Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಪ್ರಥಮ ಚಿಕಿತ್ಸೆ ದಿನಾಚರಣೆ: ಇಂತಹ ಟಿಪ್ಸ್ ನೆನಪಿರಲಿ
ಪ್ರಥಮ ಚಿಕಿತ್ಸೆ ಎಂಬುದು ಮನುಷ್ಯನಿಗೆ ಸಂಜೀವಿನಿಯಂತಹ ಚಿಕಿತ್ಸೆಯಾಗಿರುತ್ತದೆ. ಎಷ್ಟೋ ಬಾರಿ ಪ್ರಥಮ ಚಿಕಿತ್ಸೆಗಳು ಮನುಷ್ಯನ ಜೀವನದ ಅಳಿವು ಮತ್ತು ಉಳಿವನ್ನು ನಿರ್ಧರಿಸಿ ಬಿಡುತ್ತವೆ. ಇಂತಹ ಚಿಕಿತ್ಸೆಗಳ ಕುರಿತು ಎಲ್ಲರೂ ಕಡ್ಡಾಯವಾಗಿ ತಿಳಿದುಕೊಂಡಿರಬೇಕು. ಪ್ರಥಮ ಚಿಕಿತ್ಸೆಯನ್ನು ಕೆಲವೊಮ್ಮೆ ಒಬ್ಬರು ಇನ್ನೊಬ್ಬರಿಗೆ ನೀಡಬಹುದು. ಇನ್ನೂ ಕೆಲವೊಮ್ಮೆ ನಾವೇ ಸ್ವತಃ ಮಾಡಿಕೊಳ್ಳಬಹುದು.
ಈ ಅಂಕಣದಲ್ಲಿ ನೀವು ಶೀಘ್ರವಾಗಿ ಮತ್ತು ತುರ್ತಾಗಿ ನೀಡಬಹುದಾದ ಪ್ರಥಮ ಚಿಕಿತ್ಸೆಗಳ ಸಲಹೆಯನ್ನು ಕುರಿತು ತಿಳಿದುಕೊಳ್ಳಲಿದ್ದೀರಿ. ಇಂತಹ ಹಲವು ಬಗೆಯ ಪ್ರಥಮ ಚಿಕಿತ್ಸೆಗಳನ್ನು ಮತ್ತು ಅವುಗಳನ್ನು ನೀಡಬಹುದಾದ ಪರಿಸ್ಥಿತಿಗಳ ಕುರಿತು ಇಂದು ನಾವು ತಿಳಿಸಿಕೊಡುತ್ತೇವೆ. ಈ ಪ್ರಥಮ ಚಿಕಿತ್ಸೆಯನ್ನು ಮನೆಯಲ್ಲಿ ಮತ್ತು ಕೆಲಸದ ಸ್ಥಳದಲ್ಲಿ ಎರಡೂ ಕಡೆ ನೀಡಬಹುದು.
ಇದಕ್ಕಾಗಿ ನೀವು ಮಾರುಕಟ್ಟೆಯಲ್ಲಿ ದೊರೆಯುವ ಪ್ರಥಮ ಚಿಕಿತ್ಸೆ ಪೆಟ್ಟಿಗೆ ಮೇಲೆಯೇ ಅವಲಂಬಿಸಬೇಕಾಗಿಲ್ಲ, ಬದಲಿಗೆ ಮನೆಯಲ್ಲಿಯೇ ದೊರೆಯುವ ಕೆಲವೊಂದು ವಸ್ತುಗಳನ್ನು ಬಳಸಿಕೊಂಡು ಈ ಪ್ರಥಮ ಚಿಕಿತ್ಸೆಯನ್ನು ನೀವು ಸುಟ್ಟ ಗಾಯಗಳಿಗೆ ನೀಡಿಕೊಳ್ಳಬಹುದು...

ಪ್ರಜ್ಞೆ ತಪ್ಪಿದಾಗ ಮತ್ತು ಉಸಿರಾಡದೆ ಇದ್ದಾಗ
ಪ್ರಜ್ಞೆ ತಪ್ಪಿದ ವ್ಯಕ್ತಿಯನ್ನು ಮೊದಲು ನೆಲದ ಮೇಲೆ ಮುಖವನ್ನು ಕೆಳಗೆ ಮಾಡಿ ಮಲಗಿಸಿ. ಆತನ ಎದೆಯ ಮಧ್ಯ ಭಾಗದಲ್ಲಿ ಆತನಿಗೆ ನಿಧಾನವಾಗಿ ಒತ್ತಿ. ಈ ಒತ್ತುವಿಕೆಯಿಂದ ಆತನ ಹೃದಯದಲ್ಲಿ ರಕ್ತ ಪರಿಚಲನೆ ಎಂದಿನಂತೆ ಆರಂಭಗೊಳ್ಳುತ್ತದೆ. ಆದರೆ ಈ ಪ್ರಥಮ ಚಿಕಿತ್ಸೆಯನ್ನು ನೀಡಿದ ಮೇಲೆ ವೈದ್ಯರಿಂದ ಪರೀಕ್ಷಿಸುವುದನ್ನು ಮರೆಯಬೇಡಿ.

ಉಸಿರುಗಟ್ಟಿಸುವಿಕೆ
ಇದು ಸಾಮಾನ್ಯವಾಗಿ ಊಟ ಮಾಡುವಾಗ ಮಾತನಾಡುವುದರಿಂದ ಅಥವಾ ನಗುವುದರಿಂದ ಸಂಭವಿಸುತ್ತದೆ. ಆಗ ಬೆನ್ನ ಮೇಲೆ ಚೆನ್ನಾಗಿ ತಡವಿ. ಇದರಿಂದ ಗಂಟಲಿನಲ್ಲಿ ಸಿಕ್ಕಿಹಾಕಿಕೊಂಡಿರುವ ಆಹಾರವು ಅನ್ನ ನಾಳದಲ್ಲಿ ಸರಾಗವಾಗಿ ಇಳಿದು ಹೋಗುತ್ತದೆ.

ರಕ್ತ ಸ್ರಾವವನ್ನು ತಡೆಯಲು
ಗಾಯದ ಮೇಲೆ ಒತ್ತಡ ಹಾಕಿ, ಬಿಗಿಯಾಗಿ ಹಿಡಿದುಕೊಳ್ಳಿ. ಇದರಿಂದ ರಕ್ತ ಸ್ರಾವ ನಿಲ್ಲುತ್ತದೆ. ಜೊತೆಗೆ ಗಾಯವು ಸಹ ಬೇಗ ಒಣಗುತ್ತದೆ. ಇದು ರಕ್ತ ಸ್ರಾವವನ್ನು ಬೇಗ ತಡೆಯುತ್ತದೆ.

ಸುಟ್ಟ ಗಾಯಗಳು
ಸುಟ್ಟ ಗಾಯದ ಮೇಲೆ ಐಸ್ ಕ್ಯೂಬ್ ಅಥವಾ ಟೂಥ್ ಪೇಸ್ಟ್ ಅನ್ನು ತಕ್ಷಣ ಇಡಿ ಅಥವಾ ಲೇಪಿಸಿ. ಇದು ಗುಳ್ಳೆಗಳು ಬರದಂತೆ ತಡೆಯುತ್ತದೆ. ಇದು ತುಂಬಾ ಪ್ರಯೋಜನಕಾರಿಯಾದ ಪ್ರಥಮ ಚಿಕಿತ್ಸೆಗಳಲ್ಲಿ ಒಂದಾಗಿದೆ.

ಮೂಳೆ ಮುರಿತ
ಮುರಿದ ಭಾಗವನ್ನು ಯಾವುದೇ ಕಾರಣಕ್ಕು ಅಲುಗಾಡಿಸಬೇಡಿ. ಇದರಿಂದ ಪರಿಸ್ಥಿತಿ ಮತ್ತಷ್ಟು ಹಾಳಾಗುತ್ತದೆ. ಮೂಳೆ ಮುರಿದ ಭಾಗವನ್ನು ಅಲುಗಾಡದಂತೆ ಬಟ್ಟೆಯಲ್ಲಿ ಕಟ್ಟಿಕೊಂಡು, ಊತ ಬರುವ ಮೊದಲು ವೈದ್ಯರ ಬಳಿಗೆ ತಪಾಸಣೆಗೆ ಹೋಗಿ.

ಹೃದಯಾಘಾತ
ಹೃದಯಾಘಾತಕ್ಕೆ ಒಳಗಾದ ವ್ಯಕ್ತಿಯು ಆ ಕ್ಷಣದಲ್ಲಿ ಕುಳಿತಿರುವಂತೆ ನೋಡಿಕೊಳ್ಳಿ. ಇದರಿಂದ ಹೃದಯದ ಮೇಲೆ ಮತ್ತಷ್ಟು ಒತ್ತಡ ಬೀಳುವುದು ತಪ್ಪುತ್ತದೆ. ರೋಗಿಗೆ ಪ್ರಥಮ ಚಿಕಿತ್ಸೆಯನ್ನು ನೀಡುತ್ತಿರುವುದು ಆತನ ಒಳ್ಳೆಯದಕ್ಕೆ ಎಂಬುದನ್ನು ಮನವರಿಕೆ ಮಾಡಿಕೊಡಿ. ಅದಷ್ಟು ಅವರ ಉದ್ವಿಗ್ನತೆಯನ್ನು ಕಡಿಮೆ ಮಾಡಿ.



Click it and Unblock the Notifications


