Latest Updates
-
ಹಾಲುಣಿಸುವ ತಾಯಂದಿರೇ ಗಮನಿಸಿ: ಬೆನ್ನು ಮತ್ತು ಕುತ್ತಿಗೆ ನೋವು ಮರೆಯಾಗಲು ಈ 8 ನಿಮಿಷದ ವ್ಯಾಯಾಮ ಸಾಕು! -
ಐಟಿಆರ್ ಗಡುವು ಮಿಸ್ ಆಯ್ತಾ? ದಂಡ ತಪ್ಪಿಸಲು ಈಗಲೇ ಈ ಕೆಲಸ ಮಾಡಿ, ಆರ್ಥಿಕ ನಷ್ಟದಿಂದ ಪಾರಾಗಿ! -
ಕರ್ನಾಟಕದಲ್ಲಿ ಭಾರಿ ಮಳೆ: ನಿಮ್ಮ ಮನೆ ಮತ್ತು ಕುಟುಂಬವನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸ ಮಾಡಿ! -
ಪೀನಟ್ ಬಟರ್ನಲ್ಲಿ ವಿಷಕಾರಿ ಶಿಲೀಂಧ್ರ? ನಿಮ್ಮ ಆರೋಗ್ಯ ಕಾಪಾಡಲು ಈ ವಿಷಯಗಳನ್ನು ಮರೆಯದಿರಿ -
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು! -
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ! -
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು? -
ಭಾರತದ ಆಕಾಶದಲ್ಲಿ ಬೆಂಕಿಯ ಉಂಡೆಗಳ ಸಂಭ್ರಮ: ಈ ಅದ್ಭುತ ಉಲ್ಕಾಪಾತವನ್ನು ಮಿಸ್ ಮಾಡ್ಬೇಡಿ!
ಶಬರಿಮಲೆಗೆ ಮಾಲೆ ಹಾಕಿದ್ದರೆ ಈ 5 ಬಗೆಯ ಆಹಾರ ಸೇರಿಸಿದರೆ ಆರೋಗ್ಯ ವೃದ್ಧಿಸುವುದು
ನವೆಂಬರ್-ಡಿಸೆಂಬರ್, ಜನವರಿ ಅರ್ಧದವರೆಗೆ ಅಯ್ಯಪ್ಪ ಸ್ವಾಮಿಮಾಲೆ ಹಾಕಿದವರು ಕಠಿಣ ವ್ರತ ನಿಯಮ ಪಾಲಿಸುತ್ತಾರೆ. ಈ ಸಮಯದಲ್ಲಿ ಸಾತ್ವಿಕ ಆಹಾರ ಮಾತ್ರ ಸೇವಿಸಬೇಕು, ಅದರಲ್ಲಿಯೂ ಲಘು ಆಹಾರ ಸೇವಿಸಬೇಕು. ಸೂರ್ಯೋದಯಕ್ಕೆ ಮುನ್ನ ಎದ್ದು ತಣ್ಣೀರು ಸ್ನಾನ ಮಾಡಿ ಅಯ್ಯಪ್ಪ ಸ್ವಾಮಿಯ ಮಂತ್ರಗಳು,ಭಜನೆಗಳನ್ನು ಹೇಳುತ್ತಾ ಪೂಜೆ ಮಾಡಬೇಕು, ನಂತರ ಸಾತ್ವಿಕ ಲಘು ಆಹಾರ ಸೇವನೆ.
ಅಯ್ಯಪ್ಪ ವ್ರತ ಕೈಗೊಂಡಾಗ ದೇಹಕ್ಕೆ ಶಕ್ತಿ ತುಂಬಲು ಸಾತ್ವಿಕ ಆಹಾರಕ್ರಮದಲ್ಲಿ ಈ ಬಗೆಯ ಆಹಾರ ಸೇವನೆ ಒಳ್ಳೆಯದು

ಗೆಣಸು, ತರಕಾರಿಗಳು: ನೀವು ನಿಮ್ಮ ಆಹಾರಕ್ರಮದಲ್ಲಿ ಈ ಬಗೆಯ ಆಹಾರ ಸೇವನೆ ಮಾಡುವುದರಿಂದ ದೇಹವನ್ನು ಬೆಚ್ಚಗಿಡುತ್ತದೆ ಅಲ್ಲದೆ ದೇಹಕ್ಕೆ ಶಕ್ತಿ ದೊರೆಯುವುದು. ಚಳಿಗಾಲದಲ್ಲಿಜೀರ್ಣಕ್ರಿಯೆಗೆ ಒಳ್ಳೆಯದು.
ಸಿಹಿ ಗೆಣಸು: ಸಿಹಿ ಗೆಣಸು ಬೇಯಿಸಿ ತಿನ್ನಬಹುದು, ಇದನ್ನು ಸ್ನ್ಯಾಕ್ಸ್ ರೀತಿಯಲ್ಲಿಯೂ ಬಳಸಬಹುದು. ಅಲ್ಲದೆ ಇದನ್ನು ಬೇಯಿಸಿ ತಿನ್ನುವುದು ಕೂಡ ಸುಲಭ, ಹಾಗಾಗಿ ಪ್ರತಿದಿನ ಗೆಣಸು ಸೇವಿಸಿ ತಿಂದರೂ ಒಳ್ಳೆಯದು, ಇದು ದೇಹಕ್ಕೆ ಬೇಕಾದ ಶಕ್ತಿಯನ್ನು ತುಂಬುವುದು ಅಲ್ಲದೆ ಚಳಿಗಾಲದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ.
ಓಟ್ಮೀಲ್ಸ್: ಒಂದು ಹೊತ್ತು ನಿಮ್ಮ ಆಹಾರಕ್ರಮದಲ್ಲಿ ಓಟ್ಮೀಲ್ ಸೇರಿಸಿ. ಓಟ್ಮೀಲ್ ದೇಹಕ್ಕೆ ಶಕ್ತಿಯನ್ನು ತುಂಬುವುದು, ದೇಹಕ್ಕೆ ಅವಶ್ಯಕವಾದ ಪೋಷಕಾಂಶ ಒದಗಿಸುತ್ತದೆ.
ಅರ್ಧ ಕಪ್ ಓಟ್ಸ್ನಲ್ಲಿರುವ ಪೋಷಕಾಂಶಗಳು
ನಿಮ್ಮ ದೇಹಕ್ಕೆ ಅವಶ್ಯಕವಾದ ಮ್ಯಾಂಗನೀಸ್ 63.9% ರಷ್ಟು ಓಟ್ಸ್ನಲ್ಲಿದೆ
ಮೆಗ್ನಿಷ್ಯಿಯಂ 13.3%
ಸತು 17.6ರಷ್ಟು
9.4ರಷ್ಟು ಕಬ್ಬಿಣದಂಶ
ಸತು 13.4ರಷ್ಟು
ಫೋಲೆಟ್ 3.2ರಷ್ಟು
ವಿಟಮಿನ್ಬಿ1
ವಿಟಮಿನ್ ಬಿ5
ಅಲ್ಲದೆ ಕ್ಯಾಲ್ಸಿಯಂ, ಪೊಟಾಷ್ಯಿಯಂ, ವಿಟಮಿನ್ ಬಿ6, ವಿಟಮಿನ್ ಬಿ3
ಇಷ್ಟೆಲ್ಲಾ ಪೋಷಕಾಂಶ ಅರ್ಧ ಕಪ್ ಓಟ್ಸ್ ಸೇವನೆಯಲ್ಲಿ ಸಿಗುತ್ತದೆ.
ತರಕಾರಿ ಸೂಪ್ ಸೇವಿಸಿ
ಟೊಮೆಟೊ, ಜೋಳ ಇವೆಲ್ಲಾ ಹಾಕಿ ಸೂಪ್ ಮಾಡಿ ಸೇವಿಸಿ, ಬಿಸಿ ಬಿಸಿ ಸೂಪ್ ಮೈ ಬೆಚ್ಚಗಿಡಲು ಸಹಕಾರಿ, ಗಂಟಲು,
ನೋವು, ಶೀತ ಈ ಬಗೆಯ ಸಮಸ್ಯೆ ಉಂಟಾಗುವುದನ್ನು ತಡೆಗಟ್ಟುತ್ತದೆ.
ಸೊಪ್ಪು ಬಳಸಿ
ನೀವು ನಿಮ್ಮ ಆಹಾರಕ್ರಮದಲ್ಲಿ ಸೊಪ್ಪು ಸೇರಿಸಿ. ಈ ಆಹಾರಗಳ ಸೇವನೆಯಿಂದ ಕಬ್ಬಿಣದಂಶ, ಕ್ಯಾಲ್ಸಿಯಂ ,ವಿಟಮಿನ್ ಕೆ, ವಿಟಮಿನ್ ಸಿ, ಇ ದೊರೆಯುತ್ತದೆ.
ಡ್ರೈ ಫ್ರೂಟ್ಸ್
ದಿನಾ ಸ್ವಲ್ಪ ಡ್ರೈ ಫ್ರೂಟ್ಸ್ ಸೇವಿಸಿ, ಇದು ದೇಹಕ್ಕೆ ಅಗ್ಯತವಾದ ಪೋಷಕಾಂಶ ನೀಡುತ್ತದೆ, ಅಲ್ಲದೆ ದಿನಪೂರ್ತಿ ಲವಲವಿಕೆಯಿಂದ ಇರುವಿರಿ. ಈ ಬಗೆಯ ಆಹಾರಕ್ರಮ ಪಾಲಿಸುವುದರಿಂದ ಕಠಿಣ ಕೆಲಸ ಮಾಡುವವರಿಗೆ ಸುಸ್ತಾಗುವುದಿಲ್ಲ, ಅಲ್ಲದ ಮಕ್ಕಳು ಮಲೆಗೆ ಮಾಲೆ ಹಾಕಿದ್ದರೆ ಈ ಬಗೆಯ ಆಹಾರ ನೀಡುವುದು ಒಳ್ಳೆಯದು.
ಅಯ್ಯಪ್ಪಸ್ವಾಮಿ ವ್ರತದ ಆರೋಗ್ಯಕರ ಗುಣಗಳು
ಅಯ್ಯಪ್ಪಸ್ವಾಮಿ ಕೃಪೆಗೆ ಪಾತ್ರರಾಗಲು ಭಕ್ತರು ಕಟ್ಟುನಿಟ್ಟಿನ ವ್ರತ ನಿಯಮ ಪಾಲಿಸುತ್ತಾರೆ, ಆದರೆ ಈ ವ್ರತ ನಿಯಮ ಪಾಲಿಸುವುದರಿಂದ ಆರೋಗ್ಯಕ್ಕೆ ತುಂಬಾನೇ ಗುಣಗಳಿವೆ.
ಮಿತವಾದ ಸಾತ್ವಿಕ ಆಹಾರ ಮೈ ತೂಕ ನಿಯಂತ್ರಣಕ್ಕೆ ಸಹಕಾರಿ: ಈ ಸಮಯದಲ್ಲಿ ಸಾತ್ವಿಕ ಆಹಾರ ಮಾತ್ರ ಸೇವಿಸುತ್ತಾರೆ ಅಲ್ಲದೆ ಲಘು ಆಹಾರ ಸೇವನೆ ಮಾಡುತ್ತಾರೆ, ಬೆಳಗ್ಗೆ ಬೇಗನೆ ಏಳುವುದರಿಂದ ಬೇಗನೆ ಆಹಾರ ಸೇವಿಸಿ ಮಲಗುತ್ತಾರೆ. ಈ ನಿಯಮ ಪಾಲಿಸುವುದರಿಂದ ಆರೋಗ್ಯದ ದೃಷ್ಟಿಯಿಂದ ತುಂಬಾನೇ ಒಳ್ಳೆಯದು. ಅತ್ಯಧಿಕ ರಕ್ತದೊfತಡ, ಮಧುಮೇಹದ ಸಮಸ್ಯೆವಿದ್ದರೂ ನಿಯಂತ್ರಣಕ್ಕೆ ಬರುತ್ತದೆ, ದೇಹದಲ್ಲಿನ ಬೇಡ ಕೊಬ್ಬಿನಂಶ ಕರಗುವುದು.
ದೇಹವನ್ನು ಡಿಟಾಕ್ಸ್ ಮಾಡಲು ಸಹಕಾರಿ: ಈ ಸಮಯದಲ್ಲಿ ಮದ್ಯ, ಮಾಂಸ ಈ ಬಗೆಯ ಆಹಾರಕ್ರಮದಿಂದ ದೂರವಿರುತ್ತಾರೆ, ಹಗಾಗಿ ದೇಹವನ್ನು ಡಿಟಾಕ್ಸ್ ಮಾಡಲು ಸಹಕಾರಿ. ಇದರಿಂದ ದೇಹದಲ್ಲಿರುವ ಬೇಡದ ಕಶ್ಮಲ ಹೊರಹೋಗುವುದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications