Just In
- 27 min ago ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- 1 hr ago ಪರಿಸರ ದಿನ: ಇಂದು ನೀವು ಹೀಗೆ ಮಾಡಿದರೆ ಮುಂದಿನ ಪೀಳಿಗೆಗೆ ನೀಡುವ ದೊಡ್ಡ ಆಸ್ತಿ
- 2 hrs ago ಲಿವರ್ ಸಮಸ್ಯೆಯಿದೆ ಎಂದು ಸೂಚಿಸುವ ಲಕ್ಷಣಗಳಿವು, ಕುಟುಂಬಸ್ಥರು ಲಿವರ್ ದಾನ ಮಾಡಿದರೆ ವ್ಯಕ್ತಿಯ ಪ್ರಾಣ ಉಳಿಸಬಹುದು
- 3 hrs ago ದಿನ ಭವಿಷ್ಯ ಏಪ್ರಿಲ್ 20: ಶನಿವಾರದ ಈ ಶುಭ ದಿನ ನಿಮ್ಮ ರಾಶಿಗೆ ಹೇಗಿರಲಿದೆ?
Don't Miss
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Movies ಡಿ. ಕೆ ಸುರೇಶ್ ಪರ ನಟ ದರ್ಶನ್ ಪ್ರಚಾರ; ಆ 2 ವಿಧಾನಸಭಾ ಕ್ಷೇತ್ರಗಳಲ್ಲಿ ಮತಬೇಟೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕೆಂಪು ಕೆಂಪಾದ ಗಡ್ಡೆ ಬೀಟ್ರೂಟ್ನ ವೈಶಿಷ್ಟ್ಯವೇನು?
ಕೇವಲ ತನ್ನ ಬಣ್ಣದ ಕಾರಣ ಹೆಚ್ಚಿನವರ ಅವಗಣನೆಗೆ ಒಳಗಾಗಿರುವ ತರಕಾರಿ ಎಂದರೆ ಬೀಟ್ರೂಟ್. ಹೆಚ್ಚಿನವರು ಕೆಂಪು ಬಣ್ಣವನ್ನು ತಮ್ಮ ಊಟದಲ್ಲಿ ಇಷ್ಟಪಡದಿರುವುದೇ ಇದಕ್ಕೆ ಕಾರಣ. ವಾಸ್ತವವಾಗಿ ಜೀವ ಉಳಿಸುವ ಔಷಧಿ ಕಹಿಯಿರುವಂತೆ ಬಣ್ಣದಲ್ಲಿ ಆಕರ್ಷಕವಲ್ಲದಿದ್ದರೂ ಪೋಷಕಾಂಶಗಳ ಆಗರವಾಗಿರುವ ಬೀಟ್ರೂಟ್ ಅನ್ನು ನಮ್ಮ ಆಹಾರದಲ್ಲಿ ನಿಯಮಿತವಾಗಿ ಸೇರಿಸುವ ಮೂಲಕ ಇದರ ಅದ್ಭುತ ಪ್ರಯೋಜನಗಳನ್ನು ಪಡೆಯಬಹುದು. ಆರೋಗ್ಯದ ಆಗರ ಖರ್ಜೂರದ ಔಷಧೀಯ ಗುಣಗಳೇನು?
ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು, ರಕ್ತದಲ್ಲಿರುವ ಸಕ್ಕರೆ ಅಂಶವನ್ನು ನಿಯಂತ್ರಣದಲ್ಲಿಡಲು ಮತ್ತು ಲೈಂಗಿಕ ಸಾಮರ್ಥ್ಯವನ್ನು ಹೆಚ್ಚಿಸಲು- ಮೊದಲಾದ ರೀತಿಯಲ್ಲಿ ಈ ಕೆಂಪುಕೆಂಪಾದ ಗಡ್ಡೆ ನಮ್ಮ ನೆರವಿಗೆ ಬರುತ್ತದೆ. ಅತ್ಯಂತ ಮುಖ್ಯವಾಗಿ ನಮ್ಮ ರಕ್ತದಲ್ಲಿ ಕೆಂಪು ರಕ್ತಕಣಗಳ ಕೊರತೆಯಿಂದಾಗಿ ಉಂಟಾಗುವ ಅನೀಮಿಯಾ ಸ್ಥಿತಿಗೂ ಬೀಟ್ರೂಟ್ ನೀಡುವ ನೆರವು ಯಾವುದೇ ಬೇರೆ ಆಹಾರದಲ್ಲಿಲ್ಲ!
ಬೀಟ್ರೂಟ್
ಅನ್ನು
ಕೇವಲ
ತರಕಾರಿಯಾಗಿ
ಅಲ್ಲದೇ
ಇತರ
ರೂಪದಲ್ಲಿಯೂ
ಭಾರತದಲ್ಲಿ
ಬಳಸಲಾಗುತ್ತಿದೆ.
ಹಸಿಯಾಗಿ
ಸಾಲಾಡ್
ರೂಪದಲ್ಲಿ,
ರಸ
ತೆಗೆದು
ಜ್ಯೂಸ್
ರೂಪದಲ್ಲಿ,
ಹಲ್ವಾ
ಮೊದಲಾದ
ಸಿಹಿತಿಂಡಿಗಳ
ರೂಪದಲ್ಲಿ,
ಇತರ
ಅಡುಗೆಗಳಿಗೆ
ಬಣ್ಣ
ನೀಡಲೂ
ಬಳಕೆಯಾಗುತ್ತಿದೆ.
ಇಂತಹ
ಉತ್ತಮ
ತರಕಾರಿಯ
ಹತ್ತು
ಗುಣಗಳ
ಸಾರಾಂಶವನ್ನು
ಇಲ್ಲಿ
ನೀಡಲಾಗಿದೆ.
ಹೃದಯದ ಅಧಿಕ ಒತ್ತಡವನ್ನು ಕಡಿಮೆಗೊಳಿಸುತ್ತದೆ
ಬೀಟ್ರೂಟ್ನ ಪೋಷಕಾಂಶಗಳು ನಮ್ಮ ಜೀರ್ಣಾಂಗಗಳಲ್ಲಿ ಹೀರಲ್ಪಟ್ಟ ಬಳಿಕ ಅದರಲ್ಲಿರುವ ನೈಟ್ರೇಟುಗಳು (nitrates) ನೈಟ್ರೈಟುಗಳಾಗಿ (nitrites) ಮತ್ತು ವಾಯುರೂಪದ ನೈಟ್ರಿಕ್ ಆಕ್ಸೈಡ್ ಆಗಿ ಪರಿವರ್ತನೆಯಾಗುತ್ತವೆ. ಈ ಎರಡೂ ಪೋಷಕಾಂಶಗಳು ರಕ್ತದಲ್ಲಿ ಸೇರಿದ ಬಳಿಕ ನರಗಳನ್ನು ಒಳಗಿನಿಂದ ಹಿಗ್ಗಿಸುತ್ತಾ ಹೋಗುತ್ತವೆ. ನರಗಳನ್ನು ಒಳಗಿನಿಂದ ಹಿಗ್ಗಿಸುವುದರಿಂದ ರಕ್ತ ಕಡಿಮೆ ಒತ್ತಡದಲ್ಲಿ ಮುಂದುವರೆಯಲು ಸಾಧ್ಯವಾಗುತ್ತದೆ. ಈಗ ಹೃದಯಕ್ಕೆ ರಕ್ತವನ್ನು ದೇಹದ ಎಲ್ಲಾ ಮೂಲೆಗಳಿಗೆ ಕಳುಹಿಸಲು ಕಡಿಮೆ ಅಥವಾ ಆರೋಗ್ಯಕರ ಒತ್ತಡದಲ್ಲಿ ನೂಕಿದರೆ ಸಾಕು. ಪರಿಣಾಮವಾಗಿ ಅಧಿಕ ರಕ್ತದೊತ್ತಡವಿದ್ದರೆ ಸಾಮಾನ್ಯ ಸ್ಥಿತಿಗೆ ಬರಲು ಬೀಟ್ ರೂಟ್ ನೆರವಾಗುತ್ತದೆ.
ಈ ಬಗ್ಗೆ ನಡೆದ ಸಂಶೋಧನೆಗಳ ಮೂಲಕ ಅಧಿಕ ರಕ್ತದೊತ್ತಡವಿರುವ ರೋಗಿಗಳು ಸುಮಾರು ಅರ್ಧ ಕೇಜಿಯಷ್ಟು ಬೀಟ್ರೂಟ್ನಿಂದ ತಯಾರಿಸಿದ ಖಾದ್ಯವನ್ನು ಸೇವಿಸಿದ ಆರು ಘಂಟೆಗಳೊಳಗೆ ಅವರ ರಕ್ತದೊತ್ತಡ ಗಮನಾರ್ಹವಾಗಿ ಕಡಿಮೆಯಾಗಿರುವುದನ್ನು ಖಚಿತಪಡಿಸಿವೆ.
ಕೆಟ್ಟ ಕೊಲೆಸ್ಟ್ರಾಲ್ ಕಡಿಮೆಗೊಳಿಸುತ್ತದೆ
ಬೀಟ್ರೂಟ್ನಲ್ಲಿರುವ ಫ್ಲೇವನಾಯ್ಡ್ ಮತ್ತು ಬೀಟಾಸಯಾನಿನ್ ಎಂಬ ಪೋಷಕಾಂಶಗಳು (flavanoids and betacyanin) ನರಗಳ ಒಳಗೆ ಕವಲೊಡೆದಿರುವಲ್ಲಿ ಮತ್ತು ತಿರುವಿರುವ ಒಳಗಣ ಮೂಲೆಯಲ್ಲಿ ಸಂಗ್ರಹವಾಗಿದ್ದ ಕೆಟ್ಟ ಕೊಲೆಸ್ಟ್ರಾಲ್ (LDL-Low Density Lipoproteins) ಸಡಿಲಗೊಂಡು ವಿಸರ್ಜಿಸಲು ನೆರವಾಗುತ್ತದೆ. ವಾಸ್ತವವಾಗಿ ಬೀಟ್ರೂಟ್ಗೆ ಕೆಂಪು ಬಣ್ಣ ಬರಲು ಈ ಬೀಟಾಸಯಾನಿನ್ ಪೋಷಕಾಂಶವೇ ಕಾರಣವಾಗಿದೆ. ಜೊತೆಗೇ ಇದೇ ಸ್ಥಳದಲ್ಲಿ ಮತ್ತೊಮ್ಮೆ ಹೊಸತಾಗಿ ಕೆಟ್ಟ ಕೊಲೆಸ್ಟ್ರಾಲ್ ಬಂದು ಅಂಟಿಕೊಳ್ಳುವುದನ್ನೂ ತಡೆಯುತ್ತದೆ. ಹಾಗೂ ಮುಖ್ಯವಾಗಿ ಅಧಿಕ ಪ್ರಮಾಣದಲ್ಲಿರುವ ಕರಗುವ ನಾರು ಮಲಬದ್ಧತೆಯಾಗುವುದನ್ನು ತಡೆಯುತ್ತದೆ.
ಗರ್ಭಿಣಿಯರಿಗೆ ಮತ್ತು ಗರ್ಭದಲ್ಲಿರುವ ಶಿಶುವಿಗೆ ಉತ್ತಮವಾಗಿದೆ
ಬೀಟ್ರೂಟ್ ನಲ್ಲಿ ಫೋಲಿಕ್ ಆಮ್ಲ (folic acid) ಉತ್ತಮ ಪ್ರಮಾಣದಲ್ಲಿದ್ದು ಗರ್ಭಿಣಿಯರಿಗೆ ಅತ್ಯಂತ ಅಗತ್ಯವಾದ ಪೋಷಕಾಂಶವಾಗಿದೆ. ಗರ್ಭದಲ್ಲಿರುವ ಮಗುವಿನ ಹೊಕ್ಕಳು ಬಳ್ಳಿ ದೃಢವಾಗಿರಲು ಮತ್ತು ಗರ್ಭಿಣಿಯರ ರಕ್ತದಲ್ಲಿ ಹೆಚ್ಚಿನ ಹೀಮೋಗ್ಲೋಬಿನ್ ನೀಡಲು ನೆರವಾಗುತ್ತದೆ. ಇದರಿಂದ ಹೆರಿಗೆಯ ಸಮಯದಲ್ಲಿ ಗರ್ಭಕೋಶ ಮತ್ತು ಹೆರಿಗೆಗೆ ಸಂಬಂಧಪಟ್ಟ ಸ್ನಾಯುಗಳು ಹೆಚ್ಚು ಶಕ್ತಿಯುತವಾಗಿ ಸಾಮಾನ್ಯ ಹೆರಿಗೆಗೆ ನೆರವಾಗುತ್ತವೆ.
ಮಧುಮೇಹವನ್ನೂ ನಿಯಂತ್ರಣದಲ್ಲಿಡಲು ನೆರವಾಗುತ್ತದೆ
ಯಾವುದೇ ತರಕಾರಿಯಲ್ಲಿರುವ ಸಕ್ಕರೆ ರಕ್ತವನ್ನು ಸೇರುವ ಗತಿಯನ್ನು ಗುರುತಿಸಲು ಗ್ಲೈಸೆಮಿಕ್ ಕೋಷ್ಟಕ ಬಳಸಲಾಗುತ್ತದೆ. (glycaemic index). ಇದರ ಪ್ರಕಾರ ಬೀಟ್ರೂಟ್ನಲ್ಲಿ ಈ ಅಂಶ ಮಧ್ಯಮದಲ್ಲಿರುವುದರಿಂದ (ಅಂದರೆ ಅತಿ ಶೀಘ್ರವಾಗಿ ಕರಗುವುದೂ ಇಲ್ಲ ತುಂಬಾ ತಡವಾಗಿ ಕರಗುವುದೂ ಇಲ್ಲ) ಮಧುಮೇಹಿಗಳಿಗೆ ಹೇಳಿ ಮಾಡಿಸಿದ ಸಕ್ಕರೆಯಾಗಿದೆ. ಇದರಿಂದ ಮಧುಮೇಹಿಗಳು ತಮ್ಮ ಶರೀರಕ್ಕೆ ಅಗತ್ಯವಿರುವ ಸಕ್ಕರೆಯನ್ನು ಅವರ ಶರೀರ ತಡೆದುಕೊಳ್ಳಬಹುದಾದ ಗತಿಯಲ್ಲಿಯೇ ಪಡೆಯಬಹುದು. (ಜೇನು ಅತಿ ಶೀಘ್ರವಾಗಿ ಕರಗುವ ಸಕ್ಕರೆಯಾದುದರಿಂದ ಮಧುಮೇಹಿಗಳಿಗೆ ಸಲ್ಲದು). ಜೊತೆಗೇ ಇದರಲ್ಲಿ ಕ್ಯಾಲೋರಿಗಳು ಕಡಿಮೆ ಇರುವುದರಿಂದ ಮತ್ತು ಕೊಬ್ಬು ರಹಿತವಾದುದರಿಂದ ಮಧುಮೇಹಿಗಳ ಸಕ್ಕರೆಯ ಬಯಕೆಯನ್ನು ಆರೋಗ್ಯ ಕದಡದೇ ಪೂರೈಸಲು ಬೀಟ್ ರೂಟ್ ನೆರವಿಗೆ ಬರುತ್ತದೆ.
ಒತ್ತಡದಿಂದ ಮುಕ್ತಿ ಪಡೆಯಲು ನೆರವಾಗುತ್ತದೆ
ಅಮೇರಿಕಾದ ಒಂದು ಸಂಘಟನೆ American Diabetics association ಆಯೋಜಿಸಿದ ಸಮ್ಮೇಳನವೊಂದರಲ್ಲಿ ಬೀಟ್ರೂಟ್ ಸೇವನೆಯಿಂದ ದೇಹದಲ್ಲಿ ಹೆಚ್ಚಿನ ಶಕ್ತಿ ಪಡೆಯುತ್ತದೆ. ವಿಶೇಷವಾಗಿ ಮಧುಮೇಹಿಗಳಿಗೆ ಈ ಶಕ್ತಿ ವರದಾನವಾಗಿದೆ ಎಂಬ ವಿಷಯವನ್ನು ಪ್ರಸ್ತುತಪಡಿಸಲಾಗಿತ್ತು. ಬೀಟ್ರೂಟ್ನಲ್ಲಿರುವ ನೈಟೇಟ್ ಗಳು ರಕ್ತಪರಿಚಲನೆಗೆ ನೆರವಾಗಿ ದೇಹದ ಎಲ್ಲಾ ಜೀವಕೋಶಗಳು ಅಗತ್ಯವಾದ ಪೋಷಕಾಂಶಗಳನ್ನು ಪಡೆಯಲು ಸಾಧ್ಯವಾಗುತ್ತದೆ. ಇದರಿಂದಾಗಿ ದೈಹಿಕವಾಗಿ ಹೆಚ್ಚಿನ ಸಾಮರ್ಥ ಪಡೆದಂತಾಗುತ್ತದೆ, ಪರೋಕ್ಷವಾಗಿ ಈ ಮೂಲಕ ಉದ್ಭವವಾಗಿದ್ದ ಒತ್ತಡ ಕಡಿಮೆಯಾಗುತ್ತದೆ.
ಲೈಂಗಿಕ ಸಾಮರ್ಥ್ಯ ಮತ್ತು ಚೈತನ್ಯವನ್ನು ಹೆಚ್ಚಿಸುತ್ತದೆ
ಎಷ್ಟೋ ಕಡೆ ಬೀಟ್ರೂಟ್ ಅನ್ನು ನೈಸರ್ಗಿಕ ವಯಾಗ್ರಾ ಎಂದು ಪರಿಗಣಿಸಲಾಗುತ್ತದೆ. ಏಕೆಂದರೆ ಇದರ ಸೇವನೆಯಿಂದ ಲೈಂಗಿಕ ಸಾಮರ್ಥ್ಯ ಹೆಚ್ಚುವುದು ಗಮನಕ್ಕೆ ಬಂದಿದೆ. ಬೀಟ್ರೂಟ್ ನಲ್ಲಿರುವ ನೈಟೇಟ್ ಗಳು ರಕ್ತಪರಿಚಲನೆಗೆ ನೆರವಾಗುತ್ತವೆ. ಇದೇ ಗುಣ ಜನನಾಂಗಗಳಿಗೂ ಅನ್ವಯಿಸುವುದರಿಂದ ಹೆಚ್ಚಿನ ರಕ್ತ ತುಂಬಿ ಲೈಂಗಿಕ ಸಾಮರ್ಥ್ಯ ಹೆಚ್ಚುತ್ತದೆ. ವಾಸ್ತವವಾಗಿ ವಯಾಗ್ರಾ ಮಾಡುವ ಕೆಲಸವೂ ಇದೇ. ಬೀಟ್ ರೂಟ್ ನಿಂದ ಈ ಸಾಮರ್ಥ್ಯ ನೈಸರ್ಗಿಕವಾಗಿ ಸಿಗುವುದರಿಂದ ಅಡ್ಡ ಪರಿಣಾಮಗಳ ಭಯವಿಲ್ಲದೇ ಬಳಸಬಹುದಾಗಿದೆ.
ಮೆದುಳಿನ ಸಾಮರ್ಥ್ಯವನ್ನೂ ಹೆಚ್ಚಿಸುತ್ತದೆ
ಇಂಗ್ಲೆಂಡಿನ ಎಕ್ಸೆಟರ್ ವಿಶ್ವವಿದ್ಯಾಲಯದಲ್ಲಿ ಬೀಟ್ರೂಟ್ ಬಗ್ಗೆ ಹಲವು ಸಂಶೋಧನೆಗಳನ್ನು ನಡೆಸಲಾಯಿತು. ಇದರ ಫಲಿತಾಂಶಗಳ ಪ್ರಕಾರ ಬೀಟ್ರೂಟ್ ರಸ ತೆಗೆದು ತಯಾರಿಸಿದ ಜ್ಯೂಸ್ ಕುಡಿಯುವುದರಿಂದ ವ್ಯಕ್ತಿಯ ಚೈತನ್ಯ ಹದಿನಾರು ಶೇಖಡಾ ಹೆಚ್ಚಿದೆ. ರಕ್ತಪರಿಚಲನೆ ಸುಗಮಗೊಳ್ಳುವುದರಿಂದ ದೇಹದ ಎಲ್ಲಾ ಜೀವಕೋಶಗಳ ಚಟುವಟಿಕೆಯಲ್ಲಿ ಚುರುಕು ಕಾಣುವುದೇ ಇದಕ್ಕೆ ಕಾರಣ. ಪರ್ಯಾಯವಾಗಿ ಮೆದುಳು ಸಹಾ ಹೆಚ್ಚಿನ ಪ್ರಮಾಣದಲ್ಲಿ ರಕ್ತವನ್ನು ಬಳಸಿಕೊಂಡು ತನ್ನ ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತದೆ. ಮೆದುಳಿಗೆ ರಕ್ತಪೂರೈಕೆ ಕಡಿಮೆಯಾಗುವ ಮೂಲಕ ಕಾಡುವ ಬುದ್ದಿಮಾಂದ್ಯತೆ (dementia) ಬರುವ ಸಾಧ್ಯತೆಯನ್ನು ಬೀಟ್ ರೂಟ್ ಕಡಿಮೆ ಮಾಡುತ್ತದೆ ಎಂದು ಸಂಶೋಧನೆಗಳ ಮೂಲಕ ವಿವರಿಸಲಾಗಿದೆ.
ಕ್ಯಾನ್ಸರ್ ಬರುವುದರಿಂದ ತಡೆಯುತ್ತದೆ
ಬೀಟ್ರೂಟ್ನಲ್ಲಿರುವ ಬೀಟಾಸಯಾನಿನ್ ಪೋಷಕಾಂಶ ರಕ್ತದಲ್ಲಿರುವ ಕ್ಯಾನ್ಸರ್ ಕಾರಕ ಕಣಗಳನ್ನು ಹೊಡೆದೋಡಿಸಲು ನೆರವಾಗುತ್ತದೆ. ಸಾಮಾನ್ಯವಾಗಿ ಪ್ರಾರಂಭಿಕ ಹಂತದಲ್ಲಿರುವ ಕ್ಯಾನ್ಸರ್ ಪೂರ್ಣವಾಗಿ ಗುಣವಾಗಬಲ್ಲದು.(ವಿಕೋಪಕ್ಕೆ ತಿರುಗಿದ ಕ್ಯಾನ್ಸರ್ ಚಿಕಿತ್ಸೆಗೆ ಹೆಚ್ಚಿನ ಸಮಯಾವಕಾಶ ಅಗತ್ಯವಿದೆ). ಕ್ಲುಪ್ತಕಾಲದಲ್ಲಿ ಕ್ಯಾನ್ಸರ್ ಇರುವಿಕೆಯನ್ನು ಗುರುತಿಸಿ ಚಿಕಿತ್ಸೆ ಪಡೆದು ಗುಣಮುಖರಾದವರಿಗೂ ಬೀಟ್ರೂಟ್ ಅಗತ್ಯವಾಗಿದೆ. ಏಕೆಂದರೆ ಇವರ ದೇಹದಲ್ಲಿ ಮತ್ತೊಮ್ಮೆ ಈ ಕ್ಯಾನ್ಸರ್ ಕಾರಕ ಕಣಗಳು ಉತ್ಪತ್ತಿಯಾಗದಂತೆ ಬೀಟಾಸಯಾನಿನ್ ತಡೆಯುತ್ತದೆ. ಪರಿಣಾಮವಾಗಿ ಉತ್ತಮ ಆರೋಗ್ಯವನ್ನು ಮತ್ತು ಆಯಸ್ಸನ್ನು ಪಡೆಯಬಹುದು.
ಮಲಬದ್ಧತೆ ಮತ್ತು ಹೊಟ್ಟೆ ಆರೋಗ್ಯವನ್ನು ಕಾಪಾಡುತ್ತದೆ
ಇದರಲ್ಲಿರುವ ಕರಗಬಲ್ಲ ಫೈಬರ್ ಮಲವಿಸರ್ಜನೆಗೆ ಅತ್ಯಂತ ಸಹಾಯಮಾಡುತ್ತದೆ. ಇದು ಕರುಳಿನ ಶುದ್ಧೀಕರಿಸುವುದು ಮತ್ತು ಕರುಳಿನ ಚಲನೆಗಳನ್ನು ಸುಲಭಗೊಳಿಸಿ ಹೊಟ್ಟೆ ಆರೋಗ್ಯವನ್ನು ಕಾಪಾಡುತ್ತದೆ.
ದೌರ್ಬಲ್ಯ ನಿವಾರಣೆಗೆ ಸಹಕಾರಿ
ಅಮೇರಿಕಾದಲ್ಲಿ ನಡೆದ ಡಯಾಬಿಟಿಸ್ ಕಾನ್ಫರೆನ್ಸ್ ನಲ್ಲಿ ಮಂಡಿಸಲಾದ ಸಂಶೋಧನೆಯ ಪರಿಣಾಮದ ಪ್ರಕಾರ ಬೀಟ್ರೂಟ್ ಮನುಷ್ಯನ ದೈಹಿಕ ಕ್ಷಮತೆಯನ್ನು ಹೆಚ್ಚಿಸುತ್ತದೆ. ಅವರ ಪ್ರಕಾರ ಇದರಲ್ಲಿನ ನೈಟ್ರೇಟ್ ಅಂಶ ನಮ್ಮ ಅಪಧಮನಿಗಳನ್ನು ಹಿಗ್ಗಿಸುತ್ತದೆ ಹಾಗೂ ಇದು ನಮ್ಮ ದೇಹದ ಎಲ್ಲಾ ಭಾಗಗಳಿಗೆ ರಕ್ತವನ್ನು ಸಂಚರಿಸಲು ಉಪಯುಕ್ತವಾಗಿದೆ. ಇದು ನಮ್ಮಲ್ಲಿ ಶಕ್ತಿ ವರ್ಧನೆಗೆ ಸಹಕಾರಿ. ಇನ್ನೊಂದು ವಾದದ ಪ್ರಕಾರ ಇದರಲ್ಲಿ ಕಬ್ಬಿಣದ ಅಂಶ ಹೆಚ್ಚಿನ ಪ್ರಮಾಣದಲ್ಲಿದೆ ಹಾಗಾಗಿ ಮನುಷ್ಯನ ಶಕ್ತಿಯನ್ನು ವೃದ್ಧಿಸುತ್ತದೆ ಎಂಬುದಾಗಿದೆ. ಆದರೆ ದಣಿದ ದಿನ ಬೀಟ್ ಸೇವನೆ ಶಕ್ತಿಯನ್ನು ಮರಳಿ ಪಡೆಯಲು ಸಹಕಾರಿಯಾಗುವುದಂತೂ ಸುಳ್ಳಲ್ಲ.