Latest Updates
-
ಅಪಾರ್ಟ್ಮೆಂಟ್ನಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ: ದಂಡ ತಪ್ಪಿಸಿ, ಸುಲಭವಾಗಿ ವಿಸರ್ಜನೆ ಮಾಡುವುದು ಹೇಗೆ? -
ಓಣಂ ಸದ್ಯದ ಸಂಭ್ರಮ: ಬೆಲೆ ಏರಿಕೆ ಮತ್ತು ಆರೋಗ್ಯದ ಚಿಂತೆಯಿಲ್ಲದೆ ಹಬ್ಬ ಆಚರಿಸುವುದು ಹೇಗೆ? -
ಆಗಸ್ಟ್ 2026 ಏಕಾದಶಿ: ಸ್ಮಾರ್ತ vs ವೈಷ್ಣವ ವ್ರತದ ದಿನಾಂಕಗಳ ಗೊಂದಲವೇ? ಮಧುಮೇಹಿಗಳಿಗೆ ಇಲ್ಲಿದೆ ಉಪವಾಸದ ಸೂತ್ರ! -
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ನಿಮ್ಮ ಮಕ್ಕಳೊಂದಿಗೆ ಚಂದ್ರನ ರಹಸ್ಯಗಳನ್ನು ಅನ್ವೇಷಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಓಣಂ ಹಬ್ಬದ ಸಂಭ್ರಮ: ಮಳೆಯಲ್ಲೂ ಸ್ಟೈಲಿಶ್ ಆಗಿ ಕಾಣಲು ₹1,200 ರೊಳಗೆ ಬೆಸ್ಟ್ ಫ್ಯಾಷನ್ ಟಿಪ್ಸ್! -
ಮಳೆಗಾಲದಲ್ಲಿ ಹಿರಿಯರು ಜಾರಿ ಬೀಳುವ ಆತಂಕವೇ? ಸುರಕ್ಷಿತವಾಗಿರಲು ಈ 12 ನಿಮಿಷಗಳ ಚೇರ್-ಯೋಗ ಟ್ರೈ ಮಾಡಿ! -
ಹಿರಿಯರ ಆರೋಗ್ಯಕ್ಕೆ ದಿನಕ್ಕೆ 12 ನಿಮಿಷದ 'ಚೇರ್ ಯೋಗ': ಚೈತನ್ಯ ಮತ್ತು ಸಮತೋಲನಕ್ಕೆ ಇದುವೇ ಮಂತ್ರ! -
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್! -
ಸಸ್ಯಜನ್ಯ ಹಾಲು: ತೂಕ ಇಳಿಕೆ ಮತ್ತು ಮಧುಮೇಹ ನಿಯಂತ್ರಣಕ್ಕೆ ಇದುವೇ ಬೆಸ್ಟ್ ಪರ್ಯಾಯ!
ಕಣ್ಣಿಗೆ ಅಲರ್ಜಿ ಆದರೆ ಏನು ಮಾಡಬೇಕು?

ಧೂಳು, ಪ್ರಾಣಿಗಳ ಕೂದಲು, ಹೊಗೆ ಮುಂತಾದುವು ಕಣ್ಣುಗಳಲ್ಲಿ ಸೇರಿಕೊಂಡು ಕಣ್ಣಿನಲ್ಲಿ ಉರಿ, ತುರಿಕೆ, ಊತ, ಕೆಂಪಗಾಗುವುದು ಮತ್ತು ನೋವು ಕಾಣಿಸಿಕೊಳ್ಳುತ್ತದೆ. ಕೆಲವರಿಗೆ ಕಣ್ಣು ಮಂಜಾಗುವ ಸಮಸ್ಯೆ ಕೂಡ ಬರುತ್ತೆ.
ಈ ಕಣ್ಣಿನ ಅಲರ್ಜಿಯಿಂದ ತಪ್ಪಿಸಿಕೊಳ್ಳುವುದು ಹೇಗೆ?
1. ಕಣ್ಣುಗಳನ್ನು ಉಜ್ಜಬೇಡಿ: ಕಣ್ಣುಗಳನ್ನು ಉಜ್ಜುವುದರಿಂದ ಕಣ್ಣಿನ ಟಿಶ್ಯೂಗಳಿಗೆ ಹಾನಿಯುಂಟಾಗುತ್ತದೆ. ನಿಮ್ಮ ಕೈಯ್ಯಲ್ಲಿ ಕಾಣದ ಧೂಳಿದ್ದರೆ ಅದೂ ಕೂಡ ನಿಮ್ಮ ಕಣ್ಣಿನ ಒಳಹೊಕ್ಕುತ್ತದೆ.
2. ಕೈಗಳು ಶುದ್ಧವಾಗಿರಲಿ: ಆಗಿಂದಾಗ್ಗೆ ನಿಮ್ಮ ಕೈಗಳನ್ನು ಸೋಪ್ ಅಥವಾ ಹ್ಯಾಂಡ್ ವಾಶ್ ನಿಂದ ಸ್ವಚ್ಛಗೊಳಿಸುತ್ತಿರಿ. ನಿಮ್ಮ ಕೈಗಳು ಶುದ್ಧವಿದ್ದರೆ ನೀವು ಗೊತ್ತಿಲ್ಲದೆ ನಿಮ್ಮ ಕಣ್ಣುಗಳನ್ನು ಮುಟ್ಟಿಕೊಂಡರೂ ತೊಂದರೆಯಾಗುವುದಿಲ್ಲ.
3. ಬೆಡ್ ಶೀಟ್ ಮತ್ತು ದಿಂಬಿನ ಕವರ್ ಬದಲಿಸುತ್ತಿರಿ: ವಾರಕ್ಕೊಮ್ಮೆಯಾದರೂ ನೀವು ಮಲಗುವ ಹಾಸಿಗೆಯ ಬೆಡ್ ಶೀಟ್ ಮತ್ತು ದಿಂಬಿನ ಕವರ್ ಗಳನ್ನು ಬಿಸಿ ನೀರಿನಲ್ಲಿ ನೆನೆಸಿ ಒಗೆಯಿರಿ. ಬಿಸಿ ನೀರು ಧೂಳಿನಿಂದ ಬರುವ ಕೀಟಾಣುಗಳನ್ನು ನಿವಾರಿಸುತ್ತದೆ.
4. ಕಣ್ಣಿಗೆ ಕಾಸ್ಮೆಟಿಕ್ ಬೇಡ: ಕಣ್ಣಿನ ಶೃಂಗಾರಕ್ಕೆಂದು ಬಳಸುವ ಅನೇಕ ಕಾಸ್ಮೆಟಿಕ್ ಗಳು ಕಣ್ಣಿಗೆ ಅಲರ್ಜಿ ಉಂಟು ಮಾಡಬಹುದು ಅಥವಾ ನೀವು ಕಣ್ಣಿಗೆ ಕಾಸ್ಮೆಟಿಕ್ ಹಚ್ಚಿಕೊಂಡ ತಕ್ಷಣವೇ ಏನಾದರೂ ತುರಿಕೆ ಉಂಟು ಮಾಡಿದರೆ ಅದು ಅಲರ್ಜಿಯ ಲಕ್ಷಣವೆಂದು ದೂರವಿರಿಸಿದರೆ ಉತ್ತಮ.
5. ಕಾಸ್ಮೆಟಿಕ್ ಹಂಚಿಕೊಳ್ಳಬೇಡಿ: ನಿಮ್ಮ ಮೇಕಪ್ ವಸ್ತುಗಳನ್ನು ಇನ್ನೊಬ್ಬರಿಗೂ ನೀಡಬೇಡಿ, ನೀವೂ ಬೇರೆಯವರ ವಸ್ತುವನ್ನು ಬಳಸಬೇಡಿ. ಇದು ಸೋಂಕು ತಗುಲಬಹುದಾದ ಬ್ಯಾಕ್ಟೀರಿಯಾಗಳನ್ನು ಅತಿ ಬೇಗನೆ ರವಾನಿಸುತ್ತದೆ.
6. ತುಂಬಾ ಉರಿ ಉಂಟಾಗಿ, ಸಹಿಸಿಕೊಳ್ಳದ ನೋವುಂಟಾದರೆ ತಕ್ಷಣವೇ ನೇತ್ರ ತಜ್ಞರನ್ನು ಭೇಟಿ ಮಾಡಿ ಪರೀಕ್ಷೆ ಮಾಡಿಸಿಕೊಂಡು ಸೂಕ್ತ ಚಿಕಿತ್ಸೆಯನ್ನು ಪಡೆದುಕೊಳ್ಳಿ. ಇಲ್ಲದಿದ್ದರೆ ಸಣ್ಣ ನಿರ್ಲಕ್ಷ್ಯ ದೊಡ್ಡ ತೊಂದರೆಯನ್ನು ತಂದೊಡ್ಡಬಹುದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications