Latest Updates
-
ಬಿಸಿಗಾಳಿಯ ನಡುವೆ ಮದುವೆ ಸಂಭ್ರಮ: ಅತಿಥಿಗಳ ಸುರಕ್ಷತೆಗಾಗಿ ನೀವು ಮಾಡಲೇಬೇಕಾದ ಬದಲಾವಣೆಗಳಿವು! -
ಬಿಸಿಗಾಳಿಯ ಅಬ್ಬರ ಶುರು: ನಿಮ್ಮ ಮನೆ ತಂಪಾಗಿರಲು ಮತ್ತು ಗಿಡಗಳನ್ನು ಉಳಿಸಲು ಈ ಸೀಕ್ರೆಟ್ ಟಿಪ್ಸ್ ಮಿಸ್ ಮಾಡ್ಬೇಡಿ! -
ಸುಡುವ ಬಿಸಿಲಿಗೆ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಆಹಾರ ಕ್ರಮ ಪಾಲಿಸಿ! -
ಮದರ್ಸ್ ಡೇ 2026: ಅಮ್ಮನಿಗೆ ಸರ್ಪ್ರೈಸ್ ನೀಡಲು ಈ ವೈರಲ್ ಟ್ರೆಂಡ್ಸ್ ಫಾಲೋ ಮಾಡಿ, ಮಿಸ್ ಮಾಡ್ಬೇಡಿ! -
ಅಮ್ಮನಿಗೆ ಈ ಬಾರಿ ವಿಶೇಷ ಉಡುಗೊರೆ: ತಾಯಂದಿರ ದಿನದಂದು 20 ನಿಮಿಷದ ಯೋಗದ ಮ್ಯಾಜಿಕ್! -
ದೆಹಲಿ ಮಳೆಯಲ್ಲಿ ಮದುವೆ ಸಂಭ್ರಮಕ್ಕೆ ಅಡ್ಡಿಯೇ? ಈ ಸಣ್ಣ ಬದಲಾವಣೆಗಳು ನಿಮ್ಮ ಮದುವೆಯನ್ನು ಉಳಿಸುತ್ತವೆ! -
ಬಿರುಗಾಳಿ ಅಬ್ಬರಕ್ಕೆ ಬಾಲ್ಕನಿ ಗಾರ್ಡನ್ ಹಾಳಾಗುತ್ತಾ? ನಿಮ್ಮ ಮನೆ ಮತ್ತು ಗಿಡಗಳನ್ನು ರಕ್ಷಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಬಿಸಿಲಿನ ಬೇಗೆಗೆ ಸುಸ್ತಾಗಿದ್ದೀರಾ? ದೆಹಲಿ ಸರ್ಕಾರದ ಈ 'ರಿಲೀಫ್ ವ್ಯಾನ್' ನಿಮ್ಮ ಜೀವ ರಕ್ಷಕವಾಗಬಹುದು! -
ಮೆಟ್ ಗಾಲಾ 2026: ದುಬಾರಿ ಫ್ಯಾಷನ್ ಅನ್ನು ನಮ್ಮೂರಿನ ಕ್ರಿಯೇಟರ್ಗಳು ದೇಸಿ ಶೈಲಿಯಲ್ಲಿ ಮರುಸೃಷ್ಟಿಸಿದ್ದು ಹೇಗೆ? ಅಚ್ಚರಿ ಪಡಬೇಡಿ! -
ಹೊರಗೆ ಬಿರುಗಾಳಿ, ಮನೆಯಲ್ಲಿ ಫಿಟ್ನೆಸ್: ಇಂದಿನ ಹವಾಮಾನಕ್ಕೆ ಈ ವರ್ಕೌಟ್ ಬೆಸ್ಟ್!
ತುಳಸಿ ಎಂಬ ಪ್ರಾಚೀನ ಆಂಟಿ ವೈರಸ್

ಪವಿತ್ರ ತುಳಸಿ ಕಟ್ಟೆಗೆ ನಿತ್ಯ ಪೂಜೆ ನಡೆಯುವುದು ಮಾಮೂಲಿಯಾದರೂ ದೀಪಾವಳಿ ವೇಳೆಗೆ ತುಳಸಿಗೆ ಮದುಮಗಳ ಸಿಂಗಾರ ಸಿಗುತ್ತದೆ. ಅದು ಹಾಗಿರಲಿ, ತುಳಸಿ ನಮ್ಮ ಆರೋಗ್ಯಕ್ಕೆ ಹೇಗೆ ನೆರವಾಗುತ್ತಾಳೆ ನೋಡೋಣ.
ತುಳಸಿಗೆ ಒತ್ತಡ ನಿವಾರಕ ಗುಣವಿದೆ. ಹಿಂದೆಲ್ಲಾ ದೂರದ ಊರಿನಿಂದ ಬರುವ ಯಾತ್ರಿಕರು ತುಳಸಿ ಎಲೆಯನ್ನು ಜಗಿದು ಪ್ರಯಾಣದ ಆಯಾಸವನ್ನು ನೀಗಿಸಿಕೊಂಡು ಸಾಗುತ್ತಿದ್ದರಂತೆ.
ಪ್ರಮುಖವಾಗಿ ಎರಡು ವಿಧಗಳಲ್ಲಿ ಸಿಗುತ್ತದೆ. ಒಂದು ಕೃಷ್ಣ ತುಳಸಿ(ಕಪ್ಪಗಿನದು) ಇನ್ನೊಂದು ಶ್ರೀ ತುಳಸಿ(ಬಿಳಿಯ ವರ್ಣದ್ದು). ಒತ್ತಡ ನಿವಾರಣೆ ಜತೆಗೆ ಇದು ಅತ್ಯುತ್ತಮ ವೈರಾಣು ರಕ್ಷಕ(anti -virus). ತುಳಸಿಯ anti -virus ಗುಣದ ಬಲದಿಂದ ವಿಷಮ ಶೀತ ಜ್ವರ(viral fever), ಮಲೇರಿಯಾದಂತಹ ಕಾಯಿಲೆಯನ್ನು ಹೋಗಲಾಡಿಸಬಹುದು.
ತುಳಸಿಯ ಸಾಮಾನ್ಯ ಉಪಯೋಗಗಳು:
* ಜ್ವರಕ್ಕೆ: ಚೆನ್ನಾಗಿ ಅರೆದ ತುಳಸಿಯನ್ನು ಬಟ್ಟೆಯಲ್ಲಿ ಸೋಸಬೇಕು. ತುಳಸಿ ರಸವನ್ನು 1-2 ಟೀ ಚಮಚ(ಮಕ್ಕಳಿಗೆ) ಅಥವಾ 2-4 ಟೀ ಚಮಚ(ದೊಡ್ಡವರಿಗೆ) ಜೇನಿನೊಂದಿಗೆ ದಿನಕ್ಕೆ 2 ರಿಂದ 3 ಬಾರಿನೀಡಬಹುದು.
* ತುಳಸಿ ರಸವನ್ನು ಶ್ವಾಸಕೋಶಗಳ ಸೋಂಕು, ಕೆಮ್ಮು, ನೆಗಡಿ ಹೋಗಲಾಡಿಸಲು ಸೇವಿಸಬಹುದು.
* ಜೇಡ ಕಚ್ಚಿದರೆ ತುಳಸಿ ರಸಕ್ಕೆ ಅರಿಶಿನವನ್ನು ಬೆರೆಸಿ ಜೇಡ ಕಚ್ಚಿದ ಸ್ಥಳದ ಮೇಲೆ ಹಚ್ಚಬೇಕು. ಹಾಗೂ ಸೇವಿಸಬೇಕು.
* ಕೆಂಡದಲ್ಲಿ ಬಾಡಿಸಿದ ತುಳಸಿಯನ್ನು ಬಟ್ಟೆಯಲ್ಲಿ ಕಟ್ಟಿ ನಾಸಿಕದ ಬಳಿ ಹಿಡಿದುಕೊಂಡು ಉಸಿರನ್ನು ಒಳಗೆ ಎಳೆದುಕೊಂಡರೆ, ಕಟ್ಟಿದ ನಾಸಿಕ ಸಡಿಲವಾಗಿ ಶೀತ ಮಾಯವಾಗುತ್ತದೆ.
* ತುಳಸಿರಸ ಹಾಗೂ ಜೇನುತುಪ್ಪವನ್ನು ತಲಾ 3 ಮಿ.ಗ್ರಾಂನಷ್ಟು ಕಲೆಸಿ ಸೇವಿಸಿದರೆ ಜೀರ್ಣಶಕ್ತಿ ಹೆಚ್ಚುತ್ತದೆ.
* ತುಳಸಿ, ಮೆಣಸು, ಒಣಶುಂಠಿ ಮತ್ತು ಇದ್ದಿಲನ್ನು ಪುಡಿಮಾಡಿ ಕಷಾಯಮಾಡಿ ಕುಡಿದರೆ ನೆಗಡಿ ಗುಣವಾಗುತ್ತದೆ.
* ಮನೆಯಂಗಳದಲ್ಲಿ ತುಳಸಿ ಬೆಳೆಸುವುದರಿಂದ ವಾತಾವರಣ ಸೂಕ್ಷ್ಮಾಣು ಜೀವಿಗಳ ತೊಂದರೆಯಿಂದ ಮುಕ್ತವಾಗುತ್ತದೆ. ಮಾನವನ ದೇಹಕ್ಕೆ ಅಗತ್ಯವಾದ ಆಮ್ಲಜನಕ ಯಥೇಚ್ಛವಾಗಿ ಸಿಗುತ್ತದೆ.
* ತುಳಸಿ ಕಷಾಯವನ್ನು ಮಾಡಿ ಹಾಲು ಮತ್ತು ಸಕ್ಕರೆಯನ್ನು ಬೆರೆಸಿ ಕುಡಿಯುತ್ತ ಬಂದರೆ ದೇಹ ಸದೃಢವಾಗುತ್ತದೆ.ದೇಹದ ಕಾಂತಿ ಹೆಚ್ಚುತ್ತದೆ.
* ಕುಡಿಯುವ ನೀರಿನ ಪಾತ್ರೆಗೆ ನಾಲ್ಕಾರು ತುಳಸಿ ದಳಗಳನು ಹಾಕುವುದರಿಂದ ನೀರಿನ ಶುದ್ಧತೆ ಹೆಚ್ಚಿ, ಸೇವಿಸಲು ಉತ್ತಮವಾಗುತ್ತದೆ.
* ತುಳಸಿ ಎಲೆಯ ರಸವನ್ನು ಕಾಲುಭಾಗ ಎಣ್ಣೆಯಲ್ಲಿ ಕಾಯಿಸಿ ತಲೆಗೆ ಹಚ್ಚಲು ತಲೆಯಲ್ಲಿ ಹೇನು, ಹೊಟ್ಟು ಬರುವಿಕೆ ನಿವಾರಣೆಯಾಗುತ್ತದೆ.
* ಚರ್ಮದ ಸೋಂಕು ನಿವಾರಣೆಗೂ ತುಳಸಿ ದಳ ಪ್ರಯೋಜನಕಾರಿ. ಸ್ನಾನದ ನೀರಿಗೆ ಕೆಲವು ತುಳಸಿ ದಳಗಳನ್ನು ಹಾಕಿ ಕೆಲ ನಿಮಿಷಗಳ ಕಾಲ ಬಿಟ್ಟು ನಂತರ ಸ್ನಾನ ಮಾಡಿದರೆ, ಚರ್ಮ ಮೃದುವಾಗುವುದಲ್ಲದೆ, ರೋಗಮುಕ್ತವಾಗುತ್ತದೆ.
* ಚರ್ಮದ ತುರಿಕೆ, ಇಸುಬು, ಫಂಗಸ್ ಗಳ ಉಪಶಮನಕ್ಕೆ ತುಳಸಿ ಬಳಕೆ ಸಾಮಾನ್ಯ.
* ದೇಹದ ಪ್ರತಿರೋಧಕ ಶಕ್ತಿ ಹೆಚ್ಚಿಸುವುದರಿಂದ ದೀರ್ಘಾಯುಸ್ಯ ಹೊಂದ ಬಯಸುವವರು ತುಳಸಿ ಜಗಿಯಬಹುದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications