Latest Updates
-
ಪೀನಟ್ ಬಟರ್ನಲ್ಲಿ ವಿಷಕಾರಿ ಶಿಲೀಂಧ್ರ? ನಿಮ್ಮ ಆರೋಗ್ಯ ಕಾಪಾಡಲು ಈ ವಿಷಯಗಳನ್ನು ಮರೆಯದಿರಿ -
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು! -
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ! -
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು? -
ಭಾರತದ ಆಕಾಶದಲ್ಲಿ ಬೆಂಕಿಯ ಉಂಡೆಗಳ ಸಂಭ್ರಮ: ಈ ಅದ್ಭುತ ಉಲ್ಕಾಪಾತವನ್ನು ಮಿಸ್ ಮಾಡ್ಬೇಡಿ! -
ಶ್ವಾಸಕೋಶದ ಆರೋಗ್ಯಕ್ಕೆ 7 ನಿಮಿಷದ ಬೆಳಗಿನ ಅಭ್ಯಾಸ: ಕಲುಷಿತ ಗಾಳಿಯಿಂದ ರಕ್ಷಣೆ ಪಡೆಯುವುದು ಹೇಗೆ? -
ಡೇಟಿಂಗ್ ಆಪ್ ಬಳಸುತ್ತೀರಾ? ಈ 'ರೆಡ್ ಫ್ಲ್ಯಾಗ್'ಗಳಿದ್ದರೆ ನೀವು ಹನಿಟ್ರ್ಯಾಪ್ ಬಲೆಗೆ ಬೀಳಬಹುದು! -
ವಿದ್ಯುತ್ ಬಿಲ್ ಚಿಂತೆಯೇ? ಪಿಎಂ ಸೂರ್ಯ ಘರ್ ಯೋಜನೆಯಲ್ಲಿ 5.75% ಬಡ್ಡಿಗೆ ಸೋಲಾರ್ ಪಡೆಯಿರಿ!
ಮಳೆಗಾಲದಲ್ಲಿ ಮೈ ಮನ ಮರುಗದಿರಲಿ

ಮಳೆಗಾಲದಲ್ಲಿ ಅನುಸರಿಸಬೇಕಾದ ಆಹಾರ ನಿಯಮಗಳು:
1. ತಾಜಾ ಆಹಾರವನ್ನೇ ಸೇವಿಸಿ. ಹಣ್ಣು ಮತ್ತು ತರಕಾರಿಗಳನ್ನು ಬಿಸಿ ನೀರಿನಲ್ಲಿ ಶುದ್ಧವಾಗಿ ತೊಳೆದ ನಂತರವಷ್ಟೇ ಸೇವನೆ ಮಾಡಿ.
2. ಅತಿಯಾದ ಎಣ್ಣೆಯಿರುವ ಆಹಾರವನ್ನು ಸೇವಿಸಬೇಡಿ. ಹೊಟ್ಟೆಗೆ ಲಘುವಾಗಿ ಮಾತ್ರ ಆಹಾರವಿರಲಿ ಮತ್ತು ಧಾನ್ಯಗಳು ನಿಮ್ಮ ಆಹಾರದಲ್ಲಿ ಭಾಗಿಯಾಗಿರಲಿ.
3. ಕಹಿ ತರಕಾರಿಗಳಾದ ಬೇವು, ಹಾಗಲಕಾಯಿ, ಅರಿಶಿನ, ಪಡುವಲಕಾಯಿ, ಗೋರಿಕಾಯಿ, ಮೆಂತ್ಯೆಯನ್ನು ಆಹಾರದಲ್ಲಿ ಹೆಚ್ಚು ಬೆಳೆಸಿದರೆ ರೋಗಗಳನ್ನು ತಡೆಗಟ್ಟುವ ಮತ್ತು ಅವುಗಳ ವಿರುದ್ಧ ಹೋರಾಡುವ ಶಕ್ತಿ ನೀಡುತ್ತದೆ.
4. ಸಾಸಿವೆ, ಕಡಲೆಕಾಯಿ ಮತ್ತು ಎಳ್ಳೆಣ್ಣೆಯನ್ನು ಈ ಕಾಲದಲ್ಲಿ ಆದಷ್ಟು ತ್ಯಜಿಸಿದರೆ ಒಳಿತು.
5. ಅತಿಯಾಗಿಯೂ ತಿನ್ನಬೇಡಿ, ತಿನ್ನದೆಯೂ ಇರಬೇಡಿ. ಸಮತೋಲನವಾಗಿ ಆಹಾರ ಸೇವನೆ ನಿಮ್ಮದಿರಲಿ.
6. ಹೆಚ್ಚು ಕಾಫಿ ಮತ್ತು ಟೀ ಕುಡಿಯದೆ, ಟೀ ನಲ್ಲಿ ವಿಶೇಷವಾಗಿರುವ ಶುಂಠಿ ಮತ್ತು ಮಿಂಟ್ ಟೀ ಸೇವನೆ ಈ ಕಾಲಕ್ಕೆ ನಿಮ್ಮ ಆರೋಗ್ಯವನ್ನು ವೃದ್ದಿಸುತ್ತದೆ.
7. ಬೆಳ್ಳುಳ್ಳಿ, ಮೆಣಸು, ಇಂಗು, ಶುಂಠಿ, ಜೀರಿಗೆ, ಅರಿಶಿನ ಮತ್ತು ಕೊತ್ತಂಬರಿಯನ್ನು ಅಡುಗೆಗೆ ಹೆಚ್ಚು ಬಳಸಿ.
8. ಮಾಂಸಾಹಾರಿಗಳು ಸೂಪ್ ಗಳ ಸೇವನೆ ಮಾಡಿದರೆ ಉತ್ತಮ, ಹುರಿದ ಮಾಂಸ, ಮೀನು ಮಳೆಗಾಲದ ಆಹಾರವಾಗದಿರಲಿ.
9. ತೊಳೆದಿದ್ದರೂ ಕೂಡ ತರಕಾರಿಗಳಲ್ಲಿ ಕೀಟಾಣುಗಳು ಉಳಿದುಕೊಂಡಿರುವ ಸಾಧ್ಯತೆ ಹೆಚ್ಚಿರುವುದರಿಂದ ಬೇಯಿಸಿದ ಆಹಾರವನ್ನೇ ಸೇವಿಸಿ.
10. ಉಪ್ಪಿನಕಾಯಿ, ಹುಣಸೆ, ಚಟ್ನಿ ಇಂತಹವುಗಳ ಸೇವನೆ ಕಡಿಮೆ ಮಾಡಿ. ಇದು ದೇಹವನ್ನು ಭಾರವೆನಿಸುವಂತೆ ಮಾಡುತ್ತದೆ.
11. ಶೀತ ಮತ್ತು ಕೆಮ್ಮಿನ ವಿರುದ್ಧ ಹೋರಾಡಲು ಮೂಲಂಗಿ ರಸ ಸೇವಿನೆ ನಿಮ್ಮದಿರಲಿ.
12. ಮಳೆಗಾಲದಲ್ಲಿ ಬಿಸಿ ನೀರನ್ನು ಕುಡಿಯುವುದೇ ಒಳಿತು. ಹೊರಗೆ ಹೋದಾಗಲೂ ಬಿಸಿ ನೀರು ನಿಮ್ಮೊಂದಿಗಿರಲಿ.
ಆರೋಗ್ಯ ಚೆನ್ನಾಗಿದ್ದರೆ ಮಾತ್ರ ಮಳೆಗಾಲದ ಆನಂದವನ್ನು ಅನುಭವಿಸಲು ಸಾಧ್ಯ. ಆದ್ದರಿಂದ ಆರೋಗ್ಯ ಕೆಡಿಸಿಕೊಳ್ಳದಂತೆ ಮುನ್ನೆಚ್ಚರಿಕೆ ಕ್ರಮ ವಹಿಸಿ ರೋಗಗಳಿಂದ ದೂರವುಳಿದು ಮಳೆಗಾಲದ ಸಂತಸವನ್ನು ಪಡೆಯಿರಿ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications