Latest Updates
-
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ನಿಮ್ಮ ಮಕ್ಕಳೊಂದಿಗೆ ಚಂದ್ರನ ರಹಸ್ಯಗಳನ್ನು ಅನ್ವೇಷಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಓಣಂ ಹಬ್ಬದ ಸಂಭ್ರಮ: ಮಳೆಯಲ್ಲೂ ಸ್ಟೈಲಿಶ್ ಆಗಿ ಕಾಣಲು ₹1,200 ರೊಳಗೆ ಬೆಸ್ಟ್ ಫ್ಯಾಷನ್ ಟಿಪ್ಸ್! -
ಮಳೆಗಾಲದಲ್ಲಿ ಹಿರಿಯರು ಜಾರಿ ಬೀಳುವ ಆತಂಕವೇ? ಸುರಕ್ಷಿತವಾಗಿರಲು ಈ 12 ನಿಮಿಷಗಳ ಚೇರ್-ಯೋಗ ಟ್ರೈ ಮಾಡಿ! -
ಹಿರಿಯರ ಆರೋಗ್ಯಕ್ಕೆ ದಿನಕ್ಕೆ 12 ನಿಮಿಷದ 'ಚೇರ್ ಯೋಗ': ಚೈತನ್ಯ ಮತ್ತು ಸಮತೋಲನಕ್ಕೆ ಇದುವೇ ಮಂತ್ರ! -
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್! -
ಸಸ್ಯಜನ್ಯ ಹಾಲು: ತೂಕ ಇಳಿಕೆ ಮತ್ತು ಮಧುಮೇಹ ನಿಯಂತ್ರಣಕ್ಕೆ ಇದುವೇ ಬೆಸ್ಟ್ ಪರ್ಯಾಯ! -
ಸಕ್ಕರೆ ಬೆಲೆ ಏರಿಕೆ ಬಿಸಿ: ಹಬ್ಬದ ಸಿಹಿ ಬಜೆಟ್ ಉಳಿಸಲು ಇಲ್ಲಿದೆ 300 ರೂಪಾಯಿಯ ಸ್ಮಾರ್ಟ್ ಟಿಪ್ಸ್ -
ವರಮಹಾಲಕ್ಷ್ಮೀ ವ್ರತದ ಶಾಸ್ತ್ರೋಕ್ತ ವಿಧಾನ ಮತ್ತು ಪೂಜಾ ನಿಯಮಗಳು -
ವರಮಹಾಲಕ್ಷ್ಮೀ ಹಬ್ಬದ ಸಂಭ್ರಮಕ್ಕೆ ಬೆಲೆ ಏರಿಕೆಯ ಬಿಸಿ: ಕೆ.ಆರ್. ಮಾರುಕಟ್ಟೆಯಲ್ಲಿ ಗಗನಕ್ಕೇರಿದ ಹೂವು-ಹಣ್ಣುಗಳ ದರ
ಹತ್ತೇ ಹತ್ತು ನಿಮಿಷದಲ್ಲಿ ಜ್ವರ, ಶೀತ, ಕೆಮ್ಮು-ಮಂಗಮಾಯ!
ಬರೀ ಹತ್ತೇ ನಿಮಿಷದಲ್ಲಿ ಜ್ವರ, ಶೀತ, ಕೆಮ್ಮಿನ ಸಮಸ್ಯೆಯನ್ನು ನಿಯಂತ್ರಿಸುವ ಸಿಂಪಲ್ ಮನೆಮದ್ದನ್ನು ನೀಡಿದ್ದೇವೆ, ನೀವೂ ಒಮ್ಮೆ ಪ್ರಯತ್ನಿಸಿ ನೋಡಿ....
ಚಳಿಗಾಲ ಬಂತೆಂದರೆ ಎಲ್ಲೆಡೆ ಫ್ಲೂ ಜ್ವರ, ಶೀತ, ಕೆಮ್ಮು ಆವರಿಸುತ್ತದೆ. ಇದನ್ನು ತಡೆಯಲು ಹಲವಾರು ಔಷಧಿ, ಮುನ್ನೆಚ್ಚರಿಕೆ, ದಪ್ಪನೆಯ ಉಣ್ಣೆಯ ಉಡುಪು ಮೊದಲಾದವುಗಳನ್ನೆಲ್ಲಾ ಅನುಸರಿಸಿದರೂ ಯಾವುದೋ ಮಾಯೆಯಲ್ಲಿ ಶೀತಕ್ಕ ಬಂದೇ ಬಿಡುತ್ತಾಳೆ.
ಇಂತಹ ಪರಿಸ್ಥಿತಿಯನ್ನು ಶೀಘ್ರವಾಗಿ ಕೊನೆಗಾಣಿಸಲು ನಮ್ಮ ಹಿರಿಯರು ಅನುಸರಿಸಿಕೊಂಡು ಬರುತ್ತಿದ್ದ ಮನೆಮದ್ದೊಂದಿದೆ. ಇದರ ಸಾಮರ್ಥ್ಯವೆಂದರೆ ಕೆಮ್ಮು ಶೀತವನ್ನು ಕೆಲವೇ ಕ್ಷಣಗಳಲ್ಲಿ ನಿವಾರಿಸುವುದು. ಅಲ್ಲದೇ ಈ ಪೇಯವನ್ನು ಕೆಲವೇ ನಿಮಿಷದಲ್ಲಿ ತಯಾರಿಸಲು ಸಾಧ್ಯವಾದುದರಿಂದ ಕೆಮ್ಮನ್ನು ಹೆಚ್ಚು ಬೆಳೆಯಲು ಬಿಡದೇ ತಕ್ಷಣವೇ ಶಮನಗೊಳಿಸಲು ಸಾಧ್ಯ.
ಇದಕ್ಕಾಗಿ ಮನೆಯಲ್ಲಿ ಸದಾ ಲಭ್ಯವಿರುವ ಸಾಮಾನ್ಯ ಪರಿಕರಳಾದ ಜೇನು, ಬೆಳ್ಳುಳ್ಳಿ, ಲಿಂಬೆ ಮತ್ತು ಸೇಬಿನ ಶಿರ್ಕಾ (Apple cider vinegar) ಮಾತ್ರ ಸಾಕು. ಇವುಗಳ ಸರಿಯಾದ ಪ್ರಮಾಣದ ಮಿಶ್ರಣ ಕೆಮ್ಮು ಶೀತಕ್ಕೆ ಸಮರ್ಥವಾದ ಮದ್ದು ಎಂದು ಈಗಾಗಲೇ ಸಾಬೀತಾಗಿದ್ದು ಹಲವಾರು ವರ್ಷಗಳಿಂದ ಇದನ್ನು ಬಳಸಲಾಗುತ್ತಾ ಬರಲಾಗಿದೆ. ಬನ್ನಿ, ಈ ಪೇಯವನ್ನು ಹೇಗೆ ಸಿದ್ಧ ಪಡಿಸುವುದು ಎಂಬುದನ್ನು ನೋಡೋಣ....

ಬೆಳ್ಳುಳ್ಳಿ
ಸುಮಾರು ಹತ್ತು ಎಸಳು ಬೆಳ್ಳುಳ್ಳಿಯನ್ನು ಸುಲಿದು ಜಜ್ಜಿ ನಯವಾಗಿಸಿ.

ಸೇಬಿನ ಶಿರ್ಕಾ
ಒಂದು ಚಿಕ್ಕ ಪಾತ್ರೆಯಲ್ಲಿ ಕಾಲು ಕಪ್ನಷ್ಟು ಸೇಬಿನ ಶಿರ್ಕಾ ಸೇರಿಸಿ.

ಲಿಂಬೆಹಣ್ಣಿನ ರಸ
ಒಂದು ದೊಡ್ಡ ಗಾತ್ರದ ಲಿಂಬೆಹಣ್ಣನ್ನು ಕತ್ತರಿಸಿ ರಸವನ್ನು ಹಿಂಡಿ ಒಂದು ಲೋಟದಲ್ಲಿ ಸಂಗ್ರಹಿಸಿ.

ಜೇನು
ಸುಮಾರು ಮುಕ್ಕಾಲು ಚಿಕ್ಕಚಮಚ ಜೇನನ್ನು ಇದಕ್ಕೆ ಬೆರೆಸಿ.

ಎರಡು ಕಪ್ ನೀರು
ಪಾತ್ರೆಯಲ್ಲಿ ಸುಮಾರು ಎರಡು ಕಪ್ ನೀರು ಸೇರಿಸಿ.

ಬೆಳ್ಳುಳ್ಳಿ
ಇದಕ್ಕೆ ಜಜ್ಜಿದ ಬೆಳ್ಳುಳ್ಳಿ ಸೇರಿಸಿ ಸುಮಾರು ಹತ್ತು ನಿಮಿಷಗಳವರೆಗೆ ಕುದಿಸಿ.

ಲಿಂಬೆರಸ ಸೇರಿಸಿ
ಬಳಿಕ ಈ ನೀರನ್ನು ಸೋಸಿ ಇದಕ್ಕೆ ಲಿಂಬೆರಸವನ್ನು ಸೇರಿಸಿ

ದಿನಕ್ಕೆ ಎರಡು ಬಾರಿ ಕುಡಿಯಿರಿ....
ಬಳಿಕ ಈ ನೀರನ್ನು ಸುಮಾರು ಉಗುರುಬೆಚ್ಚಗಾಗುವಷ್ಟು ತಣಿಸಿ ದಿನಕ್ಕೆ ಎರಡು ಬಾರಿ ಕುಡಿಯಿರಿ.

ದಿನಕ್ಕೆ ಎರಡು ಬಾರಿ ಕುಡಿಯಿರಿ....
ಈ ಪೇಯವನ್ನು ಕುಡಿದ ಕೆಲವೇ ಕ್ಷಣಗಳಲ್ಲಿ ಕೆಮ್ಮು ಶೀತ ಇಲ್ಲವಾಗುವುದನ್ನು ಕಾಣುತ್ತೀರಿ.



Click it and Unblock the Notifications