Just In
Don't Miss
- News Rain Alert: ಕೊಡಗಿನ ವಿವಿಧಡೆ ಮಳೆ ಅಬ್ಬರ: ಮೋಡ ಕವಿದ ವಾತಾವರಣ
- Automobiles Brezza: ಮಾರುತಿ ಸುಜುಕಿ ಬ್ರೆಝಾ ಖರೀದಿಸಬೇಕೇ.. ಆನ್ ರೋಡ್ ಬೆಲೆ ಎಷ್ಟು? EMI ಏನು?
- Sports IPL 2024: RCB ವಿರುದ್ಧ ಪಂದ್ಯಕ್ಕೆ KKRನ ಆಡುವ 11ರ ಬಳಗ ಮರೆತ ಶ್ರೇಯಸ್ ಅಯ್ಯರ್
- Movies "ನನ್ನೇನು ಅಭಿಮನ್ಯು ಅಂದುಕೊಂಡ್ಯ..; ಕೆಲವ್ರು ಕುಡಿದ ಮೇಲೆ ಗಂಡಸರಾಗ್ತಾರೆ.. 'ಯುವ' ಡೈಲಾಗ್ ಪಂಚ್
- Technology WhatsApp: ವಾಟ್ಸಾಪ್ನಲ್ಲಿ ಈ ಕರೆಗಳನ್ನು ಸ್ವೀಕರಿಸದಂತೆ ಕೇಂದ್ರದಿಂದ ಎಚ್ಚರಿಕೆ! ಯಾಕೆ ಗೊತ್ತಾ?
- Finance 25ನೇ ವಯಸ್ಸಿನಲ್ಲಿ 25,000 ರೂ.ನಿಂದ 7,000 ಕೋಟಿ ಗಳಿಸಿದ ವ್ಯಕ್ತಿ ಬಗ್ಗೆ ತಿಳಿಯಿರಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸ್ವಚ್ಛತೆ ಕಾಪಾಡಿದರೆ ರೋಗಬಾಧೆ ದೂರ ಬಲುದೂರ...
ನಮ್ಮ
ದೈನಂದಿನ
ಜೀವನದಲ್ಲಿ
ಸ್ಛಚತೆ
ತುಂಬಾ
ಮುಖ್ಯ.
ಕೇಂದ್ರ
ಸರಕಾರ
ಕೂಡ
ಸ್ವಚ್ಛ
ಭಾರತ
ಅಭಿಯಾನವನ್ನು
ಶುರು
ಮಾಡಿದೆ.
ಈ
ಅಭಿಯಾನದ
ಮೂಲಕ
ಬಯಲಿನಲ್ಲಿ
ಶೌಚ
ಮಾಡಬಾರದು
ಮತ್ತು
ಪ್ರತಿಯೊಂದು
ಮನೆಯಲ್ಲೂ
ಶೌಚಾಲಯವಿರಬೇಕು
ಮತ್ತು
ಪ್ರತಿಯೊಂದು
ಗ್ರಾಮವೂ
ಸ್ವಚ್ಛವಾಗಿರಬೇಕು
ಎನ್ನುವುದು
ಉದ್ದೇಶವಾಗಿದೆ.
ಆದರೆ
ಎಷ್ಟು
ಮಂದಿ
ತಮ್ಮ
ದೈನಂದಿನ
ಜೀವನದಲ್ಲಿ
ಸ್ವಚ್ಛತೆಯನ್ನು
ಪಾಲಿಸುತ್ತಾರೆ.
ಸ್ವಚ್ಛತೆಯನ್ನು ಪಾಲಿಸಿದರೆ ಮುಂದಿನ ರೋಗರುಜಿನಗಳಿಂದ ದೂರವಿರಬಹುದು. ಬಾಲ್ಯದಿಂದಲೇ ಮಕ್ಕಳಿಗೆ ಸ್ವಚ್ಛತೆ ಬಗ್ಗೆ ಹೇಳಿಕೊಟ್ಟರೆ ಮುಂದಿನ ದಿನಗಳಲ್ಲಿ ಅವರು ಸ್ವಚ್ಛತೆಯನ್ನು ಅಳವಡಿಸಿಕೊಂಡು ಸೋಂಕು ಹಾಗೂ ರೋಗಗಳಿಂದ ದೂರವಿರಬಹುದು. ಹೆಚ್ಚಿನವರು ಹೊಸ ವರ್ಷಕ್ಕೆ ಧೂಮಪಾನ ತ್ಯಜಿಸುವುದು, ಆರೋಗ್ಯಕರವಾದ ಆಹಾರ ತಿನ್ನುವುದು, ಹಣ ಉಳಿಸುವುದು ಮೊದಲಾದವುಗಳ ಬಗ್ಗೆ ಪಣ ತೊಡುತ್ತಾರೆ. 'ಆರೋಗ್ಯವೇ ಭಾಗ್ಯ' ಎಂಬ ಅರಿವು ಎಂದೆಂದಿಗೂ ಇರಲಿ!
ಆದರೆ ನಾವು ಸ್ವಚ್ಛವಾಗಿದ್ದುಕೊಂಡು ನಮ್ಮ ಸುತ್ತಲೂ ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕು ಎನ್ನುವ ಬಗ್ಗೆ ಯಾರೂ ಪಣ ತೊಡುವುದಿಲ್ಲ. ಹೊಸ ವರ್ಷಕ್ಕೆ ಸ್ವಚ್ಛತೆಯ ಬಗ್ಗೆ ಪಣ ತೊಟ್ಟರೆ ತುಂಬಾ ಒಳ್ಳೆಯದು.
*ಪ್ರತೀ ದಿನ ಎದ್ದಾಗ ಇಂದು ಏನು ಮಾಡಬೇಕೆಂದು ಯಾವತ್ತಾದರೂ ಕ್ರಿಯಾತ್ಮಕವಾಗಿ ಯೋಚನೆ ಮಾಡಿದ್ದೀರಾ? ಕೆಲವರ ಬೆಳಗ್ಗಿನ ಕ್ರಿಯೆಗಳು ತುಂಬಾ ನೀರವತೆಯಿಂದ ಕೂಡಿರುತ್ತದೆ. ಎದ್ದಕೂಡಲೇ ಶೌಚಾಲಯಕ್ಕೆ ಹೋಗುತ್ತಾರೆ. ಬ್ರಶ್ ತೆಗೆದುಕೊಂಡು ಹಲ್ಲುಜ್ಜುತ್ತಾರೆ. ಆದರೆ ಬೆಳಗ್ಗೆ ಹಲ್ಲುಉಜ್ಜಿದರೆ ಸಾಕಾಗದು. ರಾತ್ರಿ ಮಲಗುವ ಮುನ್ನ ಕೂಡ ಹಲ್ಲುಜ್ಜಬೇಕು.
*ನಾಲಗೆಯನ್ನು ಕೂಡ ಬ್ರಶ್ನಿಂದ ಉಜ್ಜಿಕೊಳ್ಳಿ. ಪ್ರತೀದಿನವೂ ಸ್ನಾನ ಮಾಡುವುದು ಸ್ವಚ್ಛತೆಯ ಮತ್ತೊಂದು ವಿಧಾನ. ಪ್ರತೀ ದಿನವೂ ವಾತಾವರಣವೂ ಕಲುಷಿತವಾಗುತ್ತಿರುತ್ತದೆ. ಧೂಳು, ಹೊಗೆಯೊಂದಿಗೆ ನಾವು ಪ್ರತಿ ದಿನವೂ ಹೋರಾಡುತ್ತಿರುತ್ತೇವೆ. ಇಂತಹ ಸಂದರ್ಭದಲ್ಲಿ ನಿತ್ಯವೂ ಸ್ನಾನ ಮಾಡುವುದು ಅತ್ಯಗತ್ಯ.
*ಇದು ದೇಹವನ್ನು ಮಾತ್ರ ಸ್ವಚ್ಛ ಮಾಡುವುದು ಮಾತ್ರವಲ್ಲದೆ ದೇಹದ ನೋವು ಹಾಗೂ ಒತ್ತಡವನ್ನು ದೂರ ಮಾಡುತ್ತದೆ. ನಿಯಮಿತವಾಗಿ ಉಗುರುಗಳನ್ನು ಕತ್ತರಿಸುತ್ತಾ ಇರಿ. ಉಗುರುಗಳು ಉದ್ದವಾಗಿದ್ದರೆ ಅದರಲ್ಲಿ ಬ್ಯಾಕ್ಟೀರಿಯಾಗಳು ವಾಸಮಾಡುವುದು. ಶೀನುವಾಗ ಮತ್ತು ಕೆಮ್ಮುವಾಗ ಮುಖ ಮುಚ್ಚಿಕೊಳ್ಳಿ. ಆರೋಗ್ಯವೇ ಭಾಗ್ಯ ನಾಣ್ಣುಡಿ ಮರೆತು, ಕೊರಗಬೇಡಿ!