Latest Updates
-
ಜೀವನದಲ್ಲಿ ನೆಮ್ಮದಿ ಬೇಕಾ..? ಈ 5 ಕೆಲಸಗಳನ್ನು ಮಾಡುವಾಗ ಅತಿ ಹೆಚ್ಚು ತಾಳ್ಮೆ ಇರಲಿ! ಸಕ್ಸಸ್ ಮಂತ್ರ ಇಲ್ಲಿದೆ -
ಹೊರಗಿನ ಜ್ಯೂಸ್ ಬಿಡಿ..!! ಬಿಸಿಲಿಗೆ ಕಿಕ್ ಕೊಡೋ ಸ್ಪೆಷಲ್ ಶರಬತ್ತುಗಳಿವು! ಮನೆಯಲ್ಲಿ ಸಿಂಪಲ್ ಆಗಿ ಮಾಡಿ -
Dum Idli: ಇದು ಬ್ರೇಕ್ ಫಾಸ್ಟ್ನ ರಾಜ! ಉಳಿದ ಇಡ್ಲಿಗಳಿಂದ ಸ್ಪೈಸಿ ದಮ್ ಇಡ್ಲಿ.. ಹೋಟೆಲ್ ಶೈಲಿಯಲ್ಲಿ ಮಾಡೋದು ಹೇಗೆ? -
ಯುಗಾದಿ ದಿನ ಈ 5 ಕೆಲಸ ಮಾಡಲೇಬೇಕು! ಪಚಡಿ ತಿನ್ನುವಾಗ ಈ ಶ್ಲೋಕ ಹೇಳಿ.. ಧರ್ಮಸಿಂಧು ರಹಸ್ಯ ಇಲ್ಲಿದೆ -
Ugadi Special Recipes: ನಿಮಿಷಗಳಲ್ಲಿ 3 ಸೂಪರ್ ರೆಸಿಪಿಗಳು! ಅಡುಗೆ ಬಾರದವರಿಗೂ ಇದು ಸುಲಭ -
ಹುಷಾರ್.. ಚೈತ್ರ ನವರಾತ್ರಿ ಬಳಿಕ ಈ ರಾಶಿಯವರಿಗೆ ಸಾಲು ಸಾಲು ಕಷ್ಟ! ಯಾರಿಗೆ ಲಾಭ, ಯಾರಿಗೆ ನಷ್ಟ ತಿಳಿಯಿರಿ -
ಯುಗಾದಿಗೆ ಈ 4 ಖಾದ್ಯಗಳನ್ನು ಮಾಡಲೇಬೇಕು! ನಿಮ್ಮ ಹಬ್ಬ ಇನ್ನಷ್ಟು ಸ್ಪೆಷಲ್.. ಸಂಪೂರ್ಣ ಲಿಸ್ಟ್ ಇಲ್ಲಿದೆ -
ಯುಗಾದಿ ದಿನ.. ಪ್ರೇಮ ಜೀವನದಲ್ಲಿ ಯಾರಿಗೆ ಬೇವು? ಯಾರಿಗೆ ಬೆಲ್ಲ? -
March 19 Horoscope: ಯುಗಾದಿ ದಿನ ಯಾರಿಗೆ ಶುಭದಿನ? -
Ugadi Wishes 2026: ಯುಗಾದಿ 2026ರ ಶುಭಾಶಯಗಳು! ಸ್ನೇಹಿತರು, ಕುಟುಂಬದವರಿಗೆ ಕಳುಹಿಸಲು ಇಲ್ಲಿವೆ 50+ ಸಂದೇಶಗಳು
ವಸಂತ ಮಾಸದಲ್ಲಿ ಈ 11 ಆಹಾರಗಳನ್ನು ಮಿಸ್ ಮಾಡಬೇಡಿ
ಕಾಲಕ್ಕೆ ತಕ್ಕಂತೆ ನಮ್ಮ ಆಹಾರಕ್ರಮದಲ್ಲಿ ಬದಲಾವಣೆ ಮಾಡಿಕೊಳ್ಳಬೇಕು. ಅದರಲ್ಲೂ ಸೀಸನ್ ಫುಡ್ಸ್ ತಿನ್ನಲು ಮಿಸ್ ಮಾಡಿಕೊಳ್ಳಬಾರದು. ಏಕೆಂದರೆ ಆಹಾ ಕಾಲದಲ್ಲಿ ನಮ್ಮ ದೇಹಕ್ಕೆ ಏನೂ ಅವಶ್ಯಕವಿದೆಯೋ ಅದಕ್ಕೆ ತಕ್ಕಂತೆ ಆಯಾ- ಆಯಾ ಕಾಲದಲ್ಲಿ ದೊರೆಯುವ ಪದಾರ್ಥಗಳ ಗುಣ ಲಕ್ಷಣಗಳಿರುತ್ತದೆ.
ಚಳಿಗಾಲದಲ್ಲಿ ಮೈಯನ್ನು ಬಿಸಿ ಮಾಡುವ ಚಳಿಯ ವಿರುದ್ಧ ಹೋರಾಡುವ ಆಹಾರಗಳನ್ನು ತಿನ್ನಬೇಕು. ಉದಾಹರಣೆಗೆ ಕಿತ್ತಳೆ ಹಣ್ಣು ಚಳಿಗಾಲದಲ್ಲಿ ದೊರೆಯುತ್ತದೆ. ಇದು ಚಳಿಗಾಲಕ್ಕೆ ಸೂಕ್ತವಾದ ಆಹಾರವಾಗಿದೆ. ಇದರಲ್ಲಿ ವಿಟಮಿನ್ ಸಿ ಅಧಿಕವಿರುವುದರಿಂದ ಶೀತ, ಕೆಮ್ಮು ಬರದಂತೆ ತಡೆಯುವ ಸಾಮರ್ಥ್ಯ ಹೊಂದಿದೆ. ಬೇಸಿಗೆ ಕಾಲದಲ್ಲಿ ನೀರಿನಂಶ ಅಧಿಕವಿರುವ ಆಹಾರಗಳನ್ನು ತಿನ್ನಬೇಕು. ಬೇಸಿಗೆಯಲ್ಲಿ ದೊರೆಯುವ ಸೀಸನ್ ಫುಡ್ಸ್ ನೀರಿನಂಶವನ್ನು ಅಧಿಕ ಹೊಂದಿರುತ್ತದೆ.
ಇದೀಗ ವಸಂತ ಕಾಲ. ಅತ್ತ ಚಳಿಯೂ ಇಲ್ಲ, ಇತ್ತ ಬಿಸಿಯೂ ಇಲ್ಲ. ಈ ಸಮಯದಲ್ಲಿ ಹೊಸ ಪಸಲಿಗಾಗಿ ಹೂ ಬಿಟ್ಟು ಸುಂದರವಾಗಿ ಕಾಣುತ್ತಿರುತ್ತದೆ. ವಸಂತ ಕಾಲದಲ್ಲಿ ಕಾಯಿಲೆ ಬೀಳದೆ ಆರೋಗ್ಯದಿಂದರಲು ಈ ಆಹಾರಗಳನ್ನು ತಿನ್ನಲು ಮಿಸ್ ಮಾಡಿಕೊಳ್ಳಬೇಡಿ ಓಕೆ?

ಪಲ್ಲೆ ಹೂ (artichokes)
ಇದರಲ್ಲಿ ಅಧಿಕ ನಾರಿನಂಶ, ಕ್ಯಾಲ್ಸಿಯಂ, ಪೊಟಾಷ್ಯಿಯಂ, ರಂಜಕದಂಶವಿದ್ದು ಇದು ವಸಂತಕಾಲದಲ್ಲಿ ದೊರೆಯುವ ತರಕಾರಿಯಾಗಿದೆ.

ಚಿಕ್ಕ ಬೀನ್ಸ್
ಬೀನ್ಸ್ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ. ತೆಳ್ಳಗಿನ, ಚಿಕ್ಕ ಗಾತ್ರದ ಬೀನ್ಸ್ ವಸಂತ ಕಾಲದಲ್ಲಿ ಹೆಚ್ಚಾಗಿ ದೊರೆಯುತ್ತದೆ.

ಮೂಲಂಗಿ
ಕೆಂಪು ಹಾಗೂ ಬಿಳಿ ಬಣ್ಣದ ಮೂಲಂಗಿ ಹಾಗೂ ಅದರ ಸೊಪ್ಪನ್ನು ಈ ಸಮಯದಲ್ಲಿ ಆಹಾರಕ್ರಮದಲ್ಲಿ ಸೇರಿಸುವುದು ಒಳ್ಳೆಯದು. ಇದರಲ್ಲಿ ನಾರಿನಂಶ ಹಾಗೂ antioxidants ಅಧಿಕವಿದೆ.

ಹೊಸ ಆಲೂಗಡ್ಡೆ
ಈ ಸಮಯದಲ್ಲಿ ದೊರೆಯುವ ಹೊಸ ಆಲೂಗಡ್ಡೆ ಕೂಡ ಆರೋಗ್ಯಕರವಾದ ಆಹಾರವಾಗಿದೆ. ಇದನ್ನು ಫ್ರೈ ಮಾಡಿ ತಿನ್ನುವ ಬದಲು ಸಾರು ಮಾಡಿ ತಿನ್ನುವುದು ಒಳ್ಳೆಯದು.

ಲೈಟ್ ಬ್ರೌನ್ ಬಣ್ಣದ ಈರುಳ್ಳಿ
ಇದರಲ್ಲಿ ರಂಜಕದ ಅಂಶ ಅಧಿಕವಿದೆ. ಇದನ್ನು ಉಸಿರಾಟದ ತೊಂದರೆ ಇರುವವರು ತಿನ್ನುವುದು ತುಂಬಾ ಒಳ್ಳೆಯದು. ಏಕೆಂದರೆ ಅಸ್ತಮಾ ಕಾಯಿಲೆ ಉಲ್ಬಣವಾಗದಂತೆ ತಡೆಯುತ್ತದೆ.

ನಿಂಬೆ ಹಣ್ಣು
ನಿಂಬೆ ಹಣ್ಣಿನ ರಸವನ್ನು ಎಲ್ಲಾ ಕಾಲದಲ್ಲೂ ಬಳಸುವುದು ಒಳ್ಳೆಯದು. ಇದರಲ್ಲಿ ವಿಟಮಿನ್ ಸಿ ದೇಹದ ಆರೋಗ್ಯವನ್ನು ವೃದ್ಧಿಸುತ್ತದೆ.

ಸೌತೆಕಾಯಿ
ಸೌತೆಕಾಯಿಯಲ್ಲಿ ಅನೇಕ ಆರೋಗ್ಯಕರ ಗುಣಗಳಿದ್ದು ಪ್ರಮುಖವಾಗಿ ವಸಂತಕಾಲದಲ್ಲಿ ಹಾಗೂ ಬೇಸಿಗೆಯಲ್ಲಿ ತಿನ್ನಲೇಬೇಕಾದ ಆಹಾರಗಳಲ್ಲಿ ಇದು ಕೂಡ ಒಂದಾಗಿದೆ.

ನೆಲ್ಲಿಕಾಯಿ
ಈ ಸಮಯದಲ್ಲಿ ನೆಲ್ಲಿಕಾಯಿ ಕೂಡ ಹೆಚ್ಚಾಗಿ ದೊರೆಯುತ್ತದೆ. ನೆಲ್ಲಿಕಾಯಿಯಲ್ಲಿ ವಿಟಮಿನ್ ಸಿ ಇದ್ದು ರಕ್ತವನ್ನು ಶುದ್ಧೀಕರಿಸುತ್ತದೆ, ಕೂದಲಿನ ಆರೋಗ್ಯಕ್ಕೆ ತುಂಬಾ ಒಳ್ಳೆಯದು

ಪೈನಾಪಲ್
ಪೈನಾಪಲ್ ಮೂಳೆಗಳ ಆರೋಗ್ಯಕ್ಕೆ ಒಳ್ಳೆಯದು. ಶೀತ, ಕೆಮ್ಮನ್ನು ದೂರವಿಡುತ್ತದೆ. ವಸಡುಗಳ ಆರೋಗ್ಯ ಹೆಚ್ಚಿ, ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ.

ಕೊತ್ತಂಬರಿ ಸೊಪ್ಪು
ಕೊತ್ತಂಬರಿ ಸೊಪ್ಪಿನಲ್ಲಿ ಕೂಡ ಅನೇಕ ಆರೋಗ್ಯಕರ ಅಂಶಗಳಿರುವುದರಿಂದ, ಇದರಿಂದ ಸಾರು, ಪಲ್ಯವನ್ನು ಅಲಂಕರಿಸಲು ಮರೆಯಬೇಡಿ.

ಕ್ಯಾರೆಟ್
ಕ್ಯಾರೆಟ್ ಎಲ್ಲಾ ಕಾಲದಲ್ಲಿ ದೊರೆಯುವುದಾದರೂ ಈ ಸಮಯದಲ್ಲಿ ದೊರೆಯುವಂತಹ ಹಣ್ಣಾಗಿದೆ. ಇದನ್ನು ಬೇಯಿಸಿ ತಿನ್ನುವುದಕ್ಕಿಂತ ಹಸಿಯಾಗಿ ತಿನ್ನುವುದು ಒಳ್ಳೆಯದು.



Click it and Unblock the Notifications











