Just In
- 1 hr ago ಗುರು ಸಂಚಾರ 2024: ಕನ್ಯಾ ರಾಶಿಯಲ್ಲಿ 12 ತಿಂಗಳು ಗುರುವಿನ ಪ್ರಭಾವ ಹೇಗಿರಲಿದೆ?
- 10 hrs ago ವಾರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಈ 7 ದಿನಗಳು ನಿಮಗೆ ಹೇಗಿರಲಿದೆ?
- 10 hrs ago ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- 11 hrs ago ಪರಿಸರ ದಿನ: ಇಂದು ನೀವು ಹೀಗೆ ಮಾಡಿದರೆ ಮುಂದಿನ ಪೀಳಿಗೆಗೆ ನೀಡುವ ದೊಡ್ಡ ಆಸ್ತಿ
Don't Miss
- News ನೇಹಾ ಹಿರೇಮಠ್ ಹತ್ಯೆ ಪ್ರಕರಣ; ನಟ ಧ್ರುವ ಸರ್ಜಾ ಏನಂದ್ರು?
- Sports RCB: 'ಗೋ ಗ್ರೀನ್' ಭಾಗವಾಗಿ 3 ಕೆರೆಗಳ ಅಭಿವೃದ್ಧಿಪಡಿಸಿದ ಆರ್ಸಿಬಿ
- Finance ನಾಳೆ ಬೆಂಗಳೂರಿನಲ್ಲಿ ಚಿಕನ್, ಮಟನ್ ಮಾರಾಟಕ್ಕೆ ನಿಷೇಧ
- Movies Amruthadhaare ; ಪಾರ್ಥ ಮತ್ತು ಅಪೇಕ್ಷಾ ಪ್ರೀತಿ, ಕೆಂಡಾಮಂಡಲಗೊಂಡ ಶಕುಂತಲಾ..!
- Technology ಆನ್ಲೈನ್ ಶಾಪಿಂಗ್ ಮಾಡಲು ಇಲ್ಲಿವೇ ನೋಡಿ ಬೆಸ್ಟ್ ವೆಬ್ಸೈಟ್ಗಳು!
- Automobiles Hyundai: ಹಳೆಯ ಹ್ಯುಂಡೈ ಕ್ರೆಟಾವನ್ನು ಮರೆತುಬಿಡಿ... ಹೊಸ ಕ್ರೆಟಾ ಈಗ ಮತ್ತಷ್ಟು ಪ್ರೀಮಿಯಂ SUV
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ರಂಜಾನ್ ಮಾಸದಲ್ಲಿ ತಂಪುಣಿಸುವ ಕಾಮಕಸ್ತೂರಿ ಬೀಜ
ಪವಿತ್ರ ರಂಜಾನ್ ಮಾಸ ಈಗಾಗಲೇ ಆರಂಭವಾಗಿದ್ದು ಮುಸ್ಲಿಂ ಸಮುದಾಯದವರು ಈ ತಿಂಗಳು ಪೂರ್ತಿ ಉಪವಾಸವಿದ್ದು ನಿರ್ದಿಷ್ಟ ಸಮಯದಲ್ಲಿ ಆಹಾರವನ್ನು ಸೇವಿಸುತ್ತಾ ದೇವರನ್ನು ನೆನೆಯುತ್ತಾರೆ. ಪ್ರಾತಃ ಕಾಲದಲ್ಲಿ ಆಹಾರವನ್ನು ಸೇವಿಸಿದ ಮೇಲೆ ನಂತರ ಜಲಪಾನವನ್ನು ಸೇವಿಸುವುದು ಸಂಜೆಯ ಮಸೀದಿ ಪ್ರಾರ್ಥನೆಯ ಬಳಿಕವೇ. ಈ ರೀತಿ ಉಪವಾಸ ಮಾಡುವಾಗ ದೇಹದಲ್ಲಿ ನಿರ್ಜಲೀಕರಣದ ಸಮಸ್ಯೆಯುಂಟಾಗುವುದು ಸಹಜವಾಗಿದೆ. ಅದಕ್ಕಾಗಿ ಸೂಕ್ತ ರೀತಿಯ ಆಹಾರ ಕ್ರಮಗಳನ್ನು ಅಳವಡಿಸಿಕೊಳ್ಳಬೇಕಾಗುತ್ತದೆ. ರಂಜಾನ್ ಪಥ್ಯ- ಕಷ್ಟವಾದರೂ, ಇಷ್ಟಪಟ್ಟು ಅನುಸರಿಸಿ
ಆಹಾರ ಸೇವನೆಯಲ್ಲಿ ಮತ್ತು ಜೀವನ ಕ್ರಮದಲ್ಲಿ ಉಂಟಾಗುವ ಬದಲಾವಣೆ ಅಶಕ್ತರ ಮೇಲೆ ತೀವ್ರ ಪರಿಣಾಮವನ್ನು ಬೀರುತ್ತದೆ. ಅಂತೆಯೇ ಅವರ ದೈನಂದಿನ ಚಟುವಟಿಕೆಗಳ ಮೇಲೂ ಇದು ಕೆಟ್ಟ ಪರಿಣಾಮವನ್ನು ಬೀರಿ ನಿಸ್ತೇಜಗೊಳಿಸಬಹುದು. ಈ ನಿಶ್ಯಕ್ತಿಯನ್ನು ಪರಿಹರಿಸುವುದಕ್ಕಾಗಿಯೇ ಪ್ರಕೃತಿಯ ವರದಾನವೊಂದಿದ್ದು ಇದು ಚೈತನ್ಯಶೀಲರನ್ನಾಗಿಸಲು ಉಪಕಾರಿಯಾಗಿದೆ.
ತುಳಸಿ ಬೀಜಗಳಂತೆ ಕಾಣುವ ಕಾಮ ಕಸ್ತೂರಿಗೆ 'ಸಬ್ಜಾ' ಅಥವಾ 'ತುಕ್ಮಾರಿಯಾ ಸೀಡ್ಸ್' ಎಂಬ ಹೆಸರೂ ಇದೆ. ಈ ಬೀಜ ಬಣ್ಣದಲ್ಲಿ ಕಪ್ಪಾಗಿರುತ್ತದೆ ಇದನ್ನು ಸಿಹಿ ತುಳಸಿ ಸಸಿಗಳಿಂದ ಸಂಗ್ರಹಿಸಲಾಗುತ್ತದೆ. ಬೀಜಗಳನ್ನು ನೀರಿನಲ್ಲಿ ನೆನೆಸಿ ನಂತರ ತೆಗೆದುಕೊಳ್ಳಲಾಗುತ್ತದೆ ಕೆಲವೊಂದು ಸಂದರ್ಭಗಳಲ್ಲಿ ಹಾಲಿನೊಂದಿಗೂ ಇದನ್ನು ಸೇವಿಸಬಹುದು.
ಅಷ್ಟೇ ಅಲ್ಲದೆ ಸಲಾಡ್, ಮೊಸರು ಮತ್ತು ಸೂಪ್ ಜೊತೆಗೂ ಇದನ್ನು ಸೇವಿಸಬಹುದು. ಬನ್ನಿ ಇಂದಿನ ನಮ್ಮ ಲೇಖನದಲ್ಲಿ ಕಾಮಕಸ್ತೂರಿ ಬೀಜಗಳ ಇನ್ನಷ್ಟು ಮಹತ್ತರ ಕೊಡುಗೆಗಳನ್ನು ನಾವು ತಿಳಿಸಲಿದ್ದು, ಮುಂದೆ ಓದಿ.....
ದೇಹದ
ರೋಗನಿರೋಧಕ
ಶಕ್ತಿ
ಹೆಚ್ಚಳ
ಫ್ಲೇವನಾಯ್ಡ್ಸ್
ಅಂಶವನ್ನು
ಇದು
ಒಳಗೊಂಡಿದ್ದು
ದೇಹದ
ರೋಗನಿರೋಧಕ
ಶಕ್ತಿಯನ್ನು
ಹೆಚ್ಚಿಸುತ್ತದೆ.
ಈ
ಸಮಯದಲ್ಲಿ,
ಆಹಾರ
ತೆಗೆದುಕೊಳ್ಳುವ
ಪ್ರಮಾಣ
ಕಡಿಮೆಯಾಗಿರುವುದರಿಂದ
ದುರ್ಬಲ
ಸ್ಥಿತಿ
ಇರುತ್ತದೆ.
ಈ
ಬೀಜಗಳನ್ನು
ನೀರಿನೊಂದಿಗೆ
ಮಿಶ್ರ
ಮಾಡಿಕೊಳ್ಳಬಹುದು;
ಇದು
ಜೆಲ್
ರೂಪದಲ್ಲಿ
ಪರಿವರ್ತನೆಗೊಳ್ಳುತ್ತದೆ.
ಹಣ್ಣುಗಳು
ಮತ್ತು
ಜ್ಯೂಸ್
ರೂಪದಲ್ಲಿ
ಇದನ್ನು
ಸೇವಿಸಬಹುದಾಗಿದೆ.
ರಂಜಾನ್
ಮಾಸದಲ್ಲಿ
ಖರ್ಜೂರಕ್ಕೆ
ಏಕೆ
ಅಷ್ಟೊಂದು
ಮಹತ್ವ?
ಆಸಿಡಿಟಿ
ಮತ್ತು
ಮಲಬದ್ಧತೆ
ನಿವಾರಣೆ
ರಂಜಾನ್
ಸಮಯದಲ್ಲಿ,
ಉಪವಾಸ
ಇರುವವರಲ್ಲಿ
ಆಸಿಡಿಟಿ
ಮತ್ತು
ಮಲಬದ್ಧತೆ
ಹೆಚ್ಚು
ಸಾಮಾನ್ಯವಾಗಿರುತ್ತದೆ.
ಕಾಮಕಸ್ತೂರಿ
ಬೀಜಗಳು
ಹೊಟ್ಟೆಗೆ
ತಂಪನ್ನು
ನೀಡುತ್ತದೆ.
ಒಂದು
ಚಮಚದಷ್ಟು
ಬೀಜಗಳನ್ನು
ಹಾಲಿನಲ್ಲಿ
ಬೆರೆಸಿಕೊಂಡು
ಸೇವಿಸಬೇಕಾಗುತ್ತದೆ.
ಇದು
ಆಸಿಡಿಟಿಯಿಂದ
ನಿಮಗೆ
ನಿರಾಳತೆಯನ್ನು
ನೀಡುತ್ತದೆ.
ಆಹಾರ
ಕ್ರಮದಲ್ಲಿ
ಮತ್ತು
ಸೇವನೆ
ಸಮಯದಲ್ಲಿ
ಉಂಟಾಗುವ
ಬದಲಾವಣೆಯಿಂದ
ಮಲಬದ್ಧತೆ
ಸಮಸ್ಯೆ
ತಲೆದೋರುತ್ತದೆ.
ಇದಕ್ಕೂ
ಒಂದು
ಕಪ್
ಹಾಲಿನೊಂದಿಗೆ
ಬೀಜಗಳನ್ನು
ಸೇರಿಸಿ
ಸೇವಿಸುವುದರಿಂದ
ಸಮಸ್ಯೆಯನ್ನು
ನಿವಾರಿಸಿಕೊಳ್ಳಬಹುದಾಗಿದೆ.
ದೇಹಕ್ಕೆ
ತಂಪಿನ
ಅನುಭವವನ್ನು
ನೀಡಿ
ಹೈಡ್ರೇಟ್
ಮಾಡುತ್ತದೆ
ತುಳಸಿ
ಬೀಜಗಳು
ಹೆಚ್ಚು
ತಂಪಿನ
ಗುಣಗಳನ್ನು
ಒಳಗೊಂಡಿದೆ.
ಇದು
ದೇಹದ
ಉಷ್ಣತೆಯನ್ನು
ಹೀರಿ
ದೇಹಕ್ಕೆ
ತ್ವರಿತ
ತಂಪನ್ನು
ನೀಡುತ್ತದೆ.
ಜ್ಯೂಸ್
ಮತ್ತು
ಇತರ
ಹಣ್ಣುಗಳೊಂದಿಗೆ
ಇದನ್ನು
ಸೇವನೆ
ಮಾಡಬಹುದಾಗಿದೆ.
ದ್ರವರೂಪದಲ್ಲಿ
ಇದನ್ನು
ಸೇವನೆ
ಮಾಡಬಹುದಾಗಿದೆ.
ಇದಕ್ಕಾಗಿ
ನೀರಿನಲ್ಲಿ
ಸ್ವಲ್ಪ
ಕಾಲ
ಇದನ್ನು
ನೀವು
ನೆನೆಸಿಡಬೇಕಾಗುತ್ತದೆ.
ಇದು
ಜೆಲ್ಲಿ
ರೂಪದಲ್ಲಿ
ಬಂದಾಗ,
ಈ
ಮಿಶ್ರಣವನ್ನು
ಸೇವಿಸಿ.
ಇದು
ದೇಹಕ್ಕೆ
ಅತ್ಯುತ್ತಮ
ತಂಪಿನ
ಅನುಭವವನ್ನು
ನೀಡಿ
ನಿಮ್ಮನ್ನು
ದೀರ್ಘಸಮಯದವರೆಗೆ
ಹೈಡ್ರೇಟ್
ಆಗಿ
ಇರಿಸುತ್ತದೆ.
ಹಸಿವು
ನಿಗ್ರಹ
ಕಾಮಕಸ್ತೂರಿ
ಬೀಜಗಳನ್ನು
ನೆನೆಸಿ
ಮತ್ತು
ಉಪವಾಸವನ್ನು
ಮುಗಿಸುವ
ಸಮಯದಲ್ಲಿ
ಸೇವಿಸಿ
ತದನಂತರ
ಊಟಕ್ಕೂ
ಮುನ್ನ
15-20
ನಿಮಿಷಗಳ
ವಿರಾಮವನ್ನು
ನೀಡಿ.
ಇದರಿಂದ
ಹೆಚ್ಚು
ತಿನ್ನುವುದನ್ನು
ನಿಯಂತ್ರಿಸಿ
ಹೊಟ್ಟೆ
ಭರ್ತಿಯಾದ
ಅನುಭವವನ್ನು
ನಿಮ್ಮಲ್ಲಿ
ಮೂಡಿಸುತ್ತದೆ.
ಈ
ಬೀಜವನ್ನು
ಮೊಸರು,
ಹಣ್ಣುಗಳು
ಅಥವಾ
ಜ್ಯೂಸ್ನೊಂದಿಗೆ
ಸೇರಿಸಿಕೊಂಡು
ಸೇವಿಸಬಹುದಾಗಿದೆ.
ನಿಮ್ಮ
ಹಸಿವನ್ನು
ನಿಗ್ರಹಿಸಿಕೊಳ್ಳಲು
ಜೆಲ್ಲಿ
ರೂಪದ
ಬೀಜಗಳ
ಮಿಶ್ರಣವನ್ನು
ಸೇವಿಸಬಹುದು
ಇದು
ಅತಿಯಾಗಿ
ತಿನ್ನುವುದನ್ನು
ನಿಯಂತ್ರಿಸುತ್ತದೆ.
ರಂಜಾನ್
ಉಪವಾಸಕ್ಕಾಗಿ
ತಂಪುಣಿಸುವ
ಬಾದಾಮಿ
ಹಾಲು