Latest Updates
-
ಗಣೇಶ ವಿಸರ್ಜನೆ: ಮೂರ್ತಿ ಹೊರುವಾಗ ಬೆನ್ನು ನೋವು ಕಾಡದಿರಲು ಈ ಸರಳ ಟಿಪ್ಸ್ ಪಾಲಿಸಿ -
ಸಣ್ಣ ಫ್ಲ್ಯಾಟ್ನಲ್ಲಿ ಗಣೇಶೋತ್ಸವ: ಅತಿಥಿಗಳಿಗಾಗಿ ಜಾಗ ಮತ್ತು ಸುರಕ್ಷತೆಗಾಗಿ ಈ 5 ಟಿಪ್ಸ್ ಫಾಲೋ ಮಾಡಿ -
ಗಣೇಶೋತ್ಸವದ ಪ್ರಸಾದ ಬೇಗ ಹಾಳಾಗುತ್ತಿದೆಯೇ? ಮೋದಕ ಮತ್ತು ಸಿಹಿ ತಿಂಡಿಗಳನ್ನು ತಾಜಾವಾಗಿಡಲು ಈ ಟಿಪ್ಸ್ ಪಾಲಿಸಿ! -
ಗಣೇಶೋತ್ಸವ 2026: ಲಾಲ್ಬಾಗ್ಚಾ ರಾಜನ ದರ್ಶನಕ್ಕೆ ಬೆಸ್ಟ್ ಟೈಮ್ ಯಾವುದು? ಮೆಟ್ರೋ ಮತ್ತು ಲೈವ್ ಅಪ್ಡೇಟ್ಸ್ ಇಲ್ಲಿದೆ! -
ಹಬ್ಬದ ಪೂಜೆಯ ವೇಳೆ ಮೊಣಕಾಲು ಮತ್ತು ಬೆನ್ನು ನೋವು ಕಾಡುತ್ತಿದೆಯೇ? ನೋವಿಲ್ಲದೆ ಪೂಜೆ ಮಾಡಲು ಇಲ್ಲಿದೆ 10 ನಿಮಿಷಗಳ ಸಿಂಪಲ್ ಟಿಪ್ಸ್! -
ಗಣೇಶೋತ್ಸವದ ಸೌಂಡ್ ಕಿರಿಕಿರಿ: ನೆರೆಹೊರೆಯವರ ಜೊತೆ ಜಗಳವಿಲ್ಲದೆ ನೆಮ್ಮದಿಯ ನಿದ್ರೆ ಪಡೆಯುವುದು ಹೇಗೆ? -
ದೆಹಲಿ ಮಳೆ: ನಿಮ್ಮ ಮನೆಯಲ್ಲಿ ಬೂಷ್ಟು ಮತ್ತು ತೇವಾಂಶ ತಡೆಯಲು 45 ನಿಮಿಷದ ಸಿಂಪಲ್ ಪ್ಲಾನ್! -
ಗಣೇಶ ಹಬ್ಬದ ಮೋದಕ: ಶುಗರ್ ಏರಿಕೆಯಾಗದಂತೆ ಸವಿಯಲು ಇಲ್ಲಿವೆ 5 ಆರೋಗ್ಯಕರ ಟಿಪ್ಸ್ -
ಐಫೋನ್ 18 ಪ್ರೋ ಪ್ರೀ-ಆರ್ಡರ್: ₹7,000 ಕ್ಯಾಶ್ಬ್ಯಾಕ್ ಪಡೆಯುವುದು ಹೇಗೆ? ನಕಲಿ ಆಫರ್ಗಳಿಂದ ಎಚ್ಚರ! -
ದೆಹಲಿ ಮಳೆ: ಜಾರಿ ಬೀಳದಂತೆ ಎಚ್ಚರ, ಬೆನ್ನುನೋವಿನಿಂದ ಮುಕ್ತಿ ಪಡೆಯಲು 12 ನಿಮಿಷದ ವರ್ಕೌಟ್ ರೂಟಿನ್!
ಮಳೆಗಾಲದಲ್ಲಿ ಮೈ ಮನ ಮರುಗದಿರಲಿ

ಮಳೆಗಾಲದಲ್ಲಿ ಅನುಸರಿಸಬೇಕಾದ ಆಹಾರ ನಿಯಮಗಳು:
1. ತಾಜಾ ಆಹಾರವನ್ನೇ ಸೇವಿಸಿ. ಹಣ್ಣು ಮತ್ತು ತರಕಾರಿಗಳನ್ನು ಬಿಸಿ ನೀರಿನಲ್ಲಿ ಶುದ್ಧವಾಗಿ ತೊಳೆದ ನಂತರವಷ್ಟೇ ಸೇವನೆ ಮಾಡಿ.
2. ಅತಿಯಾದ ಎಣ್ಣೆಯಿರುವ ಆಹಾರವನ್ನು ಸೇವಿಸಬೇಡಿ. ಹೊಟ್ಟೆಗೆ ಲಘುವಾಗಿ ಮಾತ್ರ ಆಹಾರವಿರಲಿ ಮತ್ತು ಧಾನ್ಯಗಳು ನಿಮ್ಮ ಆಹಾರದಲ್ಲಿ ಭಾಗಿಯಾಗಿರಲಿ.
3. ಕಹಿ ತರಕಾರಿಗಳಾದ ಬೇವು, ಹಾಗಲಕಾಯಿ, ಅರಿಶಿನ, ಪಡುವಲಕಾಯಿ, ಗೋರಿಕಾಯಿ, ಮೆಂತ್ಯೆಯನ್ನು ಆಹಾರದಲ್ಲಿ ಹೆಚ್ಚು ಬೆಳೆಸಿದರೆ ರೋಗಗಳನ್ನು ತಡೆಗಟ್ಟುವ ಮತ್ತು ಅವುಗಳ ವಿರುದ್ಧ ಹೋರಾಡುವ ಶಕ್ತಿ ನೀಡುತ್ತದೆ.
4. ಸಾಸಿವೆ, ಕಡಲೆಕಾಯಿ ಮತ್ತು ಎಳ್ಳೆಣ್ಣೆಯನ್ನು ಈ ಕಾಲದಲ್ಲಿ ಆದಷ್ಟು ತ್ಯಜಿಸಿದರೆ ಒಳಿತು.
5. ಅತಿಯಾಗಿಯೂ ತಿನ್ನಬೇಡಿ, ತಿನ್ನದೆಯೂ ಇರಬೇಡಿ. ಸಮತೋಲನವಾಗಿ ಆಹಾರ ಸೇವನೆ ನಿಮ್ಮದಿರಲಿ.
6. ಹೆಚ್ಚು ಕಾಫಿ ಮತ್ತು ಟೀ ಕುಡಿಯದೆ, ಟೀ ನಲ್ಲಿ ವಿಶೇಷವಾಗಿರುವ ಶುಂಠಿ ಮತ್ತು ಮಿಂಟ್ ಟೀ ಸೇವನೆ ಈ ಕಾಲಕ್ಕೆ ನಿಮ್ಮ ಆರೋಗ್ಯವನ್ನು ವೃದ್ದಿಸುತ್ತದೆ.
7. ಬೆಳ್ಳುಳ್ಳಿ, ಮೆಣಸು, ಇಂಗು, ಶುಂಠಿ, ಜೀರಿಗೆ, ಅರಿಶಿನ ಮತ್ತು ಕೊತ್ತಂಬರಿಯನ್ನು ಅಡುಗೆಗೆ ಹೆಚ್ಚು ಬಳಸಿ.
8. ಮಾಂಸಾಹಾರಿಗಳು ಸೂಪ್ ಗಳ ಸೇವನೆ ಮಾಡಿದರೆ ಉತ್ತಮ, ಹುರಿದ ಮಾಂಸ, ಮೀನು ಮಳೆಗಾಲದ ಆಹಾರವಾಗದಿರಲಿ.
9. ತೊಳೆದಿದ್ದರೂ ಕೂಡ ತರಕಾರಿಗಳಲ್ಲಿ ಕೀಟಾಣುಗಳು ಉಳಿದುಕೊಂಡಿರುವ ಸಾಧ್ಯತೆ ಹೆಚ್ಚಿರುವುದರಿಂದ ಬೇಯಿಸಿದ ಆಹಾರವನ್ನೇ ಸೇವಿಸಿ.
10. ಉಪ್ಪಿನಕಾಯಿ, ಹುಣಸೆ, ಚಟ್ನಿ ಇಂತಹವುಗಳ ಸೇವನೆ ಕಡಿಮೆ ಮಾಡಿ. ಇದು ದೇಹವನ್ನು ಭಾರವೆನಿಸುವಂತೆ ಮಾಡುತ್ತದೆ.
11. ಶೀತ ಮತ್ತು ಕೆಮ್ಮಿನ ವಿರುದ್ಧ ಹೋರಾಡಲು ಮೂಲಂಗಿ ರಸ ಸೇವಿನೆ ನಿಮ್ಮದಿರಲಿ.
12. ಮಳೆಗಾಲದಲ್ಲಿ ಬಿಸಿ ನೀರನ್ನು ಕುಡಿಯುವುದೇ ಒಳಿತು. ಹೊರಗೆ ಹೋದಾಗಲೂ ಬಿಸಿ ನೀರು ನಿಮ್ಮೊಂದಿಗಿರಲಿ.
ಆರೋಗ್ಯ ಚೆನ್ನಾಗಿದ್ದರೆ ಮಾತ್ರ ಮಳೆಗಾಲದ ಆನಂದವನ್ನು ಅನುಭವಿಸಲು ಸಾಧ್ಯ. ಆದ್ದರಿಂದ ಆರೋಗ್ಯ ಕೆಡಿಸಿಕೊಳ್ಳದಂತೆ ಮುನ್ನೆಚ್ಚರಿಕೆ ಕ್ರಮ ವಹಿಸಿ ರೋಗಗಳಿಂದ ದೂರವುಳಿದು ಮಳೆಗಾಲದ ಸಂತಸವನ್ನು ಪಡೆಯಿರಿ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
