Just In
- 44 min ago ಮೀನ ರಾಶಿಯಲ್ಲಿ ಬುಧ ವಕ್ರೀಯ ಚಲನೆ ಮಾಡುವಾಗ ಈ 5 ರಾಶಿಯವರು ವೃತ್ತಿ ಜೀವನದ ಬಗ್ಗೆ ಜಾಗ್ರತೆ
- 1 hr ago ದಿನ ಭವಿಷ್ಯ ಮಾರ್ಚ್ 29: ಶುಕ್ರವಾರದ ಈ ದಿನ ದ್ವಾದಶ ರಾಶಿಗಳಿಗೆ ಹೇಗಿರಲಿದೆ?
- 1 hr ago ಏಪ್ರಿಲ್ನಲ್ಲಿ 14 ದಿನ ರಜೆ, ಏಪ್ರಿಲ್ 1ಕ್ಕೆ ಬ್ಯಾಂಕ್ಗಳಿಗೆ ರಜೆ ಇರಲು ಕಾರಣವೇನು?
- 1 hr ago ಹೋಳಿ ದಿನ ಸ್ಕೂಟಿಯಲ್ಲಿ ಟೈಟಾನಿಕ್ ಪೋಸ್ ನೀಡಿ ದೊಪ್ಪೆಂದು ಬಿದ್ದ ಹುಡುಗಿಗೆ ಬಿತ್ತು ದುಬಾರಿ ಫೈನ್
Don't Miss
- Sports RR vs DC: ಅವೇಶ್ ಖಾನ್, ರಿಯಾನ್ ಪರಾಗ್ ಶೈನ್; ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ವಿನ್
- Movies Sharth Padmnabha ; ಅನಿಮಾ ಚಿತ್ರಕ್ಕೆ ನಾಯಕನಾದ ನಟ ಶರತ್ ಪದ್ಮನಾಭ್..!
- News Mukhtar Ansari: ಗ್ಯಾಂಗ್ಸ್ಟರ್-ರಾಜಕಾರಣಿ ಮುಖ್ತಾರ್ ಅನ್ಸಾರಿ ಸಾವು
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ನಿಮ್ಮ ಮನೆಯ ಹಿತ್ತಲಲ್ಲಿ ಹಿಪ್ಪಲಿಯಿದ್ದರೆ ಚೆನ್ನ!
ಸಾಮಾನ್ಯವಾಗಿ ಆಯುರ್ವೇದ ಔಷಧ ಬಳಸುವವರಿಗೆ ಹಿಪ್ಪಲಿ ಅಥವಾ ಪಿಪ್ಪಲಿ ಪರಿಚಯವಿರುತ್ತದೆ. ಪಿಪ್ಪಲಿ ರಸಾಯನ ಬಳಸದಿರುವವರು ವಿರಳ. ಆರೋಗ್ಯ ವರ್ಧನೆ, ರೋಗ ನಿರೋಧಕ ಶಕ್ತಿ ಹೆಚ್ಚಳಕ್ಕೆ ರಸಾಯನಗಳು ಸಹಕಾರಿ. ದೇಹಾಲಸ್ಯ ಕಮ್ಮಿಮಾಡಿ, ಚುರುಕುತನ ಹೆಚ್ಚಿಸಿ, ದೀರ್ಘಾಯುಸ್ಸು ಪಡೆಯಲು ರಸಾಯನಗಳ ಬಳಕೆಯಾಗುತ್ತದೆ. ಹಿಪ್ಪಲಿ ಅಂಗಾಂಶಗಳಲ್ಲಿನ ಟಿಷ್ಯೂ ಇಂಜೈಮ್ಸ್ ಹೆಚ್ಚಿಸುತ್ತದೆ.
ಪ್ರಾಚೀನ ಕಾಲದಿಂದಲೂ ರಸಾಯನ ಚಿಕಿತ್ಸೆಯಲ್ಲಿ ಹಿಪ್ಪಲಿ ಬಳಕೆಯಾಗುತ್ತ ಬಂದಿದೆ. ಕಾಯಕಲ್ಪ ಚಿಕಿತ್ಸೆ, ವಾಟತಪಿಕ ಚಿಕಿತ್ಸೆ, ಪಂಚಕರ್ಮ ಮುಂತಾದ ಕ್ರಿಯೆಗಳಲ್ಲಿ ಹಿಪ್ಪಲಿ ಸೇರಿದಂತೆ ಹಲವಾರು ಔಷಧೀಯ ಸಸ್ಯಗಳ ಬಳಸಿ ತಯಾರಿಸಲ್ಪಟ್ಟ ರಸಾಯನಗಳ ಬಳಕೆಯಾಗುತ್ತದೆ.
ಬೆಂಗಳೂರಿನಲ್ಲಿ ಇತ್ತೀಚಿನ ವರ್ಷಗಳಲ್ಲಿ ಎಲ್ಲೆಡೆ ಕೇರಳ ಮೂಲದ ಪಂಚಕರ್ಮ ರಸಾಯನ ಚಿಕಿತ್ಸಾ ಕೇಂದ್ರಗಳನ್ನು ಕಾಣಬಹುದು. ಧರ್ಮಸ್ಥಳದ ಆಯುರ್ವೇದ ಕೇಂದ್ರದಲ್ಲಿ ಕುಟೀರಗಳಲ್ಲಿ ರೋಗಿಯನ್ನು ಉಳಿಯುವಂತೆ ಮಾಡಿ ಮಾನಸಿಕ, ದೈಹಿಕ ಸಮತೋಲನ ಸಾಧಿಸುವಂತೆ ಮಾಡುತ್ತಾರೆ. ಇದು ಅತ್ಯುತ್ತಮ ಕಾಯಕಲ್ಪ ಚಿಕಿತ್ಸೆ.
ವಿಷಯ ಹಿಪ್ಪಲಿಯ ಬಿಟ್ಟು ಎತ್ತಲೋ ಸಾಗಿದೆ ಎನಿಸಿದರೆ, ಕ್ಷಮಿಸಿ..ಹಿತ್ತಲಗಿಡ ಬಳ್ಳಿ ಮುರಿದು ಕ್ಷಣಾರ್ಧ ರೋಗ ಉಪಶಮನ ಮಾಡಿಕೊಳ್ಳಬಹುದಾದ ಅವಕಾಶವಿದ್ದರೂ ಬಹುಪಾಲು ಜನ ಅದೇ ಬಳ್ಳಿ ಬಳಸಿ ಚಿತ್ರ ವಿಚಿತ್ರ ಹೆಸರಿನಲ್ಲಿ ಮತ್ತೆ ನಮಗೆ ನೀಡುತ್ತಾರೆ. ವೈದ್ಯರು ಬದುಕಬೇಕು. ಔಷಧಾಲಯಗಳು ಬೆಳಗಬೇಕು ಏನು ಮಾಡಲಾಗುವುದಿಲ್ಲ.
ಶುಂಠಿ ಹಣೆಪಟ್ಟಿ ಹಾಕಿಕೊಳ್ಳುವ ಬದಲು ಇಬ್ರೂಫೆನ್ ಅಥವಾ ಪ್ಯಾರಸಿಟಿಮೊಲ್(ಹಲವು ದೇಶಗಳಲ್ಲಿ ನಿಷೇಧಿತ ಮಾತ್ರೆ) ತೆಗೆದುಕೊಳ್ಳುವುದು ಈಸಿ ಎನ್ನುವವರಿಗೆ ಏನು ಹೇಳಲಾರೆ.
ಹಿಪ್ಪಲಿಯ
ಕೆಲಮುಖ್ಯಗುಣಗಳು:
*
ದೀರ್ಘಾಯುಷ್ಯಕ್ಕೆ
ಸಹಕಾರಿ.
ಶರೀರವನ್ನು
ಚೈತನ್ಯದಾಯಕವಾಗಿರಿಸಿ,
ದೇಹದಲ್ಲಿನ
ವಿಷಕಾರಿ
ಅಂಶಗಳನ್ನು
ಹೊರ
ಹಾಕಲು
ಹಿಪ್ಪಲಿ
ಬಳಸಲಾಗುತ್ತದೆ.
* ಮಲಬದ್ಧತೆ, ಆಮಶಂಕೆ ಬೇಧಿ, ಸರಿಯಾದ ಪಚನ ಕ್ರಿಯೆಗೆ ಹಿಪ್ಪಲಿ ಬೇಕು, ರಾತ್ರಿ ವೇಳೆ ಒಳ್ಳೆ ಗಾಢನಿದ್ದೆ ಮಾಡಬಯಸಿದರೆ ಹಿಪ್ಪಲಿ ಬಳಸಿ.
* ಸಾಮಾನ್ಯ ಕಾಯಿಲೆಗಳಾದ ನೆಗಡಿ, ಕೆಮ್ಮು, ಗಂಟಲುಬೇನೆ, ಬಿಕ್ಕಳಿಕೆ ನಿವಾರಣೆಗೆ ಹಿಪ್ಪಲಿ ಸಹಕಾರಿ.
* ಸರಾಗವಾದ ರಕ್ತ ಪರಿಚಲನೆಗೆ ಸಹಕಾರಿಯಾಗಿದ್ದು, ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ.
* ಜ್ವರ, ಮೂಲವ್ಯಾಧಿ, ರಕ್ತಹೀನತೆ,ಅಪಸ್ಮಾರ ಮುಂತಾದ ಕಾಯಿಲೆಗಳ ಗುಣಪಡಿಸಲು ಹಿಪ್ಪಲಿ ರಸಾಯನ ಬಳಸಲಾಗುತ್ತದೆ.
ಸೂಚನೆ: ಬಹುಶಃ ಹಿಪ್ಪಲಿ ಬಗ್ಗೆ ಗೂಗಲ್ ನಲ್ಲಿ ಸರ್ಚ್ ಮಾಡಿದವರು. ಹಿಪ್ಪಲಿ(Long Pepper) ಎಂದು ಸರ್ಚ್ ಕೀ ವರ್ಡ್ ಕೊಟ್ಟರೆ ಸಿಗುವುದು. ಪಿಪ್ಪಲಿ(ಸಂಸ್ಕೃತ) ಪದ ಹೆಚ್ಚು ಬಳಕೆಯಲ್ಲಿದೆ. ಹಿಪ್ಪಲಿ ಅಥವಾ ತಿಪ್ಪಲಿ ಬಳ್ಳಿ ಎಂದು ಕರೆಯಲ್ಪಡುವ ಮೆಣಸಿನ ಮಾದರಿ ಸಸ್ಯ. ಆಯುರ್ವೇದದಲ್ಲಿ ಮಹತ್ವದ ಔಷಧಿಯಾಗಿ ಬಳಕೆಯಲ್ಲಿದೆ.