Latest Updates
-
ಮಳೆಗಾಲದ ರಜೆ: ವರ್ಕ್ ಫ್ರಮ್ ಹೋಮ್ ಪೋಷಕರಿಗೆ ಮಕ್ಕಳನ್ನು ನಿಭಾಯಿಸುವುದು ಹೇಗೆ? ಇಲ್ಲಿದೆ ಸರಳ ಟಿಪ್ಸ್ -
ಮಳೆಗಾಲದಲ್ಲಿ ನಿಮ್ಮ ಮನೆಯ ಗಿಡಗಳು ಸಾಯುತ್ತಿವೆಯೇ? ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಮಳೆಗಾಲದಲ್ಲಿ ಕರೆಂಟ್ ಹೋದರೆ ಫ್ರಿಜ್ ಆಹಾರ ಹಾಳಾಗುತ್ತಾ? ಸುರಕ್ಷಿತವಾಗಿಡಲು ಇಲ್ಲಿವೆ ಸರಳ ಟಿಪ್ಸ್ -
ಐಟಿಆರ್ ಸಲ್ಲಿಕೆಗೆ ಇನ್ನು 4 ದಿನ ಬಾಕಿ: ಭಾರಿ ದಂಡದಿಂದ ಪಾರಾಗಲು ಈ ಕೆಲಸಗಳನ್ನು ಇಂದೇ ಮಾಡಿ! -
IMD ಮಳೆ ಎಚ್ಚರಿಕೆ: ಹೊರಗೆ ಹೋಗಬೇಡಿ, ಮನೆಯಲ್ಲೇ ಈ 12 ನಿಮಿಷದ ವರ್ಕೌಟ್ ಮಾಡಿ ಫಿಟ್ ಆಗಿರಿ! -
ಭಾರತ-ಜಿಂಬಾಬ್ವೆ ಟಿ20 ಪಂದ್ಯದ ಮಜಾ ಸವಿಯುತ್ತಲೇ ಮನೆಯ ಜವಾಬ್ದಾರಿ ನಿಭಾಯಿಸುವುದು ಹೇಗೆ? ಸ್ಮಾರ್ಟ್ ಟಿಪ್ಸ್ ಇಲ್ಲಿದೆ! -
IMD ರೆಡ್ ಅಲರ್ಟ್: ಭಾರಿ ಮಳೆಯಿಂದ ಮನೆಯನ್ನು ರಕ್ಷಿಸಲು ಈ 5 ಮುನ್ನೆಚ್ಚರಿಕೆಗಳು ಕಡ್ಡಾಯ! -
ಗುರು ಪೂರ್ಣಿಮಾ ಉಪವಾಸ: ಮಧುಮೇಹಿಗಳು ಆರೋಗ್ಯವಾಗಿರಲು ಈ ಸಾತ್ವಿಕ ಆಹಾರ ಕ್ರಮ ಪಾಲಿಸಿ -
ಪೇಪರ್ ಸೋರಿಕೆ ಮಾಡಿದ್ರೆ 10 ವರ್ಷ ಜೈಲು: ವಿದ್ಯಾರ್ಥಿಗಳ ಭವಿಷ್ಯಕ್ಕೆ ಸಿಗಲಿದೆ ಹೊಸ ಭದ್ರತೆ! -
ಕಾರ್ಗಿಲ್ ವಿಜಯ್ ದಿವಸ್: ದೇಶಭಕ್ತಿಯ ನಡಿಗೆಯಲ್ಲಿ ಪಾಲ್ಗೊಳ್ಳುವ ಮುನ್ನ ಈ ಆರೋಗ್ಯ ಟಿಪ್ಸ್ ಮರೆಯದಿರಿ
ಬೇಸಿಗೆಯಲ್ಲೂ ಮಧುಮೇಹ ನಿಯಂತ್ರಣದಲ್ಲಿರಬೇಕಾದರೆ ಈ ಟಿಪ್ಸ್ ಅನುಸರಿಸಿ..!
ಮಧುಮೇಹ ಒಂದು ರೀತಿಯ ಕಾಯಿಲೆ ಆಗಿದ್ದು ಇದನ್ನು ನಿಯಂತ್ರಣದಲ್ಲಿಡಲು ಸರಿಯಾದ ಡಯೇಟ್ ಹಾಗೂ ವ್ಯಾಯಾಮ ಮಾಡುವುದು ತುಂಬಾನೇ ಮುಖ್ಯ.
ಮಧುಮೇಹ ಹೊಂದಿರುವ ವ್ಯಕ್ತಿಗಳು ರಕ್ತದಲ್ಲಿ ಸಕ್ಕರೆ ಅಂಶವನ್ನು ಕಾಪಾಡಿಕೊಳ್ಳುವುದು ತುಂಬಾನೇ ಮುಖ್ಯವಾಗುತ್ತದೆ. ಇದಕ್ಕಾಗಿ ಉತ್ತಮ ಆರೋಗ್ಯ ಕ್ರಮವನ್ನು ಕಾಪಾಡಿಕೊಳ್ಳಲೇಬೇಕು. ನಿಮಗೆಲ್ಲಾ ಗೊತ್ತಿರುವ ಹಾಗೆ ಬೇಸಿಗೆ ಕಾಲದಲ್ಲಿ ನಮ್ಮ ಜೀವನ ಶೈಲಿ ತುಂಬಾನೇ ಬದಲಾಗುತ್ತದೆ. ಕಾಡುವ ವಿಪರೀತ ಸೆಕೆಗೆ ತಕ್ಕ ಹಾಗೆ ನಾವು ಸೇವಿಸುವ ಆಹಾರ ಕ್ರಮದಲ್ಲೂ ಕೆಲವೊಂದು ಬದಲಾವಣೆಗಳನ್ನು ಮಾಡಿಕೊಳ್ಳುತ್ತೇವೆ.

ಆಹಾರ ಶೈಲಿ ಬದಲಾದಂತೆ ದೇಹದಲ್ಲಿ ಕೆಲವೊಂದು ಬದಲಾವಣೆಗಳು ಖಂಡಿತ ಆಗುತ್ತದೆ. ಹಾಗಾದ್ರೆ ಬೇಸಿಗೆಯಲ್ಲಿ ಡಯಾಬಿಟಿಸ್ ಅನ್ನು ನಿಯಂತ್ರಣದಲ್ಲಿ ಇಡುವುದು ಹೇಗೆ? ಯಾವ ರೀತಿ ಜೀವನಶೈಲಿಯನ್ನು ಅಳವಡಿಸಿದರೆ ಆರೋಗ್ಯ ಉತ್ತಮವಾಗಿರುತ್ತದೆ ಅನ್ನೋದನ್ನ ಹೇಳ್ತೀವಿ.
ಬೇಸಿಗೆ ಕಾಲದಲ್ಲಿ ಡಯಾಬಿಟಿಸ್ ನಿಯಂತ್ರಣದಲ್ಲಿಡೋದು ಹೇಗೆ?
ಬೇಸಿಗೆ ಕಾಲದಲ್ಲಿ ಟ್ರಿಪ್ ಪ್ಲಾನ್ ಮಾಡಿದ್ರೆ ಅದ್ರಲ್ಲೂ ಬೀಚ್ಗೆ ಹೋಗ್ಬೇಕು ಅಂದುಕೊಂಡ್ರೆ ಮಧುಮೇಹ ಇರುವವರಿಗೆ ತುಂಬಾನೇ ಕಷ್ಟ. ಯಾಕಂದ್ರೆ ಬಿಸಿಲಿನ ತಾಪಕ್ಕೆ ನಮಗೆ ಜ್ಯೂಸ್, ಐಸ್ಕ್ರೀಮ್ ತಿನ್ನಬೇಕು ಅನ್ನಿಸೋದು ಸಹಜ. ಇಂತಹ ಸಮಯದಲ್ಲಿ ನಮ್ಮ ಜೊತೆ ಇರುವವರು ತಿನ್ನೋದಿಕ್ಕೆ ಶುರು ಮಾಡಿದ್ರೆ ನಮ್ಮ ಬಾಯಲ್ಲಿ ನೀರೂರೋದಕ್ಕೆ ಶುರುವಾಗುತ್ತೆ. ಅಪ್ಪಿ-ತಪ್ಪಿ ನೀವೇನಾದ್ರು ತಪ್ಪು ಪಾನೀಯ, ಐಸ್ಕ್ರೀಮ್ ಅಂತೆಲ್ಲಾ ಸೇವಿಸಿದ್ರೆ ಮುಂದೆ ಮಹಾ ಅಪಾಯವನ್ನು ಎದುರಿಸಬೇಕಾಗುತ್ತದೆ. ಹಾಗಾದ್ರೆ ಬೇಸಿಗೆ ಕಾಲದಲ್ಲೂ ಸುಗರ್ ಲೆವಲ್ ನಿಯಂತ್ರಣದಲ್ಲಿಡೋದು ಹೇಗೆ ಅನ್ನೋದನ್ನ ಹೇಳ್ತೀವಿ.

1. ಹೆಚ್ಚಿನ ಪ್ರಮಾಣದಲ್ಲಿ ನೀರು ಕುಡಿಯಿರಿ
ಬೇಸಿಗೆ ಕಾಲದಲ್ಲಿ ಸಾಧ್ಯವಾದಷ್ಟು ನೀರು ಕುಡಿಯಿರಿ. ಇದರ ಜೊತೆಗೆ ಆಲ್ಕೋಹಾಲ್ ಅಂಶ ಹೊಂದಿರದ ಪಾನೀಯ, ಕೆಫಿನ್ ಹೊಂದಿರುವ ಪಾನೀಯಗಳನ್ನು ಕುಡಿಯಿರಿ. ಇದು ಬೇಸಿಗೆಯಲ್ಲಿ ಬಾಯಾರಿಕೆ, ಹಸಿವು, ನಿರ್ಜಲೀಕರಣವನ್ನು ತಪ್ಪಿಸಲು ಮತ್ತು ಬೇಸಿಗೆಯಲ್ಲಿ ಮಧುಮೇಹವನ್ನು ನಿರ್ವಹಿಸಲು ಸಹಾಯ ಮಾಡುತ್ತದೆ. ಹಾಗಂತ ಎಲ್ಲವನ್ನು ಒಂದೇ ಬಾರಿಗೆ ಇಡೀ ದಿನ ಕುಡಿಯುತ್ತಿರಬೇಡಿ. ಇದು ಅಪಾಯ.

2. ಸಕ್ಕರೆ ಅಂಶ ಹೊಂದಿರುವ ಆಹಾರ ಪದಾರ್ಥಗಳನ್ನು ಆದಷ್ಟು ನಿರಾಕರಿಸಿ
ಬೇಸಿಗೆಯಲ್ಲಿ ಆರೋಗ್ಯಕರ ಆಹಾರವನ್ನು ಸೇವಿಸುವುದು ಅನಿವಾರ್ಯವಲ್ಲ ಎಂದು ಅನೇಕರು ಅಂದುಕೊಂಡಿರ್ತಾರೆ. ಆದರೆ ಆ ಕಲ್ಪನೆ ತಪ್ಪು. ಮಧುವೇಹವು ದೀರ್ಘಕಾಲಿಕ ಕಾಯಿಲೆಯಾಗಿದ್ದು ಬೇಸಿಗೆಯಲ್ಲಿ ಅದನ್ನು ನಿರ್ವಹಿಸುವುದು ಕಷ್ಟ. ಸಕ್ಕರೆ ಅಂಶ ಹೊಂದಿರುವ ಆಹಾರ, ಪಾನೀಯಗಳನ್ನು ಸೇವಿಸುವುದನ್ನು ಕಡಿಮೆ ಮಾಡುವುದರ ಮುಖಾಂತರ ಮಧುಮೇಹವನ್ನು ನಿಯಂತ್ರಣದಲ್ಲಿ ಇಡಬಹುದು.

3. ಇನ್ಸುಲಿನ್ ಕಿಟ್ ಯಾವಾಗಲ್ಲೂ ನಿಮ್ಮ ಜೊತೆಗೆ ಇರಲಿ
ತುರ್ತುಪರಿಸ್ಥಿತಿಗಾಗಿ ಇನ್ಸುಲಿನ್ ಕಿಟ್ ಯಾವಾಗಲೂ ನಿಮ್ಮ ಜೊತೆಗೆ ಇರಲಿ. ನಿರ್ದಿಷ್ಟ ಪ್ರಮಾಣದ ಆಹಾರ ಹಾಗೂ ಪಾನೀಯ ಸೇವಿಸುವುದರ ಮೂಲಕ ಇನ್ಸುಲಿನ್ ಅನ್ನು ನಿಯಂತ್ರಿಸಬಹುದು ಅನ್ನೋದು ನಿಮ್ಮ ತಪ್ಪು ಕಲ್ಪನೆ. ಏಕೆಂದರೆ ಇನ್ಸುಲಿನ್ ನಿಮ್ಮ ದೇಹವು ಗ್ಲೂಕೋಸ್ ಅನ್ನು ಪರಿಣಾಮಕಾರಿಯಾಗಿ ಹೀರಿಕೊಳ್ಳಲು ಅನುವು ಮಾಡಿಕೊಡುತ್ತದೆ. ಮತ್ತು ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿರ್ವಹಿಸಲು ಸಹಾಯ ಮಾಡುತ್ತದೆ.

4. ನಿಮ್ಮ ಪಾದಗಳ ಬಗ್ಗೆ ಜಾಗರೂಕತೆ ವಹಿಸಿ
ಮಧುಮೇಹ ಇರುವ ವ್ಯಕ್ತಿಗಳು ಪಾದದ ಆರೈಕೆಯನ್ನು ನಿರ್ಲಕ್ಷಿಸಬಾರದು. ಗಂಭೀರವಾದ ಪಾದದ ಸೋಂಕನ್ನು ತಪ್ಪಿಸಲು ಹೊರಗೆ ಹೋಗುವಾಗ ಚಪ್ಪಲಿ ಧರಿಸಲೇಬೇಕು. ನಿತ್ಯ ವ್ಯಾಯಾಮ ಮಾಡುವುದು ತುಂಬಾನೇ ಮುಖ್ಯವಾಗುತ್ತದೆ. ನಿಮಗೆ ದಣಿವು ಅಥವಾ ಅನಾರೋಗ್ಯ ಅನಿಸಿದರೂ ವ್ಯಾಯಾಮವನ್ನು ನಿಲ್ಲಿಸಬೇಡಿ. ಯಾಕಂದ್ರೆ ರಕ್ತದೊತ್ತಡ, ಗ್ಲೂಕೋಸ್ ಮಟ್ಟಗಳು ಮತ್ತು ತೂಕವನ್ನು ನಿರ್ವಹಿಸಲು ದೈಹಿಕ ಚಟುವಟಿಕೆಯು ತುಂಬಾನೇ ಮುಖ್ಯವಾಗಿದೆ.

5. ಎಲ್ಲೇ ಹೋದರೂ ಒಂದು ಬಾಟಲ್ ನೀರು ಇಟ್ಟುಕೊಳ್ಳಿ
ಯಾವಾಗಲೂ ನಿಮ್ಮೊಂದಿಗೆ ನೀರಿನ ಬಾಟಲಿಯನ್ನು ಇಟ್ಟುಕೊಳ್ಳೋದನ್ನು ಮರೀಬೇಡಿ. ಅತೀ ಹೆಚ್ಚು ದಣಿವಾದಾಗ ನೀರು ಬೇಕೇ ಬೇಕು. ಬಾಯಿಯನ್ನು ಒಣಗಲು ಬಿಡಲೇಬೇಡಿ. ಇನ್ನೂ ಅತೀ ಹೆಚ್ಚು ಬಿಸಿಲು ಇರೋ ಸಂದರ್ಭದಲ್ಲಿ ಎಚ್ಚರಿಕೆ ವಹಿಸಿ. ಇನ್ನೂ ಈ ಋತುವಿನಲ್ಲಿ ಸಕ್ಕರೆ ಮಟ್ಟವನ್ನು ನಿಯಂತ್ರಿಸುವುದರ ಬಗ್ಗೆ ಹೆಚ್ಚಿ ಮಾಹಿತಿ ಬೇಕಾದರೆ ವೈದ್ಯರನ್ನು ಸಂಪರ್ಕಿಸಿ.

6. ನಿಯಮಿತವಾಗಿ ಗ್ಲೂಕೋಸ್ ಪರೀಕ್ಷೆ ಮಾಡಿಸಿ
ಮಧುಮೇಹ ರೋಗಿಗಳು ಬೇಸಿಗೆಯಲ್ಲಿ ಗ್ಲೂಕೋಸ್ ಪರೀಕ್ಷೆಯನ್ನು ಮಾಡುವುದು ತುಂಬಾನೇ ಮುಖ್ಯ. ಬೇಸಿಗೆಯಲ್ಲಿ ನಾವು ಸೇವಿಸೋ ಆಹಾರದಿಂದ ಕಾರ್ಬೋಹೈಡ್ರೇಡ್ ಅಂಶ ಹೆಚ್ಚಾಗುವ ಸಾಧ್ಯತೆ ಇದೆ. ಬೇಸಿಗೆಯಲ್ಲಿ ಅಂತಹ ಆಹಾರವನ್ನು ಸೇವಿಸದಿರುವುದು ಮತ್ತು ದೇಹದಲ್ಲಿ ಅದೇ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಾಪಾಡಿಕೊಳ್ಳುವುದು ಅಸಾಧ್ಯ. ಹೀಗಾಗಿ ನಿಯಮಿತವಾಗಿ ರಕ್ತದಲ್ಲಿನ ಗ್ಲೂಕೋಸ್ ಪರೀಕ್ಷೆಯನ್ನು ಮಾಡಿಸಿಕೊಳ್ಳಿ.
ಯಾವುದೇ ಸಂದರ್ಭದಲ್ಲೂ ಕೂಡ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಮಾಡಲೇಬಾರದು. ಯಾಕಂದ್ರೆ ಆರೋಗ್ಯವೇ ಭಾಗ್ಯ. ಕೊಂಚ ನಿರ್ಲಕ್ಷಿಸಿದ್ರು ನಮ್ಮ ಪ್ರಾಣಕ್ಕೆ ಆಪತ್ತು.



Click it and Unblock the Notifications