Just In
- 8 hrs ago ವಾರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಈ 7 ದಿನಗಳು ನಿಮಗೆ ಹೇಗಿರಲಿದೆ?
- 9 hrs ago ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- 10 hrs ago ಪರಿಸರ ದಿನ: ಇಂದು ನೀವು ಹೀಗೆ ಮಾಡಿದರೆ ಮುಂದಿನ ಪೀಳಿಗೆಗೆ ನೀಡುವ ದೊಡ್ಡ ಆಸ್ತಿ
- 10 hrs ago ಲಿವರ್ ಸಮಸ್ಯೆಯಿದೆ ಎಂದು ಸೂಚಿಸುವ ಲಕ್ಷಣಗಳಿವು, ಕುಟುಂಬಸ್ಥರು ಲಿವರ್ ದಾನ ಮಾಡಿದರೆ ವ್ಯಕ್ತಿಯ ಪ್ರಾಣ ಉಳಿಸಬಹುದು
Don't Miss
- Technology ಆನ್ಲೈನ್ ಶಾಪಿಂಗ್ ಮಾಡಲು ಇಲ್ಲಿವೇ ನೋಡಿ ಬೆಸ್ಟ್ ವೆಬ್ಸೈಟ್ಗಳು!
- Automobiles Hyundai: ಹಳೆಯ ಹ್ಯುಂಡೈ ಕ್ರೆಟಾವನ್ನು ಮರೆತುಬಿಡಿ... ಹೊಸ ಕ್ರೆಟಾ ಈಗ ಮತ್ತಷ್ಟು ಪ್ರೀಮಿಯಂ SUV
- News Smartphone: ಮಾರುಕಟ್ಟೆಯಲ್ಲಿ ಸದ್ದು ಮಾಡಲು ಬರುತ್ತಿದೆ ಸ್ಯಾಮ್ಸಂಗ್ M35 5G
- Finance ಸಂಸ್ಥೆಯ ಎಲ್ಲ 30,000 ಉದ್ಯೋಗಿಗಳಿಗೆ ವರ್ಕ್ ಫಮ್ ಹೋಂ ನೀಡಿದ ಟೆಕ್ ಕಂಪೆನಿ
- Movies Neha Murder Case: ನೇಹಾ ಹತ್ಯೆ ಅಪರಾಧಿಗೆ ಅತ್ಯುಗ್ರ ಶಿಕ್ಷೆ ನೀಡಬೇಕು ಎಂದು ಸಿನಿಮಾ ತಾರೆಯರ ಆಗ್ರಹ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಆಲೂಗಡ್ಡೆಯ ಮಾಯಾ ಜಾದೂಗೆ ಬೆರಗಾಗಲೇಬೇಕು!
ಹೆಚ್ಚು ಕಾಲ ಕೆಡದೇ ಇರುವ, ಅಗ್ಗವಾದ, ವರ್ಷದ ಎಲ್ಲಾ ಋತುಗಳಲ್ಲೂ ಲಭ್ಯವಿರುವ ತರಕಾರಿಗಳೆಂದರೆ ಆಲುಗಡ್ಡೆ. ಬಡವರ ನೆಚ್ಚಿನ ಈ ಆಲುಗಡ್ಡೆಯನ್ನು ಉದ್ದದ ಬೆರಳುಗಳಂತೆ ಚೌಕಾಕಾರದಲ್ಲಿ ಕತ್ತರಿಸಿ ಎಣ್ಣೆಯಲ್ಲಿ ಹುರಿದು ಚೆಂದದ ಕಾಗದದ ಪೊಟ್ಟಣದಲ್ಲಿ ಕಟ್ಟಿಕೊಟ್ಟರೆ ಶ್ರೀಮಂತರಿಗೆ ಅದು ದುಬಾರಿಬೆಲೆಯ ಸ್ವಾದಿಷ್ಟ ಖಾದ್ಯ...! ರೆಸಿಪಿಗಳಲ್ಲಿ ಹುಡುಕಿಕೊಂಡು ಹೊರಟರೆ ಆಲು ಜೊತೆಗಿನ ಇತರ ಸಾಮಾಗ್ರಿಗಳನ್ನು ಉಪಯೋಗಿಸಿ ತಯಾರಿಸಬಹುದಾದ ಖಾದ್ಯಗಳ ಪಟ್ಟಿ ನೂರಕ್ಕೂ ಹೆಚ್ಚಿವೆ. ಆಲೂಗಡ್ಡೆ ಆರೋಗ್ಯಕ್ಕೆ ಮಾತ್ರವಲ್ಲ, ಸೌಂದರ್ಯಕ್ಕೂ ಬೇಕು!
ಇದರಲ್ಲಿರುವ
ವಿಟಮಿನ್
ಬಿ,
ಸಿ,
ಕಬ್ಬಿಣ,
ಕ್ಯಾಲ್ಸಿಯಂ,
ಮ್ಯಾಂಗನೀಸ್,
ಗಂಧಕ
ಮೊದಲಾದ
ಪೋಷಕಾಂಶಗಳು
ಆರೋಗ್ಯವನ್ನು
ವೃದ್ಧಿಸುವ
ಜೊತೆಗೇ
ಕೊಬ್ಬನ್ನು
ಕರಗಿಸುವ
ಮೂಲಕ
ತೂಕ
ಇಳಿಯಲೂ
ನೆರವಾಗುತ್ತವೆ.
ಆಲುಗಡ್ಡೆಯನ್ನು
ಚೆನ್ನಾಗಿ
ಹುರಿದು
ತಿನ್ನುವುದರಿಂದ
ಕೊಬ್ಬು
ಕಡಿಮೆಯಾಗುತ್ತದೆ.
ಆದರೆ
ಆಲುಗಡ್ಡೆಯ
ಉಪಯೋಗ
ಅಡುಗೆಗೆ
ಹೊರತಾಗಿಯೂ
ಬಹಳಷ್ಟಿದೆ.
ಇದರ
ಪರ್ಯಾಯ
ಉಪಯೋಗಗಳಲ್ಲಿ
ಪ್ರಮುಖವಾದುವನ್ನು
ಕೆಳಗಿನ
ಸ್ಲೈಡ್
ಶೋ
ಮೂಲಕ
ವಿವರಿಸಲಾಗಿದೆ..
ಆಲುಗಡ್ಡೆ ಬೇಯಿಸಿದ ನೀರು ಕೂದಲಿಗೆ ಉತ್ತಮ
ಆಲುಗಡ್ಡೆಯನ್ನು ಬೇಯಿಸಿದ ಬಳಿಕ ಉಳಿದ ನೀರನ್ನು ಚೆಲ್ಲಬೇಡಿ, ಬದಲಿಗೆ ತಣಿದ ಬಳಿಕ ಇದೇ ನೀರಿಗೆ ಒಂದು ಬೆಂದಿರುವ ಆಲುಗಡ್ಡೆಯನ್ನು ಚೆನ್ನಾಗಿ ಕಿವುಚಿ ನೀರನ್ನು ಗಾಢವಾಗಿಸಿ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ
ಆಲುಗಡ್ಡೆ ಬೇಯಿಸಿದ ನೀರು ಕೂದಲಿಗೆ ಉತ್ತಮ
ಈ ನೀರಿನಿಂದ ಕೂದಲನ್ನು ತೊಳೆದುಕೊಂಡರೆ ಕೂದಲಿಗೆ ಅಪ್ರತಿಮ ಕಾಂತಿ ದೊರಕುತ್ತದೆ. ಕೂದಲ ಬುಡಗಳನ್ನು ದೃಢಗೊಳಿಸುವ ಮೂಲಕ ಉದುರುವುದನ್ನು ನಿಯಂತ್ರಿಸುತ್ತದೆ ಅಲ್ಲದೇ ತಲೆಹೊಟ್ಟನ್ನೂ ನಿವಾರಿಸುತ್ತದೆ.
ರಕ್ತದೊತ್ತಡ ಕಡಿಮೆಗೊಳಿಸುತ್ತದೆ
ಒಂದು ವೇಳೆ ನಿಮಗೆ ಅಧಿಕ ರಕ್ತದೊತ್ತಡದ ತೊಂದರೆಯಿದ್ದಲ್ಲಿ, ನಿಮ್ಮ ಆಹಾರದಲ್ಲಿ ಸಾಕಷ್ಟು ಆಲುಗಡ್ಡೆಗಳಿರುವಂತೆ ನೋಡಿಕೊಳ್ಳುವುದರಿಂದ ಶೀಘ್ರವೇ ಸಾಮಾನ್ಯ ಸ್ಥಿತಿಗೆ ಬರಲು ಸಾಧ್ಯವಾಗುತ್ತದೆ.
ಮಲಬದ್ಧತೆ ನಿವಾರಿಸುತ್ತದೆ
ಒಂದು ವೇಳೆ ಮಲಬದ್ದತೆಯ ತೊಂದರೆ ಇದ್ದರೆ ಒಂದೆರಡು ಆಲುಗಡ್ಡೆಗಳನ್ನು ಎಣ್ಣೆಯಲ್ಲಿ ಚೆನ್ನಾಗಿ ಕರಿದು ತಿನ್ನುವ ಮೂಲಕ ಮಲಬದ್ದತೆಯ ತೊಂದರೆ ದೂರವಾಗುತ್ತದೆ.
ಮಲಬದ್ಧತೆ ನಿವಾರಿಸುತ್ತದೆ
ಇದರಲ್ಲಿರುವ ಪೊಟ್ಯಾಶಿಯಂ ಲವಣ ಹೊಟ್ಟೆಯಲ್ಲಿ ಆಮ್ಲೀಯತೆಗೆ ಕಾರಣವಾಗುವ ದ್ರವಗಳನ್ನು ನಿಷ್ಕ್ರಿಯಗೊಳಿಸುವ ಮೂಲಕ ಹೊಟ್ಟೆಯುರಿ ಮೊದಲಾದ ತೊಂದರೆಗಳಿಂದ ತಪ್ಪಿಸುತ್ತದೆ.
ಮುಖದ ಕಾಂತಿಯನ್ನು ಹೆಚ್ಚಿಸುತ್ತದೆ
ನಿಯಮಿತವಾಗಿ ಮುಖದ ಚರ್ಮವನ್ನು ಆಲುಗಡ್ಡೆಯ ಚಿಕ್ಕದಾಗಿ ತುರಿದ ಪುಡಿಯಿಂದ ಸುಮಾರು ಹತ್ತರಿಂದ ಹದಿನೈದು ನಿಮಿಷ ಮಸಾಜ್ ಮಾಡಿಕೊಳ್ಳುವ ಮೂಲಕ ಸಹಜವಾದ ಕಾಂತಿಯನ್ನು ಪಡೆಯಬಹುದು.
ಮೊಡವೆಗಳನ್ನು ನಿವಾರಿಸುತ್ತದೆ
ಮೊಡವೆಗಳ ತೊಂದರೆಯಿದ್ದರೆ ಒಂದು ಚಮಚ ಆಲುಗಡ್ಡೆಯ ರಸಕ್ಕೆ ಕೆಲವು ಹನಿ ಲಿಂಬೆರಸವನ್ನು ಸೇರಿಸಿ ಮಿಶ್ರಣ ಮಾಡಿ ಮೊಡವೆಗಳ ಮೇಲೆ ಹಚ್ಚಿಕೊಳ್ಳುವ ಮೂಲಕ ಮೊಡವೆಗಳನ್ನು ನಿವಾರಿಸುವುದು ಮಾತ್ರವಲ್ಲ, ಮತ್ತೆ ಬರದಂತೆಯೂ ತಡೆಯಬಹುದು.
ಚರ್ಮದಡಿಯ ಗಂಟುಗಳನ್ನು ನಿವಾರಿಸುತ್ತದೆ
ಕೆಲವೊಮ್ಮೆ ಚರ್ಮದಡಿಯಲ್ಲಿ ಕೆಲವು ಗ್ರಂಥಿಗಳು ಸ್ರವಿತವಾಗಿ ಗಂಟುಗಳು ಉಂಟಾಗುತ್ತವೆ. ಇದಕ್ಕೆ ಒಂದು ಉದಾಹರಣೆ ಮಣಿಕಟ್ಟಿನಲ್ಲಿ ಉಂಟಾಗುವ ಗ್ಯಾಂಗ್ಲಿಯಾನ್ ಎಂಬ ಗಂಟು. ಇದನ್ನು ನಿವಾರಿಸಲು ಸುಮಾರು ಮೂರು ಅಥವಾ ನಾಲ್ಕು ಆಲುಗಡ್ದೆಗಳನ್ನು ನೇರವಾಗಿ ಬೆಂಕಿಯ ಮೇಲಿಟ್ಟು ಸುಡಬೇಕು.
ಚರ್ಮದಡಿಯ ಗಂಟುಗಳನ್ನು ನಿವಾರಿಸುತ್ತದೆ
ಬಳಿಕ ಸಿಪ್ಪೆ ಸುಲಿದು ಉಪ್ಪು ಮತ್ತು ಕಾಳುಮೆಣಸಿನ ಪುಡಿಯನ್ನು ಚಿಮುಕಿಸಿಕೊಂದು ಬಿಸಿಬಿಸಿಯಾಗಿಯೇ ತಿನ್ನಬೇಕು. ಇದರಿಂದ ಗಂಟುಗಳು ಕರಗತೊಡಗುತ್ತವೆ.
ಹೆರಿಗೆಯ ರೇಖೆಗಳನ್ನು ನಿವಾರಿಸುತ್ತದೆ
ಒಂದು ಚಮಚ ಮುಲ್ತಾನಿ ಮಿಟ್ಟಿಗೆ ಅರ್ಧ ಚಮಚದಷ್ಟು ಹಸಿ ಆಲುಗಡ್ಡೆಯ ರಸವನ್ನು ಸೇರಿಸಿ ಮಿಶ್ರಣ ಮಾಡಿಕೊಳ್ಳಿ. ಇದನ್ನು ಹರಿಗೆಯ ರೇಖೆಗಳ ಮೇಲೆ ಮತ್ತು ಮುಖದ ನೆರಿಗೆಗಳ ಮೇಲೆ ಹಚ್ಚಿಕೊಳ್ಳುವ ಮೂಲಕ ಈ ಸ್ಥಳಗಳೂ ಅಕ್ಕಪಕ್ಕದ ಚರ್ಮದ ಬಣ್ಣವನ್ನೇ ಪಡೆದು ರೇಖೆಗಳು ಮಾಯವಾಗುತ್ತವೆ.
ಬಿಸಿಲಿನ ಝಳಕ್ಕೆ ಒಣಗಿದ ಬಣ್ಣವನ್ನು ನಿವಾರಿಸುತ್ತದೆ
ಬಿಸಿಲಿಗೆ ಒಡ್ಡಿರುವ ಚರ್ಮದ ಭಾಗದ ಬಣ್ಣ ಬದಲಾಗಿದ್ದು ಇದನ್ನು ನಿಜವರ್ಣಕ್ಕೆ ತರಲು ಹಸಿ ಆಲುಗಡ್ಡೆಯನ್ನು ಅಡ್ಡಲಾಗಿ ಕತ್ತರಿಸಿ ಅದರಿಂದ ಬಿಸಿಲಿಗೆ ಒಡ್ಡಿ ಬಣ್ಣಬದಲಾದ ಚರ್ಮದ ಭಾಗಕ್ಕೆ ಹಚ್ಚಿಕೊಳ್ಳಿ. ಇದರಿಂದ ನಿಧಾನವಾಗಿ ಚರ್ಮ ಸಹಜವರ್ಣದತ್ತ ಬದಲಾಗುತ್ತದೆ.
ಊತವನ್ನು ನಿವಾರಿಸುತ್ತದೆ
ಕೆಲವೊಮ್ಮೆ ಪೆಟ್ಟು ಬಿದ್ದು ಅಥವಾ ಬೇರಾವುದೋ ಕಾರಣದಿಂದ ದೇಹದ ಯಾವುದಾದರೂ ಭಾಗಕ್ಕೆ ಬಾವು ಅಥವಾ ಊತ ಬಂದಿದ್ದರೆ ಆ ಸ್ಥಳಕ್ಕೆ ಆಲುಗಡ್ಡೆ ಬೇಯಿಸಿದ್ದ ನೀರಿನಿಂದ ಅದ್ದಿದ ಬಟ್ಟೆಯನ್ನು ಕಟ್ಟುವ ಮೂಲಕ ಕಡಿಮೆಯಾಗುತ್ತದೆ. ಇದಕ್ಕಾಗಿ ಒಂದು ಪಾತ್ರೆಯಲ್ಲಿ ಒಂದು ಅಥವಾ ಎರಡು ಆಲುಗಡ್ಡೆಯನ್ನು ಕತ್ತರಿಸಿ ಚಿಕ್ಕ ತುಂಡುಗಳನ್ನಾಗಿಸಿ ಹಾಕಿ. ಈ ತುಂಡುಗಳ ಒಟ್ಟು ತೂಕದ ಎರಡರಷ್ಟು ತೂಕದ ನೀರನ್ನು ಸೇರಿಸಿ.
ಊತವನ್ನು ನಿವಾರಿಸುತ್ತದೆ
ಉದಾಹರಣೆಗೆ ಐವತ್ತು ಗ್ರಾಂ ಆಲುಗಡ್ಡೆಯಿದ್ದರೆ ನೀರು ನೂರು ಗ್ರಾಂ ಇರಬೇಕು. ಹೆಚ್ಚು ಕಡಿಮೆ ಆಗಬಾರದು. ಈ ನೀರನ್ನು ಚೆನ್ನಾಗಿ ಕುದಿಸಿ ತಣಿಸಿ. ತಣಿದ ನೀರನ್ನು ಸ್ವಚ್ಛವಾದ ಬಟ್ಟೆಯಲ್ಲಿ ಅದ್ದಿ ಬಾವು ಬಂದ ಸ್ಥಳದ ಮೇಲೆ ಇಡಿಯ ರಾತ್ರಿ ಕಟ್ಟುವುದರಿಂದ ಬಾವು ಕಡಿಮೆಯಾಗುತ್ತದೆ.
ಅಲರ್ಜಿಗಳಿಗೆ ಉತ್ತಮವಾಗಿದೆ
ಹಸಿ ಆಲುಗಡ್ಡೆಯ ರಸವನ್ನು ಸೇವಿಸುವುದರಿಂದ ಹಲವು ವಿಧದ ಅಲರ್ಜಿಗಳು ದೂರವಾಗುತ್ತವೆ.
ಮೂಲವ್ಯಾಧಿಯನ್ನು ಗುಣಪಡಿಸುತ್ತದೆ
ಮೂಲವ್ಯಾಧಿಯ ರೋಗಿಗಳು ಆಲುಗಡ್ಡೆಯನ್ನು ಚೆನ್ನಾಗಿ ಬೇಯಿಸಿ ತಯಾರಿಸಿದ ಸೂಪ್ ಕುಡಿಯುವ ಮೂಲಕ ಶಮನ ಪಡೆಯಬಹುದು.
ನೆರಿಗೆಗಳನ್ನು ನಿವಾರಿಸುತ್ತದೆ
ಹಸಿ ಆಲುಗಡ್ಡೆಯ ರಸದಿಂದ ನೆರಿಗೆಗಳಿರುವ ಭಾಗದಲ್ಲಿ ನಯವಾಗಿ ಮಸಾಜ್ ಮಾಡಿದರೆ ನೆರಿಗೆಗಳು ದೂರವಾಗುತ್ತವೆ.
ಚರ್ಮದ ಕಾಂತಿ ಹೆಚ್ಚಲು
ಆಲುಗಡ್ಡೆ ಬೇಯಿಸಿದ್ದ ನೀರನ್ನು ಚೆಲ್ಲದೇ ಸ್ನಾನ ಮಾಡಲು ತೆಗೆದಿರಿಸಿದ ನೀರಿನಲ್ಲಿ ಸೇರಿಸಿ ಸ್ನಾನ ಮಾಡುವ ಮೂಲಕ ಚರ್ಮದ ಕಾಂತಿ ಹೆಚ್ಚುತ್ತದೆ.