Latest Updates
-
ಹಾಲುಣಿಸುವ ತಾಯಂದಿರೇ ಗಮನಿಸಿ: ಬೆನ್ನು ಮತ್ತು ಕುತ್ತಿಗೆ ನೋವು ಮರೆಯಾಗಲು ಈ 8 ನಿಮಿಷದ ವ್ಯಾಯಾಮ ಸಾಕು! -
ಐಟಿಆರ್ ಗಡುವು ಮಿಸ್ ಆಯ್ತಾ? ದಂಡ ತಪ್ಪಿಸಲು ಈಗಲೇ ಈ ಕೆಲಸ ಮಾಡಿ, ಆರ್ಥಿಕ ನಷ್ಟದಿಂದ ಪಾರಾಗಿ! -
ಕರ್ನಾಟಕದಲ್ಲಿ ಭಾರಿ ಮಳೆ: ನಿಮ್ಮ ಮನೆ ಮತ್ತು ಕುಟುಂಬವನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸ ಮಾಡಿ! -
ಪೀನಟ್ ಬಟರ್ನಲ್ಲಿ ವಿಷಕಾರಿ ಶಿಲೀಂಧ್ರ? ನಿಮ್ಮ ಆರೋಗ್ಯ ಕಾಪಾಡಲು ಈ ವಿಷಯಗಳನ್ನು ಮರೆಯದಿರಿ -
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು! -
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ! -
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು? -
ಭಾರತದ ಆಕಾಶದಲ್ಲಿ ಬೆಂಕಿಯ ಉಂಡೆಗಳ ಸಂಭ್ರಮ: ಈ ಅದ್ಭುತ ಉಲ್ಕಾಪಾತವನ್ನು ಮಿಸ್ ಮಾಡ್ಬೇಡಿ!
ಬಳಲಿದ ಕಣ್ಣಿಗೆ ಸ್ಪೆಷಲ್ ಕೇರ್ ನೀಡೋದು ಹೇಗೆ?

ಆದ್ದರಿಂದ ಕಣ್ಣಿಗೂ ಸ್ಪೆಷಲ್ ಕೇರ್ ಅಗತ್ಯವಿದೆ. ಕೆಲವು ಸಿಂಪಲ್ ಸಲಹೆಗಳನ್ನು ಪಾಲಿಸಿದರೆ ಕಣ್ಣಿನ ಆರೋಗ್ಯವನ್ನು ಸುಲಭವಾಗಿ ಕಾಪಾಡಿಕೊಳ್ಳಬಹುದು.
* ಕಣ್ಣುಗಳು ತುಂಬಾ ಒತ್ತಡದಲ್ಲಿದ್ದಂತೆ ಕಂಡರೆ, ಕಣ್ಣನ್ನು ಮುಚ್ಚಿ ಅಂಗೈಯ್ಯನ್ನು ವೃತ್ತಾಕಾರವಾಗಿ ಕಣ್ಣುಗಳ ಮೇಲೆ ಆಡಿಸಿ ಕೆಲವು ನಿಮಷ ಹಾಗೇ ಅಂಗೈನಿಂದ ಕಣ್ಣನ್ನು ಮುಚ್ಚಿಕೊಳ್ಳಬೇಕು. ಇದು ಆಯಾಸ ಕಡಿಮೆಗೊಳಿಸುತ್ತದೆ.
* ಕಣ್ಣುಗಳನ್ನು ಅಂಗೈನಿಂದ ಮುಚ್ಚಿ ಬೆಚ್ಚಗಿರಿಸಿದರೆ ಆ ಬೆಚ್ಚಗಿನ ಅನುಭವ ನೋವು ನಿವಾರಣೆಗೆ ಸಹಕಾರಿ.
* ಕೆಲಸದ ಮಧ್ಯೆ ಕೆಲವು ನಿಮಿಷ ಬಿಡುವು ಮಾಡಿಕೊಂಡು ಎಲ್ಲಾ ದಿಕ್ಕುಗಳೆಡೆಗೂ ಒಮ್ಮೆ ಕಣ್ಣನ್ನು ಹಾಯಿಸಬೇಕು. ಕೆಲವು ನಿಮಿಷ ಬಿಸಿಲು ಕಣ್ಣಿಗೆ ನೇರವಾಗಿ ಬೀಳುವಂತೆ ನೋಡಿಕೊಂಡರೂ ಕಣ್ಣಿಗೆ ಹೆಚ್ಚು ಆಯಾಸವಾಗದಂತೆ ನೋಡಿಕೊಂಡು ರಕ್ತ ಸಂಚಲನ ಹೆಚ್ಚಿಸುತ್ತದೆ.
* ತುಂಬಾ ತಣ್ಣಗಿನ ನೀರಿನಲ್ಲಿ ಹತ್ತಿಯನ್ನು ಅದ್ದಿ, ಕಣ್ಣಿನ ಮೇಲೆ ಅದನ್ನು ಅರ್ಧ ಗಂಟೆ ಇಟ್ಟುಕೊಳ್ಳುವುದರಿಂದ ಕಣ್ಣುರಿ ಮತ್ತು ಕಣ್ಣು ಕೆಂಪಗಾಗುವ ಸಮಸ್ಯೆ ತಡೆಯಬಹುದು.
* ಸೌತೆಕಾಯಿ ಮತ್ತು ಆಲೂಗಡ್ಡೆ ಹೋಳನ್ನು ಕಣ್ಣುಗಳ ಮೇಲಿರಿಸಿದರೆ ಕಣ್ಣುಗಳ ಒತ್ತಡ ಕಡಿಮೆಗೊಳ್ಳುವುದಲ್ಲದೆ, ಕಣ್ಣಿನ ಸುತ್ತಲ ಚರ್ಮವನ್ನೂ ಕಾಪಾಡುತ್ತದೆ.
* ಕಂಪ್ಯೂಟರ್ ಮುಂದೆ ನಿರಂತರವಾಗಿ ಕೂರದೆ ಆಗಾಗ್ಗೆ ವಿಶ್ರಾಂತಿ ತೆಗೆದುಕೊಳ್ಳಬೇಕು. ದೂರದ ವಸ್ತುಗಳನ್ನು ಕೆಲ ನಿಮಿಷ ನೋಡುವುದು, ಕಣ್ಣನ್ನು ಅತ್ತಿತ್ತ ಹೊರಳಿಸುವುದು ಹೀಗೆ ಮಾಡಿದರೆ ಕಣ್ಣಿನ ಮೇಲೆ ಹೆಚ್ಚು ಒತ್ತಡ ಬೀಳುವುದಿಲ್ಲ.
* ವಿಟಮಿನ್ ಎ ಹೆಚ್ಚಿರುವ ಆಹಾರ ಸೇವನೆ ದೃಷ್ಟಿ ದೋಷ ಮತ್ತು ದೃಷ್ಟಿ ಕೊರತೆಯನ್ನು ನಿವಾರಿಸುತ್ತದೆ. ಹಸಿರು ತರಕಾರಿ, ಟೊಮೆಟೊ, ಸೋಯಾ, ಕಿತ್ತಳೆ, ಪರಂಗಿ, ಸೇಬು, ದ್ರಾಕ್ಷಿ ಕಣ್ಣಿಗೆ ಅಗತ್ಯ ಪೋಷಕಾಂಶವನ್ನು ಒದಗಿಸುತ್ತದೆ. ಇದರಿಂದ ಕಣ್ಣಿಗೆ ಸೋಂಕು ತಗುಲುವುದನ್ನೂ ತಡೆಯಲು ಸಹಕಾರಿಯಾಗುತ್ತದೆ. ಆದರೆ ಈ ಸಮಸ್ಯೆ ನಿರಂತರವಾದರೆ ತಕ್ಷಣವೇ ವೈದ್ಯರನ್ನು ಭೇಟಿ ಮಾಡುವುದು ಅವಶ್ಯಕ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications