Latest Updates
-
ಯೋಗದ ನಂತರ ಮೈಕೈ ನೋವು ಕಾಡುತ್ತಿದೆಯೇ? ಕಚೇರಿಯಲ್ಲಿ ಕೆಲಸ ಮಾಡುವಾಗ ಈ 12 ನಿಮಿಷದ ಟಿಪ್ಸ್ ಪಾಲಿಸಿ -
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ 2026: ಅಪ್ಪನ ಮುಖದಲ್ಲಿ ನಗು ಮೂಡಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಐಡಿಯಾಗಳು! -
10ನೇ ಅಂತರಾಷ್ಟ್ರೀಯ ಯೋಗ ದಿನ: ಮಳೆಯನ್ನೂ ಮೀರಿ ಕೋಲ್ಕತ್ತಾದಲ್ಲಿ ಯೋಗ ಸಂಭ್ರಮ, ಮನೆಯಲ್ಲೇ ಅಭ್ಯಾಸ ಮಾಡಲು ಇಲ್ಲಿದೆ ಸರಳ ಟಿಪ್ಸ್! -
ಭಾರತ vs ಅಫ್ಘಾನಿಸ್ತಾನ ಪಂದ್ಯ: ಮ್ಯಾಚ್ ನೋಡುವಾಗ ಮನೆಯಲ್ಲಿ ಶಾಂತಿ ಕಾಪಾಡಲು ಈ ಟಿಪ್ಸ್ ಫಾಲೋ ಮಾಡಿ! -
ನಾಳೆ ನೀಟ್ ಮರುಪರೀಕ್ಷೆ: ಮಳೆಗಾಲದ ನಡುವೆ ಪರೀಕ್ಷೆಗೆ ಸಜ್ಜಾಗುವುದು ಹೇಗೆ? ಇಲ್ಲಿದೆ ಫೈನಲ್ ಚೆಕ್ಲಿಸ್ಟ್ -
ಪಿಎಂ-ಕಿಸಾನ್ ಹಣ ಜಮೆ: ರೈತರೇ, ಈ 2,000 ರೂಪಾಯಿಯಲ್ಲಿ ಆರೋಗ್ಯಕರ ಆಹಾರ ಖರೀದಿಸಿ, ಮಧುಮೇಹ ನಿಯಂತ್ರಿಸಿ! -
ಭಾರಿ ಗಾಳಿ-ಮಳೆಯ ಎಚ್ಚರಿಕೆ: ಜೂನ್ 20ರಂದು ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳನ್ನು ಮರೆಯದಿರಿ!
ಬಿಪಿ ನಿವಾರಿಸುವ 5 ಸುಲಭ ತಂತ್ರ ಇಲ್ಲಿದೆ

ರಕ್ತದೊತ್ತಡ ದೂರವಿರಿಸುವ ಐದು ಸಲಹೆಗಳು:
1. ರಕ್ತದೊತ್ತಡದ ಮಟ್ಟ: ಸಾಮಾನ್ಯವಾಗಿ ರಕ್ತದೊತ್ತಡದ ಮಟ್ಟ 140/90 ಎಂಎಂ ಎಚ್ ಜಿ ಇರಬೇಕು. ಇದಕ್ಕಿಂತ ಹೆಚ್ಚಿದ್ದ ಪಕ್ಷದಲ್ಲಿ ವೈದ್ಯರಿಂದ ತಪ್ಪದೇ ಪರೀಕ್ಷೆ ಮಾಡಿಸಿಕೊಂಡು ಅವಶ್ಯಕ ಔಷಧಿ, ಆಹಾರ, ವ್ಯಾಯಾಮವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಊಟ ಮತ್ತು ಔಷಧಿಗೆ ನಿಗದಿತ ಸಮಯ ಮೀಸಲಿಡಬೇಕು.
2. ಆಹಾರದ ರೀತಿ: ಬೀದಿ ಬದಿಯ ಆಹಾರದ ಸೇವನೆ ತ್ಯಜಿಸಬೇಕು. ಮನೆಯಲ್ಲಿ ತಯಾರಿಸಿದ ಆಹಾರವೇ ಉತ್ತಮ. ಕರಿದ ಪದಾರ್ಥಗಳಿಗಿಂತ ಬೇಯಿಸಿದ ಆಹಾರ ಒಳ್ಳೆಯದು. ತರಕಾರಿ, ಹಣ್ಣುಗಳು ನಿಮ್ಮ ಆಹಾರದೊಂದಿಗಿರಲಿ. ತೂಕದ ಹೆಚ್ಚಳವೇ ರಕ್ತದೊತ್ತಡಕ್ಕೆ ಮೂಲವಾದ್ದರಿಂದ ದೇಹದಲ್ಲಿ ಬೊಜ್ಜು ಸೇರದಂತೆ ಎಚ್ಚರಿಕೆವಹಿಸಬೇಕು. ವ್ಯಾಯಾಮ ಮಾಡಲು ಮನೆಯಲ್ಲಿ ಸಲಕರಣೆಗಳಿಲ್ಲದಿದ್ದರೆ ನಡಿಗೆಯಾದರೂ ಇರಬೇಕು.
3. ಸಕ್ಕರೆ, ಉಪ್ಪಿನ ಅಂಶ: ಸಕ್ಕರೆ ಮತ್ತು ಉಪ್ಪಿನ ಅಂಶವನ್ನು ಆದಷ್ಟು ಕಡಿಮೆಗೊಳಿಸಬೇಕು. ಈ ಎರಡೂ ಅಂಶಗಳು ರಕ್ತದೊತ್ತಡ ಹೆಚ್ಚಿಸುವುದಾದ್ದರಿಂದ ಸೇವನೆಯಲ್ಲಿ ನಿಯಂತ್ರಣವಿರಬೇಕು. ಸಕ್ಕರೆ ಬದಲು ಜೇನನ್ನು ಬಳಸಬಹುದು. ಖಾರದ ಪದಾರ್ಥಗಳ ಸೇವನೆಯಿಂದ ಉತ್ಪತ್ತಿಯಾಗುವ ಎಂಜೈಮುಗಳು ರಕ್ತದೊತ್ತಡ ಹೆಚ್ಚಿಸುವುದರಿಂದ ಖಾರವನ್ನೂ ಹೆಚ್ಚು ತಿನ್ನಬಾರದು.
4. ಮದ್ಯದಿಂದ ದೂರವಿರಿ: ಮದ್ಯ ಮತ್ತು ಇನ್ನಿತರ ದುಶ್ಚಟಗಳಿದ್ದವರು ತಮ್ಮ ಆರೋಗ್ಯ ಕಾಪಾಡಿಕೊಳ್ಳಲೇಬೇಕೆಂದಿದ್ದರೆ ಮದ್ಯವನ್ನು ದೂರವಿಡುವುದು ಅತ್ಯವಶ್ಯಕ. ಮದ್ಯವನ್ನು ತಕ್ಷಣವೇ ಬಿಡಲು ಸಾಧ್ಯವಾಗದಿದ್ದರು ಕ್ರಮೇಣ ಕಡಿಮೆ ಮಾಡಬೇಕು.
5. ಒತ್ತಡ ರಹಿತರಾಗಿ: ರಕ್ತದೊತ್ತಡ ಹೆಚ್ಚಿಸುವಲ್ಲಿ ಮನಸ್ಸು, ಮೆದುಳೂ ಕೂಡ ಕಾರಣವಾಗುತ್ತದೆ. ಒತ್ತಡವೂ ಆರೋಗ್ಯವನ್ನು ದುರ್ಬಲಗೊಳಿಸುತ್ತೆ. ಆದ್ದರಿಂದ ಧ್ಯಾನ, ಉಸಿರಾಟದ ವ್ಯಾಯಾಮ, ನಡಿಗೆ ಮಾಡಿ ಆದಷ್ಟು ಒತ್ತಡರಹಿತವಾಗಿ ಬದುಕಲು ಪ್ರಯತ್ನಿಸಬೇಕು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications