Latest Updates
-
ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್: ವಿಚ್ಛೇದನ, ಕಸ್ಟಡಿ ಸಮಸ್ಯೆಗಳಿಗೆ ಇಲ್ಲಿದೆ ಸುಲಭ ಪರಿಹಾರ! -
ಅಪಾರ್ಟ್ಮೆಂಟ್ನಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ: ದಂಡ ತಪ್ಪಿಸಿ, ಸುಲಭವಾಗಿ ವಿಸರ್ಜನೆ ಮಾಡುವುದು ಹೇಗೆ? -
ಓಣಂ ಸದ್ಯದ ಸಂಭ್ರಮ: ಬೆಲೆ ಏರಿಕೆ ಮತ್ತು ಆರೋಗ್ಯದ ಚಿಂತೆಯಿಲ್ಲದೆ ಹಬ್ಬ ಆಚರಿಸುವುದು ಹೇಗೆ? -
ಆಗಸ್ಟ್ 2026 ಏಕಾದಶಿ: ಸ್ಮಾರ್ತ vs ವೈಷ್ಣವ ವ್ರತದ ದಿನಾಂಕಗಳ ಗೊಂದಲವೇ? ಮಧುಮೇಹಿಗಳಿಗೆ ಇಲ್ಲಿದೆ ಉಪವಾಸದ ಸೂತ್ರ! -
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ನಿಮ್ಮ ಮಕ್ಕಳೊಂದಿಗೆ ಚಂದ್ರನ ರಹಸ್ಯಗಳನ್ನು ಅನ್ವೇಷಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಓಣಂ ಹಬ್ಬದ ಸಂಭ್ರಮ: ಮಳೆಯಲ್ಲೂ ಸ್ಟೈಲಿಶ್ ಆಗಿ ಕಾಣಲು ₹1,200 ರೊಳಗೆ ಬೆಸ್ಟ್ ಫ್ಯಾಷನ್ ಟಿಪ್ಸ್! -
ಮಳೆಗಾಲದಲ್ಲಿ ಹಿರಿಯರು ಜಾರಿ ಬೀಳುವ ಆತಂಕವೇ? ಸುರಕ್ಷಿತವಾಗಿರಲು ಈ 12 ನಿಮಿಷಗಳ ಚೇರ್-ಯೋಗ ಟ್ರೈ ಮಾಡಿ! -
ಹಿರಿಯರ ಆರೋಗ್ಯಕ್ಕೆ ದಿನಕ್ಕೆ 12 ನಿಮಿಷದ 'ಚೇರ್ ಯೋಗ': ಚೈತನ್ಯ ಮತ್ತು ಸಮತೋಲನಕ್ಕೆ ಇದುವೇ ಮಂತ್ರ! -
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್!
ಮಳೆಗಾಲದಲ್ಲಿ ಆರೋಗ್ಯಕರ ಆಹಾರದ ಕಡೆ ನಿಗಾ ಇರಲಿ
ಮಳೆಗಾಗಿ ಇಳೆಯ ಸಕಲ ಜೀವಸಂಕುಲ ಹಂಬಲಿಸುತ್ತದೆ. ಬರಡಾಗಿದ್ದ ಭೂಮಿ ಹಸಿರುತೊಟ್ಟು ಕಂಗೊಳಿಸುತ್ತಾಳೆ. ಕೃಷಿಕರ ಮೊಗದಲ್ಲಿ ನಗು ಮೂಡುತ್ತದೆ. ಮುಂದಿನ ದಿನಗಳಲ್ಲಿ ಉತ್ತಮ ಬೆಳೆಯಾಗುವ ನಿರೀಕ್ಷೆಯಿಂದ ಹಿರಿಯರು ದೇವರಿಗೆ ನಮಿಸುತ್ತಾರೆ. ಆದರೆ ಮಳೆಗಾಲ ಸೊಗಸಾದರೂ ಅದು ಉಂಟುಮಾಡುವ ಫಜೀತಿ, ರೋಗ ರುಜಿನಗಳ ಭೀತಿ, ಕೊಚ್ಚೆ, ಕೆಸರು ಹೀಗೆ ಸಮಸ್ಯೆಗಳ ಸರಮಾಲೆ ಕಣ್ಮುಂದೆ ಬಂದು ಸುಳಿಯುತ್ತದೆ. ಮಳೆಗೆ ಅರಳುವ ರಂಗು ರಂಗಿನ ಕೊಡೆಗಳು
ಹೌದು, ಕೆಲವೊಂದು ವೈರಲ್ ಫೀವರ್, ಅಂಟು ರೋಗಗಳು, ಅಲರ್ಜಿ ಮತ್ತು ಇತರ ಮಳೆಗಾಲದಲ್ಲಿ ಕಾಡುವ ಸಮಸ್ಯೆಗಳು ಹೆಚ್ಚು ಕಿರಿಕಿರಿಯನ್ನು ತರುವುದು. ಅದರಲ್ಲೂ ಮಳೆಗಾಲ ಬಂತೆಂದರೆ ಸಾಕು, ಕೆಲವರಿಗಂತೂ ಶೀತ, ಜ್ವರ ಕಟ್ಟಿಟ್ಟ ಬುತ್ತಿ..! ಕೊಂಚ ಗಮನಿಸಿ ನೋಡಿ, ಹಿಂದಿನ ಕಾಲದ ಹಿರಿಯರಿಗೆ ಶೀತವಾಗುವುದು ಕಡಿಮೆ. ಆದರೆ ಇಂದು ಕಿರಿಯರು, ಹಿರಿಯರು ಎನ್ನುವ ಭೇದಭಾವವಿಲ್ಲದೆ ಅದರಲ್ಲೂ ಮಕ್ಕಳಿಗೆ ಬಹುಬೇಗನೇ ಶೀತ ಹಿಡಿಯುತ್ತದೆ. ಆದ್ದರಿಂದ ಮಳೆಗಾಲದಲ್ಲಿ ಸ್ವಲ್ಪ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಂಡು ನಮ್ಮ ಆಹಾರ ಕ್ರಮದತ್ತ ಗಮನಹರಿಸಿದರೆ ತೊಂದರೆಯನ್ನು ದೂರಮಾಡಬಹುದು. ಹಾಗಾಗಿ ನೀವು ಈ ಮಳೆಗಾಲವನ್ನು ಆನಂದದಿಂದ ಮತ್ತು ಆರೋಗ್ಯದಿಂದ ಕಳೆಯಬೇಕು ಎಂದಾದಲ್ಲಿ ಈ ಕೆಳಗೆ ನೀಡಿರುವ ಸಲಹೆಗಳನ್ನು ತಪ್ಪದೆ ಪಾಲಿಸಿ. ಅತ್ಯಂತ ಅಪಾಯಕರ ಮಳೆಗಾಲದ 10 ಕಾಯಿಲೆಗಳು

ಎಣ್ಣೆ ಬಳಕೆ ಸಾಧ್ಯವಾದಷ್ಟು ಕಡಿಮೆ ಮಾಡಿ
ದಿನನಿತ್ಯ ಆಹಾರಕ್ರಮದಲ್ಲಿ ತುಪ್ಪ, ಆಲೀವ್ ಎಣ್ಣೆ, ಜೋಳದ ಎಣ್ಣೆ ಮತ್ತು ಸೂರ್ಯಕಾಂತಿ ಎಣ್ಣೆಯನ್ನು ಆಹಾರ ತಯಾರಿಸಲು ಬಳಸಿ. ಇವು ಲಘು ಎಣ್ಣೆಗಳು ಆರೋಗ್ಯಕ್ಕೆ ಉತ್ತಮ. ಸಾಸಿವೆ ಎಣ್ಣೆ, ಬೆಣ್ಣೆ, ಕಡಲೆ ಕಾಳು ಎಣ್ಣೆ ಮತ್ತು ಇನ್ನಿತರ ಭಾರವಾದ ಎಣ್ಣೆಗಳನ್ನು ಬಳಸಬೇಡಿ. ಈ ಎಣ್ಣೆಗಳು ಉಷ್ಣಕಾರಕ ಗುಣಗಳನ್ನು ಹೊಂದಿರುತ್ತವೆ.

ರಸ್ತೆ ಬದಿಯ ಆಹಾರದಿಂದ ದೂರವಿರಿ
ನೀವು ಆಹಾರವನ್ನು ಸೇವಿಸುವ ಪರಿಸರವು ಶುಚಿಯಾಗಿ ಮತ್ತು ಆರೋಗ್ಯಕರವಾಗಿದೆಯೇ ಎಂಬುದನ್ನು ಗಮನಿಸಿ. ತೆರೆದಿಟ್ಟ ಆಹಾರವನ್ನು ಯಾವುದೇ ಕಾರಣಕ್ಕು ಸೇವಿಸಲು ಹೋಗಬೇಡಿ. ಅದರಲ್ಲೂ ರಸ್ತೆ ಬದಿಯ ವ್ಯಾಪಾರಿಗಳ ಬಳಿ ಬೇಡವೇ ಬೇಡ. ಮಳೆಗಾಲದಲ್ಲಿ ರಸ್ತೆ ಬದಿಯ ಆಹಾರ ನಿಮ್ಮ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು ಎಂಬುದನ್ನು ಮಾತ್ರ ಮರೆಯಬೇಡಿ.

ಕಹಿ ಪದಾರ್ಥಗಳಿಗೆ ಹೆಚ್ಚು ಪ್ರಾಶಸ್ತ್ಯ ನೀಡಿ
ಸಾಮಾನ್ಯವಾಗಿ ಕಹಿ ಪದಾರ್ಥಗಳು ದೇಹದಲ್ಲಿರುವ ಪಿತ್ತವನ್ನು ಕಡಿಮೆ ಮಾಡುತ್ತದೆ. ಅದಕ್ಕಾಗಿ ಹಾಗಲಕಾಯಿ, ಬೇವು, ಫೆನುಗ್ರೀಕ್ ಇವುಗಳನ್ನು ದಿನನಿತ್ಯ ನಿಮ್ಮ ಆಹಾರ ಪದಾರ್ಥಗಳಲ್ಲಿ ಸೇರಿಸಿ ಹಾಗೂ ಇನ್ಫೆಕ್ಷನ್ಗಳಿಂದ ದೂರವಿರಿ.

ಹಣ್ಣು ಮತ್ತು ತರಕಾರಿಯನ್ನು
ಚೆನ್ನಾಗಿ ತೊಳೆದುಕೊಳ್ಳಿ ಹಣ್ಣು ಮತ್ತು ತರಕಾರಿಯನ್ನು ಮೊದಲು ಚೆನ್ನಾಗಿ ತೊಳೆದು ನಂತರವಷ್ಟೇ ಬಳಸಿ.

ನೇರಳೆ ಹಣ್ಣು
ಮಳೆಗಾಲ ಪ್ರಾರಂಭವಾಗುವುದಕ್ಕೆ ಮುನ್ನ ಮರದಲ್ಲಿ ಕಪ್ಪುಕಪ್ಪು ತೂಗುವ ನೇರಳೆ ಹಣ್ಣನ್ನು ಸಂಗ್ರಹಿಸಿ ಫ್ರಿಜ್ಜಿನಲ್ಲಿ ಶೇಖರಿಸಿಟ್ಟು ಮಳೆಗಾಲದಲ್ಲಿ ಕೊಂಚಕೊಂಚವಾಗಿ ಸೇವಿಸುವುದು ಒಳ್ಳೆಯದು. ಇದರಲ್ಲಿ ಕ್ಯಾಲೋರಿಗಳು ಕಡಿಮೆ ಇದ್ದರೂ ಕಬ್ಬಿಣದ ಅಂಶ, ಫೋಲೇಟ್ (ಜೀವಕೋಶಗಳ ಅಭಿವೃದ್ದಿಗೆ ಅಗತ್ಯವಿರುವ ವಿಟಮಿನ್ ಬಿ), ಪೊಟ್ಯಾಸಿಯಂ ಹೇರಳವಾಗಿರುವುದರಿಂದ ಮಳೆಗಾಲದಲ್ಲಿ ಸೇವಿಸಲು ಅತ್ಯುತ್ತಮವಾಗಿದೆ.

ಶುಚಿತ್ವಕ್ಕೆ ಆದ್ಯತೆ ನೀಡಿ
ತರಕಾರಿ ಕತ್ತರಿಸಲು ಬಳಸುವ ಮನೆಗಳನ್ನು ಉಪಯೋಗಿಸುವ ಮೊದಲು ಸರಿಯಾಗಿ ತೊಳೆದುಕೊಳ್ಳಿ. ಏನನ್ನಾದರೂ ತಿನ್ನುವ ಮೊದಲು ಸರಿಯಾಗಿ ಕೈ ತೊಳೆದುಕೊಳ್ಳಿ.



Click it and Unblock the Notifications