Latest Updates
-
ಹೊಸ ಮನೆ, ವಾಹನ ಖರೀದಿಸುವ ಯೋಗ! ಜೀವನದಲ್ಲಿ ಹೆಚ್ಚಲಿದೆ ಸಂತಸ -
March 10 Horoscope: ಆದಾಯ ಗಳಿಕೆಯ ಆಸೆಯಿಂದ ಹಣ ಕಳೆದುಕೊಳ್ಳಬೇಡಿ -
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ?
ಯೋಗ ಚಿಕಿತ್ಸಿಕ ಡಾ. ವಿವೇಕ್ ಉಡುಪ ಸಂದರ್ಶನ

ಇಂದಿನ ಪೈಪೋಟಿ, ಒತ್ತಡ ಮತ್ತು ಪರಿಶ್ರಮದ ಜೀವನದಲ್ಲಿ ಸರಳ ಯೋಗದ ಪ್ರಾಮುಖ್ಯತೆ ಮತ್ತು ಆರೋಗ್ಯ ರಕ್ಷಣೆ, ಶಿಕ್ಷಣ ಮತ್ತು ಯೋಗದ ಬಗೆಗಿನ ಜಾಗೃತಿಯ ಬಗ್ಗೆ ಬೆಳಕು ಚೆಲ್ಲಿದರಲ್ಲದೆ, ಶಿಬಿರದಲ್ಲಿ ಭಾಗವಹಿಸಿದ ಅನೇಕರಿಗೆ ಉತ್ತಮ ಸಲಹೆ ಮತ್ತು ಸೂಚನೆಗಳನ್ನು ಕೊಡುವುದರಲ್ಲಿ ಈ ಶಿಬಿರ ಉಪಯುಕ್ತವಾಯಿತು.
ಡಾ.ವಿವೇಕ ಉಡುಪ ಅವರು ಕರ್ನಾಟಕದ ಮಹಾನಗರಗಳಲ್ಲದೆ ಪ್ರತಿಗ್ರಾಮದಲ್ಲೂ ಸಹ ಯೋಗ ಚಿಕಿತ್ಸೆ ಮತ್ತು ಪ್ರಕೃತಿ ಚಿಕಿತ್ಸಾ ತರಬೇತಿ ಶಿಬಿರಗಳನ್ನು ಆಯೋಜಿಸಿ ಸುಮಾರು 12,000ಕ್ಕೂ ಅಧಿಕ ರೋಗಿಗಳಿಗೆ ಉಚಿತವಾಗಿ ತಪಾಸಣೆ ನಡೆಸಿದ್ದಾರೆಂಬುದು ಶ್ಲಾಘನೀಯ. ಇವರು ನಡೆಸಿದ ಯೋಗ ಅಧ್ಯಯನ ಮತ್ತು ಸಂಶೋಧನೆಗಳಿಂದ ಜನರ ಆರೋಗ್ಯ ರಕ್ಷಣೆ ಮತ್ತು ಆರೋಗ್ಯ ಸುಧಾರಣೆಗೆ ಬೇಕಾದಂತಹ ಸರಳಕ್ರಮಗಳನ್ನು ತಿಳಿಸುತ್ತಾ ಬಂದಿದ್ದಾರೆ.
ಇವರನ್ನು ಸಂದರ್ಶಿಸಿದಾಗ ಅನೇಕ ಉಪಯುಕ್ತವಾದ ಮತ್ತು ಆರೋಗ್ಯಕರವಾದ ಜೀವನವನ್ನು ನಡೆಸಲು ಅನೇಕ ಸಲಹೆ ಮತ್ತು ಸೂಚನೆಗಳು ನಮಗೆ ದೊರೆತವು, ಅವುಗಳನ್ನು ಓದುಗರಲ್ಲಿ ಹಂಚಿಕೊಂಡು ಅದರ ಸದುಪಯೋಗವನ್ನು ಪಡೆಯಬೇಕೆಂಬುದು ನಮ್ಮಯ ಆಶಯ.
ಪ್ರಶ್ನೆ : ಯೋಗ ವಿದ್ಯೆ ಎಂಬುದು ಪ್ರಪಂಚಕ್ಕೆ ಭಾರತೀಯರ ಕೊಡುಗೆ, ಭಾರತದಲ್ಲೀಗ ಅನಾರೋಗ್ಯ ಹೆಚ್ಚಾಗುತ್ತಿರುವುದಕ್ಕೆ ಕಾರಣವೇನಿರಬಹುದು, ಇದರ ಬಗ್ಗೆ ನಿಮ್ಮ ಅಭಿಪ್ರಾಯವೇನು? ನಮ್ಮಲ್ಲಿ ವ್ಯಾಯಮ ಮತ್ತು ಆರೋಗ್ಯದೆಡೆಗಿನ ಕಾಳಜಿ ಕಡಿಮೆಯೆ?
ಡಾ.ವಿವೇಕ : ಸುಮಾರು 5 ಸಾವಿರ ವರ್ಷಗಳ ಹಿಂದೆಯೇ ಯೋಗಶಾಸ್ತ್ರವನ್ನು ಜಗತ್ತಿಗೆ ಕೊಡುಗೆಯಾಗಿ ಕೊಟ್ಟಂತಹ ದೇಶ ನಮ್ಮದು. ಯೋಗದ ಬಗ್ಗೆ ಜ್ಞಾನ ಅರಿವು ನಮಗೆ ಮೊದಲಿಂದಲೂ ಕಡಿಮೆ. ಇಂದಿನ ಅಧುನಿಕ ಯುಗದಲ್ಲಿ ಜಾಗತೀಕರಣದಿಂದಾಗಿ ಕೃಷಿಯ ವಾತಾವರಣ ಹೋಗಿ ಎಲ್ಲ ಕಡೆ ದೊಡ್ದ ಕಟ್ಟಡಗಳು ಬೆಳೆದು, ಸರಳವಾದ ಜೀವನದಿಂದ ದೂರವಾಗಿ, ಸರಿಯಾದ ಆಹಾರ ಕ್ರಮಗಳಿಲ್ಲದೆ, ವಿಶ್ರಾಂತಿಯ ಕೊರತೆಗಳಿಂದ ಜೀವನಶೈಲಿ ಹದಗೆಟ್ಟು ಅನಾರೋಗ್ಯಕ್ಕೆ ಕಾರಣವಾಗುತ್ತಿದೆ.
ಎಲ್ಲ ಕ್ಷೇತ್ರಗಳಲ್ಲಿಯೂ ಪೈಪೋಟಿಯ ಜೀವನ, ಒತ್ತಡದಿಂದ ಕೂಡಿರುವಂತಹ ಕೆಲಸಗಳು, ಆಹಾರದಲ್ಲಿನ ಏರು-ಪೇರು, ನಿದ್ದೆಯ ಕೊರತೆ, ದುಶ್ಚಟಗಳು, ಸರಿಯಾದ ವೇಳೆಯಲ್ಲಿ ಆಹಾರ ತೆಗೆದುಕೊಳ್ಳದಿರುವಂತಹುದು, ಅತಿಯಾದ ಕೋಪ, ಆತಂಕ, ದುಗುಡ, ತಳಮಳಗಳು ಪ್ರತಿಯೊಬ್ಬರಲ್ಲಿ ಹೆಚ್ಚಾಗುತ್ತಿದ್ದು ಅವರಲ್ಲಿ ಅವರಿಗೆ ನಂಬಿಕೆ ಕಳೆದುಕೊಂಡು ಜೀವನ ಸಿಗಬೇಕಾದಂತಹ ಪ್ರೀತಿ ವಿಶ್ವಾಸಗಳ ಕೊರತೆಯಿಂದಾಗಿ ಖಾಯಿಲೆಗಳು ಹೆಚ್ಚಾಗುತ್ತಿವೆ. ಯೋಗ ಸಂಶೋಧನೆಯ ಪ್ರಕಾರ ಮಹಾನಗರ ಪ್ರದೇಶಗಳಲ್ಲಿ ಮನೊರೋಗ ಮತ್ತು ಜೀವನಶೈಲಿಗೆ ಸಂಬಂಧಪಟ್ಟಂತಹ ರೋಗಗಳು ಗಣನೀಯವಾಗಿ ಹೆಚ್ಚಾಗುತ್ತಿವೆ. ಮುಖ್ಯವಾಗಿ ಮನಸ್ಸಿನಿಂದ ಪ್ರಾರಂಭಗೊಂಡ ಸಮಸ್ಯೆಗಳು ದೇಹದ ಮೇಲೆ ತಮ್ಮ ದುಷ್ಪರಿಣಾಮ ಬೀರಿ, ಉಸಿರಾಟದಲ್ಲಿ ಏರಿಳಿತಗಳನ್ನುಂಟು ಮಾಡಿ ಆರೋಗ್ಯವನ್ನು ಕೆಡಿಸುತ್ತಿವೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications











