Latest Updates
-
ಬಿಸಿಲು ಅಥವಾ ಮಳೆ: ಹವಾಮಾನದ ಅಬ್ಬರದ ನಡುವೆಯೂ ನಿಮ್ಮ ಮದುವೆ ಸಂಭ್ರಮವನ್ನು ಅಚ್ಚುಕಟ್ಟಾಗಿ ಪ್ಲಾನ್ ಮಾಡುವುದು ಹೇಗೆ? -
ಬಿಸಿಲ ಧಗೆಗೆ ಬಾಲ್ಕನಿ ಗಿಡಗಳು ಒಣಗುತ್ತಿವೆಯೇ? ನಿಮ್ಮ ಮನೆಯನ್ನು ತಂಪಾಗಿರಿಸಲು ಮತ್ತು ಗಿಡಗಳನ್ನು ಉಳಿಸಲು ಇಲ್ಲಿವೆ ಅದ್ಭುತ ಟಿಪ್ಸ್! -
ಬಿಸಿಲ ಬೇಗೆಯಿಂದ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಅಡುಗೆ ಮನೆಯಲ್ಲಿರುವ ಈ ಪದಾರ್ಥಗಳೇ ಸಾಕು, ಇಂದೇ ಟ್ರೈ ಮಾಡಿ! -
ಕಾನ್ 2026 ರೆಡ್ ಕಾರ್ಪೆಟ್ನಲ್ಲಿ ಭಾರತೀಯ ತಾರೆಯರ ಮಿಂಚಿನ ಸಂಚಲನ: ಈ ಫ್ಯಾಷನ್ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಬಿಸಿಲ ಬೇಗೆಯಲ್ಲಿ ವರ್ಕೌಟ್ ಮಾಡ್ತಿದ್ದೀರಾ? ನಿಮ್ಮ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ, ಎಚ್ಚರ! -
ಕರಣ್-ತೇಜಸ್ವಿ ಗುಟ್ಟಾಗಿ ಮದುವೆಯಾದ್ರಾ? ವೈರಲ್ ವಿಡಿಯೋ ಹಿಂದಿನ ಅಸಲಿ ಸತ್ಯ ಇಲ್ಲಿದೆ! -
ಮುಂಬೈನಲ್ಲಿ ನೀರು ಕಡಿತ: ಬಿಎಂಸಿ ಎಚ್ಚರಿಕೆ ಬೆನ್ನಲ್ಲೇ ಮನೆಯಲ್ಲಿ ನೀರು ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಬಿಸಿಲಿನ ತಾಪಕ್ಕೆ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಆಹಾರಗಳೇ ಮದ್ದು! -
ಕಿರೀಟ ಯಾರ ಪಾಲಾಗಲಿದೆ? ದೆಹಲಿಯಲ್ಲಿ ಮಿಸ್ ಗ್ರ್ಯಾಂಡ್ ಇಂಡಿಯಾ 2026 ಫಿನಾಲೆ ಸಂಭ್ರಮದ ಕ್ಷಣಗಳು -
ಹವಾಮಾನದಲ್ಲಿ ಭಾರಿ ಬದಲಾವಣೆ: ಮೇ 12-13 ರಂದು ಹೊರಗೆ ಹೋಗುವ ಮುನ್ನ ಈ ಎಚ್ಚರಿಕೆ ಮರೆಯದಿರಿ!
ಮಳೆಗಾಲದಲ್ಲಿ ಮೈ ಮನ ಮರುಗದಿರಲಿ

ಮಳೆಗಾಲದಲ್ಲಿ ಅನುಸರಿಸಬೇಕಾದ ಆಹಾರ ನಿಯಮಗಳು:
1. ತಾಜಾ ಆಹಾರವನ್ನೇ ಸೇವಿಸಿ. ಹಣ್ಣು ಮತ್ತು ತರಕಾರಿಗಳನ್ನು ಬಿಸಿ ನೀರಿನಲ್ಲಿ ಶುದ್ಧವಾಗಿ ತೊಳೆದ ನಂತರವಷ್ಟೇ ಸೇವನೆ ಮಾಡಿ.
2. ಅತಿಯಾದ ಎಣ್ಣೆಯಿರುವ ಆಹಾರವನ್ನು ಸೇವಿಸಬೇಡಿ. ಹೊಟ್ಟೆಗೆ ಲಘುವಾಗಿ ಮಾತ್ರ ಆಹಾರವಿರಲಿ ಮತ್ತು ಧಾನ್ಯಗಳು ನಿಮ್ಮ ಆಹಾರದಲ್ಲಿ ಭಾಗಿಯಾಗಿರಲಿ.
3. ಕಹಿ ತರಕಾರಿಗಳಾದ ಬೇವು, ಹಾಗಲಕಾಯಿ, ಅರಿಶಿನ, ಪಡುವಲಕಾಯಿ, ಗೋರಿಕಾಯಿ, ಮೆಂತ್ಯೆಯನ್ನು ಆಹಾರದಲ್ಲಿ ಹೆಚ್ಚು ಬೆಳೆಸಿದರೆ ರೋಗಗಳನ್ನು ತಡೆಗಟ್ಟುವ ಮತ್ತು ಅವುಗಳ ವಿರುದ್ಧ ಹೋರಾಡುವ ಶಕ್ತಿ ನೀಡುತ್ತದೆ.
4. ಸಾಸಿವೆ, ಕಡಲೆಕಾಯಿ ಮತ್ತು ಎಳ್ಳೆಣ್ಣೆಯನ್ನು ಈ ಕಾಲದಲ್ಲಿ ಆದಷ್ಟು ತ್ಯಜಿಸಿದರೆ ಒಳಿತು.
5. ಅತಿಯಾಗಿಯೂ ತಿನ್ನಬೇಡಿ, ತಿನ್ನದೆಯೂ ಇರಬೇಡಿ. ಸಮತೋಲನವಾಗಿ ಆಹಾರ ಸೇವನೆ ನಿಮ್ಮದಿರಲಿ.
6. ಹೆಚ್ಚು ಕಾಫಿ ಮತ್ತು ಟೀ ಕುಡಿಯದೆ, ಟೀ ನಲ್ಲಿ ವಿಶೇಷವಾಗಿರುವ ಶುಂಠಿ ಮತ್ತು ಮಿಂಟ್ ಟೀ ಸೇವನೆ ಈ ಕಾಲಕ್ಕೆ ನಿಮ್ಮ ಆರೋಗ್ಯವನ್ನು ವೃದ್ದಿಸುತ್ತದೆ.
7. ಬೆಳ್ಳುಳ್ಳಿ, ಮೆಣಸು, ಇಂಗು, ಶುಂಠಿ, ಜೀರಿಗೆ, ಅರಿಶಿನ ಮತ್ತು ಕೊತ್ತಂಬರಿಯನ್ನು ಅಡುಗೆಗೆ ಹೆಚ್ಚು ಬಳಸಿ.
8. ಮಾಂಸಾಹಾರಿಗಳು ಸೂಪ್ ಗಳ ಸೇವನೆ ಮಾಡಿದರೆ ಉತ್ತಮ, ಹುರಿದ ಮಾಂಸ, ಮೀನು ಮಳೆಗಾಲದ ಆಹಾರವಾಗದಿರಲಿ.
9. ತೊಳೆದಿದ್ದರೂ ಕೂಡ ತರಕಾರಿಗಳಲ್ಲಿ ಕೀಟಾಣುಗಳು ಉಳಿದುಕೊಂಡಿರುವ ಸಾಧ್ಯತೆ ಹೆಚ್ಚಿರುವುದರಿಂದ ಬೇಯಿಸಿದ ಆಹಾರವನ್ನೇ ಸೇವಿಸಿ.
10. ಉಪ್ಪಿನಕಾಯಿ, ಹುಣಸೆ, ಚಟ್ನಿ ಇಂತಹವುಗಳ ಸೇವನೆ ಕಡಿಮೆ ಮಾಡಿ. ಇದು ದೇಹವನ್ನು ಭಾರವೆನಿಸುವಂತೆ ಮಾಡುತ್ತದೆ.
11. ಶೀತ ಮತ್ತು ಕೆಮ್ಮಿನ ವಿರುದ್ಧ ಹೋರಾಡಲು ಮೂಲಂಗಿ ರಸ ಸೇವಿನೆ ನಿಮ್ಮದಿರಲಿ.
12. ಮಳೆಗಾಲದಲ್ಲಿ ಬಿಸಿ ನೀರನ್ನು ಕುಡಿಯುವುದೇ ಒಳಿತು. ಹೊರಗೆ ಹೋದಾಗಲೂ ಬಿಸಿ ನೀರು ನಿಮ್ಮೊಂದಿಗಿರಲಿ.
ಆರೋಗ್ಯ ಚೆನ್ನಾಗಿದ್ದರೆ ಮಾತ್ರ ಮಳೆಗಾಲದ ಆನಂದವನ್ನು ಅನುಭವಿಸಲು ಸಾಧ್ಯ. ಆದ್ದರಿಂದ ಆರೋಗ್ಯ ಕೆಡಿಸಿಕೊಳ್ಳದಂತೆ ಮುನ್ನೆಚ್ಚರಿಕೆ ಕ್ರಮ ವಹಿಸಿ ರೋಗಗಳಿಂದ ದೂರವುಳಿದು ಮಳೆಗಾಲದ ಸಂತಸವನ್ನು ಪಡೆಯಿರಿ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications