Latest Updates
-
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ನಿಮ್ಮ ಮಕ್ಕಳೊಂದಿಗೆ ಚಂದ್ರನ ರಹಸ್ಯಗಳನ್ನು ಅನ್ವೇಷಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಓಣಂ ಹಬ್ಬದ ಸಂಭ್ರಮ: ಮಳೆಯಲ್ಲೂ ಸ್ಟೈಲಿಶ್ ಆಗಿ ಕಾಣಲು ₹1,200 ರೊಳಗೆ ಬೆಸ್ಟ್ ಫ್ಯಾಷನ್ ಟಿಪ್ಸ್! -
ಮಳೆಗಾಲದಲ್ಲಿ ಹಿರಿಯರು ಜಾರಿ ಬೀಳುವ ಆತಂಕವೇ? ಸುರಕ್ಷಿತವಾಗಿರಲು ಈ 12 ನಿಮಿಷಗಳ ಚೇರ್-ಯೋಗ ಟ್ರೈ ಮಾಡಿ! -
ಹಿರಿಯರ ಆರೋಗ್ಯಕ್ಕೆ ದಿನಕ್ಕೆ 12 ನಿಮಿಷದ 'ಚೇರ್ ಯೋಗ': ಚೈತನ್ಯ ಮತ್ತು ಸಮತೋಲನಕ್ಕೆ ಇದುವೇ ಮಂತ್ರ! -
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್! -
ಸಸ್ಯಜನ್ಯ ಹಾಲು: ತೂಕ ಇಳಿಕೆ ಮತ್ತು ಮಧುಮೇಹ ನಿಯಂತ್ರಣಕ್ಕೆ ಇದುವೇ ಬೆಸ್ಟ್ ಪರ್ಯಾಯ! -
ಸಕ್ಕರೆ ಬೆಲೆ ಏರಿಕೆ ಬಿಸಿ: ಹಬ್ಬದ ಸಿಹಿ ಬಜೆಟ್ ಉಳಿಸಲು ಇಲ್ಲಿದೆ 300 ರೂಪಾಯಿಯ ಸ್ಮಾರ್ಟ್ ಟಿಪ್ಸ್ -
ವರಮಹಾಲಕ್ಷ್ಮೀ ವ್ರತದ ಶಾಸ್ತ್ರೋಕ್ತ ವಿಧಾನ ಮತ್ತು ಪೂಜಾ ನಿಯಮಗಳು -
ವರಮಹಾಲಕ್ಷ್ಮೀ ಹಬ್ಬದ ಸಂಭ್ರಮಕ್ಕೆ ಬೆಲೆ ಏರಿಕೆಯ ಬಿಸಿ: ಕೆ.ಆರ್. ಮಾರುಕಟ್ಟೆಯಲ್ಲಿ ಗಗನಕ್ಕೇರಿದ ಹೂವು-ಹಣ್ಣುಗಳ ದರ
ಅತಿರೇಕದ ತಿನ್ನುವ ಬಯಕೆ, ಯಾವುದರ ಮುನ್ಸೂಚನೆ?
ನಮ್ಮಲ್ಲಿ ಬಸುರಿಯ ಬಯಕೆಗಳನ್ನು ತೀರಿಸುವುದಕ್ಕಾಗಿ ಸಮಾರಂಭಗಳನ್ನು ಏರ್ಪಡಿಸಿ, ಆಕೆ ಬಯಸುವ ತಿಂಡಿ-ತೀರ್ಥಗಳನ್ನೆಲ್ಲ ಮಾಡಿ ತಿನ್ನಿಸುತ್ತಾರೆ. ಆಕೆ ತೃಪ್ತಳಾದರೆ, ಅವಳ ಮತ್ತು ಮಗುವಿನ ಆರೋಗ್ಯ ಚೆನ್ನಾಗಿರುತ್ತದೆ ಎಂಬ ನಂಬುಗೆ ನಮ್ಮದು. ಏನಿದರ ಹಿಂದಿರುವ ವಿಜ್ಞಾನ?
ನಿಜವಾಗಿ ನೋಡಿದರೆ, ನಮ್ಮ ಶರೀರದಲ್ಲಿ ಯಾವ ಸತ್ವಾಂಶದ ಕೊರತೆ ಇರುವುದೋ, ಆ ಅಂಶವುಳ್ಳ ತಿನಿಸನ್ನು ತಿನ್ನುವ ಬಯಕೆ ಬರುತ್ತದೆ! ಈ ವಿಷಯ ಶ್ರೀ ಸಮಾನ್ಯನಿಗೂ ಅನ್ವಯಿಸುತ್ತದೆ. ಆ ಕೊರತೆ ಅತಿಯಾದಾಗ ಬರಬಹುದಾದ ಯಾವುದೋ ಕಾಯಿಲೆಯ ಸೂಚನೆಯೂ ಇದಾಗಿರಬಹುದು!

ಕೆಲವು ಗರ್ಭಿಣಿಯರು ಅಥವಾ ಮಕ್ಕಳು ಮಣ್ಣು ತಿನ್ನುವುದನ್ನು ನೀವು ಗಮನಿಸಿರಬಹುದು. ಶರೀರದಲ್ಲಿ ಖನಿಜಾಂಶದ ಕೊರತೆ ಉಂಟಾದಾಗ ಅವರು ಹೀಗೆ ಮಾಡುತ್ತಾರೆ! ಆ ಸತ್ವವುಳ್ಳ ಆಹಾರವನ್ನು ನೀಡಿದಾಗ, ಈ ಬಯಕೆ ತನ್ನಿಂದ ತಾನೇ ನಿಲ್ಲುವುದು.
ಈ ಮಾತಿಗೆ ಅಪವಾದವೂ ಇರಬಹುದೆನ್ನಿ! ಮಕ್ಕಳು ಚಾಕಲೇಟ್ ತಿನ್ನುವುದಕ್ಕೆ ಇಚ್ಚಿಸುತ್ತಾರಾದರೆ, ಅದು ಸಹಜವೇ ಹೊರತು, ಅವರಿಗೆ ಮೆಗ್ನೇಶಿಯಂ ಮತ್ತು ಬಿ' ಜೀವಸತ್ವದ ಕೊರತೆ ಇದೆ ಎಂದರ್ಥವಲ್ಲ. ಒಂದು ವೇಳೆ ಪ್ರಬುದ್ಧರಿಗೆ ಈ ಸಮಸ್ಯೆ ಕಾಡಿದರೆ, ಆಗ ಹೀಗೆ ಅರ್ಥ ಮಾಡಿಕೊಳ್ಳಬಹುದಾಗಿದೆ.
ಕೆಲವರು ಖಾದ್ಯದಲ್ಲಿ ಹೆಚ್ಚುವರಿ ಉಪ್ಪನ್ನು ಇಷ್ಟ ಪಡುತ್ತಾರೆ. ಮತ್ತೆ ಕೆಲವರು ಉಪ್ಪನ್ನು ನೇರವಾಗಿ ಬಾಯಿಗೆ ಇರಿಸಿಕೊಳ್ಳುತ್ತಾರೆ! ಇದು ಅತಿರೇಕದ ಬಯಕೆ ಅಲ್ಲದೆ ಮತ್ತೇನು? ಅಡ್ರಿನಲ್ ಗ್ರಂಥಿಯು ಹಾರ್ಮೋನುಗಳನ್ನು ಉತ್ಪಾದಿಸಲು ಸೋತಾಗ, ' ಅಡಿಸನ್ಸ್ ಏಲ್ಮೆಂಟ್' ಎನ್ನುವ ಸಮಸ್ಯೆ ತಲೆದೋರುವುದು. ಇಂಥವರಲ್ಲೂ ಉಪ್ಪಿನ ಬಯಕೆ ಮೂಡುವುದು. ಸಿಹಿ ತಿನ್ನುವ ಅದಮ್ಯ ಬಯಕೆ-ಕೊಂಚ ಮಿತವಾಗಿರಲಿ!
ಉಪ್ಪು ತಿಂದ ಮೇಲೆ ನೀರು ಕುಡಿಯಲೇ ಬೇಕಲ್ಲ? ಅದು ಸಹಜ. ಆದರೆ, ಪ್ರತಿ ಕೆಲವು ನಿಮಿಷಗಳಿಗೊಮ್ಮೆ ನೀರಡಿಕೆಯಾಗುವುದು ಮತ್ತು ಮೂತ್ರವಿಸರ್ಜನೆಗೆ ಪ್ರಚೋದನೆ ಉಂಟಾದರೆ, ಅದರ ಬಯಕೆ ಅತಿಯಾದರೆ, ಅದು ಯಾವುದರ ಸೂಚನೆ? ಆಟ, ಪಾಠ, ಓಡಾಟ, ನಡೆದಾಟ, ಬಿಸಿಲಿನ ಬೇಗೆ, ಮಾನಸಿಕ ಒತ್ತಡ, ಇಡ್ಲಿ-ದೋಸೆಯಂತಹ ತಿಂಡಿಯ ಅನಂತರ ಬಹಳ ನೀರಡಿಕೆ ಯಾಗುವುದು ಸಹಜವೆ.
ಆದರೆ ಪ್ರತಿ ಕೆಲವು ನಿಮಿಷಗಳಿಗೊಮ್ಮೆ ಬಾಯಿಯ ಪಸೆ ಒಣಗುತ್ತಿದ್ದರೆ, ಅದು ಮಧುಮೇಹದ ಸೂಚನೆಯಾಗಿರುವ ಸಾಧ್ಯತೆಯೂ ಇದೆ! ಇಂತಹವರ ರಕ್ತದಲ್ಲಿ ಸೇರುವ ಹೆಚ್ಚುವರಿ ಸಕ್ಕರೆ ಅಂಶವನ್ನು ನಿಗ್ರಹಿಸುವುದಕ್ಕಾಗಿ ಅವರ ಕಿಡ್ನಿ ಸತತ ಹೋರಾಡುತ್ತದೆ. ಅದು ಸೋತಾಗ, ಸಕ್ಕರೆ ಅಂಶ ಮೂತ್ರದ ಮೂಲಕ ಹೊರ ಹೋಗುತ್ತದೆ. ನೀರಡಿಕೆ ಉಂಟಾಗುತ್ತದೆ... ಆಹಾರದ ಬಯಕೆಯನ್ನು ಯೋಗದ ಮೂಲಕ ನಿಯಂತ್ರಿಸಿ
ಗರ್ಭಿಣಿ ಸ್ತ್ರೀಯರ ಆರೋಗ್ಯಕ್ಕೆ ಒಮೆಗಾ 3 ಮತ್ತು ಫ್ಯಾಟಿ ಆಸಿಡ್ನ ಅವಶ್ಯಕತೆ ಇರುತ್ತದೆ. ಆದ್ದರಿಂದಲೇ ಕರಿದ ತಿನಿಸುಗಳನ್ನು ಮಾಡಿ ಬಡಿಸುತ್ತಾರೆ. ಹಾಗೆಯೇ ಕರಿದ ತಿನಿಸಿನ ಬಯಕೆಯು, ಶರೀರದಲ್ಲಿ ಆಯಾ ಸತ್ವಾಂಶಗಳ ಕೊರತೆಯನ್ನು ಸೂಚಿಸುವ ರೀತಿಯೂ ಹೌದು. ಯಾವ ಬಯಕೆಯೂ ಅತಿಯಾಗಿರದೆ ನಿಗ್ರಹದ ಮುಷ್ಟಿಯೊಳಗಿದ್ದು, ಪೋಷಕಾಂಶಗಳನ್ನೊಳಗೊಂಡ ಸಮತೋಲಿತ ಆಹಾರ ಸೇವನೆಯು ಎಲ್ಲ ವಯೋಮಾನದವರಿಗೂ ಶ್ರೇಯಸ್ಕರ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications


