Latest Updates
-
ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್: ವಿಚ್ಛೇದನ, ಕಸ್ಟಡಿ ಸಮಸ್ಯೆಗಳಿಗೆ ಇಲ್ಲಿದೆ ಸುಲಭ ಪರಿಹಾರ! -
ಅಪಾರ್ಟ್ಮೆಂಟ್ನಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ: ದಂಡ ತಪ್ಪಿಸಿ, ಸುಲಭವಾಗಿ ವಿಸರ್ಜನೆ ಮಾಡುವುದು ಹೇಗೆ? -
ಓಣಂ ಸದ್ಯದ ಸಂಭ್ರಮ: ಬೆಲೆ ಏರಿಕೆ ಮತ್ತು ಆರೋಗ್ಯದ ಚಿಂತೆಯಿಲ್ಲದೆ ಹಬ್ಬ ಆಚರಿಸುವುದು ಹೇಗೆ? -
ಆಗಸ್ಟ್ 2026 ಏಕಾದಶಿ: ಸ್ಮಾರ್ತ vs ವೈಷ್ಣವ ವ್ರತದ ದಿನಾಂಕಗಳ ಗೊಂದಲವೇ? ಮಧುಮೇಹಿಗಳಿಗೆ ಇಲ್ಲಿದೆ ಉಪವಾಸದ ಸೂತ್ರ! -
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ನಿಮ್ಮ ಮಕ್ಕಳೊಂದಿಗೆ ಚಂದ್ರನ ರಹಸ್ಯಗಳನ್ನು ಅನ್ವೇಷಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಓಣಂ ಹಬ್ಬದ ಸಂಭ್ರಮ: ಮಳೆಯಲ್ಲೂ ಸ್ಟೈಲಿಶ್ ಆಗಿ ಕಾಣಲು ₹1,200 ರೊಳಗೆ ಬೆಸ್ಟ್ ಫ್ಯಾಷನ್ ಟಿಪ್ಸ್! -
ಮಳೆಗಾಲದಲ್ಲಿ ಹಿರಿಯರು ಜಾರಿ ಬೀಳುವ ಆತಂಕವೇ? ಸುರಕ್ಷಿತವಾಗಿರಲು ಈ 12 ನಿಮಿಷಗಳ ಚೇರ್-ಯೋಗ ಟ್ರೈ ಮಾಡಿ! -
ಹಿರಿಯರ ಆರೋಗ್ಯಕ್ಕೆ ದಿನಕ್ಕೆ 12 ನಿಮಿಷದ 'ಚೇರ್ ಯೋಗ': ಚೈತನ್ಯ ಮತ್ತು ಸಮತೋಲನಕ್ಕೆ ಇದುವೇ ಮಂತ್ರ! -
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್!
ಭಾರತದಲ್ಲಿ ಹೆಚ್ಚಾಗುತ್ತಿದೆ ರಿಟೈರ್ಮೆಂಟ್ ಡಿಪ್ರೆಷನ್: ನಿವೃತ್ತಿ ಜೀವದ ಸುಂದರವಾಗಿಸಲು 5 ಸೂತ್ರಗಳು
ಕೆಲಸ ಮಾಡುವಾಗ ಒಂದು ಸಲ ನಿವೃತ್ತಿ ಪಡೆದು ಆರಾಮವಾಗಿ ಇರಬೇಕು ಎಂದು ಎಲ್ಲರೂ ಅಂದುಕೊಳ್ಳುತ್ತಾರೆ. ಆದರೆ ನಿವೃತ್ತಿ ದಿನ ಹತ್ತಿರ ಬರುತ್ತಿದ್ದಂತೆ ಮನಸ್ಸಿನಲ್ಲಿ ಒಂದು ರೀತಿಯ ತಳಮಳ, ಅಯ್ಯೋ ಇನ್ನು ನಾನು ಕೆಲಸಕ್ಕೆ ಬರುವಂತಿಲ್ಲ, ಮುಂದೆ ಏನು ಮಾಡ್ಲಿ ಎಂಬ ಚಿಂತೆ ಬಹುತೇಕರನ್ನು ಕಾಡುತ್ತದೆ.

ಕೆಲವರು ನಿವೃತ್ತಿ ಸಮಯ ಚೆನ್ನಾಗಿ ಕಳೆಯಬೇಕು ಎಂಬ ಕಾರಣ ಹಣ ಉಳಿತಾಯ ಮಾಡಿರುತ್ತಾರೆ, ನಂತರ ಏನು ಮಾಡಬೇಕೆಂಬ ಕೆಲವೊಂದು ಪ್ಲ್ಯಾನ್ಸ್ ಇರುತ್ತದೆ, ಆದರೂ ನಿವೃತ್ತಿ ಸಮಯ ಎಂದರೆ ಏನೋ ಒಂದು ರೀತಿಯ ಭಯ ಕಾಡುವುದು, ಇನ್ನು ಕೆಲವರಿಗೆ ದುಡಿದ್ದೆಲ್ಲಾ ಖರ್ಚು ಮಾಡಬೇಕಾದ ಅನಿವಾರ್ಯತೆ ಇರುತ್ತದೆ ಹೀಗಾಗಿ ದೊಡ್ಡದಾಗಿ ಹಣ ಉಳಿತಾಯ ಮಾಡಲು ಸಾಧ್ಯವಾಗಿರುವುದಿಲ್ಲ, ನಿವೃತ್ತಿ ಹಣದಲ್ಲಿಯೂ ಮನೆ ಸಾಲ, ಮಕ್ಕಳ ಮದುವೆಗೆ ಮಾಡಿದ ಸಾಲ ಅಂತ ತೀರಿಸಲು ಇರುತ್ತದೆ ಅದಾದ ಬಳಿಕ ಕೈ ಖಾಲಿ, ನಿವೃತ್ತಿ ಬಳಿಕ ದುಡಿಮೆಯೂ ಇಲ್ಲ, ಹಣವೂ ಇಲ್ಲ, ಈ ಪರಿಸ್ಥಿತಿ ಬಹುತೇಕರನ್ನು ಖಿನ್ನತೆಗೆ ದೂಡುತ್ತಿದೆ, ಅಲ್ಲದೆ ಭಾರತದಲ್ಲಿ ರಿಟೈರ್ಮೆಂಟ್ ಡಿಪ್ರೆಷನ್ ಹೆಚ್ಚಾಗುತ್ತಿದೆ ಎಂದು ಅಂಕಿ ಅಂಶಗಳು ಹೇಳುತ್ತಿವೆ.
ನಿವೃತ್ತಿ ಬಳಿಕ ಕಾಡುವ ಖಿನ್ನತೆ
ನಿವೃತ್ತಿ ಬಬಳಿಕ ಬಹುತೇಕರಿಗೆ ಒಂಟಿತನ ಕಾಡಲಾರಂಭಿಸುತ್ತದೆ, ಹಣವಿಲ್ಲ ಎಂಬ ಚಿಂತೆ, ನಾನೂ ಏನಕ್ಕೂ ಪ್ರಯೋಜನವಿಲ್ಲ ಎಂಬ ಚಿಂತೆ ಇವೆಲ್ಲಾ ಖಿನ್ನತೆಗೆ ದೂಡುವುದು. ಹೀಗಾಗಿ ನಿವೃತ್ತಿ ಬಳಿಕ ಬೇಸರ ಕಾಡಲಾರಂಭಿಸುವುದು. ಆರ್ಥಿಕ ದುರ್ಬಲತೆ, ಆರೋಗ್ಯ ಸಮಸ್ಯೆಗಳು ಇವೆಲ್ಲಾ ಖಿನ್ನತೆ ಸಮಸ್ಯೆ ಹೆಚ್ಚಿಸುತ್ತದೆ.
ಈಗೀನ ಕುಟುಂಬ ವ್ಯವಸ್ಥೆಯೂ ಕೂಡ ಖಿನ್ನತೆಗೆ ಕಾರಣವಾಗಿದೆ
ಈಗ ನ್ಯೂಕ್ಲಿಯರ್ ಕುಟುಂಬ, ಮಕ್ಕಳು ಉದ್ಯೋಗದ ಕಾರಣದಿಂದ ಅವರ ಕುಟುಂಬದ ಜೊತೆಗೆ ಪ್ರತ್ಯೇಕವಾಗಿ ವಾಸಿಸುತ್ತಿರುತ್ತಾರೆ, ಕೆಲಸಕ್ಕೆ ಹೋಗುವಾಗ ಬ್ಯುಸಿ ಇರುತ್ತಾರೆ, ನಿವೃತ್ತಿ ಬಳಿಕ ಒಂಟಿತನ ಕಾಡಲಾರಂಭಿಸುವುದು, ಇದರ ಜೊತೆಗೆ ಆರೋಗ್ಯ ಸಮಸ್ಯೆಗಳು ಕಾಡಲಾಂಭಿಸುವುದು, ಇವೆಲ್ಲಾ ನನ್ನಿಂದ ಏನೂ ಪ್ರಯೋಜನವಿಲ್ಲ ಎಂಬ ಭಾವನೆ ಮೂಡಿಸುತ್ತದೆ, ಇದರಿಂದ ಮನಸ್ಸಿನಲ್ಲಿ ಬೇಸರ ಉಂಟಾಗುವುದು, ಖಿನ್ನತೆಗೆ ಜಾರಲಾರಂಭಿಸುತ್ತಾರೆ.
ನಿವೃತ್ತಿ ಬಳಿಕ ಖಿನ್ನತೆ ಹೋಗಲಾಡಿಸುವುದು ಹೇಗೆ?
ನಿವೃತ್ತಿ ಸಮಯದಲ್ಲಿ ಆರ್ಥಿಕ ಭದ್ರತೆ : ಇದು ತುಂಬಾನೇ ಮುಖ್ಯವಾಗುತ್ತದೆ, ಆರ್ಥಿಕ ಭದ್ರತೆ ಇಲ್ಲದಿದ್ದರೆ ಮುಂದೇನು ಎಂಬ ಚಿಂತೆ ದೊಡ್ಡದಾಗಿ ಕಾಡುವುದು, ಆರ್ಥಿಕ ಭದ್ರತೆ ತುಂಬಾನೇ ಮುಖ್ಯ, ಈ ಬಗ್ಗೆ ಕೆಲಸ ಮಾಡುತ್ತಿರುವಾಗಲೇ ಗಮನಹರಿಸಬೇಕಾಗುತ್ತದೆ.
ಬದಲಾವಣೆಗೆ ಹೊಂದಿಕೊಳ್ಳಬೇಕು: ನಿವೃತ್ತಿ ಹತ್ತಿರ ಬರುತ್ತಿದ್ದಂತೆ ಮಾನಸಿಕ ಸಿದ್ಧತೆ ಮಾಡಿಕೊಳ್ಳಬೇಕು, ಅಲ್ಲದೆ ನಿವೃತ್ತಿ ಜೀವನ ಹೇಗೆ ಕಳೆಯಬೇಕು ಎಂಬುವುದರ ಬಗ್ಗೆ ಕೆಲವೊಂದು ಪ್ಲ್ಯಾನ್ ಮಾಡಿಕೊಳ್ಳಬೇಕು. ಕೆಲವೊಂದು ಬದಲಾಯಿಸಲು ಸಾಧ್ಯವಿಲ್ಲ, ಈ ಸತ್ಯ ಅರಿತುಕೊಂಡು ನಾವು ಹೊಂದಿಕೊಂಡು ಹೋಗಲು ಪ್ರಯತ್ನಿಸಬೇಕು.
ಹೊಸ ಗುರಿ ಹಾಕಿಕೊಳ್ಳಿ
ನಿವೃತ್ತಿ ಬಳಿಕ ಸುಮ್ಮನೆ ಮನೆಯಲ್ಲಿ ಕೂರಬೇಕಾಗಿಲ್ಲ, ನಿವೃತ್ತಿ ಬಳಿಕ ನಿಮ್ಮಿಂದ ಏನು ಆಗಬಹುದು ಎಂದು ಯೋಚಿಸಿ ಅದರತ್ತ ಗಮನಹರಿಸಿ, ನಿಮ್ಮನ್ನು ನೀವು ಎಂಗೇಜ್ ಆಗಿ ಇಟ್ಟುಕೊಳ್ಳಲು ಪ್ರಯತ್ನಿಸಬೇಕು, ಹೀಗಿದ್ದೆರೆ ಮನಸ್ಸಿಗೆ ಬೇಸರವಾಗುವುದಿಲ್ಲ, ಅನೇಕ ಆರೋಗ್ಯ ಸಮಸ್ಯೆ ತಡೆಗಟ್ಟಬಹುದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications