Latest Updates
-
ವಿಶ್ವ ಸಂಗೀತ ದಿನ: ಸಂಗಾತಿಯೊಂದಿಗೆ ಮರೆಯಲಾಗದ ಕ್ಷಣ ಕಳೆಯಲು ಇಲ್ಲಿದೆ ಸಿಂಪಲ್ ಪ್ಲಾನ್! -
ಮುಂಬೈನಲ್ಲಿ ತೀವ್ರ ನೀರಿನ ಅಭಾವ: ಬಿಎಂಸಿ ಕಠಿಣ ನಿಯಮಗಳ ನಡುವೆ ನೀರು ಉಳಿಸಲು ಈ ಟಿಪ್ಸ್ ಪಾಲಿಸಿ -
ಮಳೆಗಾಲದಲ್ಲಿ ಸಿಕಲ್ ಸೆಲ್ ಸಮಸ್ಯೆ: ಆರೋಗ್ಯ ಕಾಪಾಡಲು ಈ ಆಹಾರ ಕ್ರಮ ಪಾಲಿಸಿ, ನೋವು ದೂರವಿಡಿ! -
ಟೆಲಿಗ್ರಾಂ ಬ್ಯಾನ್: ಜೂನ್ 22ರವರೆಗೆ ಈ ಆಪ್ಗಳನ್ನು ಬಳಸಿ, ಇಲ್ಲದಿದ್ದರೆ ತೊಂದರೆ ಕಟ್ಟಿಟ್ಟ ಬುತ್ತಿ! -
ಮಳೆಗಾಲದಲ್ಲಿ 'ರನ್ ಫಾರ್ ಯೋಗ': ಜಾರುವ ರಸ್ತೆಯಲ್ಲಿ ಸುರಕ್ಷಿತವಾಗಿ ಓಡಲು ಈ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ: ಅಪ್ಪನ ಜೊತೆಗಿನ ಮೌನ ಮುರಿಯಲು ಮತ್ತು ಸಂಬಂಧ ಗಟ್ಟಿಗೊಳಿಸಲು ಇಲ್ಲಿದೆ ಸರಳ ಟಿಪ್ಸ್ -
ಮುಂಬೈ ಜನರೇ ಎಚ್ಚರ! ಜೂನ್ 18-19ರಂದು ಭಾರಿ ಹೈ-ಟೈಡ್ ಭೀತಿ: ಪ್ರವಾಹದಿಂದ ಪಾರಾಗಲು ಈ ಮುನ್ನೆಚ್ಚರಿಕೆ ಮರೆಯದಿರಿ -
ಮಳೆಗಾಲದ ಎಚ್ಚರಿಕೆ: ಟೈಫಾಯಿಡ್ ಮತ್ತು ಸೋಂಕಿನಿಂದ ಪಾರಾಗಲು ನಿಮ್ಮ ಆಹಾರ ಕ್ರಮ ಹೀಗಿರಲಿ -
ಯುಜಿಸಿ ನೆಟ್ 2026 ಪ್ರವೇಶ ಪತ್ರ ಬಿಡುಗಡೆ: ಪರೀಕ್ಷಾ ಕೇಂದ್ರಕ್ಕೆ ತೆರಳುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಸಿಡಿಲು-ಮಳೆಯ ಎಚ್ಚರಿಕೆ: ಹೊರಗೆ ಹೋಗುವ ಸಾಹಸ ಬೇಡ, ಮನೆಯಲ್ಲೇ ಫಿಟ್ ಆಗಿರಲು ಈ ಟಿಪ್ಸ್ ಫಾಲೋ ಮಾಡಿ!
ನಿಲ್ಲಿ! ಖಾಲಿ ಹೊಟ್ಟೆ ಎಂದು ಈ ಆಹಾರಗಳನ್ನು ಮಾತ್ರ ಸೇವಿಸಬೇಡಿ!
ಊಟ ಬಲ್ಲವನಿಗೆ ರೋಗವಿಲ್ಲ ಎಂಬ ಗಾದೆಯಂತೆ ಯಾವ ಊಟವನ್ನು ಯಾವ ಹೊತ್ತಿನಲ್ಲಿ ಸೇವಿಸಬೇಕು ಎಂದು ತಿಳಿದುಕೊಂಡಿರುವವರು ಉತ್ತಮ ಆರೋಗ್ಯ ಹೊಂದಿರುತ್ತಾರೆ. ಆದರೆ ಉತ್ತಮ ಆರೋಗ್ಯಕ್ಕೆ ಇಷ್ಟು ಮಾತ್ರ ಸಾಲದು, ಯಾವ ಹೊತ್ತಿನಲ್ಲಿ ಯಾವ ಆಹಾರವನ್ನು ತಿನ್ನಬಾರದು ಎಂಬುದನ್ನೂ ಕೊಂಚ ತಿಳಿದಿರಬೇಕು. ಖಾಲಿ ಹೊಟ್ಟೆಯಲ್ಲಿ ಚಹಾ ಸೇವನೆ-ಅಪಾಯ ಬೆನ್ನೇರಿ ಕಾಡಲಿದೆ!
ಏಕೆಂದರೆ ವಿಶೇಷವಾಗಿ ಹೊಟ್ಟೆ ಖಾಲಿಯಿದ್ದಾಗ ಸೇವಿಸುವ ಕೆಲವು ಆಹಾರಗಳು ಆರೋಗ್ಯವನ್ನು ಕೆಡಿಸಬಲ್ಲವು. ಆದರೆ ಯಾವ ಆಹಾರಗಳನ್ನು ಸೇವಿಸಬಾರದು ಎಂದು ಗೊತ್ತಿಲ್ಲವೇ? ಮುಂದೆ ಓದಿ....

ಸಕ್ಕರೆ
ಒಂದು ವೇಳೆ ನಾವು ಖಾಲಿ ಹೊಟ್ಟೆಯಲ್ಲಿ ಹೆಚ್ಚಿನ ಸಕ್ಕರೆ ಅಥವಾ ಸಕ್ಕರೆ ಬೆರೆಸಿದ ಆಹಾರಗಳನ್ನು ಸೇವಿಸಿದಾಗ ನಮ್ಮ ದೇಹ ಈ ಮಟ್ಟದ ಸಕ್ಕರೆಯನ್ನು ಅರಗಿಸಿಕೊಳ್ಳಬಲ್ಲಷ್ಟು ಪ್ರಮಾಣದ ಇನ್ಸುಲಿನ್ ಅನ್ನು ಉತ್ಪಾದಿಸಲು ಸಾಧ್ಯವಾಗುವುದಿಲ್ಲ. ಆದರೆ ಜೀರ್ಣಾಂಗಗಳು ಈ ಸಕ್ಕರೆಯನ್ನು ರಕ್ತಕ್ಕೆ ತಕ್ಷಣವೇ ಸೇರಿಸಿಕೊಳ್ಳುವ ಕಾರಣ ರಕ್ತದಲ್ಲಿ ಸಕ್ಕರೆಯ ಪ್ರಮಾಣ ಥಟ್ಟನೇ ಏರುತ್ತದೆ. ಇದು ಹಲವು ತೊಂದರೆಗಳಿಗೆ ನಾಂದಿ ಹಾಡುತ್ತದೆ. ಸಕ್ಕರೆ ಹಿಂದಿರುವ ಕರಾಳ ಸತ್ಯ: ಇಲ್ಲಿದೆ 10 ಪುರಾವೆಗಳು

ಟೊಮೆಟೊ
ಖಾಲಿಹೊಟ್ಟೆಯಲ್ಲಿ ತಿನ್ನಬಾರದ ಇನ್ನೊಂದು ಆಹಾರವೆಂದರೆ ಟೊಮಾಟೋ ಅಥವಾ ಟೊಮೆಟೊ ಆಧಾರಿತ ಖಾದ್ಯಗಳು.

ಟೊಮೆಟೊ
ಏಕೆಂದರೆ ಇದರಲ್ಲಿರುವ ಕೆಲವು ಆಮ್ಲಗಳು ನಮ್ಮ ಜೀರ್ಣರಸಗಳೊಂದಿಗೆ ಬೆರೆತ ತಕ್ಷಣ ಪೂರ್ಣವಾಗಿ ಜೀರ್ಣಗೊಳ್ಳದೇ ಚಿಕ್ಕ ಚಿಕ್ಕ ಕಲ್ಲುಗಳಾಗಿಬಿಡುತ್ತವೆ. ಇವು ಕರುಳುಗಳಿಗೆ ಅಪಾಯ ಒಡ್ಡಬಲ್ಲವು.

ಖಾರವಾದ ಆಹಾರಗಳು
ಖಾಲಿ ಹೊಟ್ಟೆಯಲ್ಲಿ ಖಾರವಾದ ಮಸಾಲೆಯುಕ್ತ ಆಹಾರಗಳನ್ನು ಸೇವಿಸಿದರೆ ಮೊದಲೇ ಆಮ್ಲೀಯವಾಗಿದ್ದ ನಮ್ಮ ಜೀರ್ಣರಸ ಇನ್ನಷ್ಟು ಆಮ್ಲೀಯವಾಗುತ್ತದೆ.

ಖಾರವಾದ ಆಹಾರಗಳು
ಖಾಲಿಹೊಟ್ಟೆಯಲ್ಲಿ ನಮ್ಮ ಜೀರ್ಣರಸಗಳು ಹೊಟ್ಟೆಯ ಒಳಪದರವನ್ನು ಸುಡುತ್ತಿರುತ್ತವೆ. ಈ ಆಹಾರದ ಸೇವನೆಯ ಮೂಲಕ ಸುಡುವುದು ಇನ್ನಷ್ಟು ಹೆಚ್ಚುತ್ತದೆ. ಪರಿಣಾಮ, ಹೊಟ್ಟೆನೋವು, ಹೊಟ್ಟೆಯಲ್ಲಿ ಉರಿ ಪ್ರಾರಂಭವಾಗುತ್ತದೆ.

ಬಾಳೆಹಣ್ಣು
ಇದೊಂದು ಉತ್ತಮ ಆಹಾರವಾದರೂ ಖಾಲಿಹೊಟ್ಟೆಯಲ್ಲಿ ಸೇವಿಸಲು ತಕ್ಕುದಲ್ಲ. ಏಕೆಂದರೆ ಇದರಲ್ಲಿರುವ ಮೆಗ್ನೀಶಿಯಂ ತಕ್ಷಣವೇ ರಕ್ತದಲ್ಲಿರುವ ಕ್ಯಾಲ್ಸಿಯಂ ನೊಂದಿಗೆ ಬೆರೆತು ಸಮತೋಲನವನ್ನು ಏರುಪೇರಾಗಿಸುತ್ತದೆ.

ಸಿಹಿಗೆಣಸು
ಸಿಹಿಗೆಣಸನ್ನೂ ಖಾಲಿ ಹೊಟ್ಟೆಯಲ್ಲಿ ಸೇವಿಸಬಾರದು. ಏಕೆಂದರೆ ಇದರಲ್ಲಿರುವ ಟ್ಯಾನಿನ್ ಮತ್ತು ಪೆಕ್ಟಿಕ್ ಪೋಷಕಾಂಶಗಳು ಜೀರ್ಣರಸದೊಂದಿಗೆ ಬೆರೆತಾಗ ಹೊಟ್ಟೆಯ ಒಳಪದರವನ್ನು ಇನ್ನಷ್ಟು ಪ್ರಚೋದನೆಗೊಳಿಸಿ ಹೆಚ್ಚಿನ ಜಠರರಸ ಸ್ರವಿಸಲು ಕಾರಣವಾಗುತ್ತದೆ.

ಸಿಹಿಗೆಣಸು
ಇದು ಹೊಟ್ಟೆಯಲ್ಲಿ ಆಮ್ಲೀಯತೆಯನ್ನು ವಿಪರೀತವಾಗಿ ಹೆಚ್ಚಿಸಿ ಹೊಟ್ಟೆಯುರಿ, ಹೊಟ್ಟೆಯುಬ್ಬರ, ಹುಳಿತೇಗು, ಎದೆಯುರಿ ಮೊದಲಾದ ತೊಂದರೆಗಳನ್ನು ಉಂಟುಮಾಡುತ್ತದೆ.

ಮೊಸರು
ಖಾಲಿಹೊಟ್ಟೆಯಲ್ಲಿ ಬರೆಯ ಮೊಸರನ್ನೂ ಸೇವಿಸಬಾರದು. ಏಕೆಂದರೆ ಇದರಲ್ಲಿರುವ ಬ್ಯಾಕ್ಟೀರಿಯಾಗಳು ಖಾಲಿ ಹೊಟ್ಟೆಯಲ್ಲಿ ಜಠರದಲ್ಲಿರುವ ಜೀರ್ಣರಸದೊಂದಿಗೆ ಬೆರೆತು ಇನ್ನಷ್ಟು ಆಮ್ಲೀಯವಾಗಿಸುತ್ತವೆ. ಇದು ಹೊಟ್ಟೆಯ ಪದರವನ್ನು ಇನ್ನಷ್ಟು ಸುಡಲು ಕಾರಣವಾಗುತ್ತದೆ.



Click it and Unblock the Notifications