Latest Updates
-
ದೆಹಲಿ-ಎನ್ಸಿಆರ್ನಲ್ಲಿ ಯೆಲ್ಲೋ ಅಲರ್ಟ್: ಮಳೆಯ ಅಬ್ಬರದ ನಡುವೆಯೂ ದಂಪತಿಗಳು ತಮ್ಮ ಬಾಂಧವ್ಯವನ್ನು ಗಟ್ಟಿಗೊಳಿಸುವುದು ಹೇಗೆ? -
ದೆಹಲಿ-ಎನ್ಸಿಆರ್ ನಿವಾಸಿಗಳೇ ಎಚ್ಚರ: ಬಿರುಗಾಳಿ ಅಬ್ಬರಕ್ಕೆ ನಿಮ್ಮ ಮನೆ ಸಿದ್ಧವಾಗಿದೆಯೇ? -
ಮುಂಬೈ-ಥಾಣೆಯಲ್ಲಿ 39 ಡಿಗ್ರಿ ಬಿಸಿಲ ಅಬ್ಬರ: ಯೆಲ್ಲೋ ಅಲರ್ಟ್ ನಡುವೆ ನಿಮ್ಮ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ? -
ಮೆಟ್ ಗಾಲಾ 2026: ಇಶಾ ಅಂಬಾನಿ-ಕರಣ್ ಜೋಹರ್ ಲುಕ್ ನೋಡಿ ಫಿದಾ ಆದ ಫ್ಯಾಷನ್ ಪ್ರಿಯರು! -
ಹವಾಮಾನ ಇಲಾಖೆ ಎಚ್ಚರಿಕೆ: ಇಂದಿನ ಮಳೆ-ಸಿಡಿಲಿನ ಆರ್ಭಟಕ್ಕೆ ನಿಮ್ಮ ದಿನಚರಿ ಬದಲಾಯಿಸಿಕೊಳ್ಳಿ! -
ನೀಟ್ 2026 ಪರೀಕ್ಷೆ ಮುಗಿದಿದೆ: ಪೋಷಕರ ಜೊತೆ ಮನಬಿಚ್ಚಿ ಮಾತನಾಡಿ ಒತ್ತಡವನ್ನು ದೂರ ಮಾಡುವುದು ಹೇಗೆ? -
IMD ರೆಡ್ ಅಲರ್ಟ್: ಬಿರುಗಾಳಿ ಅಬ್ಬರಕ್ಕೆ ನಿಮ್ಮ ಬಾಲ್ಕನಿ ಮತ್ತು ಗಿಡಗಳು ಬಲಿಯಾಗದಿರಲಿ, ಈ ಕೆಲಸ ತಕ್ಷಣ ಮಾಡಿ! -
ಹೀಟ್ವೇವ್ ಎಫೆಕ್ಟ್: ಸುಡುವ ಬಿಸಿಲಿಗೆ ತಂಪಾಗಲು ಮಜ್ಜಿಗೆ, ಎಳನೀರು ಸಾಕಾ? ಇಲ್ಲಿದೆ ಆರೋಗ್ಯದ ಗುಟ್ಟು -
ಮೆಟ್ ಗಾಲಾ 2026: ರೆಡ್ ಕಾರ್ಪೆಟ್ ಮೇಲೆ ಭಾರತೀಯ ತಾರೆಯರ ಅಬ್ಬರ, ಲೈವ್ ನೋಡುವುದು ಹೇಗೆ? -
ಪಾರ್ಕ್ಗಳಲ್ಲಿ ನಗು-ಯೋಗದ ಅಲೆ: ಒತ್ತಡ ಮರೆಸಿ ದಿನವಿಡೀ ಎನರ್ಜಿಟಿಕ್ ಆಗಿರೋದು ಹೇಗೆ?
ಹೆಚ್ಚಿನವರಿಗೆ ಈ ಆಹಾರಗಳು ಕೂಡ ಗ್ಯಾಸ್ಟ್ರಿಕ್ ಹೆಚ್ಚಿಸುತ್ತೆ ಎಂದು ಗೊತ್ತೇ ಇರಲ್ಲ
ಈ ಗ್ಯಾಸ್ಟ್ರಿಕ್ ಸಮಸ್ಯೆ ಇದೆಯೆಲ್ಲಾ ಅದನ್ನು ನಿರ್ಲಕ್ಷ್ಯ ಮಾಡುವಂತೆಯೇ ಇಲ್ಲ,ಇದರಿಂದ ತುಂಬಾನೇ ಹಿಂಸೆ ಅನುಭವಿಸುವಂತಾಗುವುದು, ಅಜೀರ್ಣದಿಂದ ಈ ಸಮಸ್ಯೆ ಉಂಟಾಗುವುದು. ಗ್ಯಾಸ್ಟ್ರಿಕ್ ಸಮಸ್ಯೆ ಇರುವವರು ಕೆಲವೊಂದು ಆಹಾರವನ್ನು ತಿನ್ನಲೇಬಾರದು.
ಗ್ಯಾಸ್ಟ್ರಿಕ್ ಸಮಸ್ಯೆಯಿದ್ದರೆ ಕಡಲೆ, ಕಾಳುಗಳು, ಆಲೂಗಡ್ಡೆ ಇವುಗಳನ್ನು ತಿಂದರೆ ಜಾಸ್ತಿಯಾಗುತ್ತದೆ ಎಂದು ಕೆಲವರು ಇದನ್ನು ಮುಟ್ಟುವುದಿಲ್ಲ, ಆದರೆ ಕೆಲವೊಂದು ಆಹಾರಗಳನ್ನುತಿನ್ನುತ್ತಾರೆ, ಇದರಿಂದ ಗ್ಯಾಸ್ಟ್ರಿಕ್ ಸಮಸ್ಯೆ ಹೆಚ್ಚಾಗುವುದು.

ಪಾಪ್ಕಾರ್ನ್
ಪಾಪ್ಕಾರ್ನ್ ತುಂಬಾ ಜನರ ನೆಚ್ಚಿನ ಸ್ನ್ಯಾಕ್ಸ್, ಅದರಲ್ಲೂ ಮೂವ್ ನೋಡಲು ಹೋದಾಗ ಪಾಪ್ಕಾರ್ನ್ ಸವಿಯುತ್ತಾ ಮೂವಿ ಎಂಜಾಯ್ ಮಾಡುತ್ತಾರೆ, ಆದರೆ ಗ್ಯಾಸ್ಟ್ರಿಕ್ ಸಮಸ್ಯೆ ಇದ್ದರೆ ಇದನ್ನು ತಿನ್ನಲೇಬೇಡಿ, ಇದರಿಂದ ಗ್ಯಾಸ್ ಹೆಚ್ಚಾಗಿ ಹೊಟ್ಟೆ ಉಬ್ಬುವುದು.
ಪಾಪ್ ಕಾರ್ನ್ ತಿನ್ನಲು ತುಂಬಾ ಆಸೆಯಾದರೆ ಈ ಟಿಪ್ಸ್ ಪಾಲಿಸಿದರೆ ಗ್ಯಾಸ್ಟ್ರಿಕ್ ಉಂಟಾಗುವುದನ್ನು ತಡೆಗಟ್ಟಬಹುದು
ಪಾಪ್ಕಾರ್ನ್ಗೆ ಆಲೀವ್ ಎಣ್ಣೆ ಅಥವಾ ತೆಂಗಿನೆಣ್ಣೆ ಹಾಕಿ ಬಳಸಿದರೆ ಒಳ್ಳೆಯದು, ಅದರ ಮೇಲೆ ಸ್ವಲ್ಪ ಅರಿಶಿಣ, ಜೀರಿಗೆ ಪುಡಿ ಹಾಕಿ ತಿಂದರೆ ಒಳ್ಳೆಯದು.
ಹಸಿ ಸಲಾಡ್
ಸಲಾಡ್ ತುಂಬಾನೇ ಆರೋಗ್ಯಕರ, ಆದರೆ ಹಸಿ ತರಕಾರಿ ತಿಂದರೆ ಜೀರ್ಣಕ್ರಿಯೆಗೆ ಕಷ್ಟವಾಗುವುದು, ಇದರಿಂದ ಗ್ಯಾಸ್ಟ್ರಿಕ್ ಸಮಸ್ಯೆ ಉಂಟಾಗುವುದು. ಹಸಿ ತರಕಾರಿಯಲ್ಲಿ ರಂಜಕದ ಅಂಶವಿರುತ್ತದೆ, ಇದರಿಂದ ಗ್ಯಾಸ್ಟ್ರಿಕ್ ಸಮಸ್ಯೆ ಮತ್ತಷ್ಟು ಹೆಚ್ಚಾಗುವುದು.
ಸಲಾಡ್ ತಿನ್ನುವುದಾದರೆ ಏನು ಮಾಡಬೇಕು?
ನೀವು ಹಸಿ ತರಕಾರಿ ತಿನ್ನುವ ಬದಲಿಗೆ ಸ್ವಲ್ಪ ಬೇಯಿಸಿ ತಿಂದರೆ ಒಳ್ಳೆಯದು, ಇದರಿಂದ ಜೀರ್ಣಕ್ರಿಯೆಗೆ ಸಹಾಯವಾಗುವುದು, ಅದರ ಜೊತೆಗೆ ಸ್ವಲ್ಪ ಕಾಳು ಮೆಣಸಿನ ಪುಡಿ, ಶುಂಠಿ ಸೇರಿಸಿದರೆ ಜೀರ್ಣಕ್ರಿಯೆಗೆ ತುಂಬಾ ಒಳ್ಳೆಯದು.
ಚ್ಯುಯಿಂಗ್ ಗಮ್: ಗ್ಯಾಸ್ಟ್ರಿಕ್ ಸಮಸ್ಯೆ ಇದ್ದರೆ ಚುಯ್ಯಿಂಗ್ ಗಮ್ ಅಗೆಯುವುದರಿಂದ ಹೊಟ್ಟೆಯಲ್ಲಿ ಗ್ಯಾಸ್ ಉತ್ಪತ್ತಿ ಹೆಚ್ಚಾಗಿ ಗ್ಯಾಸ್ಟ್ರಿಕ್ ಹೆಚ್ಚಾಗುವುದು. ಗ್ಯಾಸ್ಟ್ರಿಕ್ ಸಮಸ್ಯೆಯಿದ್ದರೆ ಚುಯ್ಯಿಂಗ್ ಗಮ್ ಅಗೆಯದೇ ಇದ್ದರೆ ಒಳ್ಳೆಯದು.
ಸೇಬು, ಪಿಯರ್ಸ್, ಪೀಚ್
ಗ್ಯಾಸ್ಟ್ರಿಕ್ ಸಮಸ್ಯೆಯಿದ್ದರೆ ಸೇಬು, ಪೀಚ್, ಪಿಯರ್ಸ್ ಇವುಗಳನ್ನು ತಿಂದಾಗ ಅದರಲ್ಲಿರುವ ಫ್ರಕ್ಟೋಸ್ ಅಂಶದಿಂದಾಗಿ ಗ್ಯಾಸ್ ಉತ್ಪತ್ತಿ ಹೆಚ್ಚಾಗಿ ಗ್ಯಾಸ್ಟ್ರಿಕ್ ಹೆಚ್ಚಾಗುವುದು.
ಪರಿಹಾರ: ನೀವು ಸೇಬು, ಪೀಚ್ ಈ ಬಗೆಯ ಹಣ್ಣುಗಳನ್ನು ಬೇಯಿಸಿ ತಿಂದರೆ ಒಳ್ಳೆಯದು.
ಈರುಳ್ಳಿ
ಈರುಳ್ಳಿ ಇಲ್ಲ ಎಂದರೆ ಕೆಲವರಿಗೆ ಅಡುಗೆ ಮಾಡುವುದೇ ತಿಳಿಯಲ್ಲ, ಆದರೆ ಗ್ಯಾಸ್ಟ್ರಿಕ್ ಸಮಸ್ಯೆ ಇರುವವರು ಹಸಿ ಈರುಳ್ಳಿ ತಿನ್ನದೇ ಇದ್ದರೆ ಒಳ್ಳೆಯದು, ಇಲ್ಲದಿದ್ದರೆ ತುಂಬಾನೇ ಗ್ಯಾಸ್ಟ್ರಿಕ್ ಸಮಸ್ಯೆ ಉಂಟಾಗುವುದು. ಅಡುಗೆಯಲ್ಲಿ ಬೇಯಿಸಿದ ಈರುಳ್ಳಿ ಬಳಸಿದರೆ ತೊಮದರೆ ಉಂಟಾಗುವುದಿಲ್ಲ, ಹಸಿ ಈರುಳ್ಳಿ ತಿನ್ನಲು ಹೋಗಬೇಡಿ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications