Just In
- 20 min ago ದಿನ ಭವಿಷ್ಯ ಮಾರ್ಚ್ 29: ಶುಕ್ರವಾರದ ಈ ದಿನ ದ್ವಾದಶ ರಾಶಿಗಳಿಗೆ ಹೇಗಿರಲಿದೆ?
- 40 min ago ಏಪ್ರಿಲ್ನಲ್ಲಿ 14 ದಿನ ರಜೆ, ಏಪ್ರಿಲ್ 1ಕ್ಕೆ ಬ್ಯಾಂಕ್ಗಳಿಗೆ ರಜೆ ಇರಲು ಕಾರಣವೇನು?
- 1 hr ago ಹೋಳಿ ದಿನ ಸ್ಕೂಟಿಯಲ್ಲಿ ಟೈಟಾನಿಕ್ ಪೋಸ್ ನೀಡಿ ದೊಪ್ಪೆಂದು ಬಿದ್ದ ಹುಡುಗಿಗೆ ಬಿತ್ತು ದುಬಾರಿ ಫೈನ್
- 1 hr ago ಗಾಯ ಗುಣವಾಗಲು, ದೃಷ್ಟಿ ಸುಧಾರಣೆ ಸೇರಿ ಕೀವಿ ಹಣ್ಣಿನ ಲಾಭ ಎಷ್ಟಿದೆ ಗೊತ್ತಾ?
Don't Miss
- Movies Nannamma Superstar: ಬಿಗ್ ಬಾಸ್ ಸಂಗೀತಾ ಹೊಟ್ಟೆಗೆ ಏನ್ ತಿಂತಾರೆ? ಮೃದಿನಿಗೆ ಕಾಡಿದ ದೊಡ್ಡ ಪ್ರಶ್ನೆ
- News ಮಠಗಳಿಗೆ ಭೇಟಿ ನೀಡಿ ಸ್ವಾಮೀಜಿಗಳ ಆಶೀರ್ವಾದ ಪಡೆದ ಡಾ. ಕೆ. ಸುಧಾಕರ್
- Sports ರೋಹಿತ್ vs ಹಾರ್ದಿಕ್: ಸತತ ಸೋಲಿನ ನಡುವೆಯೇ ಮುಂಬೈ ಇಂಡಿಯನ್ಸ್ ಇಬ್ಭಾಗ!?
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಈರುಳ್ಳಿಯಲ್ಲಿರುವ ಅತ್ಯದ್ಭುತ ಗುಣ ನಿಮಗೆ ತಿಳಿದಿದೆಯೇ?
ಒಂದು ಉತ್ತಮ ಅಡುಗೆ ಸಿದ್ಧ ಪಡಿಸಬೇಕು ಎಂದರೆ ಈರುಳ್ಳಿ ಅತ್ಯಗತ್ಯ.ಈರುಳ್ಳಿ ಇಲ್ಲದ ಖಾದ್ಯದಲ್ಲಿ ರುಚಿ ಕಾಣುವುದಿಲ್ಲ.ಹಬ್ಬ ಹರಿದಿನಗಳನ್ನು ಬಿಟ್ಟರೆ ಉಳಿದೆಲ್ಲ ದಿನಗಳು ಈರುಳ್ಳಿ ಪ್ರತಿಯೊಬ್ಬರಿಗೂ ಬೇಕೇಬೇಕು. ಈರುಳ್ಳಿ ಬೆಲೆ ಗಗನಕ್ಕೆ ಏರಿರಬಹುದು, ಈರುಳ್ಳಿ ಹೆಚ್ಚುವವರ ಜೊತೆ ಕೊಳ್ಳುವವರಿಗೂ ಕಣ್ಣೀರು ತರಿಸುತ್ತಿರಬಹುದು.
ಆದರೆ ಈರುಳ್ಳಿಯಲ್ಲಿ ಎಷ್ಟೊಂದು ಔಷಧೀಯ ಗುಣಗಳಿವೆ ಎಂಬುದರ ಬಗ್ಗೆ ಗಮನ ಹರಿಸಲೇ ಬೇಕು. ಈರುಳ್ಳಿ ಒಂದು ಉತ್ತಮ ಮನೆಮದ್ದು. ಇದರಿಂದ ಸಾಕಷ್ಟು ರೋಗಗಳನ್ನು ತಡೆಗಟ್ಟಬಹುದು. ಆರೋಗ್ಯವನ್ನು ಕಾಪಾಡುವಲ್ಲಿ ಈರುಳ್ಳಿಯ ಪಾತ್ರ ಮಹತ್ವಪಡೆದಿದೆ.
ಈರುಳ್ಳಿ ದೇಹಕ್ಕೆ ಆರೋಗ್ಯವನ್ನು ನೀಡುತ್ತದೆ.ಇದರಿಂದ ಸಾಮಾನ್ಯ ಕಾಯಿಲೆಗಳಾದ ತಂಡಿ, ಕೆಮ್ಮು, ಸೋಂಕುಗಳು ಮತ್ತು ಗಂಟಲು ಊತ, ಉಸಿರಾಟದ ತೊಂದರೆ,ಅಸ್ತಮ ಇವುಗಳನ್ನು ಗುಣಪಡಿಸಿಕೊಳ್ಳಬಹುದು. ಈರುಳ್ಳಿ ರಕ್ತಹೀರುವ ಕೀಟಗಳನ್ನು ಕೊಲ್ಲುವ ಗುಣವನ್ನು ಹೊಂದಿದೆ. ಕಣ್ಣಲ್ಲಿ ನೀರು ತರಿಸಿದರೂ ಆರೋಗ್ಯ ಕಾಪಾಡಿಕೊಳ್ಳಲು ನೈಸರ್ಗಿಕವಾಗಿ ದೊರೆತ ಕೊಡುಗೆ ಎನ್ನಬಹುದು. ಇದರ ಬಗ್ಗೆ ಹೆಚ್ಚಿನ ಮಾಹಿತಿಗೆ ಮುಂದೆ ಓದಿ:
ಹೃದಯದ ಆರೋಗ್ಯಕ್ಕೆ ಒಳ್ಳೆಯದು:
ಈರುಳ್ಳಿಯು ಹೃದಯದ ರಕ್ತನಾಳದ ಆರೋಗ್ಯಕ್ಕೆ ಬಹಳ ಒಳ್ಳೆಯದು. ಇದು ಕೊಲೆಸ್ಟರಾಲಿನ ಉತ್ಕರ್ಷಣ (ಆಕ್ಸಿಡೇಶನ್)ವನ್ನು ಕಡಿಮೆಮಾಡಿ, ಕೊರೋನರಿ ಹೃದಯರೋಗದ ಅಪಾಯವನ್ನು ಕಡಿಮೆಮಾಡುತ್ತದೆ.
ರಕ್ತದೊತ್ತಡದ ಸುಧಾರಣೆ:
ಈ ಸಸ್ಯದಲ್ಲಿರುವ ಸಲ್ಫರ್ ಸಂಯುಕ್ತಗಳಿಂದ ರಕ್ತದೊತ್ತಡದ ಮಟ್ಟವನ್ನು ಕಡಿಮೆ ಮಾಡಿ ನಿಯಂತ್ರಿಸುವಲ್ಲಿ ಸಹಾಯಮಾಡುತ್ತದೆ.
ಕೊಲೆಸ್ಟರಾಲ್ ಮಟ್ಟಡ ನಿಯಂತ್ರಣ:
ಈರುಳ್ಳಿಯು ಕೊಲೆಸ್ಟರಾಲ್ ಮಟ್ಟವನ್ನೂ ಸಹ ಕಡಿಮೆಮಾಡಲು ಸಹಾಯಮಾಡುತ್ತದೆ.
ಮಧುಮೇಹದ ನಿಯಂತ್ರಣ:
ಈ ಸಸ್ಯದಲ್ಲಿರುವ ಕ್ರೋಮಿಯುಮ್ ಅಂಶವು ಮಧುಮೇಹಿಗಳ ಆರೋಗ್ಯಕ್ಕೆ ಅತ್ಯಂತ ಪ್ರಯೋಜನಕಾರಿಯಾಗಿದೆ. ಇದು ರಕ್ತದಲ್ಲಿರುವ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ ಮತ್ತು ಗ್ಲೂಕೋಸ್ ಸಹಿಷ್ಣುತೆಯನ್ನು ಸುಧಾರಿಸುತ್ತದೆ. ಇದರಲ್ಲಿರುವ ಅಲ್ಲಿಲ್ ಪ್ರೊಪಿಲ್ ಡೈಸಲ್ಫೈಡ್(Allyl propyl disulphide) ಕೂಡ ರಕ್ತದಲ್ಲಿರುವ ಸಕ್ಕರೆಯ ಮಟ್ಟ ಕಡಿಮೆಯಾಗಲು ಸಹಕಾರಿಯಾಗುತ್ತದೆ.
ಶೀತ ಮತ್ತು ಪ್ಲೂ:
ಇದರಲ್ಲಿರುವ ಬ್ಯಾಕ್ಟೀರಿಯಾ-ವಿರೋಧಿ ಗುಣಗಳಿಂದ ಶೀತ ಮತ್ತು ಫ್ಲೂ ರೋಗಗಳ ವಿರುದ್ಧ ಹೋರಾಡಲು ಸಹಾಯಮಾಡುತ್ತದೆ.
ಜೀರ್ಣಕ್ರಿಯೆ ಉತ್ತಮಗೊಳ್ಳುವುದು:
ಬ್ಯಾಕ್ಟೀರಿಯಾ-ವಿರೋಧಿ ಗುಣಗಳಿಂದ ಅಜೀರ್ಣಕ್ಕೆ ಸಂಭಂದಪಟ್ಟ ಪರಿಸ್ಥಿತಿಯನ್ನು ಸುಧಾರಿಸುತ್ತದೆ.
ಪ್ರತಿರಕ್ಷಣೆಯ ಗುಣ:
ಇದರಲ್ಲಿರುವ ವಿಟಮಿನ್ ಸಿ ಪ್ರತಿರಕ್ಷಣೆಯನ್ನು ಅಂದರೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
ದೊಡ್ಡಕರುಳಿನ ಕ್ಯಾನ್ಸರ್:
ಈರುಳ್ಳಿಯಲ್ಲಿರುವ ಪೆಕ್ಟಿನ್ (ನೀರಿನಲ್ಲಿ ಕರಗುವ ಕೊಲ್ಲೈಡಾಲ್ ಕಾರ್ಬೊಹೈಡ್ರೇಟ್ - ಶರ್ಕರಪಿಷ್ಟ) ಕ್ಯಾನ್ಸರ್ ರೋಗದ ವೃದ್ಧಿಯನ್ನು ತಡೆಯುವುದಲ್ಲದೆ ವಿಶೇಷವಾಗಿ ಕೊಲೋನ್ ಕ್ಯಾನ್ಸರಿನ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ.
ಸಂಧಿವಾತ ಮತ್ತು ಆಸ್ತಮಾ:
ಈರುಳ್ಳಿಯಲ್ಲಿರುವ ಕ್ವೆರ್ಸೆಟಿನ್(Quercetin) ಉರಿಯೂತದ ವಿರುದ್ಧ ಮತ್ತು ಅಲರ್ಜಿ ವಿರುದ್ಧದ ಹೋರಾಡುವ ಗುಣಗಳನ್ನು ಹೊಂದಿದೆ. ಇದು ಸಂಧಿವಾತ ಮತ್ತು ಅಸ್ತಮಾ ಚಿಕಿತ್ಸೆಗಳಿಗೆ ಒಳ್ಳೆಯ ತರಕಾರಿಯಾಗಿದೆ.
ಚಯಾಪಚಯ(ಮೆಟಬಾಲಿಸಮ್) ಕ್ರಿಯೆ:
ಇದು ಚಯಾಪಚಯ ಕ್ರಿಯೆಯನ್ನು ನಿಯಂತ್ರಣಮಾಡುವುದಕ್ಕೆ ಮತ್ತು ಪೌಷಿಕಾಂಶಗಳನ್ನು ಇರಿಸಿಕೊಳ್ಳುವುದಕ್ಕೆ ಒಳ್ಳೆಯ ಆಹಾರ.
ಕಣ್ಣುಗಳು:
ಈರುಳ್ಳಿ ಕಣ್ಣಿನ ಕಾಯಿಲೆ ಮತ್ತು ಕಣ್ಣಿನ ಸಮಸ್ಯೆಗಳ ವಿರುದ್ಧ ಒಳ್ಳೆಯ ಆಹಾರವಾಗಿದೆ.
ಸುಕ್ಕು ತಡೆಯಲು ಸಹಾಯಕಾರಿ:
ಇದರಲ್ಲಿರುವ ಅಲ್ಲಿಸಿನ್ ಅಂಶವು ತ್ವಚೆಯಲ್ಲಿ ಸುಕ್ಕು ಬರುವುದನ್ನು ತಡೆದು ತ್ವಚೆಯ ಆರೋಗ್ಯವನ್ನು ಕಾಪಾಡುತ್ತದೆ.
ಮನೆಮದ್ದು:
ಪ್ರಾಚೀನ ಕಾಲದಿಂದಲೂ ಈರುಳ್ಳಿ ಔಷಧೀಯ ಗುಣ ಹೊಂದಿದೆ ಎಂದು ಸಾಬೀತಾಗಿದೆ.ವಿಶ್ವ ಅರೋಗ್ಯ ಸಂಸ್ಥೆ ಕೂಡ ಈರುಳ್ಳಿ ಹಸಿವು ಕಡಿಮೆ ಮಾಡಿ ಅಪಧಮನಿ ಕಾಠಿಣ್ಯ ಹೊಂದದಂತೆ ನೋಡಿಕೊಳ್ಳುತ್ತದೆ ಎಂದು ತಿಳಿಸಿದೆ.ಅರೋಗ್ಯ ತಜ್ಞರು ಈರುಳ್ಳಿಯಿಂದ ಅಸ್ತಮ, ಅಲರ್ಜಿ, ನೆಗಡಿ ಸಂಬಂಧಿತ ಕೆಮ್ಮು, ಶೀತ ಇವುಗಳಿಂದ ಬಿಡುಗಡೆ ದೊರೆಯುತ್ತದೆ ಎಂಬುವುದನ್ನು ಒಪ್ಪಿಕೊಳ್ಳುತ್ತಾರೆ.
ಈರುಳ್ಳಿಯಲ್ಲಿರುವ ಗುಣಗಳು:
ಈರುಳ್ಳಿಯಲ್ಲಿರುವ ಗಂಧಕದ ಸಂಯುಕ್ತಗಳು ಮತ್ತು ಸಾರಭೂತ ತೈಲಗಳು ಆರೋಗ್ಯಕ್ಕೆ ಹೆಚ್ಚು ಉಪಯುಕ್ತ ಎಂದು ಹೇಳಲಾಗಿದೆ.ಈರುಳ್ಳಿಯನ್ನು ಔಷಧೀಯ ಗುಣಗಳಿಗಾಗಿ ಅನೇಕ ಜನರು ಉಪಯೋಗಿಸುತ್ತಿದ್ದಾರೆ
ಈರುಳ್ಳಿ ಬೆಳೆ:
ಈರುಳ್ಳಿಯಲ್ಲಿ ಕ್ಯಾಲ್ಸಿಯಂ,ಮೆಗ್ನಿಷ್ಯಿಯಂ,ಸೋಡಿಯಂ,ಪೊಟಾಷ್ಯಿಯಂ,ಸೇಲೆನಿಯಂ ಮತ್ತು ರಂಜಕ ಇವೆ.ಈರುಳ್ಳಿಯಲ್ಲಿರುವ ಜೀವವಿರೋಧಿ ಗುಣ ಮನೆಯಲ್ಲಿ ಫಂಗಸ್ ಬರದಂತೆ ತಡೆಯಲು ಸಹಕಾರಿಯಾಗಿದೆ.ಈರುಳ್ಳಿಯನ್ನು ತೇವಭರಿತ ನೀರಿರುವ ಜಾಗದಲ್ಲಿ ಬೆಳೆಯಬಹುದು.ನೀವು ನಿಮ್ಮ ಮನೆಯ ಹಿಂಭಾಗದಲ್ಲೂ ಕೂಡ ಇದನ್ನು ಬೆಳೆಯಬಹುದು.ವಿಶ್ವದಾದ್ಯಂತ ಅನೇಕ ಖಾದ್ಯ ತಯಾರಿಸಲು ಈರುಳ್ಳಿಯನ್ನು ಬಳಸುತ್ತಾರೆ.ಇದನ್ನು ಒಡನಾಡಿ ಸಸ್ಯ ಎಂದು ಕರೆಯುತ್ತಾರೆ ಏಕೆಂದರೆ ಇದರ ಸುತ್ತ ಇತರ ತರಕಾರಿಗಳು ಮತ್ತು ಸಸ್ಯಗಳನ್ನು ಬೆಳೆದರೆ ಇದು ಚೆನ್ನಾಗಿ ಬೆಳೆಯುತ್ತದೆ.
ದಂತ ಮತ್ತು ಮೌಖಿಕ ಸೊಂಕುಗಳಿಗೆ ಈರುಳ್ಳಿ ಒಳ್ಳೆಯದು:
ಈರುಳ್ಳಿಯನ್ನು ಹೆಚ್ಚಾಗಿ ದಂತಕ್ಷಯ ಮತ್ತು ಸೋಂಕುಗಳಿಗೆ ಪರಿಹಾರವಾಗಿ ಬಳಸಲಾಗುತ್ತದೆ. ಹಸಿ ಈರುಳ್ಳಿಯನ್ನು 2 -3 ನಿಮಿಷ ಜಗಿಯುವುದರಿಂದ ಹಲ್ಲಿನಲ್ಲಿರುವ ಕೀಟಾಣುಗಳು ಕಡಿಮೆಯಾಗುತ್ತವೆ.
ಹೃದಯ ರೋಗಗಳಿಗೆ ಚಿಕಿತ್ಸಕ:
ಈರುಳ್ಳಿ ರಕ್ತವನ್ನು ತೆಳುವಾಗಿಸುತ್ತದೆ,ಇದರಿಂದ ರಕ್ತ ಹೆಪ್ಪುಗಟ್ಟಿ ಹೃದಯ ರೋಗ ಮತ್ತು ಹೃದಯ ಸಂಬಂಧಿ ಕಾಯಿಲೆಗಳನ್ನು ತಡೆಯಬಹುದು.
ಹೊಳೆಯುವ ಚರ್ಮಕ್ಕೆ:
ಈರುಳ್ಳಿಯನ್ನು ಜೇನು ಅಥವಾ ಆಲಿವ್ ಎಣ್ಣೆಯೊಂದಿಗೆ ಮಿಶ್ರ ಮಾಡಿ ಹಚ್ಚುವುದರಿಂದ ಮೊಡವೆಗಳು ಮಾಯವಾಗುತ್ತವೆ.
ಕೆಮ್ಮಿಗೆ ಔಷಧಿ:
ಈರುಳ್ಳಿ ರಸ ಮತ್ತು ಜೇನಿನ ರಸವನ್ನು ಸಮಪ್ರಮಾಣದಲ್ಲಿ ಮಿಶ್ರ ಮಾಡಿ ಸೇವಿಸುವುದರಿಂದ ಕೆಮ್ಮಿಗೆ ಮುಕ್ತಿ ದೊರಕುತ್ತದೆ.
ಕೀಟ ನಿವಾರಕವಾಗಿ ಬಳಸಲಾಗುತ್ತದೆ:
ಈರುಳ್ಳಿ ರಸವನ್ನು ಜೇನು ಕಡಿದ ತಕ್ಷಣ ಆ ಜಾಗಕ್ಕೆ ಹಚ್ಚಬಹುದು.ಈರುಳ್ಳಿ ರಸ ಅಥವಾ ಪೇಸ್ಟ್ ಚೇಳು ಅಥವಾ ಯಾವುದೇ ರೀತಿಯ ಕೀಟ ಕಡಿದಾಗ ಹಚ್ಚಿದರೆ ತಕ್ಷಣ ಪರಿಣಾಮ ಬೀರುತ್ತದೆ.
ಕ್ಯಾನ್ಸರ್ ಗೆ ಮದ್ದು:
ಈರುಳ್ಳಿಯಲ್ಲಿ ಕ್ಯಾನ್ಸರ್ ಸೆಲ್ಸ್ ಅನ್ನು ವೃದ್ಧಿಸದಂತೆ ತಡೆಗಟ್ಟುವ ಶಕ್ತಿ ಇದೆ.
ಕಿವಿ ನೋವನ್ನು ನಿವಾರಿಸುತ್ತದೆ:
ನೀವು ಕಿವಿ ನೋವಿನಿಂದ ಬಳಲುತ್ತಿದ್ದರೆ ಒಂದೆರಡು ಹನಿ ಈರುಳ್ಳಿ ರಸ ಕಿವಿ ನೋವನ್ನು ನಿವಾರಿಸುವ ಗುಣವನ್ನು ಹೊಂದಿದೆ.ಕಿವಿಯಲ್ಲಿ ಗೊಯ್ ಎಂಬ ಶಬ್ದ ಬರುತ್ತಿದ್ದರೆ ಕಿವಿಗೆ ಹತ್ತಿ ಬಟ್ಟೆಯಲ್ಲಿ ಈರುಳ್ಳಿ ರಸ ಹಾಕಿ ಎರಡು ಹನಿ ಬಿಟ್ಟರೆ ತಕ್ಷಣಕ್ಕೆ ಕಡಿಮೆ ಆಗುತ್ತದೆ.
ಈರುಳ್ಳಿ ಲೈಂಗಿಕಾಸಕ್ತಿ ವೃದ್ಧಿಸುತ್ತದೆ:
ಈರುಳ್ಳಿ ಆರೋಗ್ಯಕರ ಸೆಕ್ಸ್ ಆಸಕ್ತಿ ವೃದ್ಧಿಸುತ್ತದೆ.ಒಂದು ಚಮಚ ಈರುಳ್ಳಿ ರಸವನ್ನು ಒಂದು ಚಮಚ ಶುಂಠಿ ರಸದೊಂದಿಗೆ ಸೇವಿಸಿದರೆ ಲೈಂಗಿಕ ಆಸಕ್ತಿ ಆರೋಗ್ಯಕರವಾಗಿ ಹೆಚ್ಚುತ್ತದೆ.
ರಕ್ತ ಕ್ಷೀಣತೆ ತಡೆಯಬಹುದು:
ಬೆಲ್ಲ ಮತ್ತು ನೀರಿನೊಂದಿಗೆ ಈರುಳ್ಳಿ ತಿನ್ನುವುದರಿಂದ ರಕ್ತ ಕ್ಷೀಣತೆ ತಡೆಯಬಹುದು.
ಹೊಟ್ಟೆ ನೋವನ್ನು ತಡೆಯುತ್ತದೆ:
ಈರುಳ್ಳಿಯಲ್ಲಿ ಬ್ಯಾಕ್ಟೀರಿಯ ವಿರೋಧಿ ಗುಣ ಇರುವುದರಿಂದ ಅದು ಹೊಟ್ಟೆ ಮತ್ತು ಜಠರ ಸಂಬಂಧಿ ಸಮಸ್ಯೆಗಳಿಗೆ ಪರಿಹಾರ ಒದಗಿಸುತ್ತದೆ.
ಮೂತ್ರದ ಅಸ್ವಸ್ಥತೆಗೆ ಚಿಕಿತ್ಸೆ ಒದಗಿಸುತ್ತದೆ:
ಮೂತ್ರ ವಿಸರ್ಜಿಸುವಾಗ ಉರಿ ಅನುಭವಿಸುತ್ತಿದ್ದರೆ ಈರುಳ್ಳಿ ಮುಕ್ತಿ ನೀಡುತ್ತದೆ.6 ರಿಂದ 7 ಗ್ರಾಂ ಈರುಳ್ಳಿಯನ್ನು ನೀರಿನಲ್ಲಿ ಕುದಿಸಿ ಕುಡಿದರೆ ಈ ಸಮಸ್ಯೆಯಿಂದ ಪರಿಹಾರ ಕಂಡುಕೊಳ್ಳಬಹುದು.
ಈರುಳ್ಳಿಯಲ್ಲಿ ಸಲ್ಫರ್ ಅಂಶ ಹೆಚ್ಚಿರುತ್ತದೆ:
ವೈದ್ಯಕೀಯ ಅಧ್ಯಯನಗಳ ಪ್ರಕಾರ ಸಲ್ಫರ್ ಸಂಯುಕ್ತಗಳು ಅಸ್ತಮಕ್ಕೆ ಕಾರಣವಾದ ಜೀವರಾಶಿ ಸರಣಿಗಳನ್ನು ನಿಲ್ಲಿಸುತ್ತವೆ .ಈರುಳ್ಳಿ ತೀವ್ರ ಕೆಮ್ಮು ಬಳಲುತ್ತಿರುವ ರೋಗಿಗೆ ಉತ್ತಮ ಔಷಧಿ. ತಾಜಾ ಈರುಳ್ಳಿ ರಸವನ್ನು ರೋಗಿಗೆ ಸತ್ವ ಮತ್ತು ಶಕ್ತಿ ಮರಳಿ ಬರಲು ಬಳಸಲಾಗುತ್ತದೆ.
ನೆಗಡಿ, ಕೆಮ್ಮು ಕಫಕ್ಕೆ ರಾಮಬಾಣ:
ನೆಗಡಿ, ಕೆಮ್ಮು ಕಫಕ್ಕೆ ಈರುಳ್ಳಿಯ ರಸಕ್ಕೆ (2 ಚಮಚ), ಜೇನು ತುಪ್ಪ (2 ಚಮಚ), 2 ಚಿಟಿಕೆ ಕಾಳುಮೆಣಸಿನ ಹುಡಿ ಬೆರೆಸಿ ನೀಡಿದರೆ ಮಕ್ಕಳಲ್ಲಿ ನೆಗಡಿ, ಕೆಮ್ಮು ಕಫ ಶಮನವಾಗುತ್ತದೆ.
ಮಕ್ಕಳ ಕೆಮ್ಮು ನಿವಾರಣೆಗೆ:
ಪುಟ್ಟ ಮಕ್ಕಳಿಗೆ ಇಡೀ ಬಿಳಿ ಈರುಳ್ಳಿ /ಕೆಂಪು ಈರುಳ್ಳಿಯನ್ನು ಬೇಯಿಸಿ ಅಥವಾ ಸುಟ್ಟು ಸೇವಿಸಲು ನೀಡಿದರೆ ಕೆಮ್ಮು ಕಫ ನಿವಾರಣೆಯಾಗುತ್ತದೆ.
ದೇಹದ ತೂಕ ವೃದ್ಧಿಯಾಗಲು:
ಈರುಳ್ಳಿಯನ್ನು ಕತ್ತರಿಸಿ ಬೆಲ್ಲ , ತುಪ್ಪ ಬೆರೆಸಿ ಸೇವಿಸಿದರೆ ದೇಹದ ತೂಕ ವೃದ್ಧಿಯಾಗುತ್ತದೆ. ಇದು ಜೀರ್ಣಶಕ್ತಿಯನ್ನು ಹೆಚ್ಚಿಸುತ್ತದೆ.
ಈರುಳ್ಳಿ ಚಹಾ:
ಈರುಳ್ಳಿಯ ಬೀಜಗಳಿಂದ ಚಹಾ ಮಾಡಿ ಸೇವಿಸಿದರೆ ನಿದ್ರಾಜನಕವಾಗಿದೆ.
ಈರುಳ್ಳಿ ರಸ:
ಈರುಳ್ಳಿಯ ರಸವನ್ನು ಕಣ್ಣಿಗೆ ಕಾಡಿಗೆಯಂತೆ ಲೇಪಿಸಿದರೆ ಕಣ್ಣಿನ ದೋಷಗಳು ನಿವಾರಣೆಯಾಗುತ್ತವೆ.
ಹೊಟ್ಟೆನೋವು ಶಮನವಾಗುವದಕ್ಕೆ:
ಹೊಟ್ಟೆ ನೋವಿನಿಂದ ಬಳಲುವವರಿಗೆ 4 ಚಮಚ ಈರುಳ್ಳಿ ರಸಕ್ಕೆ 4 ಚಿಟಿಕೆ ಇಂಗು ಬೆರೆಸಿ ಸೇವಿಸಲು ನೀಡಿದರೆ ಹೊಟ್ಟೆ ಉಬ್ಬರ, ಹಾಗೂ ಹೊಟ್ಟೆನೋವು ಶಮನವಾಗುತ್ತದೆ.
ಕಿವಿ ನೋವು:
ಕಿವಿಯಲ್ಲಿ ನೋವಿರುವಾಗ ಈರುಳ್ಳಿ ರಸವನ್ನು ಕುದಿಸಿ 2 ಹುಂಡು ದಿನಕ್ಕೆ 3-4 ಬಾರಿ ಹಾಕಿದರೆ ಕಿವಿಯ ನೋವು ಉರಿಯೂತ ಶಮನವಾಗುತ್ತದೆ.
ಈರುಳ್ಳಿ ಹೂವು:
ಈರುಳ್ಳಿ ಹೂವುಗಳನ್ನು ಸೇವಿಸಿದರೆ ರುಚಿ ಮತ್ತು ಜೀರ್ಣಶಕ್ತಿ ವೃದ್ಧಿಯಾಗುತ್ತದೆ.
ಋತುಚಕ್ರ:
ತಿಂಗಳಿನ ಮುಟ್ಟಿನಲ್ಲಿ ಸಮಸ್ಯೆ ಹೊಂದಿರುವವರು ಪುಟ್ಟ ಈರುಳ್ಳಿಯನ್ನು ಸೇವಿಸಿದರೆ ಋತುಚಕ್ರ ಕ್ರಮಯುತವಾಗಿ ಉಂಟಾಗುತ್ತದೆ.
ರಕ್ತಸ್ರಾವಯುಕ್ತ ಮೂಲವ್ಯಾಧಿ ಶಮನವಾಗಲು:
ಅರ್ಧ ಕಪ್ ಈರುಳ್ಳಿ ಜ್ಯೂಸ್ಗೆ 4 ಚಮಚ ಕಲ್ಲುಸಕ್ಕರೆ ಪುಡಿ ಬೆರೆಸಿ ನಿತ್ಯ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ರಕ್ತಸ್ರಾವಯುಕ್ತ ಮೂಲವ್ಯಾಧಿ ಶಮನವಾಗುತ್ತದೆ.
ಹಲ್ಲುನೋವು:
ಕಪ್ಪು ಜೀರಿಗೆ ಮತ್ತು ಈರುಳ್ಳಿಯನ್ನು ಜಜ್ಜಿ ಅದರ ಹೊಗೆ ಸೇವಿಸಿದರೆ ಹಲ್ಲುನೋವು, ಒಸಡು ಊತ ಶಮನವಾಗುತ್ತದೆ.
ಗಂಟುನೋವು, ಊತ ಶಮನವಾಗಲು:
ಸಾಸಿವೆ ಎಣ್ಣೆ ಮತ್ತು ಈರುಳ್ಳಿ ರಸ ಬೆರೆಸಿ ಬೆಚ್ಚಗೆ ಮಾಡಿ ಗಂಟುನೋವಿಗೆ ಲೇಪಿಸಿದರೆ, ಗಂಟುನೋವು, ಊತ ಶಮನವಾಗುತ್ತದೆ. ದಿನಕ್ಕೆ 3-4 ಬಾರಿ ಲೇಪಿಸಬೇಕು
ಕಾಲಿನ ಒಡಕು ಶಮನವಾಗಲು:
ಚಳಿಯಲ್ಲಿ ಕಾಲು ಒಡೆದರೆ ಈರುಳ್ಳಿಯ ಬಿಲ್ಲೆಯಿಂದ ಕಾಲಿನ ಹಿಮ್ಮಡಿಯನ್ನು ತಿಕ್ಕಿ , ತದನಂತರ ಕೊಬ್ಬರಿ ಎಣ್ಣೆ ಲೇಪಿಸಿದರೆ. ಕಾಲಿನ ಒಡಕು ಶಮನವಾಗುತ್ತದೆ.
ಜೇನುನೊಣ ಇಲ್ಲವೇ ಚೇಳು ಕಚ್ಚಿದಾಗ:
ಜೇನುನೊಣ ಇಲ್ಲವೇ ಚೇಳು ಕಚ್ಚಿದಾಗ ಆ ಭಾಗದ ಮೇಲೆ ಈರುಳ್ಳಿ ಹೋಳನ್ನು ತಿಕ್ಕುವುದರಿಂದ ಉಪಶಮನ ದೊರೆಯುವುದು. ಅಲ್ಲದೆ ಕಿವಿಶೂಲೆಯಲ್ಲಿ ಇದರ ರಸವನ್ನು ಸ್ವಲ್ಪ ಬಿಸಿಮಾಡಿ ಒಂದೆರಡು ಹನಿ ಬಿಟ್ಟರೆ ನೋವು ಬಿಟ್ಟುಹೋಗುವುದು.
ದೇಹದ ರಕ್ತವನ್ನು ವೃದ್ಧಿಸಲು:
ಪ್ರತಿ ದಿನ ಈರುಳ್ಳಿ ಸೇವನೆಯಿಂದ ರಕ್ತ ವೃದ್ಧಿಸುತ್ತದೆ. ಒಂದು ಈರುಳ್ಳಿಯನ್ನು ಸಣ್ಣ ಹೆಚ್ಚಿ ತುಪ್ಪದಲ್ಲಿ ಹುರಿದು ಕೊಟ್ಟಣದ ಅನ್ನದೊಂದಿಗೆ ಕಲಸಿ ತಿಂದರೆ ರಕ್ತಬೇದಿ ಶಮನ.
ವಾಂತಿ ಭೇದಿಗೆ ಒಳ್ಳೆಯದು:
ಒಂದು ಈರುಳ್ಳಿ ಗಡ್ಡೆಯನ್ನು ಕೆಂಡದಲ್ಲಿ ಸುಟ್ಟು ತಿನ್ನುವುದು ಆಮಶಂಕೆ ರೋಗಕ್ಕೆ ಉತ್ತಮ. ಎರಡು ಟೀ ಚಮಚ ಈರುಳ್ಳಿ ರಸ, ತುಪ್ಪದಲ್ಲಿ ಹುರಿದ ಕಡಲೇಕಾಳು ಗಾತ್ರದ ಇಂಗು, ಎರಡು ಟೀ ಚಮಚ ಬಡೇಸೊಪ್ಪಿನ ಪುಡಿ-ಒಟ್ಟಿಗೆ ಕಲಸಿ ಸೇವಿಸುತ್ತ ಬಂದರೆ ವಾಂತಿ ಭೇದಿಗೆ ಒಳ್ಳೆಯದು.