Just In
- 2 hrs ago ವೃಷಭ ರಾಶಿಗೆ ಗುರು ಸಂಚಾರ: 12ನೇ ಮನೆಯಲ್ಲಿ ಗುರು ಮಿಥುನ ರಾಶಿಯ ಮೇಲೆ ಬೀರುವ ಪ್ರಭಾವ ಹೇಗಿರಲಿದೆ?
- 2 hrs ago ಶಾಲೆಯನ್ನೇ ಬ್ಯೂಟಿ ಪಾರ್ಲರ್ ಮಾಡಿಕೊಂಡ ಪ್ರಿನ್ಸಿಪಾಲ್..! ಕೇಳಿದ ಶಿಕ್ಷಕಿ ಕೈ ಕಚ್ಚಿ ಹಲ್ಲೆ..!
- 15 hrs ago ವೃಷಭ ರಾಶಿಗೆ ಗುರು ಸಂಚಾರ: ಗುರು ನಿಮ್ಮ ಲಗ್ನ ಮನೆಯಲ್ಲಿ ಇರುವುದರಿಂದ ಇದರ ಪ್ರಭಾವ ಹೇಗಿರಲಿದೆ?
- 16 hrs ago ವೃಷಭ ರಾಶಿಗೆ ದೇವಗುರುವಿನ ಸಂಚಾರ: ಮೇಷ ರಾಶಿಗಳಿಗೆ ಇದರ ಪ್ರಭಾವ ಹೇಗಿರಲಿದೆ?
Don't Miss
- Movies 'ಅವತಾರ ಪುರುಷ 2'ದಿಂದ ನಿರ್ಮಾಪಕ ಜೇಬು ತುಂಬಿತೇ? ಪುಷ್ಕರ್ಗೆ ಹಕ್ಕುಗಳಿಂದ ಬಂದ ಹಣವೆಷ್ಟು?
- News Lok Sabha Election: ಗೂಗಲ್ನಲ್ಲೂ ಪ್ರಜಾಪ್ರಭುತ್ವದ ಹಬ್ಬದ ಸಂಭ್ರಮ
- Automobiles Google Maps: ಇವಿ ಮಾಲೀಕರೇ ಆತಂಕ ಬಿಡಿ... ಗೂಗಲ್ ಮ್ಯಾಪ್ಸ್ ಭರ್ಜರಿ ಅಪ್ಡೇಟ್!
- Finance ಇಳಿಕೆ ಕಂಡ ನೆಸ್ಲೆ ಇಂಡಿಯಾ ಷೇರು: ಸೆರೆಲಾಕ್ನಲ್ಲಿ ಸಕ್ಕರೆ ಬಗ್ಗೆ ಸಂಸ್ಥೆಯ ಸ್ಪಷ್ಟನೆ ಏನು?
- Technology ವಿವೋ V30e ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಬೆಲೆ, ಕ್ಯಾಮೆರಾ, ವಿನ್ಯಾಸ ವಿವರ ಇಲ್ಲಿದೆ..
- Sports IPL 2024: ಪಂಜಾಬ್ ಕಿಂಗ್ಸ್ ವಿರುದ್ಧ ಗೆದ್ದರೂ ಹಾರ್ದಿಕ್ ಪಾಂಡ್ಯಗೆ ಭಾರೀ ಮೊತ್ತದ ದಂಡ!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಹತ್ತೇ ಹತ್ತು ನಿಮಿಷದಲ್ಲಿ ಜ್ವರ, ಶೀತ, ಕೆಮ್ಮು-ಮಂಗಮಾಯ!
ಬರೀ ಹತ್ತೇ ನಿಮಿಷದಲ್ಲಿ ಜ್ವರ, ಶೀತ, ಕೆಮ್ಮಿನ ಸಮಸ್ಯೆಯನ್ನು ನಿಯಂತ್ರಿಸುವ ಸಿಂಪಲ್ ಮನೆಮದ್ದನ್ನು ನೀಡಿದ್ದೇವೆ, ನೀವೂ ಒಮ್ಮೆ ಪ್ರಯತ್ನಿಸಿ ನೋಡಿ....
ಚಳಿಗಾಲ ಬಂತೆಂದರೆ ಎಲ್ಲೆಡೆ ಫ್ಲೂ ಜ್ವರ, ಶೀತ, ಕೆಮ್ಮು ಆವರಿಸುತ್ತದೆ. ಇದನ್ನು ತಡೆಯಲು ಹಲವಾರು ಔಷಧಿ, ಮುನ್ನೆಚ್ಚರಿಕೆ, ದಪ್ಪನೆಯ ಉಣ್ಣೆಯ ಉಡುಪು ಮೊದಲಾದವುಗಳನ್ನೆಲ್ಲಾ ಅನುಸರಿಸಿದರೂ ಯಾವುದೋ ಮಾಯೆಯಲ್ಲಿ ಶೀತಕ್ಕ ಬಂದೇ ಬಿಡುತ್ತಾಳೆ.
ಇಂತಹ ಪರಿಸ್ಥಿತಿಯನ್ನು ಶೀಘ್ರವಾಗಿ ಕೊನೆಗಾಣಿಸಲು ನಮ್ಮ ಹಿರಿಯರು ಅನುಸರಿಸಿಕೊಂಡು ಬರುತ್ತಿದ್ದ ಮನೆಮದ್ದೊಂದಿದೆ. ಇದರ ಸಾಮರ್ಥ್ಯವೆಂದರೆ ಕೆಮ್ಮು ಶೀತವನ್ನು ಕೆಲವೇ ಕ್ಷಣಗಳಲ್ಲಿ ನಿವಾರಿಸುವುದು. ಅಲ್ಲದೇ ಈ ಪೇಯವನ್ನು ಕೆಲವೇ ನಿಮಿಷದಲ್ಲಿ ತಯಾರಿಸಲು ಸಾಧ್ಯವಾದುದರಿಂದ ಕೆಮ್ಮನ್ನು ಹೆಚ್ಚು ಬೆಳೆಯಲು ಬಿಡದೇ ತಕ್ಷಣವೇ ಶಮನಗೊಳಿಸಲು ಸಾಧ್ಯ.
ಇದಕ್ಕಾಗಿ ಮನೆಯಲ್ಲಿ ಸದಾ ಲಭ್ಯವಿರುವ ಸಾಮಾನ್ಯ ಪರಿಕರಳಾದ ಜೇನು, ಬೆಳ್ಳುಳ್ಳಿ, ಲಿಂಬೆ ಮತ್ತು ಸೇಬಿನ ಶಿರ್ಕಾ (Apple cider vinegar) ಮಾತ್ರ ಸಾಕು. ಇವುಗಳ ಸರಿಯಾದ ಪ್ರಮಾಣದ ಮಿಶ್ರಣ ಕೆಮ್ಮು ಶೀತಕ್ಕೆ ಸಮರ್ಥವಾದ ಮದ್ದು ಎಂದು ಈಗಾಗಲೇ ಸಾಬೀತಾಗಿದ್ದು ಹಲವಾರು ವರ್ಷಗಳಿಂದ ಇದನ್ನು ಬಳಸಲಾಗುತ್ತಾ ಬರಲಾಗಿದೆ. ಬನ್ನಿ, ಈ ಪೇಯವನ್ನು ಹೇಗೆ ಸಿದ್ಧ ಪಡಿಸುವುದು ಎಂಬುದನ್ನು ನೋಡೋಣ....
ಬೆಳ್ಳುಳ್ಳಿ
ಸುಮಾರು ಹತ್ತು ಎಸಳು ಬೆಳ್ಳುಳ್ಳಿಯನ್ನು ಸುಲಿದು ಜಜ್ಜಿ ನಯವಾಗಿಸಿ.
ಸೇಬಿನ ಶಿರ್ಕಾ
ಒಂದು ಚಿಕ್ಕ ಪಾತ್ರೆಯಲ್ಲಿ ಕಾಲು ಕಪ್ನಷ್ಟು ಸೇಬಿನ ಶಿರ್ಕಾ ಸೇರಿಸಿ.
ಲಿಂಬೆಹಣ್ಣಿನ ರಸ
ಒಂದು ದೊಡ್ಡ ಗಾತ್ರದ ಲಿಂಬೆಹಣ್ಣನ್ನು ಕತ್ತರಿಸಿ ರಸವನ್ನು ಹಿಂಡಿ ಒಂದು ಲೋಟದಲ್ಲಿ ಸಂಗ್ರಹಿಸಿ.
ಜೇನು
ಸುಮಾರು ಮುಕ್ಕಾಲು ಚಿಕ್ಕಚಮಚ ಜೇನನ್ನು ಇದಕ್ಕೆ ಬೆರೆಸಿ.
ಎರಡು ಕಪ್ ನೀರು
ಪಾತ್ರೆಯಲ್ಲಿ ಸುಮಾರು ಎರಡು ಕಪ್ ನೀರು ಸೇರಿಸಿ.
ಬೆಳ್ಳುಳ್ಳಿ
ಇದಕ್ಕೆ ಜಜ್ಜಿದ ಬೆಳ್ಳುಳ್ಳಿ ಸೇರಿಸಿ ಸುಮಾರು ಹತ್ತು ನಿಮಿಷಗಳವರೆಗೆ ಕುದಿಸಿ.
ಲಿಂಬೆರಸ ಸೇರಿಸಿ
ಬಳಿಕ ಈ ನೀರನ್ನು ಸೋಸಿ ಇದಕ್ಕೆ ಲಿಂಬೆರಸವನ್ನು ಸೇರಿಸಿ
ದಿನಕ್ಕೆ ಎರಡು ಬಾರಿ ಕುಡಿಯಿರಿ....
ಬಳಿಕ ಈ ನೀರನ್ನು ಸುಮಾರು ಉಗುರುಬೆಚ್ಚಗಾಗುವಷ್ಟು ತಣಿಸಿ ದಿನಕ್ಕೆ ಎರಡು ಬಾರಿ ಕುಡಿಯಿರಿ.
ದಿನಕ್ಕೆ ಎರಡು ಬಾರಿ ಕುಡಿಯಿರಿ....
ಈ ಪೇಯವನ್ನು ಕುಡಿದ ಕೆಲವೇ ಕ್ಷಣಗಳಲ್ಲಿ ಕೆಮ್ಮು ಶೀತ ಇಲ್ಲವಾಗುವುದನ್ನು ಕಾಣುತ್ತೀರಿ.