Latest Updates
-
ಆರ್ಬಿಐ ಹೊಸ ಆಟೋ-ಪೇ ನಿಯಮ: ನಿಮ್ಮ OTT ಮತ್ತು SIP ಪಾವತಿಗಳು ಸ್ಥಗಿತಗೊಳ್ಳುವ ಮುನ್ನ ಎಚ್ಚೆತ್ತುಕೊಳ್ಳಿ! -
ಸುಡುವ ಬಿಸಿಲಲ್ಲೂ ಮನೆ ತಂಪಾಗಿರಬೇಕೆ? ಕಡಿಮೆ ಖರ್ಚಿನಲ್ಲಿ ಕೂಲರ್ ಇಲ್ಲದೆ ತಂಪಾಗಿಸಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಬಿಸಿಲಿನ ಅಲೆ: ಸುಡುವ ಬಿಸಿಲಿನಲ್ಲಿ ನಿಮ್ಮ ಆರೋಗ್ಯ ಕಾಪಾಡಿಕೊಳ್ಳಲು ಈ ಪಾನೀಯಗಳೇ ಮದ್ದು! -
ಬಿಸಿಲ ಧಗೆಗೆ ಕಂಗಾಲಾಗಿದ್ದೀರಾ? ಸ್ಟೈಲಿಶ್ ಆಗಿ ಕೂಲ್ ಆಗಿರಲು ಇಲ್ಲಿದೆ ವೈರಲ್ ಸಮ್ಮರ್ ಹ್ಯಾಕ್ಸ್! -
ಬಿಸಿಗಾಳಿಯ ಅಬ್ಬರ: ಫಿಟ್ನೆಸ್ ಕಾಪಾಡಿಕೊಳ್ಳಲು ನಿಮ್ಮ ವರ್ಕೌಟ್ ಸಮಯ ಬದಲಾಯಿಸುವುದು ಅನಿವಾರ್ಯವೇ? -
ಡೇಟಿಂಗ್ ಆ್ಯಪ್ಗಳಲ್ಲಿ ಪ್ರೀತಿಯ ಬಲೆ: ಎಐ ಡೀಪ್ಫೇಕ್ ವಂಚನೆಯಿಂದ ಪಾರಾಗುವುದು ಹೇಗೆ? -
ಬಿಸಿಲ ಬೇಗೆಯಿಂದ ತತ್ತರಿಸಿದ್ದೀರಾ? ಎಸಿ ಇಲ್ಲದೆಯೇ ನಿಮ್ಮ ಮನೆಯನ್ನು ತಂಪಾಗಿಡಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಅಶ್ವಗಂಧದ ಎಲೆಗಳ ಬಳಕೆ ನಿಷೇಧ: ನಿಮ್ಮ ನೆಚ್ಚಿನ ಹೆಲ್ತ್ ಸಪ್ಲಿಮೆಂಟ್ಸ್ ಮಾರುಕಟ್ಟೆಯಿಂದ ಮಾಯವಾಗುತ್ತಾ? -
ಬಿಸಿಗಾಳಿಯ ಅಬ್ಬರ: ಸುಡುವ ಬಿಸಿಲಿನಲ್ಲಿ ಆರೋಗ್ಯ ಮತ್ತು ಫಿಟ್ನೆಸ್ ಕಾಪಾಡಿಕೊಳ್ಳುವುದು ಹೇಗೆ? -
ದೆಹಲಿ ಬಿಸಿಲಿನಲ್ಲಿ ಮದುವೆ ಸಂಭ್ರಮ: ಹೀಟ್ವೇವ್ ನಡುವೆ ನಿಮ್ಮ ಮದುವೆ ಪ್ಲಾನ್ ಬದಲಾಯಿಸುವುದು ಹೇಗೆ?
ಕತ್ತೆ ತರಹ ದುಡಿದರೆ ಕೆಟ್ಟು ಹೋದಿರಿ ಜೋಕೆ

ಕಾಲಿಗೆ ಚಕ್ರ ಕಟ್ಟಿದಂತಹ ಜೀವನದಿಂದಾಗಿ ಅವನು ಜೀವನದ ಅನೇಕ ಸಂತೋಷದ ಕ್ಷಣಗಳನ್ನು ಕಳೆದುಕೊಳ್ಳುತ್ತಿದ್ದಾನೆ ಅನಿಸುತ್ತದೆ. ಇತ್ತೀಚಿಗೆ ಅವನನ್ನು ನೋಡಿದಾಗ ತುಂಬಾ ಸೊರಗಿದಂತೆ ಕಾಣುತ್ತಿದ್ದ, ಕಾರಣ ಕೇಳಿದಾಗ ಕೆಲಸದ ಒತ್ತಡ ಅಂದ. ಯಶಸ್ವಿಗೆ ಕಠಿಣ ಪರಿಶ್ರಮ ಅಗತ್ಯ. ಹಾಗಂತ ವಿಶ್ರಾಂತಿಯಿಲ್ಲದ ಜೀವನ ದೇಹದ ಆರೋಗ್ಯವನ್ನು ಹದಗೆಡುಸುತ್ತದೆ. ಅಧಿಕ ಕೆಲಸದ ಒತ್ತಡದಿಂದ ಆರೋಗ್ಯದ ಮೇಲೆ ಹತ್ತು ಹಲವು ಕೆಟ್ಟ ಪರಿಣಾಮಗಳು ಉಂಟಾಗುತ್ತವೆ.
1. ನಿದ್ರಾ ಹೀನತೆ: ದೇಹದ ಆರೋಗ್ಯಕ್ಕೆ 6 ಗಂಟೆ ನಿದ್ರೆ ಅವಶ್ಯಕ. ಕೆಲಸದ ಒತ್ತಡವಿದ್ದರೆ ಮಲಗಿದ್ದರೂ ನಿದ್ರೆ ಬರುವುದಿಲ್ಲ. ಅಲ್ಲದಿದ್ದರೆ ಅತಿ ಕಡಿಮೆ ನಿದ್ರೆ ಮಾಡುವುದು ಇವುಗಳಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಉಂಟಾಗುತ್ತದೆ.
2. ಜ್ಞಾಪಕ ಶಕ್ತಿ ಕುಂದುವುದು: ಅಧಿಕ ಒತ್ತಡದಿಂದ ಮೆದುಳಿನ ನೆನಪಿನ ಶಕ್ತಿ ಕುಂದುತ್ತದೆ. ಜ್ಞಾಪಕ ಶಕ್ತಿ ಹೆಚ್ಚಲು ನಿದ್ರೆ ಅವಶ್ಯಕ. ಇಲ್ಲದಿದ್ದರೆ ಮೆದುಳಿನ ಗ್ರಹಿಸುವ ಮತ್ತು ನೆನಪಿನ ಶಕ್ತಿ ಕುಂದುವುದು.
3. ಅಜಾಗರೂಕತೆ: ಬೆಲೆಬಾಳುವ ವಸ್ತು ಅಥವಾ ಡಾಕ್ಯೂಮೆಂಟ್ ಮುಂತಾದವುಗಳನ್ನು ಜೋಪಾನವಾಗಿ ತೆಗೆದು ಇಡದಿರುವುದು ಕೆಲವರ ಸ್ವಾಭಾವಿಕ ಗುಣ. ಆದರೆ ವಿಶ್ರಾಂತಿಯಿಲ್ಲದೆ ದುಡಿಯುವವರಿಗೆ ವಸ್ತುಗಳನ್ನು ಎಲ್ಲಿ ಇಟ್ಟದ್ದೇವೆ ಎಂದು ತಕ್ಷಣ ನೆನಪಿಗೆ ಬರುವುದದಿಲ್ಲ. ಅಲ್ಲದೆ ಡೋರ್ ಹಾಗೆ ತೆರೆದಿಟ್ಟು ಹೋಗುವುದು, ಅತ್ಯಾವಶ್ಯಕವಾದ ಡಾಕ್ಯೂಮೆಂಟ್ ಮರೆತು ಹೋಗುವುದು ಅವೆಲ್ಲಾ ಲಕ್ಷಣಗಳು ಕಾಣಿಸಿಕೊಂಡರೆ ದೇಹದ ಆರೋಗ್ಯ ಹದಗೆಟ್ಟಿದೆ ಎಂದು ಅರ್ಥ.
4. ಅಜೀರ್ಣ: ಅಧಿಕ ಕೆಲಸ ಒತ್ತಡದಿಂದಾಗಿ ಸರಿಯಾದ ಹೊತ್ತಿನಲ್ಲಿ ಊಟ ಮಾಡದಿರುವುದರಿಂದ ಜೀರ್ಣಕ್ರಿಯೆಯಲ್ಲಿ ತೊಂದರೆ ಉಂಟಾಗುತ್ತದೆ. ಇದರಿಂದ ಎಷ್ಟೇ ಪ್ರಿಯವಾದ ಆಹಾರ ಕೂಡ ಬೇಡ ಅನಿಸುತ್ತದೆ.
5. ಆರೋಗ್ಯಕರವಲ್ಲದ ತಿಂಡಿಗಳ ಸೇವನೆ: ಕೆಲಸ ಮಾಡುತ್ತಿರುವಾಗ ಏನಾದರೂ ತಿನ್ನಬೇಕೆಂದು ಅನಿಸುವುದು ಸಹಜ. ಆಗ ಕುರುಕಲು ತಿಂಡಿಗಳನ್ನು ಸೇವಿಸುವುದರಿಂದ ದೇಹದ ಆರೋಗ್ಯ ಮತ್ತಷ್ಟು ಹಾಳಾಗುತ್ತದೆ.
6. ಸಂಸಾರದಲ್ಲಿ ಬಿರುಕು: ಅಧಿಕ ಒತ್ತಡದಿಂದಾಗಿ ತೀವ್ರ ದಣಿವು ಆಗುವುದರಿಂದ ದಾಂಪತ್ಯ ಜೀವನದಲ್ಲೂ ಆಸಕ್ತಿ ಕುಂದಲಾರಂಭಿಸುತ್ತದೆ. ಇದರಿಂದ ದಂಪತಿಗಳ ನಡುವೆ ಭಾಂದವ್ಯ ಕಡಿಮೆಯಾಗಲು ಕೂಡ ಒಂದು ಕಾರಣವಾಗಿದೆ.
7. ರಕ್ತದೊತ್ತಡ: ವಿಶ್ರಾಂತಿಯಿಲ್ಲದೆ ಕೆಲಸ ಮಾಡುವುದರಿಂದ ರಕ್ತದೊತ್ತಡದಲ್ಲಿ ವ್ಯತ್ಯಾಸ ಉಂಟಾಗುತ್ತದೆ. ರಕ್ತದೊತ್ತಡ ಅಧಿಕವಾದಷ್ಟು ತಾಳ್ಮೆ ಕಡಿಮೆಯಾಗಿ ಸಣ್ಣ-ಪುಟ್ಟ ವಿಷಯಕ್ಕೂ ಕೋಪ ಬರುತ್ತದೆ. ಇದರಿಂದಾಗಿ ಮನ ನೆಮ್ಮದಿ ಕೂಡ ಹಾಳಾಗುತ್ತದೆ.
ಟೆನ್ಷನ್ ಮಾಡಿಕೊಂಡು ಕೆಲಸ ಮಾಡುವುದಕ್ಕಿಂತ ಸಾವಧಾನವಾಗಿ ಕೆಲಸ ಮಾಡುವುದು ಮುಖ್ಯ. ಮನಸ್ಸಿಗೂ ದೇಹಕ್ಕೂ ಆಗಾಗ ವಿಶ್ರಾಂತಿ ಕೊಡುತ್ತ ಕೆಲಸ ಮಾಡಬೇಕು. ಇದರಿಂದ ಕೆಲಸದ ದಕ್ಷತೆಯೂ ಹೆಚ್ಚುತ್ತದೆ. ಆರೋಗ್ಯವೂ ಉಳಿಯುತ್ತದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications









