Latest Updates
-
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು
ಕತ್ತೆ ತರಹ ದುಡಿದರೆ ಕೆಟ್ಟು ಹೋದಿರಿ ಜೋಕೆ

ಕಾಲಿಗೆ ಚಕ್ರ ಕಟ್ಟಿದಂತಹ ಜೀವನದಿಂದಾಗಿ ಅವನು ಜೀವನದ ಅನೇಕ ಸಂತೋಷದ ಕ್ಷಣಗಳನ್ನು ಕಳೆದುಕೊಳ್ಳುತ್ತಿದ್ದಾನೆ ಅನಿಸುತ್ತದೆ. ಇತ್ತೀಚಿಗೆ ಅವನನ್ನು ನೋಡಿದಾಗ ತುಂಬಾ ಸೊರಗಿದಂತೆ ಕಾಣುತ್ತಿದ್ದ, ಕಾರಣ ಕೇಳಿದಾಗ ಕೆಲಸದ ಒತ್ತಡ ಅಂದ. ಯಶಸ್ವಿಗೆ ಕಠಿಣ ಪರಿಶ್ರಮ ಅಗತ್ಯ. ಹಾಗಂತ ವಿಶ್ರಾಂತಿಯಿಲ್ಲದ ಜೀವನ ದೇಹದ ಆರೋಗ್ಯವನ್ನು ಹದಗೆಡುಸುತ್ತದೆ. ಅಧಿಕ ಕೆಲಸದ ಒತ್ತಡದಿಂದ ಆರೋಗ್ಯದ ಮೇಲೆ ಹತ್ತು ಹಲವು ಕೆಟ್ಟ ಪರಿಣಾಮಗಳು ಉಂಟಾಗುತ್ತವೆ.
1. ನಿದ್ರಾ ಹೀನತೆ: ದೇಹದ ಆರೋಗ್ಯಕ್ಕೆ 6 ಗಂಟೆ ನಿದ್ರೆ ಅವಶ್ಯಕ. ಕೆಲಸದ ಒತ್ತಡವಿದ್ದರೆ ಮಲಗಿದ್ದರೂ ನಿದ್ರೆ ಬರುವುದಿಲ್ಲ. ಅಲ್ಲದಿದ್ದರೆ ಅತಿ ಕಡಿಮೆ ನಿದ್ರೆ ಮಾಡುವುದು ಇವುಗಳಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಉಂಟಾಗುತ್ತದೆ.
2. ಜ್ಞಾಪಕ ಶಕ್ತಿ ಕುಂದುವುದು: ಅಧಿಕ ಒತ್ತಡದಿಂದ ಮೆದುಳಿನ ನೆನಪಿನ ಶಕ್ತಿ ಕುಂದುತ್ತದೆ. ಜ್ಞಾಪಕ ಶಕ್ತಿ ಹೆಚ್ಚಲು ನಿದ್ರೆ ಅವಶ್ಯಕ. ಇಲ್ಲದಿದ್ದರೆ ಮೆದುಳಿನ ಗ್ರಹಿಸುವ ಮತ್ತು ನೆನಪಿನ ಶಕ್ತಿ ಕುಂದುವುದು.
3. ಅಜಾಗರೂಕತೆ: ಬೆಲೆಬಾಳುವ ವಸ್ತು ಅಥವಾ ಡಾಕ್ಯೂಮೆಂಟ್ ಮುಂತಾದವುಗಳನ್ನು ಜೋಪಾನವಾಗಿ ತೆಗೆದು ಇಡದಿರುವುದು ಕೆಲವರ ಸ್ವಾಭಾವಿಕ ಗುಣ. ಆದರೆ ವಿಶ್ರಾಂತಿಯಿಲ್ಲದೆ ದುಡಿಯುವವರಿಗೆ ವಸ್ತುಗಳನ್ನು ಎಲ್ಲಿ ಇಟ್ಟದ್ದೇವೆ ಎಂದು ತಕ್ಷಣ ನೆನಪಿಗೆ ಬರುವುದದಿಲ್ಲ. ಅಲ್ಲದೆ ಡೋರ್ ಹಾಗೆ ತೆರೆದಿಟ್ಟು ಹೋಗುವುದು, ಅತ್ಯಾವಶ್ಯಕವಾದ ಡಾಕ್ಯೂಮೆಂಟ್ ಮರೆತು ಹೋಗುವುದು ಅವೆಲ್ಲಾ ಲಕ್ಷಣಗಳು ಕಾಣಿಸಿಕೊಂಡರೆ ದೇಹದ ಆರೋಗ್ಯ ಹದಗೆಟ್ಟಿದೆ ಎಂದು ಅರ್ಥ.
4. ಅಜೀರ್ಣ: ಅಧಿಕ ಕೆಲಸ ಒತ್ತಡದಿಂದಾಗಿ ಸರಿಯಾದ ಹೊತ್ತಿನಲ್ಲಿ ಊಟ ಮಾಡದಿರುವುದರಿಂದ ಜೀರ್ಣಕ್ರಿಯೆಯಲ್ಲಿ ತೊಂದರೆ ಉಂಟಾಗುತ್ತದೆ. ಇದರಿಂದ ಎಷ್ಟೇ ಪ್ರಿಯವಾದ ಆಹಾರ ಕೂಡ ಬೇಡ ಅನಿಸುತ್ತದೆ.
5. ಆರೋಗ್ಯಕರವಲ್ಲದ ತಿಂಡಿಗಳ ಸೇವನೆ: ಕೆಲಸ ಮಾಡುತ್ತಿರುವಾಗ ಏನಾದರೂ ತಿನ್ನಬೇಕೆಂದು ಅನಿಸುವುದು ಸಹಜ. ಆಗ ಕುರುಕಲು ತಿಂಡಿಗಳನ್ನು ಸೇವಿಸುವುದರಿಂದ ದೇಹದ ಆರೋಗ್ಯ ಮತ್ತಷ್ಟು ಹಾಳಾಗುತ್ತದೆ.
6. ಸಂಸಾರದಲ್ಲಿ ಬಿರುಕು: ಅಧಿಕ ಒತ್ತಡದಿಂದಾಗಿ ತೀವ್ರ ದಣಿವು ಆಗುವುದರಿಂದ ದಾಂಪತ್ಯ ಜೀವನದಲ್ಲೂ ಆಸಕ್ತಿ ಕುಂದಲಾರಂಭಿಸುತ್ತದೆ. ಇದರಿಂದ ದಂಪತಿಗಳ ನಡುವೆ ಭಾಂದವ್ಯ ಕಡಿಮೆಯಾಗಲು ಕೂಡ ಒಂದು ಕಾರಣವಾಗಿದೆ.
7. ರಕ್ತದೊತ್ತಡ: ವಿಶ್ರಾಂತಿಯಿಲ್ಲದೆ ಕೆಲಸ ಮಾಡುವುದರಿಂದ ರಕ್ತದೊತ್ತಡದಲ್ಲಿ ವ್ಯತ್ಯಾಸ ಉಂಟಾಗುತ್ತದೆ. ರಕ್ತದೊತ್ತಡ ಅಧಿಕವಾದಷ್ಟು ತಾಳ್ಮೆ ಕಡಿಮೆಯಾಗಿ ಸಣ್ಣ-ಪುಟ್ಟ ವಿಷಯಕ್ಕೂ ಕೋಪ ಬರುತ್ತದೆ. ಇದರಿಂದಾಗಿ ಮನ ನೆಮ್ಮದಿ ಕೂಡ ಹಾಳಾಗುತ್ತದೆ.
ಟೆನ್ಷನ್ ಮಾಡಿಕೊಂಡು ಕೆಲಸ ಮಾಡುವುದಕ್ಕಿಂತ ಸಾವಧಾನವಾಗಿ ಕೆಲಸ ಮಾಡುವುದು ಮುಖ್ಯ. ಮನಸ್ಸಿಗೂ ದೇಹಕ್ಕೂ ಆಗಾಗ ವಿಶ್ರಾಂತಿ ಕೊಡುತ್ತ ಕೆಲಸ ಮಾಡಬೇಕು. ಇದರಿಂದ ಕೆಲಸದ ದಕ್ಷತೆಯೂ ಹೆಚ್ಚುತ್ತದೆ. ಆರೋಗ್ಯವೂ ಉಳಿಯುತ್ತದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
