Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಊಹೆಗೂ ನಿಲುಕದ ಬಾಳೆ ಹೂವಿನ ಆರೋಗ್ಯಕರ ಗುಣಗಳು
ಬಾಳೆಹಣ್ಣು ಯಾರಿಗೆ ಇಷ್ಟವಿಲ್ಲ? ಸರ್ವಕಾಲಕ್ಕೂ, ಅಗ್ಗವಾಗಿ ಎಲ್ಲೆಡೆ ದೊರೆಯುವ ಹಣ್ಣು ಎಂದರೆ ಇದು. ಹಣ್ಣಿನಂತೆಯೇ ಇದರ ಹೂವು ದಿಂಡುಗಳೂ ಆರೋಗ್ಯಕ್ಕೆ ಉತ್ತಮವಾಗಿವೆ. ಬಾಳೆ ಎಲೆಯಲ್ಲಿ ಊಟ ಮಾಡುವುದು ದಕ್ಷಿಣ ಭಾರತದ ಒಂದು ಸಂಪ್ರದಾಯವೇ ಆಗಿದೆ. ಬಾಳೆದಿಂಡಿನ ಸೇವನೆ ತೂಕ ಶೀಘ್ರವಾಗಿ ಇಳಿಸಲು ನೆರವಾಗುತ್ತದೆ. ಬಾಳೆಹೂವನ್ನು ಹೆಚ್ಚಾಗಿ ಬೆಳೆಗಾರರು ಗೊಂಚಲಿನಿಂದ ಕತ್ತರಿಸಿ ಎಸೆದುಬಿಡುತ್ತಾರೆ. ವಾಸ್ತವವಾಗಿ ಬಾಳೆಹೂವಿನಲ್ಲಿಯೂ ಉತ್ತಮ ಪೋಷಕಾಂಶಗಳಿವೆ. ಒಂದರ್ಥದಲ್ಲಿ ಹಣ್ಣು, ಎಲೆ ಮತ್ತು ದಿಂಡುಗಳಲ್ಲಿರುವ ಎಲ್ಲಾ ಪೋಷಕಾಂಶಗಳು ಈ ಹೂವಿನಲ್ಲಿವೆ. ಪುಷ್ಪಿತಾ-ಬಾಳೆ ಹೂವಿನ ಖಾದ್ಯ
ಸಾಮಾನ್ಯವಾಗಿ ಮಹಾರಾಷ್ಟ ರಾಜ್ಯದಲ್ಲಿ ಈ ಹೂವನ್ನು ಎಸೆಯದೇ ವಿವಿಧ ಖಾದ್ಯಗಳನ್ನು ತಯಾರಿಸಲು ಬಳಸಲಾಗುತ್ತದೆ. ಇದನ್ನು ಆಲು ಮತ್ತಿತರ ತರಕಾರಿಗಳೊಂದಿಗೆ ಪಲ್ಯ ಅಥವಾ ಸಬ್ಜಿಯ ರೂಪದಲ್ಲಿ ಹೆಚ್ಚಾಗಿ ಬಳಕೆಯಾಗುತ್ತದೆ. ಕೆಲವರು ಈ ಹೂವುಗಳನ್ನು ಕೊಂಚ ಕಡ್ಲೆಹಿಟ್ಟು ಕಾರಪುಡಿ ಹಾಕಿ ಹುರಿದು ಒಣಮೀನಿನ ಬದಲಿಗೆ ನೆಂಜಿಕೊಳ್ಳಲು ಬಳಸುವುದೂ ಇದೆ. ಇದರ ರುಚಿ ಹಪ್ಪಳ, ಒಣಮೀನಿಗಿಂತಲೂ ರುಚಿಯಾಗಿದೆ. ಮೆಂತೆ ಸೊಪ್ಪು ಹಾಗೂ ಬಾಳೆ ದಿಂಡಿನ ರುಚಿಕರ ಪಲ್ಯ
ಇದರ ಏಕಮಾತ್ರ ತೊಂದರೆ ಎಂದರೆ ಇದನ್ನು ಬಿಡಿಸಲು ಕೊಂಚ ಹೆಚ್ಚು ಹೊತ್ತೆ ತೆಗೆದುಕೊಳ್ಳುವುದು. ಸಿಪ್ಪೆ ಸುಲಿಯಲು ಕೊಂಚ ಕೌಶಲವೂ ಅಗತ್ಯ. ಇದು ಬಿಟ್ಟರೆ ಬೇರೆಲ್ಲಾ ರೀತಿಯಲ್ಲಿ ಬಾಳೆಹೂವು ಒಂದು ಅತ್ಯುತ್ತಮವಾದ ಆರೋಗ್ಯಕರ ಆಹಾರವಾಗಿದೆ. ಬನ್ನಿ, ಇದರ ಆರೋಗ್ಯಕರ ಗುಣಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಕೆಳಗಿನ ಸ್ಲೈಡ್ ಶೋ ಮೂಲಕ ನೋಡೋಣ...

ಕರಗದ ನಾರು ಹೆಚ್ಚಿನ ಪ್ರಮಾಣದಲ್ಲಿದೆ
ನಮ್ಮ ಆಹಾರದಲ್ಲಿ ಕರಗುವ ಮತ್ತು ಕರಗದ ನಾರು ಎರಡೂ ಇರುವಂತಿರಬೇಕು. ಅಕ್ಕಿ, ಹಣ್ಣುಗಳಲ್ಲಿ ಕರಗುವ ನಾರು ಹೆಚ್ಚಿದ್ದರೆ ಗೋಧಿ, ಹಸಿತರಕಾರಿಗಳಲ್ಲಿ ಕಗರದ ನಾರು ಹೆಚ್ಚಿರುತ್ತದೆ. ಆದರೆ ನಾವು ಗೋಧಿಯ ನಾರನ್ನು ನಿವಾರಿಸಿ ಮೈದಾ ರೂಪದಲ್ಲಿ ಬಳಸುವ ಮೂಲಕ ಅಗತ್ಯವಿರುವ ನಾರನ್ನು ಪಡೆಯದೇ ಹೋಗುತ್ತೇವೆ. ಇದರಿಂದ ಮಲಬದ್ಧತೆ ಪ್ರಾರಂಭವಾಗುತ್ತದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಕರಗದ ನಾರು ಹೆಚ್ಚಿನ ಪ್ರಮಾಣದಲ್ಲಿದೆ
ಮಾರುಕಟ್ಟೆಯಲ್ಲಿ ಲಭ್ಯವಿರುವ ನೋಡಲು ಸುಂದರವಾಗಿರುವ ಆಹಾರಗಳೆಲ್ಲವೂ ಈ ನಾರಿನಿಂದ ವಂಚಿತವಾಗಿರುವ ಕಾರಣ ಮಲಬದ್ದತೆ ಹೆಚ್ಚುತ್ತದೆ. ಬಾಳೆಹೂವಿನಲ್ಲಿ ಕರಗದ ನಾರು ಅತಿ ಹೆಚ್ಚಿನ ಪ್ರಮಾಣದಲ್ಲಿದ್ದು ಸುಲಭ ಜೀರ್ಣಕ್ರಿಯೆ ಮತ್ತು ವಿಸರ್ಜನೆಯಲ್ಲಿ ನೆರವಾಗುತ್ತದೆ.

ಆಂಟಿ ಆಕ್ಸಿಡೆಂಟುಗಳು ಹೇರಳವಾಗಿವೆ
ಬಾಳೆಹೂವಿನಲ್ಲಿ ಪಾಲಿಫೆನಾಲ್ ಎಂಬ ಕಣಗಳಿದ್ದು ಇವುಗಳು ಉತ್ತಮ ಆಂಟಿ ಆಕ್ಸಿಡೆಂಟುಗಳಂತೆ ಕಾರ್ಯನಿರ್ವಹಿಸುತ್ತವೆ. ವಿಶೇಷವಾಗಿ ದೇಹದಲ್ಲಿ ಕ್ಯಾನ್ಸರ್ ಉಂಟುಮಾಡಬಹುದಾದ ಫ್ರೀ ರ್ಯಾಡಿಕಲ್ ಎಂಬ ಕಣಗಳ ವಿರುದ್ದ ಹೋರಾಡಿ ವಿವಿಧ ಕ್ಯಾನ್ಸರ್ಗಳಿಂದ ರಕ್ಷಿಸುತ್ತದೆ ಹಾಗೂ ಒತ್ತಡದ ಮೂಲಕ ಎದುರಾಗಬಹುದಾದ ತೊಂದರೆಗಳಿಂದಲೂ ರಕ್ಷಿಸುತ್ತದೆ.

ಮಧುಮೇಹದ ಹತೋಟಿಗೆ ನೆರವಾಗುತ್ತದೆ
ಬಾಳೆಹೂವಿನಲ್ಲಿರುವ ಪೋಷಕಾಂಶಗಳು ಕಡಿಮೆ ಗ್ಲೈಸೆಮಿಕ್ ಸೂಚಿಯನ್ನು(glycemic index) ಹೊಂದಿದೆ. ಅಂದರೆ ಇದು ಹೊಟ್ಟೆಯಲ್ಲಿ ಜೀರ್ಣವಾಗಿ ಸಕ್ಕರೆ ಮತ್ತು ಇತರ ಪೋಷಕಾಂಶಗಳನ್ನು ರಕ್ತದಲ್ಲಿ ಸೇರಿಸಲು ಬಹಳ ಹೆಚ್ಚಿನ ಹೊತ್ತು ತೆಗೆದುಕೊಳ್ಳುತ್ತದೆ. ಈ ಗುಣ ಮಧುಮೇಹಿಗಳಿಗೆ ಹೇಳಿ ಮಾಡಿಸಿದಂತಿದೆ. ಇದಕ್ಕೆ ಬಾಳೆಹೂವಿನಲ್ಲಿರುವ ಹೆಚ್ಚಿನ ಪ್ರಮಾಣದ ನಾರು ಮತ್ತು ಆಂಟಿಆಕ್ಸಿಡೆಂಟುಗಳೇ ಕಾರಣ. ಮಧುಮೇಹಿಗಳ ರಕ್ತದಲ್ಲಿ ಅತಿ ಸಾವಕಾಶವಾಗಿ ಸಕ್ಕರೆ ರಕ್ತಕ್ಕೆ ಬರುವ ಕಾರಣ ಇದನ್ನು ನಿಭಾಯಿಸಲು ದೇಹಕ್ಕೆ ಹೆಚ್ಚಿನ ಸಮಯಾವಕಾಶ ದೊರಕುತ್ತದೆ. ಇದರಿಂದ ಮಧುಮೇಹದ ಮೇಲೆ ಹತೋಟಿ ಸಾಧಿಸಲು ಸುಲಭವಾಗುತ್ತದೆ.

ಅತಿಸಾರ ಮತ್ತು ಆಮಶಂಕೆಯನ್ನು ನಿಲ್ಲಿಸುತ್ತದೆ
Asian Journal of Pharmaceutical and Clinical Research ಎಂಬ ವೈದ್ಯಕೀಯ ನಿಯತಕಾಲಿಕೆಯಲ್ಲಿ ಪ್ರಕಟವಾದ ವರದಿಯ ಪ್ರಕಾರ ವಿವಿಧ ಕಾರಣಗಳಿಂದ, ವಿಶೇಷವಾಗಿ ಜಂತುಗಳಿಂದ ಉಂಟಾದ ಆಮಶಂಕೆ, ಅತಿಸಾರದ ತೊಂದರೆಗಳು ಬಾಳೆಹೂವಿನ ಸೇವನೆಯಿಂದ ಶೀಘ್ರವಾಗಿ ಕಡಿಮೆಯಾಗುತ್ತದೆ.

ತಿಂಗಳ ಸಮಯದ ಅತಿಸ್ರಾವದಿಂದ ರಕ್ಷಿಸುತ್ತದೆ
ಮಹಿಳೆಯರ ಮಾಸಿಕ ದಿನಗಳ ಸ್ರಾವದ ಪ್ರಮಾಣ ಒಂದು ವೇಳೆ ಸಾಮಾನ್ಯಕ್ಕಿಂತಲೂ ಅತಿ ಹೆಚ್ಚಾಗಿದ್ದರೆ (menorrhagia) ಬಾಳೆಹೂವಿನ ಸೇವನೆ ಇದನ್ನು ಕಡಿಮೆಗೊಳಿಸಿ ಸಾಮಾನ್ಯ ಪ್ರಮಾಣಕ್ಕೆ ಇಳಿಸಲು ಸಮರ್ಥವಾಗಿವೆ.



Click it and Unblock the Notifications









