Latest Updates
-
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ 2026: ಅಪ್ಪನ ಮುಖದಲ್ಲಿ ನಗು ಮೂಡಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಐಡಿಯಾಗಳು! -
10ನೇ ಅಂತರಾಷ್ಟ್ರೀಯ ಯೋಗ ದಿನ: ಮಳೆಯನ್ನೂ ಮೀರಿ ಕೋಲ್ಕತ್ತಾದಲ್ಲಿ ಯೋಗ ಸಂಭ್ರಮ, ಮನೆಯಲ್ಲೇ ಅಭ್ಯಾಸ ಮಾಡಲು ಇಲ್ಲಿದೆ ಸರಳ ಟಿಪ್ಸ್! -
ಭಾರತ vs ಅಫ್ಘಾನಿಸ್ತಾನ ಪಂದ್ಯ: ಮ್ಯಾಚ್ ನೋಡುವಾಗ ಮನೆಯಲ್ಲಿ ಶಾಂತಿ ಕಾಪಾಡಲು ಈ ಟಿಪ್ಸ್ ಫಾಲೋ ಮಾಡಿ! -
ನಾಳೆ ನೀಟ್ ಮರುಪರೀಕ್ಷೆ: ಮಳೆಗಾಲದ ನಡುವೆ ಪರೀಕ್ಷೆಗೆ ಸಜ್ಜಾಗುವುದು ಹೇಗೆ? ಇಲ್ಲಿದೆ ಫೈನಲ್ ಚೆಕ್ಲಿಸ್ಟ್ -
ಪಿಎಂ-ಕಿಸಾನ್ ಹಣ ಜಮೆ: ರೈತರೇ, ಈ 2,000 ರೂಪಾಯಿಯಲ್ಲಿ ಆರೋಗ್ಯಕರ ಆಹಾರ ಖರೀದಿಸಿ, ಮಧುಮೇಹ ನಿಯಂತ್ರಿಸಿ! -
ಭಾರಿ ಗಾಳಿ-ಮಳೆಯ ಎಚ್ಚರಿಕೆ: ಜೂನ್ 20ರಂದು ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳನ್ನು ಮರೆಯದಿರಿ! -
ಮಳೆಗಾಲದಲ್ಲಿ ಅಂತರಾಷ್ಟ್ರೀಯ ಯೋಗ ದಿನ: ಹಿರಿಯರು ಸುರಕ್ಷಿತವಾಗಿ ಯೋಗ ಮಾಡುವುದು ಹೇಗೆ?
ಕಿಡ್ನಿಯ ಆರೋಗ್ಯಕ್ಕೆ ಸರಳ ಜ್ಯೂಸ್-ನೀವೂ ಒಮ್ಮೆ ಪ್ರಯತ್ನಿಸಿ
ಕಾರ್ಯನಿಮಿತ್ತ ಹೊರಗೆ ಹೋಗುವವರೆಲ್ಲರಿಗೂ ಹೊರಗಿನ ಊಟ ಮತ್ತು ಪೇಯಗಳನ್ನು ಅನಿವಾರ್ಯವಾಗಿ ಸೇವಿಸಬೇಕಾಗಿ ಬರುತ್ತದೆ. ಒಂದು ವೇಳೆ ನೀವೂ ಹೊರಗಿನ ಆಹಾರ ಪಾನೀಯಗಳನ್ನು ಅನಿವಾರ್ಯವಾಗಿ ಸೇವಿಸಬೇಕಾಗಿ ಬಂದು ನಿಮ್ಮ ಅರೋಗ್ಯದ ಬಗ್ಗೆ ಕಾಳಜಿಯನ್ನೂ ಹೊಂದಿದ್ದರೆ ಮೊದಲಿಗೆ ನಿಮ್ಮ ಕಾಳಜಿ ನಿಮ್ಮ ಮೂತ್ರಪಿಂಡಗಳ ಬಗ್ಗೆ ಇರಬೇಕು.
ಏಕೆಂದರೆ ಹೊರಗಿನ ಪಾನೀಯಗಳಲ್ಲಿರುವ ಕಲ್ಮಶಗಳನ್ನು ಸ್ವಚ್ಛಗೊಳಿಸುತ್ತಾ ಮೂತ್ರಪಿಂಡಗಳಲ್ಲಿ ಹೆಚ್ಚಿನ ವಿಷಕಾರಿ ವಸ್ತುಗಳು ಸಂಗ್ರಹವಾಗಿರುತ್ತವೆ. ವಿಶೇಷವಾಗಿ ನೀರಿನಲ್ಲಿ ಕರಗಿರುವ ಲವಣಗಳು. ಈ ಲವಣಗಳನ್ನು ಶೋಧಿಸಿದ ಬಳಿಕ ಮೂತ್ರಪಿಂಡಗಳಲ್ಲಿ ಉಳಿದುಕೊಳ್ಳುವ ಲವಣಗಳ ಸಾಂದ್ರತೆ ಹೆಚ್ಚುತ್ತಾ ಕಲ್ಲಿನ ರೂಪ ಪಡೆಯುತ್ತವೆ.

ಈ ಕಲ್ಲುಗಳು ನಿಧಾನವಾಗಿ ದೊಡ್ಡದಾಗುತ್ತಾ ಕಡೆಗೊಂದು ದಿನ ಅಪಾರ ನೋವು ನೀಡುತ್ತವೆ. ಅಲ್ಲದೇ ಕಲ್ಮಶಗಳು ಹೆಚ್ಚು ಹೆಚ್ಚು ಆಮ್ಲೀಯವಾಗುತ್ತಾ ಹೋದಂತೆ ಮೂತ್ರವೂ ಹೆಚ್ಚು ಹಳದಿಯಾಗುತ್ತದೆ. ಆದ್ದರಿಂದ ಮೂತ್ರಪಿಂಡಗಳಲ್ಲಿ ಸಂಗ್ರಹವಾಗಿದ್ದ ಕಲ್ಮಶಗಳನ್ನು ಕಾಲಕಾಲಕ್ಕೆ ನಿವಾರಿಸಿ ಸ್ವಚ್ಛಗೊಳಿಸುತ್ತಾ ಇರಬೇಕು.
ಮೂತ್ರಪಿಂಡಗಳನ್ನು ಸ್ವಚ್ಛಗೊಳಿಸಲು ಔಷಧಿಗಳೇನೂ ಬೇಕಾಗಿಲ್ಲ. ಇದಕ್ಕೆ ನೈಸರ್ಗಿಕ ಸಾಮಾಗ್ರಿಗಳೇ ಸಾಕು. ಈ ಕೆಲಸವನ್ನು ಸಮರ್ಥವಾಗಿ ಮಾಡಬಲ್ಲ ಕೆಲವು ಮನೆಮದ್ದುಗಳಿವೆ. ಬನ್ನಿ ಇಂತಹ ಒಂದು ಪ್ರಬಲ ಮತ್ತು ಸಮರ್ಥವಾದ ವಿಧಾನವನ್ನು ನೋಡೋಣ:
ಅಗತ್ಯವಿರುವ ಸಾಮಾಗ್ರಿಗಳು:
* ಕ್ರ್ಯಾನ್ಬೆರಿ ಹಣ್ಣಿನ ರಸ: ½ ಕಪ್
* ಲಿಂಬೆ ರಸ - ½ ಕಪ್
ತಯಾರಿಸುವ ವಿಧಾನ
* ಮೊದಲು ಒಂದು ಕಪ್ನಲ್ಲಿ ಮೇಲಿನ ಎರಡೂ ರಸಗಳನ್ನು ಸೇರಿಸಿ ಚೆನ್ನಾಗಿ ಕಲಕಿ ಮಿಶ್ರಣ ಮಾಡಿ.
* ಈ ಪೇಯ ಕೊಂಚ ಹುಳಿಯಾಗಿರುತ್ತದೆ. ಆದರೆ ಇದಕ್ಕೆ ಉಪ್ಪು ಸಕ್ಕರೆ ಏನನ್ನೂ ಸೇರಿಸಬೇಡಿ.
* ಈ ಪೇಯವನ್ನು ಪ್ರತಿದಿನ ರಾತ್ರಿ ಊಟ ಮಾಡಿದ ಬಳಿಕ ಈ ಪೇಯವನ್ನು ಸೇವಿಸಿ.
* ಉತ್ತಮ ಪರಿಣಾಮಕ್ಕಾಗಿ ಕೊಂಚ ನಡೆದಾಡಿ ಬಂದು ಎಷ್ಟು ಸಾಧ್ಯವೋ ಅಷ್ಟೂ ಹೆಚ್ಚು ನೀರು ಕುಡಿದು ಮಲಗಿ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications

