Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಬೆಳಗ್ಗೆ ಏಳುವ ಮುನ್ನ ಪಾಲಿಸಬೇಕಾದ 3 ವಿಷಯಗಳು

ನಿದ್ದೆ ಮಾಡಿದಾಗ ದೇಹ ಮಾತ್ರವಲ್ಲ, ಮನಸ್ಸು ಕೂಡ ವಿಶ್ರಾಂತಿಯನ್ನು ತೆಗೆದುಕೊಂಡಿರುತ್ತದೆ. ಬೆಳಗ್ಗೆ ಎಚ್ಚರ ಆದ ಕೂಡಲೆ ದಡಬಡ ಅಂತ ಎದ್ದು ದಿನನಿತ್ಯದ ಕೆಲಸಕ್ಕೆ ಅಣಿಯಾಗುತ್ತೀರಿ. ಈ ರೀತಿ ಮಾಡುವುದರಿಂದ ಮನಸ್ಸಿಗೆ ವಿಶ್ರಾಂತಿ ದೊರೆಯದೆ ದಿನಪೂರ್ತಿ ಗೊಂದಲ, ಟೆನ್ಷ್ಯನ್ನಿಂದ ದಿನ ದೂಡ ಬೇಕಾಗುತ್ತದೆ.
ಆದ್ದರಿಂದ ಬೆಳಗ್ಗೆ ಎದ್ದ ತಕ್ಷಣ ಮುಂದಿನ ಕೆಲಸಕ್ಕೆ ಅಣಿಯಾಗುವುದರ ಮೊದಲು ಈ ಕೆಳಗಿನ 3 ವಿಷಯಗಳನ್ನು ಪಾಲಿಸಿದ್ದೇ ಆದರೆ ದಿನಪುರ್ತಿ ಚಟುವಟಿಕೆಯಿಂದ ಕಾರ್ಯ ನಿರ್ವಹಿಸಬಹುದು. ಅದಕ್ಕಾಗಿ ಬೆಳಗ್ಗೆ ಎದ್ದ ಕೂಡಲೆ ಹೆಚ್ಚಿನ ಶ್ರಮದ ವ್ಯಾಯಾಮ ಮಾಡಿ ಅಂತ ಹೇಳುತ್ತಿಲ್ಲ, ಈ ಸರಳ ವಿಧಾನಗಳನ್ನು ಅನುಸರಿಸಿದರೆ ಅಷ್ಟೆ ಸಾಕು. ಆ ಸರಳ ವಿಧಾನಗಳ ಬಗ್ಗೆ ತಿಳಿಯಲು ಮುಂದೆ ಓದಿ.
1. ಕೈಗಳನ್ನು ನೋಡಿಕೊಳ್ಳುವುದು: ಬೆಳಗ್ಗೆ ಎಚ್ಚರ ಆದ ತಕ್ಷಣ ಹಾಗೇ ಏಳದೆ 20-30 ಸೆಕೆಂಡ್ ಹಸ್ತಗಳನ್ನು ನೋಡಬೇಕು. ಇದು ನಿಮಗೆ ತುಂಬಾ ಚಿಕ್ಕ ವಿಷಯವಾಗಿ ಕಾಣಬಹುದು. ಆದರೆ ಈ ರೀತಿ ಮಾಡಿದರೆ ದೊಡ್ಡ ಮಟ್ಟಿನ ಪ್ರಯೋನವನ್ನು ಪಡೆಯಬಹುದು. ಹೀಗೆ ಮಾಡಿದರೆ ದೇಹ ಮಾತ್ರ ಮಂಚದಿಂದ ಏಳುವುದಿಲ್ಲ, ಮನಸ್ಸು ಕೂಡ ಎಚ್ಚರವಾಗುತ್ತದೆ.
2. ನೆಲಕ್ಕೆ ಪಾದ ಮುಟ್ಟಿಸುವುದು: ಎದ್ದ ತಕ್ಷಣ ಗಡಿಬಿಡಿಯಿಂದ ಓಡಾಡುವುದರ ಬದಲು, ಎದ್ದು ನಿಧಾನಕ್ಕೆ ಕಾಲುಗಳನ್ನು ನೆಲಕ್ಕೆ ಮುಟ್ಟಿಸಬೇಕು. ನಿಮಗೆ ಪಾದ ನೆಲಕ್ಕೆ ಮುಟ್ಟಿದ ಅನುಭವ ಸಿಗಬೇಕು.
3. ನೆಲಕ್ಕೆ ಬಾಗುವುದು: ನೆಲಕ್ಕೆ ಕಾಲೂರಿದಾಗ ನೆಲದಲ್ಲಿ ಕಾಲುಗಳಿಗೆ ಸ್ಪರ್ಶಜ್ಞಾನವಾಗಿರುತ್ತದೆ. ಆದರೆ ಬೆನ್ನು ಮತ್ತು ಕುತ್ತಿಗೆ ವಿಶ್ರಾಂತಿ ಸಿಕ್ಕಿರುವುದಿಲ್ಲ. ಅದಕ್ಕಾಗಿ ಬಾಗಿ ನೆಲವನ್ನು ಮುಟ್ಟಿದಾಗ ಕುತ್ತಿಗೆ ಮತ್ತು ಭುಜದ ಸ್ನಾಯುಗಳಲ್ಲಿರುವ ಟೆನ್ಷನ್ ಕಡಿಮೆಯಾಗಿ ವಿಶ್ರಾಂತಿ ಸಿಗುವುದು.
ಈ 3 ಅಂಶಗಳನ್ನು ಸಲೀಸಾಗಿ 2 ನಿಮಿಷದಲ್ಲಿ ಮಾಡಬಹುದಾಗಿದ್ದು, ಹೀಗೆ ಮಾಡಿದ್ದೆ ಆದರೆ ದಿನಪೂರ್ತಿ ಚಟುವಟಿಕೆಯಿಂದ ಇರಬಹುದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
