Latest Updates
-
ಅಸ್ಸಾಂನಲ್ಲಿ ಲಿವ್-ಇನ್ ಸಂಬಂಧದಲ್ಲಿದ್ದೀರಾ? ಹೊಸ ಕಾನೂನಿನ ಪ್ರಕಾರ ನೋಂದಣಿ ಮಾಡದಿದ್ದರೆ ಜೈಲು ಶಿಕ್ಷೆ ಕಟ್ಟಿಟ್ಟ ಬುತ್ತಿ! -
ಬಿಸಿಲಿಗೆ ಗಿಡಗಳು ಬಾಡುತ್ತಿವೆಯೇ? ಈ ಮ್ಯಾಜಿಕ್ ಟಿಪ್ಸ್ ಬಳಸಿ ನಿಮ್ಮ ಬಾಲ್ಕನಿ ಗಾರ್ಡನ್ ಅನ್ನು ಹಸಿರಾಗಿಡಿ! -
ಬಿಸಿಲ ಝಳಕ್ಕೆ ಸುಸ್ತಾಗಿದ್ದೀರಾ? ಹೀಟ್ಸ್ಟ್ರೋಕ್ನಿಂದ ಪಾರಾಗಲು ಈ ತಂಪು ಪದಾರ್ಥಗಳು ನಿಮ್ಮ ಆಹಾರದಲ್ಲಿರಲಿ, ಇಂದೇ ಟ್ರೈ ಮಾಡಿ! -
ಬಕ್ರೀದ್ 2026: ಈ ಬಾರಿಯ ಹಬ್ಬದ ಸಂಭ್ರಮದಲ್ಲಿ ಮಿಂಚಲು ನೀವು ಮಿಸ್ ಮಾಡಲೇಬಾರದ ಫ್ಯಾಷನ್ ಟ್ರೆಂಡ್ಸ್ ಮತ್ತು ಸ್ಟೈಲಿಂಗ್ ಟಿಪ್ಸ್! -
ಬಿಸಿಲ ಬೇಗೆಯಲ್ಲಿ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ! -
ಬಿಸಿಲಿನ ಬೇಗೆಗೆ ದಂಪತಿಗಳ ನಡುವೆ ಜಗಳವೇ? ಈ ಸಣ್ಣ ಬದಲಾವಣೆಗಳು ನಿಮ್ಮ ಸಂಬಂಧವನ್ನು ಬಿರುಕಿನಿಂದ ಕಾಪಾಡುತ್ತವೆ! -
ಉತ್ತರ ಭಾರತದಲ್ಲಿ ಸುಡುವ ಬಿಸಿಲು: ಮನೆಯನ್ನು ತಂಪಾಗಿಡಲು ಮತ್ತು ಗಿಡಗಳನ್ನು ಬಚಾವ್ ಮಾಡಲು ಈ ಟಿಪ್ಸ್ ಫಾಲೋ ಮಾಡಿ! -
ಬಿಸಿಲ ಬೇಗೆಯಿಂದ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಆಹಾರಗಳೇ ನಿಮಗೆ ರಾಮಬಾಣ! -
ಬಿಸಿಲ ಝಳಕ್ಕೆ ಸುಸ್ತಾಗಿದ್ದೀರಾ? ಈ ಸಿಂಪಲ್ ಟಿಪ್ಸ್ ಪಾಲಿಸಿದ್ರೆ ಬೇಸಿಗೆಯಲ್ಲೂ ನೀವು ಕೂಲ್ ಆಗಿರಬಹುದು! -
ಬಿಸಿಲ ಬೇಗೆಯಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ನಿಮ್ಮ ಹೃದಯದ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ, ಎಚ್ಚರ!
ಭಾರತದಲ್ಲಿ ಹೆಚ್ಚಾಗುತ್ತಿದೆ ರಿಟೈರ್ಮೆಂಟ್ ಡಿಪ್ರೆಷನ್: ನಿವೃತ್ತಿ ಜೀವದ ಸುಂದರವಾಗಿಸಲು 5 ಸೂತ್ರಗಳು
ಕೆಲಸ ಮಾಡುವಾಗ ಒಂದು ಸಲ ನಿವೃತ್ತಿ ಪಡೆದು ಆರಾಮವಾಗಿ ಇರಬೇಕು ಎಂದು ಎಲ್ಲರೂ ಅಂದುಕೊಳ್ಳುತ್ತಾರೆ. ಆದರೆ ನಿವೃತ್ತಿ ದಿನ ಹತ್ತಿರ ಬರುತ್ತಿದ್ದಂತೆ ಮನಸ್ಸಿನಲ್ಲಿ ಒಂದು ರೀತಿಯ ತಳಮಳ, ಅಯ್ಯೋ ಇನ್ನು ನಾನು ಕೆಲಸಕ್ಕೆ ಬರುವಂತಿಲ್ಲ, ಮುಂದೆ ಏನು ಮಾಡ್ಲಿ ಎಂಬ ಚಿಂತೆ ಬಹುತೇಕರನ್ನು ಕಾಡುತ್ತದೆ.

ಕೆಲವರು ನಿವೃತ್ತಿ ಸಮಯ ಚೆನ್ನಾಗಿ ಕಳೆಯಬೇಕು ಎಂಬ ಕಾರಣ ಹಣ ಉಳಿತಾಯ ಮಾಡಿರುತ್ತಾರೆ, ನಂತರ ಏನು ಮಾಡಬೇಕೆಂಬ ಕೆಲವೊಂದು ಪ್ಲ್ಯಾನ್ಸ್ ಇರುತ್ತದೆ, ಆದರೂ ನಿವೃತ್ತಿ ಸಮಯ ಎಂದರೆ ಏನೋ ಒಂದು ರೀತಿಯ ಭಯ ಕಾಡುವುದು, ಇನ್ನು ಕೆಲವರಿಗೆ ದುಡಿದ್ದೆಲ್ಲಾ ಖರ್ಚು ಮಾಡಬೇಕಾದ ಅನಿವಾರ್ಯತೆ ಇರುತ್ತದೆ ಹೀಗಾಗಿ ದೊಡ್ಡದಾಗಿ ಹಣ ಉಳಿತಾಯ ಮಾಡಲು ಸಾಧ್ಯವಾಗಿರುವುದಿಲ್ಲ, ನಿವೃತ್ತಿ ಹಣದಲ್ಲಿಯೂ ಮನೆ ಸಾಲ, ಮಕ್ಕಳ ಮದುವೆಗೆ ಮಾಡಿದ ಸಾಲ ಅಂತ ತೀರಿಸಲು ಇರುತ್ತದೆ ಅದಾದ ಬಳಿಕ ಕೈ ಖಾಲಿ, ನಿವೃತ್ತಿ ಬಳಿಕ ದುಡಿಮೆಯೂ ಇಲ್ಲ, ಹಣವೂ ಇಲ್ಲ, ಈ ಪರಿಸ್ಥಿತಿ ಬಹುತೇಕರನ್ನು ಖಿನ್ನತೆಗೆ ದೂಡುತ್ತಿದೆ, ಅಲ್ಲದೆ ಭಾರತದಲ್ಲಿ ರಿಟೈರ್ಮೆಂಟ್ ಡಿಪ್ರೆಷನ್ ಹೆಚ್ಚಾಗುತ್ತಿದೆ ಎಂದು ಅಂಕಿ ಅಂಶಗಳು ಹೇಳುತ್ತಿವೆ.
ನಿವೃತ್ತಿ ಬಳಿಕ ಕಾಡುವ ಖಿನ್ನತೆ
ನಿವೃತ್ತಿ ಬಬಳಿಕ ಬಹುತೇಕರಿಗೆ ಒಂಟಿತನ ಕಾಡಲಾರಂಭಿಸುತ್ತದೆ, ಹಣವಿಲ್ಲ ಎಂಬ ಚಿಂತೆ, ನಾನೂ ಏನಕ್ಕೂ ಪ್ರಯೋಜನವಿಲ್ಲ ಎಂಬ ಚಿಂತೆ ಇವೆಲ್ಲಾ ಖಿನ್ನತೆಗೆ ದೂಡುವುದು. ಹೀಗಾಗಿ ನಿವೃತ್ತಿ ಬಳಿಕ ಬೇಸರ ಕಾಡಲಾರಂಭಿಸುವುದು. ಆರ್ಥಿಕ ದುರ್ಬಲತೆ, ಆರೋಗ್ಯ ಸಮಸ್ಯೆಗಳು ಇವೆಲ್ಲಾ ಖಿನ್ನತೆ ಸಮಸ್ಯೆ ಹೆಚ್ಚಿಸುತ್ತದೆ.
ಈಗೀನ ಕುಟುಂಬ ವ್ಯವಸ್ಥೆಯೂ ಕೂಡ ಖಿನ್ನತೆಗೆ ಕಾರಣವಾಗಿದೆ
ಈಗ ನ್ಯೂಕ್ಲಿಯರ್ ಕುಟುಂಬ, ಮಕ್ಕಳು ಉದ್ಯೋಗದ ಕಾರಣದಿಂದ ಅವರ ಕುಟುಂಬದ ಜೊತೆಗೆ ಪ್ರತ್ಯೇಕವಾಗಿ ವಾಸಿಸುತ್ತಿರುತ್ತಾರೆ, ಕೆಲಸಕ್ಕೆ ಹೋಗುವಾಗ ಬ್ಯುಸಿ ಇರುತ್ತಾರೆ, ನಿವೃತ್ತಿ ಬಳಿಕ ಒಂಟಿತನ ಕಾಡಲಾರಂಭಿಸುವುದು, ಇದರ ಜೊತೆಗೆ ಆರೋಗ್ಯ ಸಮಸ್ಯೆಗಳು ಕಾಡಲಾಂಭಿಸುವುದು, ಇವೆಲ್ಲಾ ನನ್ನಿಂದ ಏನೂ ಪ್ರಯೋಜನವಿಲ್ಲ ಎಂಬ ಭಾವನೆ ಮೂಡಿಸುತ್ತದೆ, ಇದರಿಂದ ಮನಸ್ಸಿನಲ್ಲಿ ಬೇಸರ ಉಂಟಾಗುವುದು, ಖಿನ್ನತೆಗೆ ಜಾರಲಾರಂಭಿಸುತ್ತಾರೆ.
ನಿವೃತ್ತಿ ಬಳಿಕ ಖಿನ್ನತೆ ಹೋಗಲಾಡಿಸುವುದು ಹೇಗೆ?
ನಿವೃತ್ತಿ ಸಮಯದಲ್ಲಿ ಆರ್ಥಿಕ ಭದ್ರತೆ : ಇದು ತುಂಬಾನೇ ಮುಖ್ಯವಾಗುತ್ತದೆ, ಆರ್ಥಿಕ ಭದ್ರತೆ ಇಲ್ಲದಿದ್ದರೆ ಮುಂದೇನು ಎಂಬ ಚಿಂತೆ ದೊಡ್ಡದಾಗಿ ಕಾಡುವುದು, ಆರ್ಥಿಕ ಭದ್ರತೆ ತುಂಬಾನೇ ಮುಖ್ಯ, ಈ ಬಗ್ಗೆ ಕೆಲಸ ಮಾಡುತ್ತಿರುವಾಗಲೇ ಗಮನಹರಿಸಬೇಕಾಗುತ್ತದೆ.
ಬದಲಾವಣೆಗೆ ಹೊಂದಿಕೊಳ್ಳಬೇಕು: ನಿವೃತ್ತಿ ಹತ್ತಿರ ಬರುತ್ತಿದ್ದಂತೆ ಮಾನಸಿಕ ಸಿದ್ಧತೆ ಮಾಡಿಕೊಳ್ಳಬೇಕು, ಅಲ್ಲದೆ ನಿವೃತ್ತಿ ಜೀವನ ಹೇಗೆ ಕಳೆಯಬೇಕು ಎಂಬುವುದರ ಬಗ್ಗೆ ಕೆಲವೊಂದು ಪ್ಲ್ಯಾನ್ ಮಾಡಿಕೊಳ್ಳಬೇಕು. ಕೆಲವೊಂದು ಬದಲಾಯಿಸಲು ಸಾಧ್ಯವಿಲ್ಲ, ಈ ಸತ್ಯ ಅರಿತುಕೊಂಡು ನಾವು ಹೊಂದಿಕೊಂಡು ಹೋಗಲು ಪ್ರಯತ್ನಿಸಬೇಕು.
ಹೊಸ ಗುರಿ ಹಾಕಿಕೊಳ್ಳಿ
ನಿವೃತ್ತಿ ಬಳಿಕ ಸುಮ್ಮನೆ ಮನೆಯಲ್ಲಿ ಕೂರಬೇಕಾಗಿಲ್ಲ, ನಿವೃತ್ತಿ ಬಳಿಕ ನಿಮ್ಮಿಂದ ಏನು ಆಗಬಹುದು ಎಂದು ಯೋಚಿಸಿ ಅದರತ್ತ ಗಮನಹರಿಸಿ, ನಿಮ್ಮನ್ನು ನೀವು ಎಂಗೇಜ್ ಆಗಿ ಇಟ್ಟುಕೊಳ್ಳಲು ಪ್ರಯತ್ನಿಸಬೇಕು, ಹೀಗಿದ್ದೆರೆ ಮನಸ್ಸಿಗೆ ಬೇಸರವಾಗುವುದಿಲ್ಲ, ಅನೇಕ ಆರೋಗ್ಯ ಸಮಸ್ಯೆ ತಡೆಗಟ್ಟಬಹುದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications