಮಕವಾಗಿ ಯೋಚನೆ ಮಾಡಿದ್ದೀರಾ? ಕೆಲವರ ಬೆಳಗ್ಗಿನ ಕ್ರಿಯೆಗಳು ತುಂಬಾ ನೀರವತೆಯಿಂದ ಕೂಡಿರುತ್ತದೆ. ಎದ್ದಕೂಡಲೇ ಶೌಚಾಲಯಕ್ಕೆ ಹೋಗುತ್ತಾರೆ. ಬ್ರಶ್ ತೆಗೆದುಕೊಂಡು ಹಲ್ಲುಜ್ಜುತ್ತಾರೆ. ಆದರೆ ಬೆಳಗ್ಗೆ ಹಲ್ಲುಉಜ್ಜಿದರೆ ಸಾಕಾಗದು. ರಾತ್ರಿ ಮಲಗುವ ಮುನ್ನ ಕೂಡ ಹಲ್ಲುಜ್ಜಬೇಕು.
*ನಾಲಗೆಯನ್ನು ಕೂಡ ಬ್ರಶ್ನಿಂದ ಉಜ್ಜಿಕೊಳ್ಳಿ. ಪ್ರತೀದಿನವೂ ಸ್ನಾನ ಮಾಡುವುದು ಸ್ವಚ್ಛತೆಯ ಮತ್ತೊಂದು ವಿಧಾನ. ಪ್ರತೀ ದಿನವೂ ವಾತಾವರಣವೂ ಕಲುಷಿತವಾಗುತ್ತಿರುತ್ತದೆ. ಧೂಳು, ಹೊಗೆಯೊಂದಿಗೆ ನಾವು ಪ್ರತಿ ದಿನವೂ ಹೋರಾಡುತ್ತಿರುತ್ತೇವೆ. ಇಂತಹ ಸಂದರ್ಭದಲ್ಲಿ ನಿತ್ಯವೂ ಸ್ನಾನ ಮಾಡುವುದು ಅತ್ಯಗತ್ಯ.
*ಇದು ದೇಹವನ್ನು ಮಾತ್ರ ಸ್ವಚ್ಛ ಮಾಡುವುದು ಮಾತ್ರವಲ್ಲದೆ ದೇಹದ ನೋವು ಹಾಗೂ ಒತ್ತಡವನ್ನು ದೂರ ಮಾಡುತ್ತದೆ. ನಿಯಮಿತವಾಗಿ ಉಗುರುಗಳನ್ನು ಕತ್ತರಿಸುತ್ತಾ ಇರಿ. ಉಗುರುಗಳು ಉದ್ದವಾಗಿದ್ದರೆ ಅದರಲ್ಲಿ ಬ್ಯಾಕ್ಟೀರಿಯಾಗಳು ವಾಸಮಾಡುವುದು. ಶೀನುವಾಗ ಮತ್ತು ಕೆಮ್ಮುವಾಗ ಮುಖ ಮುಚ್ಚಿಕೊಳ್ಳಿ. ಆರೋಗ್ಯವೇ ಭಾಗ್ಯ ನಾಣ್ಣುಡಿ ಮರೆತು, ಕೊರಗಬೇಡಿ!
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications

